ಶನಿವಾರ, ಸೆಪ್ಟೆಂಬರ್ 28, 2013

ಕೋಸಂಬರಿ ಪಾನಕದ ವಾರ್ಷಿಕ ವರದಿ



       ಕೋಸಂಬರಿ ಪಾನಕ ಶುರು ಆಗಿ ಒಂದು ವರ್ಷ ಆಯಿತು .ಈ ಒಂದು ವರ್ಷದಲ್ಲಿ ಅದೆಷ್ಟು ಕುಖ್ಯಾತಿ ನನ್ನ ಬ್ಲಾಗ್ ಪಡೆದಿದೆಯೆಂದರೆ ಕನ್ನಡದ ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿ ನನ್ನ ಬ್ಲಾಗ್ದೇ ವಿಷಯ. ಬಹುಷಃ ನಿಮಗೆ ನೋಡಲು ಅವಕಾಶ ಸಿಗದೇ ಇರಬಹುದು ಅದಕ್ಕೇ ಇಲ್ಲಿ ಬರೆದಿದ್ದೇನೆ.ಓದಿ ಮಜಾ ಮಾಡಿ.

    ಮಾಮಶ್ರೀ ನ್ಯೂಸ್ ಅಲ್ಲಿ ಪ್ರೈಮ್ ಟೈಮ್ನಲ್ಲಿ ನಮ್ಮ ಕೋಸಂಬರಿ ಪಾನಕದ್ದೇ ನ್ಯೂಸ್.ಸುಂದರವಾದ ಮಹಿಳೆಯೊಬ್ಬಳು ನ್ಯೂಸ್ ಓದುತ್ತಿದ್ದಳು." ವಿವಾದಾತ್ಮಕ ಕೋಸಂಬರಿ ಪಾನಕ ಬ್ಲಾಗ್ ಶುರು ಆಗಿ ಇದೀಗ ಒಂದು ವರ್ಷ. ಏಂಜಿನೀಯರಿಂಗ್ ಪದವಿ ಮುಗಿಸಿ ,ಇನ್ಫ಼ೋಸಿಸ್ ನಲ್ಲಿ ಕೆಲಸದಲ್ಲಿರುವ ಶ್ರವಣ್ ಅವರು ಶುರು ಮಾಡಿರುವ ಈ ಬ್ಲಾಗ್ ,ಇತ್ತೀಚಿನ ದಿನಗಳಲ್ಲಿ ತನ್ನ ತಲೆ ನೋವು ತರಿಸುವ ಹಾಗೂ ದರಿದ್ರ ಕನ್ನಡ ಬರವಣಿಗೆಗಳಿಂದ ಖ್ಯಾತಿ ಪಡೆದಿದೆ. ಈ ಒಂದು ವರ್ಷದಲ್ಲಿ ಈ ಬ್ಲಾಗ್ ಅನ್ನು ನಿಲ್ಲಿಸಬೇಕೆಂದು ತುಂಬಾ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿವೆ. ಅಷ್ಟೇ ಅಲ್ಲದೇ ಲೇಖಕ ಶ್ರವಣ್ ಮೇಲೆ ಅನೇಕ ಬಾರಿ ದಾಳಿ ಕೂಡ ನಡೆದಿದೆ. ಇಷ್ಟೆಲ್ಲಾ ಆದರೂ ತಾನು ಬರೆಯುವುದನ್ನೂ ನಿಲ್ಲಿಸುವುದಿಲ್ಲ ಏಂದು ಶ್ರವಣ್ ನವರು ಹೇಳಿದ್ದಾರೆ.ಭಾರತ ಸ್ವತಂತ್ರ ದೇಶ ಹಾಗು ಅದರ ಪ್ರಜೆಯಾಗಿರುವ ನನ್ನ ವಾಕ್ ಸ್ವಾತಂತ್ರ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಆಗುವುದಿಲ್ಲಾ ಅಂದು ಹೇಳಿದ್ದಾರೆ. ಶ್ರವಣನವರು ಈ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದ ಹಾಗೆ ಕನ್ನಡ ಕಾವಲು ಸಂಸ್ಥೆ ,ಅಖಿಲ ಭಾರತ ಮಹಿಳೆ ಸಂಸ್ಥೆ ,ಪ್ರ್ರಾಣಿ ದಯಾ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅವರ ಹರಿಹರದ ಮನೆ ಮುಂದೆ ಪ್ರತಿಭಟನೆ ಶುರು ಮಾಡಿವೆ. ನಾವು ಈಗ ಹರಿಹರದಲ್ಲಿ ಅವರ ಮನೆ ಮುಂದೆ ಇರುವ ನಮ್ಮ ಸಂದರ್ಶಕ ರಮೇಶನನ್ನು ಮಾತನಾಡಿಸೋಣ.
ವಾರ್ತೆ ಓದುತ್ತಿರುವವಳು :ಹಲೋ ರಮೇಶ್ ಅವರೇ ,ಹೇಳಿ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ.
ರಮೇಶ್ : ನೀವೇ ನೋಡುತ್ತಿರುವ ಹಾಗೆ ಶ್ರವಣ್ ಅವರ ಮನೆ ಸಮೃದ್ಧಿ ಮುಂದೆ ಅನೇಕ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ.ಬನ್ನಿ ಅವರನ್ನು ಮಾತನಾಡಿಸೋಣ. ಮೇಡಂ ನೀವು ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ ಅಂತ ಹೇಳ್ಬಹುದಾ?
ಮಹಿಳೆ: ಈ ಕೋಸಂಬರಿ ಪಾನಕ ಬ್ಲಾಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವಂತಿದೆ.ಇಲ್ಲಿನ ಅನೇಕ ಕವನಗಳು ಮಹಿಳೆಯನ್ನು ಗೇಲಿ ಮಾಡುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮಹಿಳೆಯರು ಇವರಿಗೆ ಗೇಲಿ ಮಾಡುವ ವಸ್ತುನಾ,ಇಂತಹ ಸಣ್ಣ ಮನಸ್ಸಿನ ವ್ಯಕ್ತಿಯ ಲೇಖನಗಳು ನಮಗ್ಯಾಕೆ?
ರಮೇಶ್: ನೋಡ್ದ್ರಲ್ಲಾ ,ಇದೀಗ ಶ್ರವಣ್ ಅವರ ಅಪ್ಪ ಬರುತಿದ್ದಾರೆ ಅವರನ್ನು ಮಾತನಾಡಿಸೋಣ.ಸರ್, ಈ ಸಮಯದಲ್ಲಿ ನಿಮ್ಮ ಅಭಿಪ್ರಾಯವೇನು?
ಅಪ್ಪ: ನೋಡಿ ಅವನು ಇಲ್ಲಿಲ್ಲಾ,ಮೈಸೂರಿ ನಲ್ಲಿದ್ದಾನೆ,ಅಲ್ಲಿ ಹೋಗಿ ಪ್ರತಿಭಟನೆ ಮಾಡಿ. ಅಂತ ಮಗನನ್ನು ಹೆತ್ತಿದ್ದಕ್ಕೆ ನನಗೂ ನಾಚಿಕೆ ಇದೆ.ದಯವಿಟ್ಟು ಇಲ್ಲಿ ಗದ್ದಲ ಮಾಡ್ಬೇಡಿ.
ಹೀಗೆ ಹೇಳುತ್ತಿದ್ದಂತೆ ಅವನ ಸಂಪರ್ಕ ನಿಂತು ಹೋಗಿ ವಾರ್ತೆ ಓದುತ್ತಿರುವಳು ಕ್ಷಮೆ ಯಾಚಿಸಿ ಮುಂದೆ ಹೀಗೆ ಓದುತ್ತಾಳೆ.
" ಲೇಖಕ ಶ್ರವಣ್ ರವರು ಮೈಸೂರಿನಲ್ಲಿ ತಮಗೆ ಪ್ರಾಣ ಬೆದರಿಕೆ ಇದೆ ಆದ್ದರಿಂದ ನಮ್ಗೆ ಪೋಲಿಸ್ ರಕ್ಷಣೆ ಬೇಕು ಎಂದು ಹಂಪಿ ಸರ್ಕಲ್ ಪೋಲಿಸ್
ಸ್ಟೇಷನ್ ಅಲ್ಲಿ ದೂರು ದಾಖಲಿಸಿದ್ದಾರೆ. ಕೋಸಂಬರಿ ಪಾನಕದ ಮೇಲೆ ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಮುಂದಿನ ವಿಶೇಷ ಕಾರ್ಯಕ್ರಮ ನೋಡುತ್ತಿರಿ"
...................................................................................................................................................
ನಮ್ಮ ಪವರ್ಣ ನ್ಯೂಸ್ ಚಾನೆಲ್ನಲ್ಲಿ "ಕೋಸಂಬರಿ ಪಾನಕ :ಬೇಕೋ ಬೇಡೋ" ಅನ್ನುವ ಚರ್ಚೆ ನಡೆಸುತಿತ್ತು .ಚರ್ಚೆಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ, ಕನ್ನಡ ಸಾಹಿತಿ , ಹಿರಿಯ ರಾಜಕಾರಣಿ ,ಬುದ್ಧಿವಂತ ಜೀವಿ ,ಪಿಂಡಾಂಡ ಜ್ಯೋತಿಷಿ ಮತ್ತೊಬ್ಬ ಕಾಲೇಜು ಹುಡುಗನನ್ನು ಕರಿಸಲಾಗುತಿತ್ತು.ಕಾರ್ಯಕ್ರಮ ಅರ್ಧ ಘಂಟೆದಾಗಿದ್ದರಿಂದ ನಿಮಗೆ ಎಲ್ಲರ ಮಾತಿನ ಭಾವರ್ಥವನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
ಕನ್ನಡ ಕಾವಲು ಸಮಿತಿಯ ಅಧ್ಯಕ್ಷ: :ಕನ್ನಡಕ್ಕೇ ಎಂಟು ಜ್ಞಾನ ಪೀಠ ಬಂದಿದೆ .ನಮ್ಮ ಸಾಹಿತ್ಯ ಸಮೃದ್ಧಿಯಾಗಿ ಇತ್ತು ,ಇದೆ, ಇರುತ್ತೆ. ನಮ್ಗೆ ಶ್ರವಣ್ ಅನ್ನುವ ಒಬ್ಬ ಹುಚ್ಚ ,ಅರೆ ಹುಚ್ಚ ತನ್ನ ತೆವಳು ತೀರಿಸಲು ಬರೆದು ಕೊಳ್ಳುವವನ ಲೇಖನಗಳು ಬೇಕಾಗಿಲ್ಲ.ಕನ್ನಡ ಹಾಳುಮಾಡಲು ಬೇರೆ ಭಾಷೆಯ ಸಂಸ್ಥೆಗಳು ಇಂತಹ ಕಚಡಾಗಳಿಗೆ ದುಡ್ಡು ಕೊಡುತ್ತಿದ್ದಾರೆ.ಇದು ಇಲ್ಲಿಗೆ ನಿಲ್ಲಬೇಕು.ನಾವು ಇದನ್ನು ನಮ್ಮ ಪ್ರಾಣ ಇರುವವರೆಗೂ ಮುಂದು ವರೆಯಲು ಬಿಡುವುದಿಲ್ಲ. ಸಿರಿಗನ್ನಡಂಗೆಲ್ಗೆ.
ಕನ್ನಡ ಸಾಹಿತಿ ::ನಮ್ಮ ಅಧ್ಯಕ್ಷರು ಹೇಳಿದ ಮಾತುಗಳಲ್ಲಿ ಅರ್ಥ ಇದೆ,ನಿಜಾನೂ ಇದೆ. ಅವರ್ ಲೇಖನಗಳನ್ನು ನಾನು ಓದಿದ್ದೇನೆ. ವ್ಯಾಕರಣ ದೋಷಗಳು ಒಂದಾ ಎರಡಾ?ಕನ್ನಡದ ಮಾನ ಬೀದಿಗೆ ಬರುವ ಮುನ್ನ ಇದನ್ನು ನಿಲ್ಲಿಸ್ಬೇಕಾಗಿದೆ.ನಾವು ಇಷ್ಟ್ರಲ್ಲೇ ಅಮರಣಾಂತ ಉಪವಾಸ ಕೂರುತ್ತೇವೆ
ಹಿರಿಯ ರಾಜಕಾರಣಿ: ಇದರಲ್ಲಿ ನಂಗೆ ಪ್ರತಿಪಕ್ಷದ ಕೈ ವಾಡ ಎದ್ದು ಕಾಣುತ್ತಿದೆ. ಸಮಾಜದಲ್ಲಿ ಗಲಭೆ ಎಬ್ಬಿಸಿ ,ನಂತರ ನಮ್ಮಮೇಲೆ ಗೂಬೆ ಕೂರಿಸಲು ಹೀಗೆಲ್ಲಾ ಮಾಡುತ್ತಿದ್ದಾರೆ.ಈ ಮನುಷ್ಯನ ಹಿಂದೆ ಯಾರು ಯಾರು ಇದ್ದಾರೆ ಅನ್ನುವುದನ್ನು ಕಣ್ಣು ಹಿಡಿಯಲು ನಾವು ಈ ಕೇಸನ್ನು ಸಿ. ಐ .ಬಿ ಗೆ ಒಪ್ಪಿಸುತ್ತೇವೆ.
ಬುದ್ಧಿವಂತ ಜೀವಿ: ನೋಡಿ ಭಾರತ ದೇಶದಲ್ಲಿ ಸಾರ್ವಜನಿಕವಾಗಿ ನೂರಾರು ಜನ ಕೊಂದ ಉಗ್ರಗಾಮಿಗೂ ಬದುಕುವ ಹಕ್ಕಿದೆ, ನಮ್ಮದು ಡೆಮಾಕ್ರ್ಟಿಕ್ ಕ್ಂಟ್ರಿ. ಸ್ವತಂತ್ರ ರಾಷ್ಟ್ರ. ಯಾರು ಹೇಗೆ ಬೇಕಾದರೂ ಬದುಕಬಹುದು.ಹಾಗೆಯೇ ಶ್ರವಣ್ ಗೂ ಬರೆಯುವ ಹಕ್ಕಿದೆ. ಅವರನ್ನು ತಡೆಯುವುದರಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ.
ಕಾಲೇಜು ಹುಡುಗ:ನೋಡಿ ಸರ್, ಅವರ ಲೇಖನಗಳು ಟೈಮ್ ಪಾಸ್. ಮಜ ಬರುತ್ತೆ. ಸೋ ನಮ್ಗೆ , .ಯುವ ಜನಾಂಗಕ್ಕೆ ಇದರಿಂದ ಎನೂ ತೊಂದರೆಯಗಿಲ್ಲಾ. ಶ್ರವಣ್ ಇಸ್ ಕೂಲ್ ಗಯ್. ಬರೀಲಿ ಬಿಡಿ, ಅವರ ಮೇಲಿ ಕೈ ಮಾಡಿದ್ರೆ ನಾವುಗಳು ಸುಮ್ನೆ ಇರೋಲ್ಲಾ.
ಪಿಂಡಾಂಡ ಜ್ಯೋತಿಷಿ : ನೋಡಿ ಈ ಮನುಷ್ಯನ ಕುಂಡಲಿ ಯಲ್ಲಿ ಯಾವ ಗ್ರಹಾನೂ ಸರಿಯಾಗಿ ಕುಳಿತುಕೊಳ್ಳದೇ ,ಎಲ್ಲೆಲ್ಲೋ ಓಡಾಡುತ್ತಿರುವುದರಿಂದ ಹೀಗೆ ಆಗುತ್ತಿದೆ. ಇಂತಹ ಮನುಷ್ಯನು ಕನ್ನಡದಲ್ಲಿ ಬರೆಯುವ ಹಾಗೆ ಆಗಿದೆಯೆಂದರೆ ಇದು ಪ್ರಳಯದ ಮುನ್ಸೂಚನೆ.ಇವನನ್ನು ತಮಿಳು ನಾಡು ದೇವ ಸ್ಥಾನಕ್ಕೆ ಕರೆದು ಕೊಂಡು ಹೋಗಿ ದೆವ್ವ ಬಿಡಿಸಿದರೆ ಎಲ್ಲಾ ಒಳ್ಳೆಯದಾಗುತ್ತೆ.
.........................................................................................................................................................

