ಶನಿವಾರ, ಮಾರ್ಚ್ 29, 2014

ನಮ್ಮೊಳಗೆ ಇರುವ ಆ ವ್ಯಕ್ತಿಯ ಬಗ್ಗೆ



               ಇವತ್ತು ನಾನೊಬ್ಬ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದೇನೆ .ಇವನು ರಾಜಕಾರಣಿಯಲ್ಲ, ನಟನಲ್ಲ , ಆಟಗಾರನಲ್ಲ , ಶ್ರೀಮಂತನಲ್ಲ ,ಬಡವನಲ್ಲ ನಿಜ ಹೇಳಬೇಕಂದರೆ ಅವನು ಯಾವ ಪ್ರಸಿದ್ಧ ವ್ಯಕ್ತಿಯಲ್ಲ .ಯಾವುದೇ ಒಂದು ದೇಶಕ್ಕೆ ಅಥವಾ ಭಾಷೆಗೆ ಅಥವಾ ಯಾವುದೇ ಒಂದು ರಂಗಕ್ಕೆ ಸಂಭಂದ ಪಟ್ಟವನಲ್ಲ.ಆದರೆ ಅವನು ನಮ್ಮೆಲ್ಲರಿಗೂ ಸಂಭಂದ ಪಟ್ಟವನು.ಅವನು ನಮ್ಮಲ್ಲೇ ನಮ್ಮೊಳಗೇ ಇರುವವನು .ನಮ್ಮೊಳಗೇ ಇದ್ದು ವಿಚಿತ್ರ ಸಲಹೆ ಕೊಡುವವನು .

                     ಹೌದು . ನಮ್ಮೆಲ್ಲರ ಒಳಗೊಬ್ಬ ಅಂದರೆ ನಮ್ಮ ಮನಸಿನೊಳಗೆ ಆ ರೀತಿಯ ಸಲಹೆ ಕೊಡುವ ವ್ಯಕ್ತಿ ಇರುತ್ತಾನೆ. ನಮ್ಮ ಬಾಲ್ಯದಿಂದಲೂ ನಾವು ಸಾಯುವ ತನಕವೂ ಅವನು ನಮ್ಮ ಜೊತೆ ಇರುತ್ತಾನೆ .ಆ ವ್ಯಕ್ತಿ ಕೊಡುವ ಅ ರೀತಿಯ ಸಲಹೆಗಳು ಬಹು ವಿಚಿತ್ರವಾದದ್ದು. ಸ್ವಲ್ಪ ಹುಚ್ಚುತನ ಇರುತ್ತದೆ ,ಪೋಲಿತನ ಇರುತ್ತದೆ . ಲೋಕದವರು ಒಂದೆಡೆ ಸಾಗಿದರೆ ಇನ್ನೊಂದು ಕಡೆ ಹೋಗುವಂತ ಬಂಡತನ ಇರುತ್ತದೆ .ನಮ್ಮನ್ನೇ ನಾವು ಆವಲೋಕಿಸಿಕೊಳ್ಳುವ ಅವಕಾಶಗಳು ಇರುತ್ತವೆ .ಸ್ವಲ್ಪ ಅಪಾಯ ,ಅಷ್ಟೇ ಮಜಾ ಇರುತ್ತದೆ .ಆದರೆ ಅವೆಲ್ಲಾ ಜೊತೆಗೆ ಆ ಸಲಹೆಗಳಂತೆ ನಡೆದರೆ ಲೋಕದವರು ನಮ್ಮನ್ನು ಹುಚ್ಚರಂತೆ ಕಾಣುವ ಸಾಧ್ಯತೆಗಳು ಇರುತ್ತದೆ .

