ಶನಿವಾರ, ಸೆಪ್ಟೆಂಬರ್ 28, 2013

ಕೋಸಂಬರಿ ಪಾನಕದ ವಾರ್ಷಿಕ ವರದಿ



       ಕೋಸಂಬರಿ ಪಾನಕ ಶುರು ಆಗಿ ಒಂದು ವರ್ಷ ಆಯಿತು .ಈ ಒಂದು ವರ್ಷದಲ್ಲಿ ಅದೆಷ್ಟು ಕುಖ್ಯಾತಿ ನನ್ನ ಬ್ಲಾಗ್ ಪಡೆದಿದೆಯೆಂದರೆ ಕನ್ನಡದ ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿ ನನ್ನ ಬ್ಲಾಗ್ದೇ ವಿಷಯ. ಬಹುಷಃ ನಿಮಗೆ ನೋಡಲು ಅವಕಾಶ ಸಿಗದೇ ಇರಬಹುದು ಅದಕ್ಕೇ ಇಲ್ಲಿ ಬರೆದಿದ್ದೇನೆ.ಓದಿ ಮಜಾ ಮಾಡಿ.

    ಮಾಮಶ್ರೀ ನ್ಯೂಸ್ ಅಲ್ಲಿ ಪ್ರೈಮ್ ಟೈಮ್ನಲ್ಲಿ ನಮ್ಮ ಕೋಸಂಬರಿ ಪಾನಕದ್ದೇ ನ್ಯೂಸ್.ಸುಂದರವಾದ ಮಹಿಳೆಯೊಬ್ಬಳು ನ್ಯೂಸ್ ಓದುತ್ತಿದ್ದಳು." ವಿವಾದಾತ್ಮಕ ಕೋಸಂಬರಿ ಪಾನಕ ಬ್ಲಾಗ್ ಶುರು ಆಗಿ ಇದೀಗ ಒಂದು ವರ್ಷ. ಏಂಜಿನೀಯರಿಂಗ್ ಪದವಿ ಮುಗಿಸಿ ,ಇನ್ಫ಼ೋಸಿಸ್ ನಲ್ಲಿ ಕೆಲಸದಲ್ಲಿರುವ ಶ್ರವಣ್ ಅವರು ಶುರು ಮಾಡಿರುವ ಈ ಬ್ಲಾಗ್ ,ಇತ್ತೀಚಿನ ದಿನಗಳಲ್ಲಿ ತನ್ನ ತಲೆ ನೋವು ತರಿಸುವ ಹಾಗೂ ದರಿದ್ರ ಕನ್ನಡ ಬರವಣಿಗೆಗಳಿಂದ ಖ್ಯಾತಿ ಪಡೆದಿದೆ. ಈ ಒಂದು ವರ್ಷದಲ್ಲಿ ಈ ಬ್ಲಾಗ್ ಅನ್ನು ನಿಲ್ಲಿಸಬೇಕೆಂದು ತುಂಬಾ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿವೆ. ಅಷ್ಟೇ ಅಲ್ಲದೇ ಲೇಖಕ ಶ್ರವಣ್ ಮೇಲೆ ಅನೇಕ ಬಾರಿ ದಾಳಿ ಕೂಡ ನಡೆದಿದೆ. ಇಷ್ಟೆಲ್ಲಾ ಆದರೂ ತಾನು ಬರೆಯುವುದನ್ನೂ ನಿಲ್ಲಿಸುವುದಿಲ್ಲ ಏಂದು ಶ್ರವಣ್ ನವರು ಹೇಳಿದ್ದಾರೆ.ಭಾರತ ಸ್ವತಂತ್ರ ದೇಶ ಹಾಗು ಅದರ ಪ್ರಜೆಯಾಗಿರುವ ನನ್ನ ವಾಕ್ ಸ್ವಾತಂತ್ರ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಆಗುವುದಿಲ್ಲಾ ಅಂದು ಹೇಳಿದ್ದಾರೆ. ಶ್ರವಣನವರು ಈ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದ ಹಾಗೆ ಕನ್ನಡ ಕಾವಲು ಸಂಸ್ಥೆ ,ಅಖಿಲ ಭಾರತ ಮಹಿಳೆ ಸಂಸ್ಥೆ ,ಪ್ರ್ರಾಣಿ ದಯಾ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅವರ ಹರಿಹರದ ಮನೆ ಮುಂದೆ ಪ್ರತಿಭಟನೆ ಶುರು ಮಾಡಿವೆ. ನಾವು ಈಗ ಹರಿಹರದಲ್ಲಿ ಅವರ ಮನೆ ಮುಂದೆ ಇರುವ ನಮ್ಮ ಸಂದರ್ಶಕ ರಮೇಶನನ್ನು ಮಾತನಾಡಿಸೋಣ.