           ಇನ್ನು ನಮ್ಮ ಟಿ.ವಿ ೬೯ ನವರು ನಮ್ಮ ಕೋಸಂಬರಿ ಪಾನಕದ ಮೇಲೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದರು. ಅದರ ಹೆಸರು "ಹಲಸಿ ಹೋಗಿರುವ ಕೋಸಂಬರಿ ಪಾನಕ". ಕಾರ್ಯಕ್ರಮ ಹೀಗಿತ್ತು .
ಕೋಸಂಬರಿ ಪಾನಕ. ಶ್ರವಣ ಅನ್ನೊ ಹುಡುಗ ಬರಿತಾ ಇರೋ ಈ ಬ್ಲಾಗ್ ಗೆ ಇಂದು ಒಂದು ವರ್ಷ. ಯಾರು ಇವನು ,ಇದರ ಸುತ್ತ ಸುತ್ತುಕೊಂಡಿರುವ ವಿವಾದ ಆದ್ರೂ ಏನು ನೋಡೋಣ ಬನ್ನಿ.
ಯಾರಿವನು?
೧೯೮೮ ,ಮೇ ೮ ರಲ್ಲಿ ಪಡುಕೋಣೆಯಲ್ಲಿ ಜನಿಸಿದ ಶ್ರವಣ್ ,ಹುಟ್ಟಿ ಬೆಳದಿದ್ದೆಲ್ಲಾ ಹರಿಹರದಲ್ಲಿ. ಮೊದಲಿಂದಲೂ ಎಲ್ಲರನ್ನು ಸೆಳೆಯಬೇಕು,ಜನ ನನ್ನ ಗುರುತಿಸಬೇಕು ಎಂಬ ಹುಚ್ಚು ಈತನಿಗೆ, ಅದಕ್ಕೆ ಬರೆಯಲು ಶುರು ಮಾಡಿದ. ಆದ್ರೆ ಅಷ್ಟಕ್ಕೆ ನಿಲ್ಲದ ಇವನು ಕೋಸಂಬರಿ ಪಾನಕ ಬ್ಲಾಗ್ ಶುರು ಮಾಡಿದ. ಅಲ್ಲಿಂದ ಶುರುವಾಗಿದ್ದು ಸಮಸ್ಯೆಗಳು.
ಏನಾಯಿತು?
ಈ ಬ್ಲಾಗ್ನಲ್ಲಿರುವ ಲೇಖನಗಳನ್ನು ಓದಿದ ನಂತರ ಕನ್ನಡದ ಸಾಹಿತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಬಂದಿದೆ. ಅದೆಷ್ಟೋ ಲೇಖಕರು ಸಾಯುವ ಮುನ್ನ ವೀಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹಾಕಿದ್ದಾರೆ. ಇನ್ನೂ ಇದನ್ನು ಓದಿದ ಅನೇಕ ಜನರಲ್ಲಿ ,ತಲೆನೋವು ಕಾಣಿಸಿಕೊಂಡಿರುವ ವರದಿ ಕೂಡ ಆಗಿದೆ.ಇದನ್ನು ಇಷ್ಟಪಟ್ಟವರು ಕೆಲೆವೇ ಕೆಲವರು .ಆದ್ರೆ ವರದಿಗಳ ಪ್ರಕಾರ ಇವರಿಗೆ ಶ್ರವಣ್ ನವರು ಮಾಟ ಮಾಡಿಸಿರಬಹುದು ಎಂಬ ಶಂಕೆ ಇದೆ.
ಆಮೇಲೆ?
ಇದೆಲ್ಲಾ ಆಗುತ್ತಿದ್ದ ಹಾಗೆ ಇದರ ವಿರುದ್ಧ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಲು ಶುರು ಮಾಡಿದವು.ಪ್ರಾಣಿ ದಯಾ ಸಂಘ ದವರು ಏನು ಹೇಳುತ್ತಾರೆ ಕೇಳೋಣ ಬನ್ನಿ" ನೋಡಿ ಈ ಕೋಸಂಬರಿ ಪಾನಕ ಓದಿ ತುಂಬಾ ಜನ ಕೋಮಕ್ಕೇ ಹೋಗಿದ್ದಾರೆ. ಅಷ್ಟೇ ಅಲ್ಲಾ ಅನೇಕ ಆಸ್ಪತ್ರೆ ಗಳಲ್ಲಿ ವೈದರು ರೋಗಿಗಳ ಜ್ಞಾನ ತಪ್ಪಿಸಲು ವೈದ್ಯರು ಕೋಸಂಬರಿ ಪಾನಕ ಉಪಯೋಗಿಸುತ್ತಿದ್ದಾರೆ . ಆದರೆ  ಅಂತಹ ಯಾವ ರೋಗಿಗಳು ಬದುಕಿ ಉಳಿದಿಲ್ಲಾ . ಆದ್ದರಿಂದ ಮನುಷ್ಯ ಎಂಬ ಜೀವಿ ಮೇಲೆ ಇದನ್ನು ಉಪಯೋಗಿಸುವುದು ಬಹಳ ಅಪಾಯಕಾರಿ. ಆದ್ದರಿಂದ ಇದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ."
ಯಾರ ಕೈ ವಾಡ ಇದೆ?
ಇದನ್ನು ಓದಿದ ತುಂಬಾ ಜನಕ್ಕೆ ಆರೋಗ್ಯ ಕೆಡುತ್ತಿದೆ. ಅವರಿಗ ಸರಿಯಾದ ಮಾತ್ರೆ ಕೊಡದೇ ಹೋದರೆ ಸಾಯುವುದು ಗ್ಯಾರ್ಂಟಿ. ಈ ಮಾತ್ರೆ ಗಳ ಬೆಲೆ ಬಹು ದುಬಾರಿಯಾದದ್ದು. ಇದನ್ನು ಅರಿತ ಅನೇಕ ಮಾತ್ರೆ ತಯಾರಿಸುವ ಸಂಸ್ಥೆ ಗಳು ಶ್ರವಣ್ ವರಿಗೆ ಲಕ್ಷಗಟ್ಟಲೇ ಹಣ ಕೊಟ್ಟು ಪ್ರೋತ್ಸಾಹಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಇನ್ನು ಈ ಬ್ಲಾಗನ್ನು ಓದಿ ಅನೇಕ ಜನ ಸತ್ತಿರುವ ವರದಿ ಯಾಗಿದೆ. ಇದನ್ನು ಅರಿತ ಉಗ್ರಗಾಮಿ ಸಂಘಟನೆಗಳು ಸುಲಭವಾಗಿ ಜನ ಸಾಯಿಸಲು, ಶ್ರವಣ್ ನನ್ನು ಉಪಯೋಗಿಸಿ ಕೊಳ್ಳುವ ಸಾಧ್ಯತೆಗಳು ಇವೆ.ಕೋಸಂಬರಿ ಪಾನಕದ ಸುತ್ತ ಬೆಳದಿರುವ ಈ ವಿವಾದಗಳು ಎಷ್ಟು ನಿಜ. ಎಷ್ಟು ಸುಳ್ಳು .ಮುಂದೇನಾಗುತ್ತೆ? ಕಾದು ನೋಡ್ಬೇಕಾಗಿದೆ. ಅಲ್ಲಿಯವರೆಗೂ ನಮಸ್ಕಾರ. ಮತ್ತೇ ಸಿಗೋಣ