                       ಹೌದು ಮತ್ತಿನ್ನೇನು?ಆ ವ್ಯಕ್ತಿ ನಮ್ಮ ತಲೆಗೆ ತೂರಿಬಿಡುವ ಸಲಹೆಗಳೇ ಹಾಗಿರುತ್ತವೆ . ಅದೆಲ್ಲಿಯೂ ಯಾವುದೋ ಹಬ್ಬದಲ್ಲಿ ಡೊಳ್ಳು ಬಾರಿಸಿದರೆ ಹೋಗಿ ಮನದಣಿಯೆ ಕುಣಿ ಅನ್ನುತ್ತಾನೆ .ನಿಸರ್ಗದ ಮಡಿಲಲ್ಲಿ ಹೋಗಿ ಜೋರಾಗಿ ಏಳು ಸಲ ನಿನ್ನ ಹೆಸರನ್ನೇ ಜೋರಾಗಿ ಕೂಗಿ ಪ್ರತಿಧ್ವನಿಯನ್ನು ಕೇಳು ಅನ್ನುತ್ತಾನೆ .ಸಂಸಾರದ ಕಾಟ ನಮ್ಮನ್ನು ಕಾಡಿ ಕಾಡಿ ತಿನ್ನುತ್ತಿರುವಾಗ , ಎಲ್ಲವನ್ನು ಬಿಟ್ಟು ನಮ್ಮ ಗಾಡಿಯನ್ನು ಒಮ್ಮೆ ಹತ್ತಿ ಎಲ್ಲಾದರೂ ದೂರ ಹೋಗಿ ಸುಮ್ಮನೆ ಕೂತು ಬಿಡುವಂತೆ ಹೇಳಿಕೊಡುತ್ತಾನೆ .ಸಂತೆಯಲ್ಲೂ ಯಾರ ಪರಿವೆ ಇಲ್ಲದೇ ನಿದ್ದೆ ಮಾಡಲು ಹೇಳುತ್ತಾನೆ .ದೊಡ್ಡವರು ಬೈದು ಹೋದ ಮೇಲೆ ತಲೆ ಕೆಡಸಿಕೊಂಡು ಕೂತು ಅಳುವ ಬದಲು ಅವರನ್ನೇ ಹಾಸ್ಯ ಮಾಡಿ ನಮ್ಮ ಅಂಡು ಬಡಿದುಕೊಂಡು ನಗುವಂತೆ ಹೇಳಿಕೊಡುತ್ತಾನೆ .ರಾತ್ರಿ ನಕ್ಷತ್ರಗಳ ಅಡಿ ಕೂತು ಅವನ್ನೇ ಉಪ್ಪಿನಕಾಯಿಯ ಮಾವಿನ ಮಿಡಿಗಳಂತೆ ನೆಂಚಿಕೊಂಡು ಎಣ್ಣೆ ಹೊಡೆಯಲು ಹೇಳುತ್ತಾನೆ .ಸುಂದರವಾದವರು ಎಲ್ಲಾದರೂ ಎದುರಾದರೆ ಅವರನ್ನೇ ಕಿತ್ತು ತಿನ್ನುವಂತೆ ನೋಡು ಅನ್ನುತಾನೆ . ಹೀಗೆ ಒಂದೇ ಎರಡೇ .....

                                ವಿಚಿತ್ರ ಆಲ್ವಾ? ಆದರೆ ಆತ ಹೇಳಿದ ಕೆಲಸಗಳನೊಮ್ಮೆ ಮಾಡಿದರೆ ನಮ್ಮ ಮನಸಿಗೆ ಸಿಗುವ ತೃಪ್ತಿ ಇದೆಯಲ್ಲಾ ,ಅದು ಎಲ್ಲಿಯೂ ಸಿಗುವುದಿಲ್ಲ .ಏನೋ ಒಂದು ತರಹ ಖುಷಿ . ಅದನ್ನು ಹೇಳಲಾಗುವುದಿಲ್ಲ .Something that can’t be expressed ,but should be experienced. ನನ್ನ ಮೇಲಿನ ಉದಾಹರಣೆಗಳು ನನ್ನೊಳಗಿನ ವ್ಯಕ್ತಿಯ ಸಲಹೆಗಳ  ಪ್ರತಿಬಿಂಬಗಳಷ್ಟೆ.ನಿಮ್ಮೊಳಗೂ ಈ ತರಹದ ಸಲಹೆ ಕೊಡುವ ವ್ಯಕ್ತಿ ಇದ್ದೆ ಇರುತ್ತಾನೆ .ಇಲ್ಲ ಎನ್ನಲು ಸಾಧ್ಯವೇ ಇಲ್ಲ . ಅವನ ಸಲಹೆಗಳು ಬೇರೆಯಾದ್ದಾಗಿರ ಬಹುದಷ್ಟೆ.