ವಾರ್ತೆ ಓದುತ್ತಿರುವವಳು :ಹಲೋ ರಮೇಶ್ ಅವರೇ ,ಹೇಳಿ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ.
ರಮೇಶ್ : ನೀವೇ ನೋಡುತ್ತಿರುವ ಹಾಗೆ ಶ್ರವಣ್ ಅವರ ಮನೆ ಸಮೃದ್ಧಿ ಮುಂದೆ ಅನೇಕ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ.ಬನ್ನಿ ಅವರನ್ನು ಮಾತನಾಡಿಸೋಣ. ಮೇಡಂ ನೀವು ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ ಅಂತ ಹೇಳ್ಬಹುದಾ?
ಮಹಿಳೆ: ಈ ಕೋಸಂಬರಿ ಪಾನಕ ಬ್ಲಾಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವಂತಿದೆ.ಇಲ್ಲಿನ ಅನೇಕ ಕವನಗಳು ಮಹಿಳೆಯನ್ನು ಗೇಲಿ ಮಾಡುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮಹಿಳೆಯರು ಇವರಿಗೆ ಗೇಲಿ ಮಾಡುವ ವಸ್ತುನಾ,ಇಂತಹ ಸಣ್ಣ ಮನಸ್ಸಿನ ವ್ಯಕ್ತಿಯ ಲೇಖನಗಳು ನಮಗ್ಯಾಕೆ?
ರಮೇಶ್: ನೋಡ್ದ್ರಲ್ಲಾ ,ಇದೀಗ ಶ್ರವಣ್ ಅವರ ಅಪ್ಪ ಬರುತಿದ್ದಾರೆ ಅವರನ್ನು ಮಾತನಾಡಿಸೋಣ.ಸರ್, ಈ ಸಮಯದಲ್ಲಿ ನಿಮ್ಮ ಅಭಿಪ್ರಾಯವೇನು?
ಅಪ್ಪ: ನೋಡಿ ಅವನು ಇಲ್ಲಿಲ್ಲಾ,ಮೈಸೂರಿ ನಲ್ಲಿದ್ದಾನೆ,ಅಲ್ಲಿ ಹೋಗಿ ಪ್ರತಿಭಟನೆ ಮಾಡಿ. ಅಂತ ಮಗನನ್ನು ಹೆತ್ತಿದ್ದಕ್ಕೆ ನನಗೂ ನಾಚಿಕೆ ಇದೆ.ದಯವಿಟ್ಟು ಇಲ್ಲಿ ಗದ್ದಲ ಮಾಡ್ಬೇಡಿ.
ಹೀಗೆ ಹೇಳುತ್ತಿದ್ದಂತೆ ಅವನ ಸಂಪರ್ಕ ನಿಂತು ಹೋಗಿ ವಾರ್ತೆ ಓದುತ್ತಿರುವಳು ಕ್ಷಮೆ ಯಾಚಿಸಿ ಮುಂದೆ ಹೀಗೆ ಓದುತ್ತಾಳೆ.
" ಲೇಖಕ ಶ್ರವಣ್ ರವರು ಮೈಸೂರಿನಲ್ಲಿ ತಮಗೆ ಪ್ರಾಣ ಬೆದರಿಕೆ ಇದೆ ಆದ್ದರಿಂದ ನಮ್ಗೆ ಪೋಲಿಸ್ ರಕ್ಷಣೆ ಬೇಕು ಎಂದು ಹಂಪಿ ಸರ್ಕಲ್ ಪೋಲಿಸ್
ಸ್ಟೇಷನ್ ಅಲ್ಲಿ ದೂರು ದಾಖಲಿಸಿದ್ದಾರೆ. ಕೋಸಂಬರಿ ಪಾನಕದ ಮೇಲೆ ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಮುಂದಿನ ವಿಶೇಷ ಕಾರ್ಯಕ್ರಮ ನೋಡುತ್ತಿರಿ"
...................................................................................................................................................