                      ನೋಡಿದ್ರಲ್ಲಾ ನಮ್ಮ ಬ್ಲಾಗ್ ಎಷ್ಟು ಖ್ಯಾತಿ ಕ್ಷಮಿಸಿ ಕುಖ್ಯಾತಿ ಪಡೆದಿದೆ .ಮತ್ತೇ ಸಿಗೋಣ.
English summary.Many news channel aired special programs as my blog completed one year.
Mamashree news: Protesters had gathered in front of my house .They were demanding to stop blogging. When the news reporter asked one of the female protestor the reason,she answered like this "the poems and some article are derogatory to women ,so it has to be banned". Then my dad said "Shravan is not here .Please stop protesting here.He is in mysore, go there .even I support u guys.
Pavarna news: It aired a special discussion on why my blog has to be banned.One of the youth in the discussion supported me as he found my blog cool.One of the leader from kannada rakshana vedike  that my blog is a shame to Kannada literature.
tv69: tv 69 sired a special program .The program had brief introduction about me and the consequences of my blog. In program it mentioned that many people suffered mental disorders after reading my blog.Hospitals are using my blog as anesthsia.They even suspected the al qaeda people are supporting me as my blog can be used to kill people.

.

ಭಾನುವಾರ, ಸೆಪ್ಟೆಂಬರ್ 22, 2013

ಕೋಸಂಬರಿ ಪಾನಕಕ್ಕೆ ಒಂದು ವರ್ಷ

ನಮ್ಮ ಕೋಸಂಬರಿ ಪಾನಕಕ್ಕೆ ಇದೀಗ ಒಂದು ವರ್ಷ.ಈ ಒಂದು ವರ್ಷದಲ್ಲಿ ನನ್ನ ಬರಹಗಳನ್ನು ನೀವು ಓದಿದ್ದೀರಿ,ಪ್ರೋತ್ಸಾಹಿಸಿದ್ದೀರಿ ,ತಪ್ಪಾದಾಗ ಕಿವಿ ಹಿಂಡಿದ್ದೀರಿ. ನಿಜ ಹೇಳಬೇಕೆಂದರೆ ನನಗೆ ಸಾಹಿತ್ಯದ ಗಂಧ ಗಾಳಿಯೂ ತಿಳಿದಿಲ್ಲ.ನನ್ನ ಬರವಣಿಗಯಲ್ಲಿ ಭಾರತದ ಜನಸಂಖ್ಯೆಗಿಂತಲೂ ಜಾಸ್ತಿ ಲೋಪ ದೋಷಗಳನ್ನು ಹುಡುಕಬಹುದು.ಒಂದು ಒಳ್ಳೆಯ ಬರವಣಿಗೆಗೆ ಇರಬೇಕಾದ ಯಾವುದೇ ಲಕ್ಷಣಗಳು ನನ್ನದರಲ್ಲಿ ಕಾಣುವುದಿಲ್ಲಾ. ಆದರೂ ಅದನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ,ಇಲ್ಲಿ ಚೆನ್ನಾಗಿರುವ ಅಂಶಗಳನ್ನು ಮಾತ್ರ ಗುರುತಿಸಿದ ನಿಮ್ಮ ದೊಡ್ಡ ಗುಣಕ್ಕೆ ನಾನು  ಚಿರ ಋಣಿ.
                      ಚಿಕ್ಕವನಿದ್ದಾಗಿನಿಂದಲೂ ನನಗೆ "center of attraction " ಆಗುವ ಗೀಳು ಹಿಡಿದು ಕೊಂಡುಬಿಟ್ಟಿದೆ. ಅದಕ್ಕೇ ಏನೋ ನನ್ನ ಹವ್ಯಾಸಗಳು ,ನನ್ನ ಕನಸುಗಳು ,ನನ್ನ ಬದುಕಿನ ಶೈಲಿ ಎಲ್ಲಾದರ ಮೇಲೂ   ಈ "center of attraction " ಆಗೋ ಹುಚ್ಚು ಪ್ರಭಾವ ಬೀರಿದೆ. ಅದಕ್ಕೇ ಎನೋ ಚಿಕ್ಕಂದಿನಿಂದಲೂ ಕವನ ,ಕಥೆ ಬರೆಯುವುದನ್ನು ಮೈಗೂಡಿಸಿಕೊಂಡೆ. ಮೊದಮೊದಲು ಬೇರೆಯವರ ಮೆಚ್ಚಿಸಲು ಬರೆಯುತ್ತಿದ್ದವನು ,ನಂತರ ನನ್ನ ಮನಸ್ಸಿನ ಸಮಧಾನಕ್ಕೆ ಬರೆಯತೊಡಗಿದೆ. ಈ ನನ್ನ ಬರೆಯುವ ಹುಚ್ಚು ಜಾಸ್ತಿ ಆಗಿ , ನಿಮಗೆ ಹುಚ್ಚು ಹಿಡಿಸುವ ಯೋಚನೆಯೊಂದು ಬಂದಾಗ ಹುಟ್ಟಿದ್ದೇ "ಕೋಸಂಬರಿ ಪಾನಕ". ಬ್ಲಾಗ್ ಬರೆದರೆ ತುಂಬಾ ಜನ ಓದುತ್ತಾರೆ, ಆಗ ಜನ ನನ್ನನ್ನು ಗುರುತ್ತಿಸುತ್ತಾರೆ ಅನ್ನೋದು ನನ್ನ ಅನಿಸಿಕೆ.
                ಹಾಗೂ ಹೀಗೂ ಓಂದು ಒಳ್ಳೆಯ ಮುಹೂರ್ತ ನೋಡಿ, ಬ್ಲಾಗ್ ಶುರು ಮಾಡಿ,  ಬ್ಲಾಗ್ ನಲ್ಲಿ ಒಂದು  ಪೋಸ್ಟ್  ಬರೆದು  ಮೇಲೆ ಪ್ರತಿಕ್ರಿಯೆಗಳಿಗೆ ಕಾಯುತ್ತಾ ಇದ್ದೆ. ಮನದಲ್ಲಿ ಎನೋ ಕುತೂಹಲ.ಜನ ಏನು ಬರೆಯಬಹುದು ,ಯಾರಾದರೂ ಓದುತ್ತಾರೋ ಇಲ್ಲವೋ,ಹೀಗೆ.ಒಂದು ದಿನದ ನಂತರ ಮೊದಲ ಪ್ರತಿಕ್ರಿಯೆ ಬಂದೇ ಬಿಟ್ಟಿತು."ಲೋ ಯಾಕಾದ್ರೂ ನಿಮ್ಮಂತವರು ಬರೀತಿರಾ?ಕುವೆಂಪು,ಕಾರಂತರು ದೊಡ್ಡವರು ಬರೆದಿರೋ ಈ ಕನ್ನಡ ಭಾಷೆನಾ ಹಾಳು ಮಾಡ್ಬೇಡ.ಒಟ್ಟಿನಲ್ಲಿ ನೀ ಬರೆದಿರೋ ಲೇಖನ ಎಲ್ಲಿಂದಾನೋ ಎಲ್ಲಿಗೆ ಹೋಗಿ ಸಖತ್ ಬೋರ್ ಹೊಡೆಸುತ್ತೆ.ದಯವಿಟ್ಟು ಸ್ಟಾಪ್ ಮಾಡಿ". ಕುವೆಂಪು ಮಟ್ಟಿಗೆ ಯಾರಾದರೂ ಹೊಗಳುತ್ತಾರೆ ಆಂತ ಕಾಯುತ್ತಾ ಕುಳಿತವನಿಗೆ , ಇದನ್ನು ಓದಿದಾಗ ಸಗಣಿಯುಂಡೆ ಮಾಡಿ ಹೊಡೆದಂತಾಯಿತು.ಇಂತಹ ಅನುಭವ ಆದ ಮೇಲೂ ಇನ್ನು ಬದುಕಿರಬಾರದು ಏಂದು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದೆ.
