ಶನಿವಾರ, ನವೆಂಬರ್ 30, 2013

ನಾವು ಮಾತ್ರ ಯಾಕೆ ಹೀಗೆ ?


ದೊಡ್ಡದಾಗಿ ಒಂದು ಕ್ರಾಂತಿ ಆಗಬೇಕು ಆಂದರೆ ಏನು ಮಾಡಬೇಕು?ಜನರೆಲ್ಲಾ ಗುಂಪು ಕಟ್ಟಿ ಬೀದಿಗಿಳಿದು ಹೋರಾಡಬೇಕಾ?ಎಲ್ಲರೂ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಬೇಕಾ?ಇವೆಲ್ಲಾ ಕ್ರಾಂತಿಯ ಒಂದು ಭಾಗ ಅಷ್ಟೇ.ಇವೆಲ್ಲದಕ್ಕೂ ಮೊದಲು ಜನರ ಮನಸಿನಲ್ಲಿ ಕಿಚ್ಚು ಮೂಡಬೇಕು.ಪ್ರತಿಯೊಬ್ಬನ ಮನಸಿನಲ್ಲಿ ಮೂಡಿದ ಆ ಕಿಚ್ಚು ,ಎಲ್ಲರೂ ಒಗ್ಗೂಡಿದಾಗ ಜ್ವಾಲೆಯಾಗಿ ,ಕಾಡ್ಗಿಚ್ಚಿನಂತೆ ಹರಡಿ ದೊಡ್ಡಮಟ್ಟದಲ್ಲಿ ಕ್ರಾಂತಿ ಮೂಡುತ್ತದೆ.
                ಸಮಾಜದಲ್ಲಿ ಬದಲಾವಣೆಯಾಗಲು ಸಮಾಜದಲ್ಲಿ ಇರುವ ವ್ಯಕ್ತಿಗಳ ಮನಸಿನಲ್ಲಿ ಬದಲಾವಣೆ ಮೊದಲು ಮೂಡುವುದು ಅತ್ಯಗತ್ಯ .ಇದಕೆ ಮನೆಯಲ್ಲಿನ ವಾತವರಣ ಬಹಳ ಮುಖ್ಯ. ನಾವೆಲ್ಲವೂ ಓದಿದ್ದೇವೆ ಅಲ್ಲವೇ ಮನೆಯೇ ಮೊದಲ ಪಾಠ ಶಾಲೆ ಎಂದು . ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ಬೆಳೆದ ಮನೆಯ ವಾತಾವರಣ ತುಂಬಾ ಪರಿಣಾಮ ಬೀರುತ್ತದೆ. ಉದಾಹರಣೆಗೆ ಶಿವಾಜಿ,ಭಗತ್ ಸಿಂಗ್ ಯಾರ ದೊಡ್ಡ ವ್ಯಕ್ತಿಗಳ ಜೀವನ ತೆಗದುಕೊಳ್ಳಿ .ಈ ವ್ಯಕ್ತಿಗಳು ಇಂದು ಮಹನೀಯರಾಗಿ ಬೆಳೆಯುವುದಕ್ಕೆ ಅವರ ಮನೆಗಳಲ್ಲಿ ಹೇಳಿಕೊಟ್ಟ ಸಂಸ್ಕೃತಿ ಯೇ ಕಾರಣ .
              ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ನಾವು ಕನ್ನಡ ಉಳಿಯಬೇಕು ಬೆಳೆಯಬೇಕು ಅಂತ ದಿನಾಗಲೂ ಬಾಯಿ ಬಡಿದುಕೊಳ್ಳುತ್ತಿರುತ್ತೀವೆ . ದಿನದಿಂದ ದಿನೇ ಕನ್ನಡ ನಶಿಸುತ್ತಿದೇ ಅಂತ ಹೇಳುತ್ತಾ ಅಳುತ್ತಿರುತ್ತೇವೆ . ಆದರೆ ಇದಕ್ಕೆ ಮೂಲ ಕಾರಣ ಏನು ಅಂತ ನಾವೆಲ್ಲರೂ ಕುಳಿತು ಯೋಚನೆ ಮಾಡಿದರೆ ನಿಜವಾಗಲೂ ಹೆದರಿಕೆಯಾಗುತ್ತದೆ. ಅದೇನೆಂದರೆ ನಮ್ಮ ಮನೆಗಳಲ್ಲಿ ಕನ್ನಡ ಮರೆಯಾಗುತ್ತ್ತಿರುವುದು .
              ಹೌದು ,ಇಂದಿನ ದಿನಗಳಲ್ಲಿ ಮನೆಯಲ್ಲಿ ಕನ್ನಡ ಮರೆಯಾಗುತ್ತಿದೆ. ಅದಕ್ಕೆ ಮನಗಳಲ್ಲಿ ಕನ್ನಡ ಮರೆಯಾಗುತ್ತಿದೆ. ತಂದೆ ತಾಯಂದಿರು ಮಕ್ಕಳಿಗೆ ಇಂದು ಮಮ್ಮಿ ಡ್ಯಾಡಿ ಹೇಳಿಕೊಡುತ್ತಾರೆ ಹೊರತು ಅಪ್ಪ ಅಮ್ಮ ಸಂಸೃತಿಯಲ್ಲ . ಅಯ್ಯೋ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿತಿಲ್ಲಾ ಅಂದರೆ ಬೆಲೆ ಎಲ್ಲಿದೆ ಅನ್ನುವುದು ಅವರ ವಾದ. ಅವರ ವಾದ ವನ್ನು ನಾನು ಖಂಡಿತವಾಗಿಯೂ ಒಪ್ಪುತ್ತೇನೆ . (ಯಾರಿಗೆ ಗೊತ್ತು ನನ್ನ ಹೆಂಡತಿ ಒಪ್ಪದಿದದಲ್ಲಿ ನಾನು ನನ್ನ ಮಕಳನ್ನು ಆಂಗ್ಲ ಶಾಲೆಗೇ ಸೇರಿಸಬೇಕಾಗುತ್ತದೆ. ). ಕನ್ನಡ ಹೃದಯದ ಭಾಷೆ,ಆಂಗ್ಲ ದುಡ್ಡು ತರುವ ಭಾಷೆ ಅನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಆದರೆ ಇಂದಿನ ಮಕ್ಕಳಿಗೆ ಕನ್ನಡ ಹೃದಯದ ಭಾಷೆ ಅನ್ನುವುದನ್ನು ತಂದೆ ತಾಯಂದಿರು ಅರಿವು ಮೂಡಿಸುತ್ತಿಲ್ಲ . ಅದೇ ಸಮಸ್ಯೆ.
