ದೊಡ್ಡದಾಗಿ ಒಂದು ಕ್ರಾಂತಿ ಆಗಬೇಕು ಆಂದರೆ ಏನು ಮಾಡಬೇಕು?ಜನರೆಲ್ಲಾ ಗುಂಪು ಕಟ್ಟಿ ಬೀದಿಗಿಳಿದು ಹೋರಾಡಬೇಕಾ?ಎಲ್ಲರೂ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಬೇಕಾ?ಇವೆಲ್ಲಾ ಕ್ರಾಂತಿಯ ಒಂದು ಭಾಗ ಅಷ್ಟೇ.ಇವೆಲ್ಲದಕ್ಕೂ ಮೊದಲು ಜನರ ಮನಸಿನಲ್ಲಿ ಕಿಚ್ಚು ಮೂಡಬೇಕು.ಪ್ರತಿಯೊಬ್ಬನ ಮನಸಿನಲ್ಲಿ ಮೂಡಿದ ಆ ಕಿಚ್ಚು ,ಎಲ್ಲರೂ ಒಗ್ಗೂಡಿದಾಗ ಜ್ವಾಲೆಯಾಗಿ ,ಕಾಡ್ಗಿಚ್ಚಿನಂತೆ ಹರಡಿ ದೊಡ್ಡಮಟ್ಟದಲ್ಲಿ ಕ್ರಾಂತಿ ಮೂಡುತ್ತದೆ.
ಸಮಾಜದಲ್ಲಿ ಬದಲಾವಣೆಯಾಗಲು ಸಮಾಜದಲ್ಲಿ ಇರುವ ವ್ಯಕ್ತಿಗಳ ಮನಸಿನಲ್ಲಿ ಬದಲಾವಣೆ ಮೊದಲು ಮೂಡುವುದು ಅತ್ಯಗತ್ಯ .ಇದಕೆ ಮನೆಯಲ್ಲಿನ ವಾತವರಣ ಬಹಳ ಮುಖ್ಯ. ನಾವೆಲ್ಲವೂ ಓದಿದ್ದೇವೆ ಅಲ್ಲವೇ ಮನೆಯೇ ಮೊದಲ ಪಾಠ ಶಾಲೆ ಎಂದು . ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ಬೆಳೆದ ಮನೆಯ ವಾತಾವರಣ ತುಂಬಾ ಪರಿಣಾಮ ಬೀರುತ್ತದೆ. ಉದಾಹರಣೆಗೆ ಶಿವಾಜಿ,ಭಗತ್ ಸಿಂಗ್ ಯಾರ ದೊಡ್ಡ ವ್ಯಕ್ತಿಗಳ ಜೀವನ ತೆಗದುಕೊಳ್ಳಿ .ಈ ವ್ಯಕ್ತಿಗಳು ಇಂದು ಮಹನೀಯರಾಗಿ ಬೆಳೆಯುವುದಕ್ಕೆ ಅವರ ಮನೆಗಳಲ್ಲಿ ಹೇಳಿಕೊಟ್ಟ ಸಂಸ್ಕೃತಿ ಯೇ ಕಾರಣ .
ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ನಾವು ಕನ್ನಡ ಉಳಿಯಬೇಕು ಬೆಳೆಯಬೇಕು ಅಂತ ದಿನಾಗಲೂ ಬಾಯಿ ಬಡಿದುಕೊಳ್ಳುತ್ತಿರುತ್ತೀವೆ . ದಿನದಿಂದ ದಿನೇ ಕನ್ನಡ ನಶಿಸುತ್ತಿದೇ ಅಂತ ಹೇಳುತ್ತಾ ಅಳುತ್ತಿರುತ್ತೇವೆ . ಆದರೆ ಇದಕ್ಕೆ ಮೂಲ ಕಾರಣ ಏನು ಅಂತ ನಾವೆಲ್ಲರೂ ಕುಳಿತು ಯೋಚನೆ ಮಾಡಿದರೆ ನಿಜವಾಗಲೂ ಹೆದರಿಕೆಯಾಗುತ್ತದೆ. ಅದೇನೆಂದರೆ ನಮ್ಮ ಮನೆಗಳಲ್ಲಿ ಕನ್ನಡ ಮರೆಯಾಗುತ್ತ್ತಿರುವುದು .