                              ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಸ್ಥಳ ಹಾಗು ಸೂಕ್ತ ಮಾರ್ಗದ ಬಗ್ಗೆ ಯೋಚಿಸಲು ಕುಳಿತೆ .ತಲೆ ಓಡಲಿಲ್ಲ.ಕೊನೆಗೆ ಮನೆ ಎದುರುಗಡೆ ಇರುವ ಟೀ ಆಂಗಡಿಗೆ ಹೋಗಿ ಟೀ ಕುಡಿಯುತ್ತಾ ಕುಳಿತೆ. ಆಗ ಟೀ ಮಾರುವವನು ತನ್ನ ಕೆಲಸದವನಿಗೆ ಬಯ್ಯುವುದು ಕಿವಿಗೆ ಬಿತ್ತು "ಹಲ್ಕ ನನ್ನ್ ಮಗನೇ, ಕೆಲ್ಸ ಮಾಡೋಕೆ ಬರೊಲ್ಲಾ ,ಯಾಕೆ ಬದುಕಿದ್ಯಾ?ಚಾಮುಂಡಿ ಬೆಟ್ಟದಿಂದ ಬಿದ್ದು ಸಾಯಿ". ಆಹ್ಹ! ಮುಳುಗದೇ ಸಾಯುತ್ತಿದ್ದ ನನಗೇ   ಒಂದು ಟೀ ಮಾರುವ ಆಂಗಡಿಯಲ್ಲಿ ಮುಳುಗುವ ದಾರಿ ಗೊತ್ತಾಯಿತು.ಖುಷಿಯಲ್ಲಿ   ಅವನಿಗೆ ಎರಡು ರೂಪಾಯಿ ಟೀ ಗೆ ಹತ್ತು ರೂಪಾಯಿ ಕೊಟ್ಟು ಹೊರಟು ಹೋದೆ.ಸಾಯುವ ಮೊದಲು ಎಲ್ಲರಿಗೂ ವಿದಾಯ ಹೇಳಿಬಿಡೋಣ ಎಂದುಕೊಂಡು ಫ಼ೀಸ್ಬುಕ್ ನಲ್ಲಿ "ಎಲ್ಲರಿಗೂ ಟಾಟ" ಎಂದು ಸ್ಟೇಟಸ್ ಅಪ್ಡೇಟ್ ಮಾಡಿದೆ.ನಿಜ ಹೇಳ್ಬೇಕು ಆಂದರೆ  ಯಾರಾದರೂ ಏನಾಯಿತು ಅಂತ ಕೇಳಿ ,ಸಮಧಾನ ಮಾಡುತ್ತಾರೆ ಏಂಬ ಆಸೆಯಿಂದ ಮಾಡಿದೆ.ಸ್ಟೇಟಸ್ ಅಪ್ಡೇಟ್ ಮಾಡಿ ಅರ್ಧ ದಿನ ಆದರೂ ಒಬ್ಬರು ಏನೂ ಪ್ರತಿಕ್ರಯಿಸಲಿಲ್ಲ. ಅದೇ ಸುಮ್ಮನೆ ಬೇಸರದ ಮುಖದ ಸ್ಮೈಲಿ ಹಾಕಿಕೊಂಡಿದ್ದ ಹುಡುಗಿಗೆ ಅರ್ಧ ಘಂಟೆಯಲ್ಲಿ ಒಂದು ಸಾವಿರಕ್ಕೂ ಜಾಸ್ತಿ  ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ನೂರು ಜನ ಏನಾಯಿತು ಅಂತ ತಲೆಕೆಡಿಸಿಕೊಂಡವರು ಇದ್ದರೆ,ಇನ್ನೊಂದಿಷ್ಟು ಜನ "ಎಲ್ಲಿದ್ದಿಯಾ ಬರಲಾ".ಹೀಗೆ ಇದು  ದೇಶದ ಅತೀ ದೊಡ್ಡ ಸಮಸ್ಯೆಯೆಂಬಂತೆ ಪ್ರತಿಕ್ರಯಿಸುತ್ತಿದ್ದರು.ಅದೇ ನನಗೇ  ನನ್ನ ಮೂರು ಜನ ಗೆಳಯರು ಮಾತ್ರ ಪ್ರತಿಕ್ರಯಿಸಿದ್ದರು.ಒಬ್ಬ "ಟಾಟ" ಅಂತ,ಇನ್ನೊಬ್ಬ "ಪಾರ್ಟಿ" " ಅಂತ ,ಇನ್ನೊಬ್ಬ "ಮಗ ಒಳ್ಳೆಯದಾಗಲಿ" ಆಂತ ಪ್ರತಿಕ್ರಯಿಸಿದ್ದರು.ನಮ್ಮ ಭಾರತದಲ್ಲಿ ಬದುಕಲು ದಾರಿ ಹೇಳಿಕೊಡುವ ಮಂದಿ ಸಿಗದೇ ಇರಬಹುದು,ಸಾಯಲು ಉತ್ತೇಜಿಸುವ ಜನ ಬಹಳ ಇದ್ದಾರೆ.ಛೇ! ಗಂಡುಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ ಅಂದುಕೊಂಡು ,ಸಾಯುಲೇಬೇಕು ಆಂತ ತೀರ್ಮಾನ ಮಾಡಿದೆ.
       ಚಾಮುಂಡಿ ಬೆಟ್ಟ ಹತ್ತಿ ಇನ್ನೇನು ಸಾಯಬೇಕು ಅಂತ ನಿಂತಾಗ ,ಕಾಲಿಗೆ ಎನೋ ಚುಚ್ಚಿದಂತಾಗಿ ಆಕಡೆ  ಒಂದು ಗಿಡದ ಮುಳ್ಳು. ನಾನು ಒಂದು ಗಿಡವನ್ನು ತುಳಿದಿದ್ದೆ. ಆ ಗಿಡದ ಮೈ ತುಂಬಾ ಮುಳ್ಳು. ಆದ್ರೂ ಆ ಗಿಡ ಒಂದು ಸುಂದರವಾದ  ಹೂ ಬಿಟ್ಟಿತ್ತು.ತಕ್ಷಣ ಅಲ್ಲಿಂದ ಹಾದಿ ಹೋಗುತ್ತಿದ್ದ ಯಾರೋ ಅದೇ ಗಿಡದ ಹೂವನ್ನು ನೋಡುತ್ತಾ "ನೋಡಿ ,ಆ ಗಿಡದ ಹೂವನ್ನು . ಗಿಡದ ತುಂಬಾ ಮುಳ್ಳು ತುಂಬಿಕೊಂಡಿದ್ದರೂ ಎಂತಹ ಸುಂದರವಾದ ಹೂವು ಬಿಟ್ಟಿದೆ ಆಂತ". ಈ ಮಾತುಗಳನ್ನು  ಕೇಳಿದ ನಂತರ ನಂಗೇನೋ ಹೊಳೆದಂತಾಯಿತು. ಆ ಹೂವು ಚೆನ್ನಾಗಿದ್ದಿರಬಹುದು ಆದರೆ ಅದರೆ ಜೊತೆಗಿನ ಮುಳ್ಳು ಎಷ್ಟು ಕೆಟ್ಟದಾಗಿತ್ತೆಂದರೆ ,ನೋಡಿದವರಿಗೆ ಹೂವು ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಿತ್ತು.
ಹೌದಲ್ಲವಾ. ಜಗತ್ತಿನಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರೆ, ಎಕಾತನತೆ ಇರುತಿತ್ತು. ಅಲ್ಲವಾ. ಒಂದು ಆಟದಲ್ಲಿ ಗೆಲ್ಲಬೇಕಂದರೆ ಇನ್ನೆಲ್ಲರೂ ಸೋಲಬೇಕು. ಎಲ್ಲರೂ ಗೆದ್ದರೇ ಅದು ಗೆಲುವೇ ಅಲ್ಲಾ.ಎಲ್ಲವೂ ಚೆನ್ನಾಗಿದ್ದರೆ ಹಾಗೆಯೇ ಆಗುವುದು. ಅದಕೆ ಕನ್ನಡದ ಸಾಹಿತ್ಯದಲ್ಲಿ ಕೆಟ್ಟ ಸಾಹಿತ್ಯದ ನಿದರ್ಶನವಾಗಿ ನನ್ನ ಸಾಹಿತ್ಯ ಯಾಕಿರಬಾರದು ? ಜನರ ಬಾಯಲ್ಲಿ ನಾನು ಕೊನೆ ತನಕ ಉಳಿಯಬಹುದು. ಹೇಗೆ ಅಂತೀರಾ?ಉದಾಹರಣೆಗೆ  "ಲೋ ನಿನ್ನ ಮುಖ ಎಷ್ಟು ಕೆಟ್ಟದಾಗಿದೆಯೆಂದರೆ,ಒಳ್ಳೇ ಶ್ರವಣ್ ಬರೆದಿರೋ ಲೇಖನ ಇದ್ದ ಹಾಗಿದೆ". "ಕನ್ನಡದಲ್ಲಿ ಎರಡು ಥರಹ ಸಾಹಿತ್ಯ ಇದೆ ಒಂದು ಒಳ್ಳೆಯ ಸಾಹಿತ್ಯ,ಇನ್ನೊಂದು ಶ್ರವಣನ ಸಾಹಿತ್ಯ" ಹೀಗೆ. ಜನ  ದೇವರ ಜೊತೆ ರಾಕ್ಷಸರ ನೆನಪು ಇಟ್ಟು ಕೊಂಡ ಹಾಗೆ. ಅದಕ್ಕೆ ನಾನು ಸಾಯುವುದು ಬಿಟ್ಟು ಮತ್ತೆ ಬರೆಯಲು ಶುರು ಮಾಡಿದೆ.ಛೇ ! ಅಂತ ನೀವು ಬಯ್ಯತ್ತಾ ಕುಳಿತಿರಬಹುದು. ಆದ್ರೆ ಏನು ಮಾಡುವುದು ನಾನು ಒಂದು ಸಲ ಕಮಿಟ್ ಆದ್ರೆ ನನ್ನಮಾತು ನಾನೇ ಕೇಳುವುದಿಲ್ಲಾ.
English summary: First year anniversary to my Kannada blog.I am grateful to u all for reading my blog.First of all I know I am not such a good writer.I know there are so many grammatical mistakes, spelling mistakes. In spite of all that u have embraced my writing.After starting a blog and posting my first post,I was very keen to read my first comment.But after reading my first comment in which the reader scolded me for bad writing I thought of committing suicide.I went to Chamundi hills to commit suicide.When I was about to jump I heard someone saying "see this plant,Its full of thorns.yet the flower is beautiful". Then a thought flashed across my mind.The flower is beautiful but the thorns added to it's beauty.Then I thought I  may be not the flower ,but I am thorn.May be my literature get considered as bad literature in Kannada Language. Whatever I will remain in people mind.So,I dropped the idea of committing suicide and then came back.Now I have decided that I will continue with my blog.