                 ನಮ್ಮಲ್ಲಿ ಕನ್ನಡದ ಕ್ರಾಂತಿಯಾಗಬೇಕೆಂದರೆ , ಮೊದಲಿಗೆ ಮನೆಮನೆಗಳಲ್ಲಿ ,ಮನ ಮನಗಳಲ್ಲಿ ಕನ್ನಡದ ದೀಪ ಹಚ್ಚಬೇಕು .ಹೀಗೆ ಪ್ರತಿಯೊಂದು ಮನೆಯಲ್ಲೂ ದೀಪಗಳು ಬೆಳಗಿದಾಗ ಬೀದಿಗಳು ಕಂಗೊಳಿಸುತ್ತದೆ. ಹಾಗೆಯೇ ಊರು ಹಾಗೆಯೇ ರಾಜ್ಯ. ಹೀಗೆ ನಾಡಿಗೆ ನಾಡೇ ಕನ್ನಡದ ಬೆಳಕಿನಲ್ಲಿ ಕಂಗೊಳಿಸಬೇಕು. ದಿನವೂ ಚಾಮುಂಡಿ ತಾಯಿಗೆ ದೀಪಾವಳಿಯಾಗಿರಬೇಕು .
English summary: What is essential for a revolution?People thronging on streets or people fasting.Actually, these are later part of revolution.Prior to this, a good motive in individual should arise leading them to be a part of revolution.And for this the environment of their house matters.We all know that house is the first school.It plays an important role in shaping individual.For example, personalties like Shivaji,Bhagat Singh who bought change in society had great influence by their culture at home.
Reason I am writing the above point is ,we all cry that kannada language is not growing as much as the other south Indian (or southern languages)languages.But the key problem for all these lies at our home.Nowadays parents show much interest in teaching English than Kannada to their children .Even I believe that to survive in this competitive environment we need English.But we should not forget that the mother tongue is our soul language.Children not taught about this, will never respect their mother tongue.So,it is important that parents teach their children the importance of mother tongue.