ಹೌದು ,ಇಂದಿನ ದಿನಗಳಲ್ಲಿ ಮನೆಯಲ್ಲಿ ಕನ್ನಡ ಮರೆಯಾಗುತ್ತಿದೆ. ಅದಕ್ಕೆ ಮನಗಳಲ್ಲಿ ಕನ್ನಡ ಮರೆಯಾಗುತ್ತಿದೆ. ತಂದೆ ತಾಯಂದಿರು ಮಕ್ಕಳಿಗೆ ಇಂದು ಮಮ್ಮಿ ಡ್ಯಾಡಿ ಹೇಳಿಕೊಡುತ್ತಾರೆ ಹೊರತು ಅಪ್ಪ ಅಮ್ಮ ಸಂಸೃತಿಯಲ್ಲ . ಅಯ್ಯೋ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿತಿಲ್ಲಾ ಅಂದರೆ ಬೆಲೆ ಎಲ್ಲಿದೆ ಅನ್ನುವುದು ಅವರ ವಾದ. ಅವರ ವಾದ ವನ್ನು ನಾನು ಖಂಡಿತವಾಗಿಯೂ ಒಪ್ಪುತ್ತೇನೆ . (ಯಾರಿಗೆ ಗೊತ್ತು ನನ್ನ ಹೆಂಡತಿ ಒಪ್ಪದಿದದಲ್ಲಿ ನಾನು ನನ್ನ ಮಕಳನ್ನು ಆಂಗ್ಲ ಶಾಲೆಗೇ ಸೇರಿಸಬೇಕಾಗುತ್ತದೆ. ). ಕನ್ನಡ ಹೃದಯದ ಭಾಷೆ,ಆಂಗ್ಲ ದುಡ್ಡು ತರುವ ಭಾಷೆ ಅನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಆದರೆ ಇಂದಿನ ಮಕ್ಕಳಿಗೆ ಕನ್ನಡ ಹೃದಯದ ಭಾಷೆ ಅನ್ನುವುದನ್ನು ತಂದೆ ತಾಯಂದಿರು ಅರಿವು ಮೂಡಿಸುತ್ತಿಲ್ಲ . ಅದೇ ಸಮಸ್ಯೆ.
ನಮ್ಮಲ್ಲಿ ಕನ್ನಡದ ಕ್ರಾಂತಿಯಾಗಬೇಕೆಂದರೆ , ಮೊದಲಿಗೆ ಮನೆಮನೆಗಳಲ್ಲಿ ,ಮನ ಮನಗಳಲ್ಲಿ ಕನ್ನಡದ ದೀಪ ಹಚ್ಚಬೇಕು .ಹೀಗೆ ಪ್ರತಿಯೊಂದು ಮನೆಯಲ್ಲೂ ದೀಪಗಳು ಬೆಳಗಿದಾಗ ಬೀದಿಗಳು ಕಂಗೊಳಿಸುತ್ತದೆ. ಹಾಗೆಯೇ ಊರು ಹಾಗೆಯೇ ರಾಜ್ಯ. ಹೀಗೆ ನಾಡಿಗೆ ನಾಡೇ ಕನ್ನಡದ ಬೆಳಕಿನಲ್ಲಿ ಕಂಗೊಳಿಸಬೇಕು. ದಿನವೂ ಚಾಮುಂಡಿ ತಾಯಿಗೆ ದೀಪಾವಳಿಯಾಗಿರಬೇಕು .
English summary: What is essential for a revolution?People thronging on streets or people fasting.Actually, these are later part of revolution.Prior to this, a good motive in individual should arise leading them to be a part of revolution.And for this the environment of their house matters.We all know that house is the first school.It plays an important role in shaping individual.For example, personalties like Shivaji,Bhagat Singh who bought change in society had great influence by their culture at home.
Reason I am writing the above point is ,we all cry that kannada language is not growing as much as the other south Indian (or southern languages)languages.But the key problem for all these lies at our home.Nowadays parents show much interest in teaching English than Kannada to their children .Even I believe that to survive in this competitive environment we need English.But we should not forget that the mother tongue is our soul language.Children not taught about this, will never respect their mother tongue.So,it is important that parents teach their children the importance of mother tongue.
ellaru ee dikkinalli yochane madidre Olleyadu.
ಪ್ರತ್ಯುತ್ತರಅಳಿಸಿ