ಬುಧವಾರ, ಸೆಪ್ಟೆಂಬರ್ 18, 2013

ನಾವು Software Engineers :ನಾವು ಕೂಡ ನಿಮ್ಮ ಹಾಗೆ


                ಯಾವುದೇ ಒಂದು ವಿಷಯವನ್ನು ತುಂಬಾ ಚರ್ಚಿಸಬಾರದು .ಬೋರ್ ಹೊಡೆಯಲು ಶುರುವಾಗುತ್ತದೆ. ನಮ್ಮ್ ಹುಡುಗರ ಭಾಷೆಯಲ್ಲಿಹೇಳಬೇಕೆಂದರೆ ಕೊರೆತ ಆಗಿಬಿಡುತ್ತದೆ . ಹಾಗಂತ ಯಾವುದೇ ವಿಷಯವನ್ನು ಅರ್ಧಕ್ಕೆ ನಿಲ್ಲಿಸಬಾರದು . ಹಾಗಂತ ನಮ್ಮ ದೊಡ್ಡವರುಹೇಳಿದ್ದಾರೆ.ದೊಡ್ಡವರು ಮಾತು ಕೇಳ್ಬೇಕು ನೋಡಿ. ಅದಕ್ಕೆ ನಮ್ಮ software engineersಅ ವಿಷಯಕ್ಕೆ ಇಂದು ಇತಿಶ್ರೀ ಹೇಳಿಬಿಡೋಣ.

              ಅದೇನೊ ಗೊತ್ತಿಲ್ಲಾ ನಮ್ಮ ಜನದ ಬಾಯಲ್ಲಿ ಇದೊಂದು ಕಾಮನ್ ಡೈಲಾಗ್ ನಲಿದಾಡುತ್ತಿರುತ್ತದೆ."ಮೊದಲೆಲ್ಲಾ ಹೀಗಿರಲಿಲ್ಲಾ,ಈ ಐ.ಟಿ ,ಬಿ.ಟಿ ಬಂದ ಮೇಲೇನೆ ಈ ಹುಡುಗಿಯರು ತುಂಡು ಬಟ್ಟೆ ಹಾಕಿಕೊಳ್ಳೋದು,ಈ ಪಬ್ ಸಂಸ್ಕೃತಿ,ಅನೈತಿಕ ಸಂಬಂಧಗಳು,ವಿವಾಹೇತರ ಸಂಬಂಧಗಳು ಜಾಸ್ತಿಯಾಗಿದೆ,.ನಮ್ಮ ಸಂಸ್ಕೃತಿನಾ ಹಾಳು ಮಾಡಿಬಿಟ್ಟರು. ಕನ್ನಡ ಬಂದ್ರೂ ಮಾತಾಡಲ್ಲಾ".ಹೀಗೆ ಒಂದಾಏರಡಾ .ಸಮಾಜದಲ್ಲಿರುವ ಸಕಲ ಅನಿಷ್ಟಕ್ಕೂ ನಾವೇ ಕಾರಣ ಏಂಬಂತೆ ಬಯ್ಯುತ್ತಾರೆ.

                 ಮೇಲಿನ ಯಾವುದನ್ನೂ ನಮ್ಮಲ್ಲಿ ಇಲ್ಲಾ ಅಥವಾ ನಮ್ಮವರು ಮಾಡಿಯೇ ಇಲ್ಲ ಎಂದು ಹೇಳುತ್ತಿಲ್ಲಾ. ಆದರೆ ಜನಮಾತಾನಾಡುವ ರೀತಿ ನೋಡಿದರೆ ,ಇವೆಲ್ಲಾ ನಮ್ಮಿಂದಲೇ ಶುರುವಾಗಿದ್ದು ಅಥವಾ ನಮ್ಮ ವೃತ್ತಿಯಲ್ಲಿ ಮಾತ್ರ ಎಂಬಂತೆ ಭಾಸವಾಗುತ್ತದೆ. (ನಿಜಹೇಳಬೇಕೆಂದರೆ ಇದನ್ನು ಹೇಳಿದವರು,ಹೇಳಿದ ನಂತರ ಸ್ವಲ್ಪ ಹೊತ್ತು ಯೋಚಿಸಿದರೆ ಏಷ್ಟೊಂದು ಬಾಲಿಶವಾಗಿ ಮಾತನಾಡಿದ್ದೇವೆ ಎಂದುಅವರಿಗೆ ಅನಿಸುತ್ತದೆ.) ಅದು ತಪ್ಪು . ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ,ಐ.ಟಿ ,ಬಿ.ಟಿ ಬರುವ ಮುಂಚೆ ಅಲ್ಲಾ ,ನಮ್ಮ ರಾಜಣ್ಣನ ಕಪ್ಪು ಬಿಳುಪುಚಿತ್ರದಿಂದಲೇ ಶುರುವಾಗಿತ್ತು.ಇನ್ನು ಪಬ್ ನಲ್ಲಿ ಬರಿ software engineer ಗಳು ಹೋಗುವುದಿಲ್ಲಾ . ಮೀಸೆ ಚಿಗುರದ ,ಜಡೆ ಕಟ್ಟಲು ಬಾರದ ಹದಿಹರೆಯದ ಹುಡುಗ ಹುಡುಗಿಯರು,ಆಲ್ಲಾಡುವ ಮುದುಕಮುದುಕಿಯರು, ಸುಣ್ಣದಂತೆ ಬಣ್ಣ ಬಳಿದು ಕೊಂಡು ಬರುವ ಆಂಟಿ ಅಂಕಲ್ ಗಳು,ವಾಂತಿ ಬದಲು ದುಡ್ಡು ಕಕ್ಕುವ ಸಾಹುಕಾರರು ,ಬೇರೆ ಬೇರೆ ವೃತ್ತಿಯಲ್ಲಿ ಇರುವವರು ಹೀಗೆ ಬೇರೆಯವರು ಬರುತ್ತಾರೆ. ಅವರೆಲ್ಲಾ ನಾವು ಆಹ್ವಾನಕೊಟ್ಟ ಮೇಲೆ ಬಂದವರಲ್ಲಾ.ಇನ್ನೂ ನಮ್ಮಲ್ಲಿ ಮಾತ್ರ ಅನೈತಿಕ ಸಂಭಂದಗಳು ,ವಿವಾಹೇತರ ಸಂಭಂದಗಳು ಜಾಸ್ತಿ ಅನ್ನುವವವರು ನಮ್ಮ ಕನ್ನಡನ್ಯೂಸ್ ಚಾನೆಲ್ಗಳನ್ನು ಒಮ್ಮೆ ಹಾಕಿ ನೋಡಿ. ಅಲ್ಲಿ ಅರ್ಧ ಘಂಟೆಗೆ ಒಮ್ಮೆ ನಮ್ಮ ಸರ್ಕಾರಿ ನೌಕರರ "ಇಬ್ಬರ ಹೆಂಡಿರ ಮುದ್ದಿನ ಗಂಡ"ಕಥೆಯನ್ನು ಜೂಮ್ ಮಾಡಿ ಮಾಡಿ ತೋರಿಸುತ್ತಾರೆ. ಮೇಲಿನ ಯಾವುದನ್ನೂ ಬರಿಯ software engineerಗಳು ಮಾಡಬೇಕು ಅಂತ ಇಲ್ಲಾ.ಬೇರೆ ವೃತ್ತಿಯಲ್ಲಿರುವ ಯಾವುದೇ ಉಪ್ಪು ಖಾರ ತಿನ್ನುವವನು ಮಾಡುತ್ತಾನೆ.ಆದರೂ ನಾವುಗಳೇ ಜನರ ನಾಲಿಗೆಗೆ ಯಾಕೆ ಆಹಾರ ಆಗುತ್ತೇವೆಆನ್ನುವುದು ನಾ ಕಾಣೆ.ಉದಾಹರಣೆಗೆ ನಮ್ಮ ಟಿ.ವಿ ಗಳಲ್ಲಿ ಬರುವ ಹಾಗೆ "ನಮ್ ಐ.ಟಿ ,ಬಿ.ಟಿ ಗಳು ಬಂದ ಮೇಲೆ ಬೆಂಗ್ಳೂರಲ್ಲಿ ತುಂಡು ಬಟ್ಟೆಹಾಕೋರು ಜಾಸ್ತಿಯಾದ್ರು."