                                    ಇಲ್ಲಿ ಮುಖ್ಯವಾಗಿ ನಾವು ಗಮನ ಹರಿಸಬೇಕಾಗಿರುವ ವಿಷಯ ಏನಂದರೆ ನಮ್ಮೊಳಗೇ ಈ ವ್ಯಕ್ತಿಯನ್ನು ಎಷ್ಟು ಜೀವಂತವಾಗಿ ಇಟ್ಟುಕೊಂಡಿದ್ದೇವೆ. ಹ್ಮ್ಮ್ಮಮ್.ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಮಾತನಾಡೋಣ .
 ಇಂದಿಗೆ ಇಷ್ಟು ಸಾಕು .ಮತ್ತೆ ಮುಂದುವರಿಸೋಣ .

ವಿನಂತಿ :ನಿಮಗೆ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು facebook ಅಲ್ಲಿ ಅಥವಾ ಯಾವುದೇ ಸಾಮಾಜಿಕ ತಾಣದಲ್ಲಿ ಹಂಚಿ ..

English summary : This article is about a person.This person is not a famous actor,sports person or politician.He is neither a celebrity or the person  who bought change in history .But we all are related to this person somehow.Because this person is residing in all of us.Right from birth we have this person with us who gives us suggestion.
             The suggestions made by this person are not common .They are little bit crazy .They have naughtiness in them .They help us in looking ourselves deep inside .But the problem if we follow them , the world may consider  us as crazy .Why? Because the suggestions are like that.
                         He asks us to take nap in our busy schedule .And he asks to make fun of the elder people who always keep scolding us to improve.He even sometimes ask us to run away from all our daily life tensions and ask us to get lost in the beauty of nature and this goes on.
                        May be the above examples reflect the suggestion given by my inside person .The suggestions given by your inside person may be entirely different. But one thing what you can't refuse is that you don't have this person residing your  inside.
                     The question is how much alive this inside person is ?Let's talk about this, in next article.






ಬುಧವಾರ, ಮಾರ್ಚ್ 26, 2014

ಈ ರೋಗಕ್ಕೆ ಮದ್ದು ಏನು ?