ನಮ್ಮ ಪವರ್ಣ ನ್ಯೂಸ್ ಚಾನೆಲ್ನಲ್ಲಿ "ಕೋಸಂಬರಿ ಪಾನಕ :ಬೇಕೋ ಬೇಡೋ" ಅನ್ನುವ ಚರ್ಚೆ ನಡೆಸುತಿತ್ತು .ಚರ್ಚೆಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ, ಕನ್ನಡ ಸಾಹಿತಿ , ಹಿರಿಯ ರಾಜಕಾರಣಿ ,ಬುದ್ಧಿವಂತ ಜೀವಿ ,ಪಿಂಡಾಂಡ ಜ್ಯೋತಿಷಿ ಮತ್ತೊಬ್ಬ ಕಾಲೇಜು ಹುಡುಗನನ್ನು ಕರಿಸಲಾಗುತಿತ್ತು.ಕಾರ್ಯಕ್ರಮ ಅರ್ಧ ಘಂಟೆದಾಗಿದ್ದರಿಂದ ನಿಮಗೆ ಎಲ್ಲರ ಮಾತಿನ ಭಾವರ್ಥವನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
ಕನ್ನಡ ಕಾವಲು ಸಮಿತಿಯ ಅಧ್ಯಕ್ಷ: :ಕನ್ನಡಕ್ಕೇ ಎಂಟು ಜ್ಞಾನ ಪೀಠ ಬಂದಿದೆ .ನಮ್ಮ ಸಾಹಿತ್ಯ ಸಮೃದ್ಧಿಯಾಗಿ ಇತ್ತು ,ಇದೆ, ಇರುತ್ತೆ. ನಮ್ಗೆ ಶ್ರವಣ್ ಅನ್ನುವ ಒಬ್ಬ ಹುಚ್ಚ ,ಅರೆ ಹುಚ್ಚ ತನ್ನ ತೆವಳು ತೀರಿಸಲು ಬರೆದು ಕೊಳ್ಳುವವನ ಲೇಖನಗಳು ಬೇಕಾಗಿಲ್ಲ.ಕನ್ನಡ ಹಾಳುಮಾಡಲು ಬೇರೆ ಭಾಷೆಯ ಸಂಸ್ಥೆಗಳು ಇಂತಹ ಕಚಡಾಗಳಿಗೆ ದುಡ್ಡು ಕೊಡುತ್ತಿದ್ದಾರೆ.ಇದು ಇಲ್ಲಿಗೆ ನಿಲ್ಲಬೇಕು.ನಾವು ಇದನ್ನು ನಮ್ಮ ಪ್ರಾಣ ಇರುವವರೆಗೂ ಮುಂದು ವರೆಯಲು ಬಿಡುವುದಿಲ್ಲ. ಸಿರಿಗನ್ನಡಂಗೆಲ್ಗೆ.
ಕನ್ನಡ ಸಾಹಿತಿ ::ನಮ್ಮ ಅಧ್ಯಕ್ಷರು ಹೇಳಿದ ಮಾತುಗಳಲ್ಲಿ ಅರ್ಥ ಇದೆ,ನಿಜಾನೂ ಇದೆ. ಅವರ್ ಲೇಖನಗಳನ್ನು ನಾನು ಓದಿದ್ದೇನೆ. ವ್ಯಾಕರಣ ದೋಷಗಳು ಒಂದಾ ಎರಡಾ?ಕನ್ನಡದ ಮಾನ ಬೀದಿಗೆ ಬರುವ ಮುನ್ನ ಇದನ್ನು ನಿಲ್ಲಿಸ್ಬೇಕಾಗಿದೆ.ನಾವು ಇಷ್ಟ್ರಲ್ಲೇ ಅಮರಣಾಂತ ಉಪವಾಸ ಕೂರುತ್ತೇವೆ
ಹಿರಿಯ ರಾಜಕಾರಣಿ: ಇದರಲ್ಲಿ ನಂಗೆ ಪ್ರತಿಪಕ್ಷದ ಕೈ ವಾಡ ಎದ್ದು ಕಾಣುತ್ತಿದೆ. ಸಮಾಜದಲ್ಲಿ ಗಲಭೆ ಎಬ್ಬಿಸಿ ,ನಂತರ ನಮ್ಮಮೇಲೆ ಗೂಬೆ ಕೂರಿಸಲು ಹೀಗೆಲ್ಲಾ ಮಾಡುತ್ತಿದ್ದಾರೆ.ಈ ಮನುಷ್ಯನ ಹಿಂದೆ ಯಾರು ಯಾರು ಇದ್ದಾರೆ ಅನ್ನುವುದನ್ನು ಕಣ್ಣು ಹಿಡಿಯಲು ನಾವು ಈ ಕೇಸನ್ನು ಸಿ. ಐ .ಬಿ ಗೆ ಒಪ್ಪಿಸುತ್ತೇವೆ.