                ಇನ್ನು ಅದ್ಯಾಕೆ ನಮ್ಮ ಜನಕ್ಕೆ ನಮ್ಮ್ ಮೇಲೆ ದ್ವೇಷಾನೋ ನಾ ಕಾಣೆ. ಹೀಗೆ ನೀವೇ ಕಿವಿಗೊಟ್ಟು ಕೇಳ್ತಾ ಇರಿ, ಒಬ್ಬರಲ್ಲಾಒಬ್ಬರು"ಇನ್ನೇನ್ ರಿಸೆಷನ್ ಬರುತ್ತೆ,ಆಗ ಈ software engineer ಗಳು ಎಲ್ಲಾ ಬೀದಿಗೆ ಬರುತ್ತಾರೆ ನೋಡ್ತಾ ಇರಿ " ಆಂತ ಹೇಳುವುದನ್ನು ಪ್ರತಿಹತ್ತರಲ್ಲಿ ಒಬ್ಬ ಹದಿನೈದು ನಿಮಿಷಕ್ಕೆ ಶಾಪ್ ಹಾಕುವುದನ್ನು ಕೇಳುತ್ತೀರಿ.ಯಾಕೆ ಯಾರದರೂ ನೆಮ್ಮದಿಯಿಂದ ಬದುಕುತ್ತಿರುವವರು ಬೀದಿಗೆಬಂದರೆ ನಿಮ್ಮ ಹೊಟ್ಟೆ ತಂಪಾಗುತ್ತಾ?.

ನಿಜ ಹೇಳ್ಬೇಕು ಆಂದರೆ ನಿಯತ್ತಿನಿಂದ ವೃತ್ತಿಪರ ಕೋರ್ಸ್ ಗಳನ್ನು ಲಕ್ಷಗಟ್ಟಲೆ ಖರ್ಚು ಮಾಡಿ ಮುಗಿಸಿ, ನಂತರವೂ ಮೈಮೇಲೆ ಸಾಲ ಇದ್ದರೂ ನಿಯತ್ತಿನಿಂದ ಬದುಕುತ್ತಿರವರು ನಾವೇ ಕಾಣ್ರಿ.ಅದೆಷ್ಟೋ ಮಂದಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ,ಡಾಕ್ಟರ್ ಆದನಂತರ ಅದನ್ನು ತೀರಿಸಲು ಅಡ್ಡದಾರಿ ಹಿಡಿಯುತ್ತಾರೆ.ಕೋಟಿಗಟ್ಟಲೇ ಲಂಚ ಕೊಟ್ಟು ಸೇರುವ ಸರ್ಕಾರಿ ನೌಕರರು ಅದರ ದುಪ್ಪಟ್ಟು ಲಂಚ  ತೆಗದುಕೊಳ್ಳುತ್ತಾರೆ. ಇಡೀ ದೇಶಕ್ಕೇ ಅತ್ಯಾಚಾರಿ ಆಂತ ಗೊತ್ತಿದರೂ ಅವರ ಪರ ವಾದ ಮಾಡುವ ವಕೀಲರಿದ್ದಾರೆ. ಆದ್ರೆ ನಾವು ಬರುವಸಂಬಳದಲ್ಲಿ ಇರೋ ಬರೋ ಟ್ಯಾಕ್ಸ್ ಕಟ್ಟಿ ಬದುಕುತ್ತಿದ್ದರೂ ನಮ್ಮ ಮೇಲೆ ನಿಮ್ಮ ಶಾಪಗಳು ಜಾಸ್ತಿ ಯಾಕೆ?
            ಬಹುಷಃ ಇವೆನ್ನೆಲ್ಲಾ ನೋಡುತ್ತಿದ್ದಾಗ ನನಗೆ ಅನ್ನಿಸಿದ್ದು ಏನೆಂದರೆ ಈ ಥರಹ ಮಾತನಾಡುವ ಜನಕ್ಕೆ ನಾವುಗಳು ಏನುಮಾಡುತ್ತಿದ್ದೇವೆ ಅನ್ನುವುದು ಗೊತ್ತಿಲ್ಲಾ ,ಸಮಾಜಕ್ಕೆ ನಮ್ಮ ಕೊಡುಗೆ ಏನು ಇಲ್ಲಾ ಅಂದುಕೊಂಡು ಹೀಗೆ ಅನ್ನುತ್ತಿದ್ದಾರೆ ಅನ್ನಿಸುತ್ತದೆ. ಕೆಲಸದವಿಚಾರಕ್ಕೆ ಬಂದರೆ ನಮ್ಮ software ಗಳು ಇಲ್ಲದೇ ನಿಮ್ಮ ಬದುಕಿನಲ್ಲಿ ಎಷ್ಟು ಕಷ್ಟ ಯೊಚಿಸಿದ್ದೀರಾ?ಉದಾಹರಣೆಗೆ ನೀವು ದಿನಾಗಲೂಉಪಯೋಗಿಸುವ ವಸ್ತುಗಳ software ಕೆಟ್ಟು ಹೋಗಲಿ . ಆಗ ನಮ್ಮ ಬೆಲೆ ಅರ್ಥ ಆಗುತ್ತದೆ. ಕೆಲವರು ಅಯ್ಯೋ ಈ software ಬರೋ ಮುಂಚೆ ಮನುಷ್ಯ್ರು ಬದುಕ್ತಾ ಇರಲಿಲ್ವಾ ಮನುಷ್ಯರು ಅಂತ ವಿತಂಡ ವಾದ ಮಾಡ್ಬಹುದು. ಆಂತವರಿಗೆ ನಾನು ಹೇಳುವುದು ನನ್ನ ಚಿಕ್ಕ ಸವಾಲುsoftware ಇರುವಂತಹ ಅಥವಾ software ಗಳು ಉಪಯೋಗ ಪಡೆದುಕೊಂಡ ತಯರಾದ ವಸ್ತುಗಳನ್ನು ಬಿಟ್ಟು ಒಂದು ದಿನ ಬದುಕಿ ತೋರಿಸಿಆಂತ.ಈ ಟ್ರಾಫಿಕ್ ಮಯ ಯುಗದಲ್ಲಿ ,ದಿನದಿಂದೇ ದಿನ ಎಲ್ಲದಕ್ಕು ದೊಡ್ಡ ದೊಡ್ಡ ಕ್ಯೂಗಳು ಕಾಣಿಸುತ್ತಿರುವ ಈ ಜಮಾನದಲ್ಲಿ,ಹಗಲಿನಲ್ಲೂನೆಮ್ಮದಿಯಿಂದ ಹೆಣ್ಣುಮಕ್ಕಳು ಓಡಾಡಲು ಕಷ್ಟವಾಗಿರುವ ಈ ಕಾಲದಲ್ಲಿ ಕುಂತಲ್ಲಿಯೇ ನಿಮ್ಮ ಕೆಲಸಗಳನ್ನು ಮುಗಿಸುವಂತೆ ಮಾಡುವುದುನಮ್ಮ software ಗಳು.ನಮ್ಮ ಬಗ್ಗೆ ನಾವೇ ಹೊಗಳಿಕೊಳ್ಳಬಾರದು ಅದಕೆ ನಾನು ಇಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ.
           ಇದನ್ನು ಓದಿದ ಕೆಲವರಿಗೆ ತುಂಬಾ ಅತಿಯಾತು ಅನ್ನಿಸಬಹುದು. ಎದುರಾಳಿ ಪದೇ ಪದೇ ಏಟುಕೊಡುವಾಗ ನಾವು ಎದಿರೇಟು ಕೊಡಲೇಬೇಕುತ್ತದೆ. ಅದೇ ನಿಟ್ಟಿನಲಿ ಇದನ್ನು ಬರೆದಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ.ನನ್ನ ಬೇಡಿಕೆ ಇಷ್ಟೇಯಾರನ್ನಾದರೂ ತೆಗಳುವ ಮುಂಚೆ ಸರಿಯಾಗಿ ಅವರ ಬಗ್ಗೆ ತಿಳಿದುಕೊಂಡು ಉಗಿಯಿರಿ. ಸುಮ್ಮನೇ ನನ್ನದು ಒಂದು ಇರಲಿ ಆಂತ  ಮಾತನಾಡಬೇಡಿ.
English summary:The one thing I hear often people saying is " All these extra marital relationship,western culture,Pub culture started because of I T people .They are the threat to Indian culture".This is base less.All these started way back in 1980.Many people keep on cursing "Let the recession come,all these people will be on streets".Why is that so?Aren't u guys happy if someone is living happily.Actually we software engineers after spending lakhs together lead a honest life paying taxes .According to me the reason for this people's wrong perception is ,they really don't have single idea what we software engineers do? For those people  I ask to spend a day without using any of our software or products which has software.Last but not least my point is talk only if u have idea ,just don't add up .