ಶುಕ್ರವಾರ, ನವೆಂಬರ್ 22, 2013

ನಾವು ಮಾತ್ರ ಯಾಕೆ ಹೀಗೆ ?



ದೃಶ್ಯ ೧: ಕರ್ನಾಟಕದ ಒಂದು ಊರು. ಜನ ಥಿಯೇಟರ್ ಮುಂದೆ ಜಾತ್ರೆ ಅನ್ನುವಂತೆ ಸೇರಿದ್ದಾರೆ. ಎಲ್ಲರಿಗೂ ಮೊದಲ ಶೋ ನೋಡುವ ತವಕ.ತುಂಬಾ ಜನಕೆ ಸಿಗುವುದಿಲ್ಲಾ ಎಂಬುದು ಗೊತ್ತು. ಆದರೂ ಮುಂದಿನ ಶೋಗಾದ್ರು ಸಿಗಲಿ ಎಂದು ನಿಂತಿದ್ದಾರೆ. ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿದ್ದುದು ಮಾತ್ರ ಕನ್ನಡೇತರ ಚಿತ್ರ.

ದೃಶ್ಯ ೨: ತಮಿಳು ನಾಡಿನಲ್ಲಿ ಕೆಲಸದ ಮೇಲೆ ೧೧ ತಿಂಗಳು ಇದ್ದೆ. ಹೀಗೆ ಒಂದು ದಿನ ನನ್ನ ತಮಿಳು ಗೆಳೆಯನೊಬ್ಬನ ಜೊತೆ ಮಾತನಾಡುತ್ತಿದ್ದಾಗ ವಿಷಯ ಚಿತ್ರರಂಗದ ಕಡೆ ಹೊರಳಿತು.ಅವರ ಚಿತ್ರರಂಗದ ಬಗ್ಗೆ ಸ್ವಲ್ಪ ಮಾತನಾಡಿದ ಮೇಲೆ, ನಾನು ನಮ್ಮ ಚಿತ್ರರಂಗದ ನಿಮ್ಮ ಬಗ್ಗೆ ಎಷ್ಟು ಗೊತ್ತು ಅಂತಕೇಳಿದೆ. ಆತನಿಗೆ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ನಂಬಿದರೆ ನಂಬಿ ನನಗೇ ಅವರ ಭಾಷೆಯ ಪುಟಗೋಸಿ ಕಲಾವಿದರ ಬಗ್ಗೆಯೂತಿಳಿದಿತ್ತು ,ಆತನಿಗೆ ಕಡೇಪಕ್ಷ ನಮ್ಮ ರಾಜಣ್ಣ ,ವಿಷ್ಣು ದಾದಾನ ಬಗ್ಗೆ ಅರಿವೇ ಇರಲಿಲ್ಲ.