ಬುದ್ಧಿವಂತ ಜೀವಿ: ನೋಡಿ ಭಾರತ ದೇಶದಲ್ಲಿ ಸಾರ್ವಜನಿಕವಾಗಿ ನೂರಾರು ಜನ ಕೊಂದ ಉಗ್ರಗಾಮಿಗೂ ಬದುಕುವ ಹಕ್ಕಿದೆ, ನಮ್ಮದು ಡೆಮಾಕ್ರ್ಟಿಕ್ ಕ್ಂಟ್ರಿ. ಸ್ವತಂತ್ರ ರಾಷ್ಟ್ರ. ಯಾರು ಹೇಗೆ ಬೇಕಾದರೂ ಬದುಕಬಹುದು.ಹಾಗೆಯೇ ಶ್ರವಣ್ ಗೂ ಬರೆಯುವ ಹಕ್ಕಿದೆ. ಅವರನ್ನು ತಡೆಯುವುದರಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ.
ಕಾಲೇಜು ಹುಡುಗ:ನೋಡಿ ಸರ್, ಅವರ ಲೇಖನಗಳು ಟೈಮ್ ಪಾಸ್. ಮಜ ಬರುತ್ತೆ. ಸೋ ನಮ್ಗೆ , .ಯುವ ಜನಾಂಗಕ್ಕೆ ಇದರಿಂದ ಎನೂ ತೊಂದರೆಯಗಿಲ್ಲಾ. ಶ್ರವಣ್ ಇಸ್ ಕೂಲ್ ಗಯ್. ಬರೀಲಿ ಬಿಡಿ, ಅವರ ಮೇಲಿ ಕೈ ಮಾಡಿದ್ರೆ ನಾವುಗಳು ಸುಮ್ನೆ ಇರೋಲ್ಲಾ.
ಪಿಂಡಾಂಡ ಜ್ಯೋತಿಷಿ : ನೋಡಿ ಈ ಮನುಷ್ಯನ ಕುಂಡಲಿ ಯಲ್ಲಿ ಯಾವ ಗ್ರಹಾನೂ ಸರಿಯಾಗಿ ಕುಳಿತುಕೊಳ್ಳದೇ ,ಎಲ್ಲೆಲ್ಲೋ ಓಡಾಡುತ್ತಿರುವುದರಿಂದ ಹೀಗೆ ಆಗುತ್ತಿದೆ. ಇಂತಹ ಮನುಷ್ಯನು ಕನ್ನಡದಲ್ಲಿ ಬರೆಯುವ ಹಾಗೆ ಆಗಿದೆಯೆಂದರೆ ಇದು ಪ್ರಳಯದ ಮುನ್ಸೂಚನೆ.ಇವನನ್ನು ತಮಿಳು ನಾಡು ದೇವ ಸ್ಥಾನಕ್ಕೆ ಕರೆದು ಕೊಂಡು ಹೋಗಿ ದೆವ್ವ ಬಿಡಿಸಿದರೆ ಎಲ್ಲಾ ಒಳ್ಳೆಯದಾಗುತ್ತೆ.
.........................................................................................................................................................