ಶನಿವಾರ, ಸೆಪ್ಟೆಂಬರ್ 14, 2013

ಅರ್ಥ ಕಳೆದುಕೊಳ್ಳುತ್ತಿರುವ ಗಣೇಶ ಚತುರ್ಥಿ ಆಚರಣೆಗಳು

ಇಂದು ಬೀದಿಬೀದಿಗಳಲ್ಲಿ ,ಗಲ್ಲಿಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಗಣೇಶನ ಮೂರ್ತಿ ಇರುವ ಪೆಂಡಾಲುಗಳು ಕಾಣುತ್ತಿದ್ದೆ.ಮೂಷಿಕವಾಹನದ ಮೇಲೆ ಕೂರುವ ಗಣಪತಿಯಿಂದ ಹಿಡಿದು ಮೈಕಲ್ ಜಾಕ್ಸನ್ ಗಣಪತಿಯ ತನಕ ಸಾವಿರಾರು ರೂಪದಲ್ಲಿ ಗಣಪತಿಯನ್ನು ಕಾಣಬಹುದು.ಹೇಳಬೇಕಂದರೆ,ದೇವರಲ್ಲಿ ನಮ್ಮ ಗಣಪತಿಯು ಕ್ರಿಕೆಟ್ ಆಟದಲ್ಲಿ ಬರುವ ಗ್ಯಾಲರಿ ಪ್ಲೇಯರ್ ಇದ್ದ ಹಾಗೆ. ಕ್ರಿಕೆಟ್ನಲ್ಲಿ ಗ್ಯಾಲರಿ ಪ್ಲೇಯರ್ ಅನ್ನಿಸಿಕೊಂಡ ಆಟಗಾರ ಆಟದ ಮೈದಾನದಲ್ಲಿ ಇರುವವರೆಗೂ ಹೇಗೆ ಬೌಂಡರಿಗಳ ಸುರಿಮಳೆ ಸುರಿದು ವೀಕ್ಷಕರ ಮನದಣಿಸುತ್ತಾನೋ,ಹಾಗೆಯೇ ನಮ್ಮ ಗಣಪನೂ ಇದ್ದಷ್ಟೂ ದಿನ ನಮಲ್ಲಿ ಉತ್ಸಾಹ ತುಂಬಿ ತುಳುಕುವಂತೆ ನೋಡಿಕೊಳ್ಲುತ್ತಾನೆ. ಒಟ್ಟಿನಲ್ಲಿ ಹೇಳ್ಬೇಕೆಂದರೆ ನಮ್ಮ ಗಣೇಶ ಮಾಸ್ ಹೀರೊ.

        ಸಾರ್ವಜನಿಕ ವಲಯದಲ್ಲಿ ಗಣೇಶ ಚತುರ್ಥಿ ಆಚರಣೆ ಈ ಮಟ್ಟಿಗೆ ಆಚರಣೆಗೊಳ್ಳಲು ಕಾರಣ ನಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕರು. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶ ಹಬ್ಬ ಮನೆಮನೆಗಳಿಗೆ ಸೀಮಿತ ವಾಗಿತ್ತು. ಗಣೇಶನ ಜನಪ್ರಿಯತೆಯನ್ನು ಕಂಡ ತಿಲಕರು ಅದನ್ನು ದೇಶದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಬ್ರಿಟಿಷರ ವಿರುದ್ಧ ಎತ್ತಿ ಕಟ್ಟಲು ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ದೊಡ್ದ ದೊಡ್ಡ ಗಣೇಶ ಮೂರ್ತಿಗಳನ್ನು ಇಡುವುದು,ಕೆರೆಗಳಲ್ಲಿ ಮುಳುಗಿಸುವ ಪದ್ಧತಿಗಳನ್ನು ಶುರು ಮಾಡಿದ್ದು ಲೋಕಮಾನ್ಯ ತಿಲಕರು.

     ಅಂದಿನಿಂದ ಶುರುವಾದ ಈ ಪದ್ಧತಿ ಸ್ವಾತಂತ್ರ್ಯದ ನಂತರವೂ ಮುಂದುವರೆದುಕೊಂಡು ಬಂದಿದೆ.ಆದರೆ ಈಗಿನ ಆಚರಣೆಗಳು ಎಲ್ಲೋ ಅರ್ಥಕೊಳ್ಳುತ್ತಿದೆ ಅನ್ನಿಸುತ್ತಿದೆ.ಮೊದಲನೆಯದಾಗಿ ಗಣೇಶ ಹಬ್ಬದ ಆಚರಣೆ ಇಂದು ಪ್ರತಿಷ್ಠೆಯ ಪ್ರತೀಕವಾಗಿಬಿಟ್ಟಿದೆ.ಅದಕ್ಕೆ ಎನೋ ಈ ಸಲ ಈ ಬೀದಿಯಲ್ಲಿ ಗಣೇಶ ಇಟ್ಟರು ಅಂತ ಮುಂದಿನ ವರ್ಷ ಇನ್ನೊಂದು ಬೀದಿಯಲ್ಲಿ ಗಣೇಶ,ಈ ಸಂಘದವರು ಇಟ್ಟರು ಆಂತ ಇನ್ನೊಂದು ಸಂಘ ಹೀಗೆ ವರ್ಷದಿಂದ ವರ್ಷ ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ.ಕಾಲ ಬದಲಾದಂತೆ ನಾವು ಇದರಿಂದಾಗುವ ಸಮಸ್ಯೆಗಳನ್ನು ನೋಡಬೇಕಾಗಿದೆ.

        ಈಗಂತೂ ಎಲ್ಲೆಂದರಲ್ಲಿ ರೋಡನ್ನು ಬ್ಲಾಕ್ ಮಾಡಿ ಗಣೇಶನನ್ನು ನಿಲ್ಲಿಸಲಾಗುತ್ತದೆ .ಹಬ್ಬದ ಆಸುಪಾಸು ದಿನಗಳು ಇದರಿಂದಾಗಿ ಟ್ರಾಫಿಕ್ ಸಮಸ್ಯೆ ದೊಡ್ಡ ದೊಡ್ಡ ಊರುಗಳಲ್ಲಿ ಸರ್ವೇ ಸಾಮನ್ಯ.ಇದರಿಂದಾಗಿ ಅಷ್ಟು ದಿನಗಳೂ ಜನರಿಗೆ ಹಬ್ಬ ಯಾಕಾದರೂ ಬಂದಿದೆ ಆನ್ನಿಸಿಬಿಡುತ್ತದೆ.ಇನ್ನೂ ಕೆಲವು ಕಡೆಯಂತೂ ಕಿವಿ ಹರಿದು ಹೋಗುವ ಹಾಗೆ ಮೈಕ್ ಸೆಟ್ ನಲ್ಲಿ ಹಾಡು ಅಥವಾ ಕಾರ್ಯಕ್ರಮ ನಡೆಸುತ್ತಿರುತ್ತಾರೆ. ಗಣೇಶ ವಿನೋದ ಪ್ರಿಯ. ಹಾಗೆ ಅವನ ಹೆಸರಲ್ಲಿ ಒಂದಿಷ್ಟು ಕಾರ್ಯಕ್ರಮ ಮಾಡಿ ನಾಲ್ಕೈದು ಜನ ಸೇರಿದರೆ ಏನು ತಪ್ಪು ಆಂತ ಪ್ರಶ್ನೆ ನೀವು ಕೇಳಬಹುದು.ನಿಜ ಹೇಳಬೇಕೆಂದರೆ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಏನು ತಪ್ಪಿಲ್ಲ. ಹೊರಗೆ ಒಂದಿಷ್ಟು ಜನ ಸೇರಲು ಸಹಾಯವಾಗುತ್ತದೆ.ಇದರಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ.ಆಷ್ಟೇ ಅಲ್ಲಾ ಇಲ್ಲಿನ ವೇದಿಕೆಗಳು ಕೆಲವೊಮ್ಮೆ ಅದೆಷ್ಟೋ ಟಾಲೆಂಟ್ಸ್ ಗಳನ್ನು ಬೆಳಕಿಗೆ ತರುತ್ತದೆ.

   ಆದರೆ ಇತ್ತೀಚೆಗೆ ಈ ಕಾರ್ಯಕ್ರಮಗಳನ್ನು ನೋಡಿದಾಗ ನಿಜವಾಗಲೂ ಮೇಲಿನ ಸದುದ್ದೇಶಗಳು ಕಾಣ ಸಿಗುವುದೇ ಇಲ್ಲಾ. ಗಣೇಶನ ಪೆಂಡಾಲ್ಗಳಲ್ಲಿ ಹಾಡುವ ಹಾಡುಗಳು ನಿಜವಾಗಲೂ ಗಣೇಶ ಕೇಳಿಸಿಕೊಂಡರೆ ಕಿವಿಮುಚ್ಚುಕೊಳುತ್ತಾನೆ. ರವಿಚಂದ್ರನ್ ಚಿತ್ರದ ಯಮ್ಮೊ ಯಮ್ಮೋ, ಭಟ್ಟರ ಹಳೇ ಪಾತ್ರೆ ಯಂತಹ ಪೋಲಿ ಹಾಡುಗಳು,ಹಿಂದಿ ಚಿತ್ರದ ಹೆಣ್ನನ್ನು ಕಾಮ ದೃಷ್ಟಿಯಲ್ಲಿ ನೋಡುವ ಮುನ್ನಿ,ಶೀಲಾ ಹಾಡುಗಳು.ಇನ್ನೂ ವೇದಿಕೆಗಳಲ್ಲಿ ಕೆಲವೊಮ್ಮೆ ನಡೆಯುವ ಕಾರ್ಯಕ್ರಮಗಳು ಅಂತೂ ಕೇಳಬೇಡಿ.ದ್ವಂದಾರ್ಥಗಲು ಇರುವ ಹಾಸ್ಯಗಳು,ಅರಬರೆ ಬಟ್ಟೆಯ ಫ಼್ಯಾಷನ್ ಶೋಗಳು,ಕ್ಯಾಬರೆ ಹಾಡುಗಳ ಅರ್ಥ ತಿಳಿಯದೆ ಕುಣಿಯುವ ಚಿಕ್ಕ ಮಕ್ಕಳು,ಪುಟ್ಟ ಹುಡುಗಿಯರು. ಇವೆಲ್ಲಾ ಬಿಟ್ಟು ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ಮತ್ತು ಮನೋರಂಜನೆಯ ಎಲ್ಲೆ ಮೀರದ ಕಾರ್ಯಕ್ರಮಗಳು ನಡೆಯಬೇಕು ಎಂಬುದು ನನ್ನ ವಾದ.

     ಇನ್ನೂ ಗಣೇಶನನ್ನು ಮುಳುಗಿಸುವ ನೆಪದಲ್ಲಿ ನಡೆಯುವ ಧಾಂದಲೆಗಳು ,ಕೊಳ,ನದಿಗಳ ಮಾಲಿನ್ಯ .ಇವುಗಳ ಬಗ್ಗೆ ಸ್ವಲ್ಪ ನಿಗಾ ವಹಿಸಲಾಗಿದೆ ಆದರೂ ನೀರಿಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲಾ ಅನ್ನುವುದು ಬೇಜರ.ಕೆಲವೊಮ್ಮೆ ಈ ಗಣೇಶ ಪೆಂಡಾಲ್ಗಳು ಕುಡುಕರ ಅಡ್ಡೆಯಾಗಿ ಬಿಡುತ್ತದೆ. ಹೆಣ್ಣುಮಕ್ಕಳು ಒಡಾಡುವುದು ಯೋಗ್ಯವಲ್ಲದ ಪೋಲಿಗಳ ಅಡ್ಡೆಯಾಗಿಬಿಡುತ್ತದೆ.ದೇವರ ಹೆಸರಲ್ಲಿ ಇವೆಲ್ಲಾ ಯಾಕೆ?