ದೃಶ್ಯ ೩ : ನಮ್ಮ ದಾವಣಗೆರೆ ,ಕರ್ಣಾಟಕದ ಮಧ್ಯಭಾಗ .ನೆರೆ ರಾಜ್ಯಗಳಿಂದ ಭೌಗೋಳಿಕವಾಗಿ ಸ್ವಲ್ಪ ದೂರವೇ ಉಳಿದಿದೆ. ಹೀಗೆ ದಾವಣಗೆರೆಯಲ್ಲಿ ಗೆಳೆಯನೊಬ್ಬನ  ಹಾಸ್ಟೆಲ್ಗೆ ಹೋಗಿದ್ದೆ. ಅಲ್ಲಿ ಹುಡುಗರೆಲ್ಲರೂ ಗುಂಪು ಕಟ್ಟಿ ತೆಲಗು ಚಿತ್ರವೊಂದನ್ನು ನೋಡುತ್ತಿದ್ದರು . ಚಿತ್ರದ ಮಧ್ಯೆ ಎಲ್ಲರೂ ತೆಲಗು ಭಾಷೆಯಲ್ಲಿಯೀಕಾಮೆಂಟ್ ಹೊಡೆಯುತ್ತಿದ್ದರು. ನನ್ನ ಗೆಳೆಯನಿಗೆ ಇವರೆಲ್ಲರೂ ಆಂಧ್ರದವರಾ ಅಂತ ಕೇಳಿದೆ. ಆತ ಇಲ್ಲಾ ಅವರೆಲ್ಲರೂ ಅಪ್ಪಟ ಕನ್ನಡಗಿರೆಂದು , ಆದರೆತಮಿಳು ,ತೆಲಗು ಚಿತ್ರ ಗಳನ್ನು ಅದೆಷ್ಟು ನೋಡಿದ್ದಾರೆ ಆಂದರೆ ಆ ಭಾಷಿಕರಷ್ಟೇ ಚೆನ್ನಾಗಿ ಮಾತನಾಡುತ್ತಾರೆ ಎಂದು ಹೇಳಿದಾಗ ನನಗೆ ಪರಮಾಶ್ಚರ್ಯ .
ದೃಶ್ಯ ೩.: ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ನಮ್ಮ ಕಂಪೆನಿಯಲ್ಲಿಯೇ ಕೆಲಸ ಮಾಡುತ್ತಿದ್ದ ನೆರೆ ರಾಜ್ಯದವರು ಪರಿಚಯ ಆದರು. ಹೀಗೆ ಒಮ್ಮೆಅವರಿಗೆ ಎಷ್ಟು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತ ಕೇಳಿದಾಗ ಅವರ ಉತ್ತರ ಕೇಳಿದ ನಾನು ನಿಜವಾಗಲೂ ಕಕ್ಕಾಬಿಕ್ಕಿ. ಯಾಕಂದರೆ ಆತಆರು ವರ್ಷದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದರೂ ಕನ್ನಡ ಮಾತನಾಡಲು ಒಂದು ಪದ ಬರುತ್ತಿರಲಿಲ್ಲ.