        ಏನು ಮಾಡಿದರೂ ಅದು ನಿನಗೆ ಸಿಗುವುದಿಲ್ಲ ಎಂದು ಊರ ಜನ, ಅವನಿಗೆ ಬುದ್ಧಿವಾದ ಹೇಳುತ್ತಲೇ ಇದ್ದರು .ಆತನಿಗೂ ಆ ಸತ್ಯ ಗೊತ್ತಿತ್ತು . ಆದರೆ ಅವನು ಮಾತ್ರ ಹುಚ್ಚನಂತೆ ಅದರ ಹಿಂದೆ ಅಲೆದ .ಅಲ್ಲೆಯುತ್ತಲೇ ಇದ್ದ .ದಿನದಿಂದ ದಿನ , ಅ ವಸ್ತು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಬೆಳೆಯತೊಡಗಿತು . ಆ ಅಸೆ ಅದೆಷ್ಟು ಅಗಾಧವಾಗಿ ಬೆಳೆಯತೊಡಗಿತೆಂದರೆ ಅದು ಅವನ ಹೊರಗೆ ಹುತ್ತದಂತೆ ಬೆಳೆದು ಅವನನ್ನು ಮುಚ್ಚಲು ಶುರುವಾಯಿತು .ಮನಸು ಮಾಡಿದ್ದರೆ ಆತ ಅದನ್ನು ತಡೆಯಬಹುದಿತ್ತು .ಆ ವಸ್ತುವಿನ ಹಿಂದೆ ಹೋಗುವುದನ್ನು ನಿಲ್ಲಿಸಿದ್ದರೆ ಅದು ಆಗುತಿತ್ತು. ಆದರೆ ಆತ ಮುಂದುವರೆದ . ಕೊನೆಗೆ ಅತೃಪ್ತಿಯ ಹಾವಿಗೆ ಆಶ್ರಯ ಕೊಡುವ ಹುತ್ತವಾಗಿಬಿಟ್ಟ .
                ಕೆಲವೊಮ್ಮೆ ಜೀವನದಲ್ಲಿ ನಾವು ತೀರಾ ಇಷ್ಟ ಪಡುವ ವಸ್ತುಗಳು ,ಎಷ್ಟು ಇಷ್ಟ ಅಂದರೆ ಅದೊಂದು ಇದ್ದರೆ ನಮ್ಮ ಜೀವನದಲ್ಲಿ ಬೇರೆ ಏನು ಬೇಡ ಅನ್ನುವಷ್ಟು ಇಷ್ಟ ಪಡುವ ವಸ್ತುಗಳು ,ಏನೂ ಮಾಡಿದರೂ ಸಿಗುವುದಿಲ್ಲ ಅಂತ ನಮಗೆ ಅದಾಗಲೇ ಮನಸ್ಸಿನ ಮೂಲೆಯಲ್ಲಿ ಮೆಲ್ಲಗೆ ಹೊಗೆಯಾಡಲು ಶುರುವಾಗಿರುತ್ತದೆ .(ಅದು ಒಂದು ವಸ್ತುವೇ ಆಗ್ಬೇಕು ಎಂದೇನೂ ಇಲ್ಲ , ಒಂದು ವ್ಯಕ್ತಿ ಆಗಿರಬಹುದು,ಒಂದು ಹುಚ್ಚು ಕನಸು ಆಗಿರಬಹದು )ಆ ಕಟು ಸತ್ಯ ಕಾಡ್ಗಿಚ್ಚಿನಂತೆ ಉರಿದು ನಮ್ಮನ್ನು ಒಳಗೊಳಗೇ ಸುಡುತ್ತಿರುತ್ತದೆ. ಆದರೂ ನಾವು ಆ ವಸ್ತುಗಳು ಬೆನ್ನು ಹತ್ತಿ ಹೋಗುವುದನ್ನು ಬಿಡುವುದಿಲ್ಲ .
             ಅ ಮರೀಚಿಕೆಯ ಹಿಂದೆಯೇ ಹೋಗುತ್ತೇವೆ .ಅದನ್ನು ಪಡೆಯಲು ಇಲ್ಲದ ಲಾಭಿ ನಡೆಸುತ್ತಿರುತ್ತೇವೆ.ಹಗಲಿರಳೂ ಅದರದೇ ಲೆಕ್ಕಚಾರ . ಆ ವಸ್ತುವಿನ ವ್ಯಾಮೋಹ ನಮ್ಮನ್ನು ನಿಧಾನವಾಗಿ ಆವರಿಸಿಕೊಂಡು ,ನಮ್ಮನ್ನು ಒಳಗೊಳಗೇ ಬಡಿಬಡಿದು ಇಡುತ್ತದೆ .ನಮ್ಮ ಸುತ್ತ ಮುತ್ತ ಇರುವ ಜನರಿಗೆಲ್ಲಾ ನಾವು ಪಡುತ್ತಿರುವ ಪಾಡು ನೋಡಲಾಗದೇ ಆ ವಸ್ತುವಿನ ವ್ಯಾಮೋಹ ಬಿಟ್ಟು ಬಿಡುವಂತೆ ಸಲಹೆ ಕೊಡಲು ಶುರುಮಾಡುತ್ತಾರೆ .ಆದರೆ ನಮಗೇ ಅವರು ಬಿಟ್ಟಿ ಸಲಹೆ ಕೊಡುವ ಬಾದಷಾಗಳಂತೆ ಕಾಣುತ್ತಾರೆ.ನಿಜ ಹೇಳಬೇಕೆಂದರೆ ಆ ಕಟು ಸತ್ಯ ನಮಗೇ ಗೊತ್ತಿರುತ್ತದೆ .ಆ ಸತ್ಯ ನಮ್ಮೊಳಗೆ ಹೆಮ್ಮರವಾಗಿ ಬೆಳೆದಿರುತ್ತದೆ . ಆದರೆ ಅದನ್ನು ಕಡಿದು ಮುಂದೆ ಸಾಗುವ ಬದಲು ,ಆ ಮರದ ಸುಳ್ಳು ನೆರಳಲ್ಲಿ ಬದುಕುವುದನ್ನೇ ಚಟ ಮಾಡಿಕೊಂಡು ಬಿಡುತ್ತೇವೆ .
                    ಆ ವಸ್ತುವಿನ ವ್ಯಾಮೋಹ ಬಿಟ್ಟು , ಅದರ ಸುತ್ತ ಗಿರಕಿ ಹೊಡೆಯುವ ಸಮಯವನ್ನು ನಾವು ಅದೇ ಬೇರೆ ಕಡೆ ಉಪಯೋಗಿಸಿದರೆ ಬಾಳ ದಾರಿಯಲ್ಲಿ ಅದೆಷ್ಟೋ ಮುಂದೆ ಹೋಗುತ್ತೇವೆ .ಅದೆಷ್ಟೋ ಸಾಧಿಸುತ್ತೇವೆ .ಆದರೆ ಅದನ್ನು ಬಿಡುವುದು ಮಾತ್ರ ನಮ್ಮಿಂದ ಸಾಧ್ಯವಾಗುವುದಿಲ್ಲ .