           ಇನ್ನು ನಮ್ಮ ಟಿ.ವಿ ೬೯ ನವರು ನಮ್ಮ ಕೋಸಂಬರಿ ಪಾನಕದ ಮೇಲೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದರು. ಅದರ ಹೆಸರು "ಹಲಸಿ ಹೋಗಿರುವ ಕೋಸಂಬರಿ ಪಾನಕ". ಕಾರ್ಯಕ್ರಮ ಹೀಗಿತ್ತು .
ಕೋಸಂಬರಿ ಪಾನಕ. ಶ್ರವಣ ಅನ್ನೊ ಹುಡುಗ ಬರಿತಾ ಇರೋ ಈ ಬ್ಲಾಗ್ ಗೆ ಇಂದು ಒಂದು ವರ್ಷ. ಯಾರು ಇವನು ,ಇದರ ಸುತ್ತ ಸುತ್ತುಕೊಂಡಿರುವ ವಿವಾದ ಆದ್ರೂ ಏನು ನೋಡೋಣ ಬನ್ನಿ.
ಯಾರಿವನು?
೧೯೮೮ ,ಮೇ ೮ ರಲ್ಲಿ ಪಡುಕೋಣೆಯಲ್ಲಿ ಜನಿಸಿದ ಶ್ರವಣ್ ,ಹುಟ್ಟಿ ಬೆಳದಿದ್ದೆಲ್ಲಾ ಹರಿಹರದಲ್ಲಿ. ಮೊದಲಿಂದಲೂ ಎಲ್ಲರನ್ನು ಸೆಳೆಯಬೇಕು,ಜನ ನನ್ನ ಗುರುತಿಸಬೇಕು ಎಂಬ ಹುಚ್ಚು ಈತನಿಗೆ, ಅದಕ್ಕೆ ಬರೆಯಲು ಶುರು ಮಾಡಿದ. ಆದ್ರೆ ಅಷ್ಟಕ್ಕೆ ನಿಲ್ಲದ ಇವನು ಕೋಸಂಬರಿ ಪಾನಕ ಬ್ಲಾಗ್ ಶುರು ಮಾಡಿದ. ಅಲ್ಲಿಂದ ಶುರುವಾಗಿದ್ದು ಸಮಸ್ಯೆಗಳು.
ಏನಾಯಿತು?
ಈ ಬ್ಲಾಗ್ನಲ್ಲಿರುವ ಲೇಖನಗಳನ್ನು ಓದಿದ ನಂತರ ಕನ್ನಡದ ಸಾಹಿತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಬಂದಿದೆ. ಅದೆಷ್ಟೋ ಲೇಖಕರು ಸಾಯುವ ಮುನ್ನ ವೀಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹಾಕಿದ್ದಾರೆ. ಇನ್ನೂ ಇದನ್ನು ಓದಿದ ಅನೇಕ ಜನರಲ್ಲಿ ,ತಲೆನೋವು ಕಾಣಿಸಿಕೊಂಡಿರುವ ವರದಿ ಕೂಡ ಆಗಿದೆ.ಇದನ್ನು ಇಷ್ಟಪಟ್ಟವರು ಕೆಲೆವೇ ಕೆಲವರು .ಆದ್ರೆ ವರದಿಗಳ ಪ್ರಕಾರ ಇವರಿಗೆ ಶ್ರವಣ್ ನವರು ಮಾಟ ಮಾಡಿಸಿರಬಹುದು ಎಂಬ ಶಂಕೆ ಇದೆ.
ಆಮೇಲೆ?
ಇದೆಲ್ಲಾ ಆಗುತ್ತಿದ್ದ ಹಾಗೆ ಇದರ ವಿರುದ್ಧ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಲು ಶುರು ಮಾಡಿದವು.ಪ್ರಾಣಿ ದಯಾ ಸಂಘ ದವರು ಏನು ಹೇಳುತ್ತಾರೆ ಕೇಳೋಣ ಬನ್ನಿ" ನೋಡಿ ಈ ಕೋಸಂಬರಿ ಪಾನಕ ಓದಿ ತುಂಬಾ ಜನ ಕೋಮಕ್ಕೇ ಹೋಗಿದ್ದಾರೆ. ಅಷ್ಟೇ ಅಲ್ಲಾ ಅನೇಕ ಆಸ್ಪತ್ರೆ ಗಳಲ್ಲಿ ವೈದರು ರೋಗಿಗಳ ಜ್ಞಾನ ತಪ್ಪಿಸಲು ವೈದ್ಯರು ಕೋಸಂಬರಿ ಪಾನಕ ಉಪಯೋಗಿಸುತ್ತಿದ್ದಾರೆ . ಆದರೆ  ಅಂತಹ ಯಾವ ರೋಗಿಗಳು ಬದುಕಿ ಉಳಿದಿಲ್ಲಾ . ಆದ್ದರಿಂದ ಮನುಷ್ಯ ಎಂಬ ಜೀವಿ ಮೇಲೆ ಇದನ್ನು ಉಪಯೋಗಿಸುವುದು ಬಹಳ ಅಪಾಯಕಾರಿ. ಆದ್ದರಿಂದ ಇದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ."