                      ಮೇಲಿನ ಮೊದಲೆರಡು ಉದಾಹರಣೆಗಳು ನಮಗೆ ಬೇರೆ ಭಾಷೆಯ ಮೇಲಿರುವ ವ್ಯಾಮೋಹ ,ಅವರಿಗೆ ನಮ್ಮ ಭಾಷೆಯ ಬಗ್ಗೆ ಇರುವ ಅಸಡ್ಡೆ ಯನ್ನುತೋರಿಸುತ್ತದೆ. ಚಲನಚಿತ್ರದ ವಿಷಯ ಬರಿಯ ಉದಾಹರಣೆ ಅಷ್ಟೇ. ನಿಜ ಹೇಳಬೇಕೆಂದರೆ ನಮ್ಮವರಿಗೆ ಅಸಡ್ಡೆ ಜಾಸ್ತಿ. ಚಲನಚಿತ್ರ ಅಥವಾ ಕನ್ನಡದಪುಸ್ತಕಗಳ ವಿಷಯವನ್ನೇ ತೆಗೆದುಕೊಳ್ಳಿ . ನಮ್ಮವರು ಎಷ್ಟು ನೋಡುತ್ತೇವೆ.ನಮ್ಮಲ್ಲಿ ಒಳ್ಳೆಯ ಚಿತ್ರಗಳ ಸಂಖ್ಯೆ ಕಡಿಮೆ ನಿಜ .ಬಂದ ಒಳ್ಳೆಯಚಿತ್ರಗಳನ್ನಾದರೂ ಅಂದರೆ ಬಯ್ಯುವವರು ಎಲ್ಲಿ ನೋಡುತ್ತಾರೆ? ನಿಜ ಹೇಳಬೇಕಂದರೆ ನಮ್ಮಲ್ಲಿ, ತುಂಬಾ ಜನರು ಪಕ್ಕದ ಮನೆಯಲ್ಲಿ ದಿನಾಗಲೂ ಉಪ್ಪಿಟ್ಟು ಮಾಡಿದರೂ ಚೆನ್ನಾಗಿದೆ ಅಂದು ತಿನ್ನುವವರಿದ್ದಾರೆ. ಅದೇ ಉಪ್ಪಿಟ್ಟು ಅಥವಾ ಆಗೊಮ್ಮೆ ಈಗೊಮ್ಮೆ ವಿಶೇಷ ತಿಂಡಿ ನಮ್ಮ ಮನೆಯಲ್ಲಿ ಮಾಡಿದರೆಅವರು ಅದನ್ನು ಹೊಗಳುವುದು ಇರಲಿ ಅದನ್ನು ಬಾಯಿಗೆ ಹಾಕಿಕೊಂಡು ನೋಡುವ ಗೋಜಿಗೂ ಹೋಗುವುದಿಲ್ಲ. ಚಲನಚಿತ್ರದ ವಿಷಯ ಹಾಗಿರಲಿ ನಮ್ಮಲ್ಲಿಒಳ್ಳೆಯ ಪುಸ್ತಕಗಳು ಬರುತ್ತಿಲ್ಲ ಅಂದರೆ ನಿಜವಾಗಲೂ ನಂಬಲು ಅಸಾಧ್ಯ. ಹಾಗೆ ಹೇಳುವವರು ನಿಜಾವಾಗಲೂ ಎನೂ ಅರಿಯದವರು.ನಾವುಗಳುಓದುತ್ತಿಲ್ಲ ಅನ್ನುವುದು ನಿಜ. ಬೇರೆ ಭಾಷೆ ಕಲಿಯುವ ಆಸಕ್ತಿಯ ಕಾಲು ಭಾಗ ನಮ್ಮ ಪುಸ್ತಕಗಳನ್ನು ಓದುವುದರಲ್ಲಿ ಇದ್ದರೆ ನಮ್ಮ ಕನ್ನಡದ ಬರಹಗಾರರು ಎರಡು ಹೊತ್ತು ಊಟ ಮಾಡುತ್ತಿದ್ದರು . ಯಾವುದೇ ಇರಲಿ ಮೊದಲು ನಮ್ಮ ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಡೋಣ ,ನಂತರ ಬೇರೆ ಭಾಷೆ.
                        ಅದ್ಯಾಕೆ ನಾವುಗಳು ಬೇರೆಯವರ ಭಾಷೆಯನ್ನು ಪಟ್ಟನೆ ಕಲಿತು ,ಅವರ ಹತ್ತಿರ ಅದೇ ಭಾಷೆಯಲ್ಲಿ ಮಾತನಾಡುವುದರಲ್ಲಿ ತೋರುವ ಆಸಕ್ತಿನಮ್ಮ ಭಾಷೆಯನ್ನೂ ಅವರಿಗೆ ಕಲಿಸುವುದರಲ್ಲಿ ತೋರಿಸುವುದಿಲ್ಲ. ಅದು ನಮ್ಮ ಕನ್ನಡಿಗರಲ್ಲಿ ಮಾತ್ರ ಜಾಸ್ತಿ ಯಾಕೆ? ಇನ್ನೂ ತಿಳಿಯದ ವಿಷಯವಾಗಿದೆ.ನಾನು ಬೇರೆ ಬಾಷೆಯನ್ನು ಕಲಿಯುವುದೇ ತಪ್ಪು, ಅವರನ್ನು ಹೊಡೆದು ಹಾಕಿ ಕನ್ನಡದ ಬಾವುಟ ನೆಟ್ಟಬೇಕು ಎಂದು ಹೇಳುತ್ತಿಲ್ಲ. ಅದು ನಮ್ಮವರ ಸಂಸ್ಕೃತಿಯೂ ಅಲ್ಲಾ. ಉದಾಹರಣೆಗೆ ನಮ್ಮಲ್ಲಿ ತುಳು ,ಕೊಡವ ಭಾಷಿಕರನ್ನು ಕನ್ನಡಿಗರಂತೆಯೇ ನೋಡುತ್ತೇವೆಯೇ  ಹೊರತು ಹೊರಗಿನವರ ಹಾಗೆ ಅಲ್ಲ. ಬೇರೆ ಭಾಷೆಯ ಜನರಲ್ಲಿರುವ ಭಾಷಾಭಿಮಾನ ನಮ್ಮಲ್ಲಿ ಯಾಕೆ ಕಮ್ಮಿ . ಅವರೆಲ್ಲಾ ಯಾಕೆ ಹಾಗೆ .?ನಾವು ಮಾತ್ರ ಯಾಕೆ ಹೀಗೆ ? ಎಂಬುದು ನನ್ನ ಪ್ರಶ್ನೆ