ಅದಕೆ ಕಾರಣ ನಮ್ಮ ಮನದಲ್ಲಿರುವ ಕೆಟ್ಟ ಆಶಯ. ಎಂದಾದರೂ ಒಂದು ದಿನ ಅ ವಸ್ತು ನಮ್ಮದಾಗಬಹುದೇನೋ ಎಂಬ ಕೆಟ್ಟ ಆಶಯ . ಅದು ಕೊನೆ ಕೊನೆಗೆ ,ಇನ್ನೂ ಸ್ವಲ್ಪ ಪ್ರಯತ್ನಿಸಿದರೆ ನಮ್ಮದಾಗಿಯೇ ಆಗುತ್ತದೆ ,ಬಿಡಬೇಡ ಅನ್ನುವ ಕೆಟ್ಟ ಹಠವಾಗಿ ಪರಿಣಮಿಸುತ್ತದೆ . ಆ ಹಠ ನಮ್ಮೊಳಗಿರುವ ಸತ್ಯವನ್ನು ಮುಳುಗಿಸುಬಿಡುತ್ತದೆ.ಆ ವ್ಯಾಮೋಹ ಜೇಡರ ಬಲೆಯಂತೆ ನಮ್ಮ ಸುತ್ತ ಬೆಳದು ,ಅದರೊಳಗಿಂದ ಹೊರ ಬರಲಾಗದೇ,ಒಳಗೇ ನೆಮ್ಮದಿಯಿಂದ ಇರಲಾಗದೆ ದಿನ ನಿತ್ಯವೂ ನರಳಾಡುತ್ತೇವೆ.
                  ಇದಕೆಲ್ಲಾ ಪರಿಹಾರವೆಂದರೆ ಒಂದೇ .ಅದೇ ತುಂಬಾ ಸುಲಭವಾದದ್ದು .ಆ ವ್ಯಾಮೋಹ ಬಿಟ್ಟು ,ಸತ್ಯವ ಅರಿತು ಇತರ ಕಡೆ ಗಮನ ಹರಿಸುವುದು. ಆದರೆ ಈ ಸುಲಭದ ಕಡಲೆ ನಮಗೆ ಕಬ್ಬಿಣ ಕಡಲೆಯಂತೆ ಕಾಣುತ್ತದೆ .ನಿಜ ಹೇಳಬೇಕೆಂದರೆ ಈ ವ್ಯಾಧಿಯ ಪರಿಹಾರದ ಬಗ್ಗೆ ನಾನು ಬರೆಯಲು ಇಷ್ಟ ಪಡುವುದಿಲ್ಲ .ಯಾಕೆಂದರೆ ಈ ರೋಗದಿಂದ ನರಳುತ್ತಿರುವ ರೋಗಿಗಳಲ್ಲಿ ನಾನು ಒಬ್ಬ ಎಂದು ಹೇಳುತ್ತಾ ಈ ಲೇಖನವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದೇನೆ.ನಿಮಗೆ ಈ ರೋಗದ ಮದ್ದು ಗೊತ್ತಾದಲ್ಲಿ ಉತ್ತರ ಕಳುಹಿಸಿ ,Please.
English summary: The people around him suggested him to stop running behind that thing which he would never get .Even he knew the truth . But still day by day ,he got more obsessed . The obsession grew like a anthill around him.He could have stopped it .But he continued .At last he turned into a unsatisfied snake residing anthill .
                       In our life we run behind some things even though we know the truth that we are not getting that any cost.This thing even can be a person,a dream.The funny and dangerous thing about this is we know the truth.We know the truth that we will never own the thing and if we spend the same energy somewhere else we could succeed, but still we are not ready to admit it .Instead we spend our valuable time in running behind it ,thinking about that thing and making all attempts to own that thing.
      The simplest solution to this disease is just to stop running behind that thing .That's it .But we never do it . Why ? Even I don't know the answer . Even I am finding solution to this disease .If anyone of you know the answer ,please let me now.

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...