ಯಾರ ಕೈ ವಾಡ ಇದೆ?
ಇದನ್ನು ಓದಿದ ತುಂಬಾ ಜನಕ್ಕೆ ಆರೋಗ್ಯ ಕೆಡುತ್ತಿದೆ. ಅವರಿಗ ಸರಿಯಾದ ಮಾತ್ರೆ ಕೊಡದೇ ಹೋದರೆ ಸಾಯುವುದು ಗ್ಯಾರ್ಂಟಿ. ಈ ಮಾತ್ರೆ ಗಳ ಬೆಲೆ ಬಹು ದುಬಾರಿಯಾದದ್ದು. ಇದನ್ನು ಅರಿತ ಅನೇಕ ಮಾತ್ರೆ ತಯಾರಿಸುವ ಸಂಸ್ಥೆ ಗಳು ಶ್ರವಣ್ ವರಿಗೆ ಲಕ್ಷಗಟ್ಟಲೇ ಹಣ ಕೊಟ್ಟು ಪ್ರೋತ್ಸಾಹಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಇನ್ನು ಈ ಬ್ಲಾಗನ್ನು ಓದಿ ಅನೇಕ ಜನ ಸತ್ತಿರುವ ವರದಿ ಯಾಗಿದೆ. ಇದನ್ನು ಅರಿತ ಉಗ್ರಗಾಮಿ ಸಂಘಟನೆಗಳು ಸುಲಭವಾಗಿ ಜನ ಸಾಯಿಸಲು, ಶ್ರವಣ್ ನನ್ನು ಉಪಯೋಗಿಸಿ ಕೊಳ್ಳುವ ಸಾಧ್ಯತೆಗಳು ಇವೆ.ಕೋಸಂಬರಿ ಪಾನಕದ ಸುತ್ತ ಬೆಳದಿರುವ ಈ ವಿವಾದಗಳು ಎಷ್ಟು ನಿಜ. ಎಷ್ಟು ಸುಳ್ಳು .ಮುಂದೇನಾಗುತ್ತೆ? ಕಾದು ನೋಡ್ಬೇಕಾಗಿದೆ. ಅಲ್ಲಿಯವರೆಗೂ ನಮಸ್ಕಾರ. ಮತ್ತೇ ಸಿಗೋಣ

                      ನೋಡಿದ್ರಲ್ಲಾ ನಮ್ಮ ಬ್ಲಾಗ್ ಎಷ್ಟು ಖ್ಯಾತಿ ಕ್ಷಮಿಸಿ ಕುಖ್ಯಾತಿ ಪಡೆದಿದೆ .ಮತ್ತೇ ಸಿಗೋಣ.
English summary.Many news channel aired special programs as my blog completed one year.
Mamashree news: Protesters had gathered in front of my house .They were demanding to stop blogging. When the news reporter asked one of the female protestor the reason,she answered like this "the poems and some article are derogatory to women ,so it has to be banned". Then my dad said "Shravan is not here .Please stop protesting here.He is in mysore, go there .even I support u guys.
Pavarna news: It aired a special discussion on why my blog has to be banned.One of the youth in the discussion supported me as he found my blog cool.One of the leader from kannada rakshana vedike  that my blog is a shame to Kannada literature.
tv69: tv 69 sired a special program .The program had brief introduction about me and the consequences of my blog. In program it mentioned that many people suffered mental disorders after reading my blog.Hospitals are using my blog as anesthsia.They even suspected the al qaeda people are supporting me as my blog can be used to kill people.

.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...