English summary: Kannadigas always lag behind when it comes to the matter of pride about their own mother tongue,when compared to other people from different states.Many of Kannadigas term this this lack of pride  to friendliness nature.Here in Karnataka ,every language movie runs 100 days.We know each and everything about other language movies.But its not the same case with neighbouring states.Even after staying so many days in Karnataka,many of non-kannadigas don't know Kannada.Because we don't show the same interest in teaching Kannada that we show in learning other languages.Point is here I am not asking to disrespect the other language but to give priority to our mother tongue first ,when it comes to respect.

ಶನಿವಾರ, ನವೆಂಬರ್ 9, 2013

ನಾವು ಮಾತ್ರ ಯಾಕೆ ಹೀಗೆ ?



ಘಟನೆ ೧:
ತಮಿಳು ನಾಡಿನ ಫೈವ್ ಸ್ಟಾರ್ ಹೋಟೆಲ್. ಅಲ್ಲಿ ರೂಮು ಬುಕ್ ಮಾಡಲು ಹೋಗಿದ್ದೆ. ನನಗೇ ತಮಿಳು ಬಾರದ್ದರಿಂದ, ಅದೂ ಫೈವ್ ಸ್ಟಾರ್ ಹೋಟೆಲ್ ಆದ್ದರಿಂದ, ಅಲ್ಲಿನ ರಿಸೆಪ್ಸನಿಷ್ಟ್ ಗೆ ಆಂಗ್ಲ ಭಾಷೆ ಅಥವಾ ಹಿಂದಿ ಬರುತ್ತದೆ ಅಂದು ಕೊಂಡು ಆಂಗ್ಲ ಭಾಷೆಯಲ್ಲಿ ರೂಮ್ ಇದೆಯಾ ಅಂತ ಕೇಳಿದೆ. ಆಕೆ ತಮಿಳಿನಲ್ಲಿ ಉತ್ತರಿಸಿದಳು. ಎನೂ ಅರ್ಥ ಆಗದ ನಾನು ನನಗೆ ತಮಿಳು ಬರುವುದಿಲ್ಲಾ , ರೂಮ್ ಬೇಕು , ಎಷ್ಟು ಬಾಡಿಗೆ ಅಂತ ಮತ್ತೆ ಆಂಗ್ಲ ಭಾಷೆಯಲ್ಲಿ ,ಹಿಂದಿಯಲ್ಲಿ ಕೇಳಿದೆ. ಅವಳ ಕಡೆಯಿಂದ ಮತ್ತದೇ ಉತ್ತರ. ನನ್ನ ಕಡೆಯಿಂದ ಆಗುವ ಎಲ್ಲಾ ಪ್ರ ಯತ್ನ ಮಾಡಿ ,ಎನೂ ಆಗುವುದಿಲ್ಲಾ ಅಂತ ತಿಳಿದು,ಇನ್ನೇನು ಹೊರಟೆ ಅನ್ನುವಾಗ ಆಗ ಅವಳ ಬಾಯಿಯಿಂದ " ಸರ್, ಪ್ಲೀಸ್ ಕಮ್" ಅಂತ ಬಂತು.
ಘಟನೆ ೨.
ಕರ್ನಾಟಕ . ನನ್ನ ಪರಿಚಯದ ಮನೆಗೆ ಹೊರಡಲು, ಆಟೋವೊಂದನ್ನು ನಿಲ್ಲಿಸಿದೆ.ಆಟೋ ನಿಲ್ಲಿಸಿದವನೇ "ಕಹಾ ಜಾನಾ ಹೈ ಸಾಬ್? " ಅಂದ.ಥಟ್ ಏಂದು ಎದುರಾದ ಹಿಂದಿ ಪ್ರಶ್ನೆ ಯನ್ನು ಅರಗಿಸಿಕೊಂಡು " ಸರ್ ಇಲ್ಲೇ ವಿಜಯ ನಗರ ಕ್ಕೆ ಹೋಗಬೇಕಿತ್ತು" ಅಂದೆ .ಅದಕೆ ಆತ "ಫಿಫ್ಟಿ ರುಪೀಸ್ " ಆಂದ. ಆಟೋ ಹತ್ತಿದವನೇ ಅತ ಕನ್ನಡದವನಾ? ಅಂತ ವಿಚಾರಿಸಿದೆ.ಯಾಕಂದರೆ ನಾನು ಕನ್ನಡದಲ್ಲಿ ಉತ್ತರಿಸಿದರೂ ಆತ ಬೇರೆ ಬೇರೆ ಭಾಷೆಯಲ್ಲಿ ಉತ್ತರಿಸಿದನಲ್ಲಾ ಅದಕೆ.ಕಂಡರೆ ಆತ ಅಪ್ಪಟ ಕನ್ನಡದವನು. ಚಿನೀಸ್ ತರಹ ಇರುವ ನನ್ನ ಮುಖ ನೋಡಿ ನಾನು ಪರಭಾಷಿಗನೆಂದು ತಿಳಿದು ಕನ್ನಡ ಬಿಟ್ಟು ಬೇರೆ ಭಾಷೆಯೆಲ್ಲಾ ಮಾತಾಡಿದ್ದ.ಹಾಗೆ ನೋಡಿದರೆ ,ನಾನು ಅವನಿಗೆ ಕನ್ನಡದಲ್ಲಿ ಉತ್ತರಿಸಿದ ಮೇಲೆಯೂ ಅತ ಕನ್ನಡ ಮಾತಾಡಲಿಲ್ಲ.
ಮೇಲಿನ ತರಹದ ಘಟನೆಗಳು ಒಂದಲ್ಲಾ ಒಂದು ರೀತಿ ನೀವು ಅನುಭವಿಸಿರಬಹುದು.ಬಹುಶಃ ಕರ್ನಾಟಕದಲ್ಲಿ ಮಾತ್ರ ಹೀಗೆ ಅನ್ನಿಸುತ್ತದೆ. ಅದೇಕೋ ನಮ್ಮವ್ರು ಮಾತ್ರ ಕನ್ನಡ ಬಿಟ್ಟು ಬೇರೆಯಲ್ಲಾ ಭಾಷೆ ಉಪಯೋಗಿಸಿ ನಂತರ ಕನ್ನಡ ಉಪಯೋಗಿಸುವುದು ಅನ್ನಿಸುತ್ತದೆ.ನನ್ನಲ್ಲಿ ತುಂಬಾ ಕಾಡುವ ಪ್ರಶ್ನೆ ಏನೆಂದರೆ, ಬೇರೆ ಭಾಷೆಯ ಜನರಲ್ಲಿ ಕಾಣದ ಇಷ್ಟೊಂದು ಒಳ್ಳೆಯತನ ನಮ್ಮಲ್ಲಿ ಮಾತ್ರ ಯಾಕೆ? ಇದಕ್ಕೇ ಉತ್ತರ ನಮ್ಮವರೇ ಕೊಡಬೇಕು.
English summary: Once ,when I was in TamilNadu, I went to five star hotel for room booking.I tried to converse in english,hindi with the receptionist there.But she replied only in Tamil.When I was about to return then she replied in English.
Once in  Banglore ,I stopped auto as I needed to go to my aunt's home.The guy asked me where I need to I go in hindi thinking that I don't know Kannada.I replied him in Kannnada.But still he answered in hindi.Then out of curiousity I asked him whether he his Kannadiga.I was surprised to hear that he was Kannadiga.
Its only in  in Karnataka we people first speak other language first than our own mother tongue.

ಮಂಗಳವಾರ, ನವೆಂಬರ್ 5, 2013

ಕನ್ನಡ



ಕನ್ನಡ




ಭುವನೇಶ್ವರಿಯ ತಾಯಿಯ

ಮೈನವಿರಿಲೇಳಿಸುವ

ಗೆಜ್ಜೆನಾದ ಕನ್ನಡ,

ಕೋಲಾರದ ಕಣ್ಣು ಕೋರೈಸುವ

ಹೊನ್ನು ಕನ್ನಡ,

ಕಾನನದ ಗಂಧದ ಮರದ

ಘಮ ಘಮ ಕನ್ನಡ,

ಧುಮುಕುವ ಜೋಗದ

ಬೆಡಗು ಕನ್ನಡ,

ಕಬ್ಬಿನ ಹಾಲಿನ ಸಿಹಿ

ಸವಿ ಕನ್ನಡ,

ಕರುನಾಡಿನ ಅಣು ಅಣುವು

ಕನ್ನಡ.




ಇಂದು

ಅರಳಲು ಹಿಂದೇಟು

ಹಾಕುತಿದೆ ಮೈಸೂರು ಮಲ್ಲಿಗೆ,

ಚಾಮುಂಡಿ ಶಿಖರವು

ನಡುಗುತಿದೆ ಶೀತಲ ಗಾಳಿಗೆ,

ಪವಿತ್ರ ಕಾವೇರಿಯೂ ಮೆಲ್ಲಗೆ

ಆಗುತಿದೆ ಮೈಲಿಗೆ,

ಸೂರ್ಯನ ಕಿರಣಗಳು

ಸವಾಲು ಹಾಕುವಂತಾಗಿದೆ

ಕನ್ನಡ ತಾಯಿಯ

ತ್ರಿಶೂಲದ ಹೊಳಪಿಗೆ,

ಏಕಂದರೆ ಕನ್ನಡಿಗರೇ

ಬಯಸುತ್ತಿಲ್ಲ ಕನ್ನಡದ ಏಳಿಗೆ,

ಜೊತೆಗೆ ಕನ್ನಡವನ್ನು

ಮರೆಯುತ್ತಿದೆ

ಕನ್ನಡಿಗರ ನಾಲಿಗೆ.




ಮನವಿ




ಹೊರನಾಡಿನಿಂದ

ಕರುನಾಡಿಗೆ ಬಂದ

ಕನ್ನಡೇತರರೇ,

ಸಲ್ಲದು ಕನ್ನಡ ಭಾಷೆಗೆ

ನಿಮ್ಮ ಅಸಡ್ಡೆ, ಅಸಹ್ಯ,

ನಿಂದನೆ,

ಕನ್ನಡ ಭಾಷೆಗೆ ಅಪಮಾನ ,

ಕನ್ನಡ ತಾಯಿಯಿಗೆ ಅವಮಾನ,

ಇವೆರಡೂ ಒಂದೇನೆ.

ನಿಮ್ಮನ್ನು ಒಡಹುಟ್ಟಿದ

ಮಕ್ಕಳಂತೆ ಕಂಡ

ಕನ್ನಡ ತಾಯಿಗೆ

ಸಲ್ಲಬೇಕು ಅಭಿನಂದನೆ,

ಕನ್ನಡದಲ್ಲಿ ಮಾತನಾಡುವುದೇ

ನೀವು ಆಕೆಗೆ

ಸಲ್ಲಿಸುವ ಅಭಿನಂದನೆ.

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...