   ನಾನು ಒಬ್ಬ ಹಿಂದುವಾಗಿ ಗಣೇಶ ಹಬ್ಬದ ಆಚರಣೆಯನ್ನು ವಿರೋಧಿಸುತ್ತಿದ್ದೇನೆಂದು ನನ್ನನ್ನು ಹಿಂದು ವಿರೋಧಿ ಗುಂಪಿಗೆ ಸೇರಿಸಿಕೊಳ್ಳಬೇಡಿ.ಸ್ವಾತಂತ್ರ್ಯ ತಂದುಕೊಡಲು ಸಹಕರಿಯಾದ ಗಣೇಶನ ಹುಟ್ಟು ಹಬ್ಬಕ್ಕೆ ನಮ್ಮ ಸಮಾಜದಲ್ಲಿ ಒಂದು ವಿಶೇಷ ಸ್ಥಾನಮಾನವಿದೆ.ಅದಕ್ಕೆ ವಿದೇಶದಲ್ಲಿಯೂ ಈ ಹಬ್ಬವನ್ನೂ ಆಚರಿಸಲಾಗುತ್ತದೆ.ಇಂತಹ ಒಂದು ಹಬ್ಬ ದಿನದಿಂದ ದಿನೇ ಅರ್ಥ ಕಳೆದುಕೊಳ್ಳದೇ ನಮ್ಮ ಸಂಸ್ಕೃತಿ ಬೆಳಸುವ, ಸೌಹಾರ್ದತೆ ಮೆರೆಯುವ ಅರ್ಥಪೂರ್ಣ ಹಬ್ಬವಾಗಿರಲಿ ಎಂಬುದು ನನ್ನ ಆಶಯ.
English summary: When its comes to popularity in Indian gods,Ganesh is the mass entertainer. Before Independence Ganesh festival used to get  celebrated only in homes.Later lokamaanya tilak   started to celebrate the ganesh festival In public places.He is used address the social gatherings and bring awareness in people about the bad consequences of Britishrule. Post Independence Ganesh festivals changed a lot.Nowadays they are loosing its importance and erecting ganesh pendals have been matter of prestige.Water pollution is getting increased during the immersion of ganesh. So ,Ganesh chaturthi celebration
which have historical importance should be celebrated in a such way so that they don't loose importance. 

ಶನಿವಾರ, ಸೆಪ್ಟೆಂಬರ್ 7, 2013

ತಸ್ಮೈಶ್ರೀ ಗುರುವೇ ನಮಃ



ಗುರುರ್ ಬ್ರಹ್ಮ

ಗುರುರ್ ವಿಷ್ಣು

ಗುರುರ್ ದೇವೋ ಮಹೇಶ್ವರಃ

ಗುರುರ್ ಸಾಕ್ಷಾತ್ ಪರಬ್ರಹ್ಮ

ತಸ್ಮೈಶ್ರೀ ಗುರುವೇ ನಮಃ

              ಒಬ್ಬ ಗುರುವು ತನ್ನ ಶಿಷ್ಯನಲ್ಲಿ ಜ್ಞಾನದ ಬೀಜ ಬಿತ್ತಿ ,ಜ್ಞಾನದ ಹುಟ್ಟಿಗೆ ಕಾರಣನಾಗುತ್ತಾನೆ . ಆದ್ದರಿಂದ ಆತ ಬ್ರಹ್ಮ. ಗುರುವು ತನ್ನ ಶಿಷ್ಯನನ್ನು ಸರಿಯಾದ ದಾರಿಯಲ್ಲಿ ಅಂದರೆ ಕತ್ತಲಿಂದ ಬೆಳಕಿನೆಡೆಗೆ ಕೈ ಹಿಡಿದು ನಡೆಸುತ್ತಾನೆ. ಚಿಗುರಿನಂತಿರುವ ಆತನನ್ನು ಸರಿಯಾಗಿ ಪೋಷಿಸಿ ಫಲ ನೀಡುವ ಮರವಾಗುವ ಹಾಗೆ ನೋಡಿಕೊಳ್ಳುತ್ತಾನೆ. ಆದ್ದರಿಂದ ಆತ ವಿಷ್ಣು . ಒಬ್ಬ ಗುರುವು ತನ್ನ ಶಿಷ್ಯನಲ್ಲಿರುವ ಕಾಮ ,ಕ್ರೋಧ ,ಮದ ,ಮತ್ಸರ,ಮೋಹ ,ಲೋಭಗಳನ್ನು ನಾಶ ಮಾಡುತ್ತಾನೆ . ಆದ್ದರಿಂದ ಅವನೇ ಶಿವ . ಹೀಗೆ ತ್ರಿಮೂರ್ತಿಗಳನ್ನು ಒಳಗೊಂಡಿರುವ ಆತನೇ ಪರಬ್ರಹ್ಮ ಅಂದರೆ ಅತೀ ದೊಡ್ಡ ಶಕ್ತಿ .ಅಂತಹ ಗುರುವಿಗೆ ನಾನು ನಮಿಸುತ್ತೇನೆ.
        ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಒಂದು ಮಹೋನ್ನತ ಸ್ಥಾನವಿದೆ. ಮಾತೃದೇವೋ ಭವ,ಪಿತೃ ದೇವೋ ಭ್ಹವ,ಆಚಾರ್ಯ ದೇವೋ ಭವ ಹೀಗೆ ತಾಯಿ,ತಂದೆ ನಂತರದ ಸ್ಠಾನ ಗುರುವಿಗೆ ನೀಡಲಾಗಿದೆ.ಯಾಕಂದರೆ ದೇಶದ ಮುಂದಿನ ಪೀಳಿಗೆ, ಅಂದರೆ ಕಲ್ಲಿನಂತಿರುವ ಮಕ್ಕಳನ್ನು ಮೂರ್ತಿಯಂತೆ ರೂಪು ಕೊಡುವಲ್ಲಿ ಗುರುಗಳದ್ದು ಮಹತ್ತರ ಪಾತ್ರ.ಹಾಗೆಯೇ ನನ್ನ ಬಾಳಲ್ಲಿ ಕೂಡ.
     ಅಂದು ಅವರು  ಧಾರೆಯೆರದ ಜ್ಞಾನ ಇಂದು ನನ್ನ ಹೊಟ್ಟೆಗೆ ಹಿಟ್ಟು ,ಮಾನ ಮುಚ್ಚಲು ಬಟ್ಟೆ ನೀಡುತ್ತಿದೆ.ಆಷ್ಟೇ ಅಲ್ಲಾ
ಆಂದು ನಾನು ತಪ್ಪು ಮಾಡಿದಾಗ ಕಿವಿ ಹಿಡಿದು ತಿದ್ದಿದ್ದಿಕ್ಕೆ,ಇಂದು ನಾನು ತಪ್ಪು ಮಾಡುವ ಮುಂಚೆ ನನ್ನ ಆತ್ಮಾಸಾಕ್ಷಿ ನನ್ನ ತಡೆ ಹಿಡಿಯುತ್ತದೆ.ಆಂದು ಅವರು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಇಂದು ನನಗೆ ನನ್ನ ಬಾಳಲ್ಲಿ ಆತ್ಮ ವಿಶ್ವಾಸದಿಂದ ಮುನ್ನುಗ್ಗಲು ಸಾಧ್ಯಾವಾಗಿದೆ. ಇಂದಿನ ನನ್ನ ಸಾರ್ಥಕ ಜೀವನಕ್ಕೆ ನನ್ನ ಎಲ್ಲಾ ಗುರುಗಳು ಕಾರಣ. ಅವರ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯುವುದಿಲ್ಲ. ಆದ್ದರಿಂದ ಕೆಲವರ ಬಗ್ಗೆ ಬರೆದಿದ್ದೇನೆ.
          ತಾಯಿಯೇ ಮೊದಲ ಗುರು. ಹೌದು ಇಂದು ನಾನು ವೇದಿಕೆ ಮೇಲೆ ನಿಂತು ಉದ್ದುದ್ದ ಸಂಭಾಷಣೆ ಹೊಡೆದು ಜನರಿಂದ ಚಪ್ಪಾಳೆ ಹೊಡೆಸಿಕೊಳ್ಳತ್ತಿದ್ದೇನೆಂದರೆ ಕಾರಣ ನನ್ನ ತಾಯಿ .ನನಗೆ ಬಾಲ್ಯದಲ್ಲಿ 'ರ' ಉಚ್ಚಾರ ಬರುತ್ತಿರಲಿಲ್ಲ , 'ಸ''ಷ'ಶ' 'ಲ''ಳ' ಇವುಗಳ ನಡುವೆ ವ್ಯತ್ಯಾಸವೇ ಗೊತ್ತಿರಲಿಲ್ಲ. ಒಂದು ದಿನ ನನ್ನ ನೆಂಟರು ನನ್ನನ್ನು ಈ ವಿಷಯಕ್ಕಾಗಿ ಗೇಲಿ ಮಾಡಿ ನಕ್ಕಿದ್ದು ಇನ್ನೂ ನೆನಪಿದೆ. ಅಮ್ಮ ನನ್ನ ತಿದ್ದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲಾ.ನಾನು ಅವರ ಕೈಯಿಂದ ತಿಂದ ಪೆಟ್ಟು ಅಷ್ಟಿಷ್ಟಲ್ಲಾ. ಅವೆಲ್ಲಾ ಇಂದು ನನಗೆ ಚಪ್ಪಾಳೆಯಾಗಿ ಕೇಳಿಬರುತ್ತಿದೆ.
               ಇನ್ನು ಇಂದು ನಾನು ಗಣಿತವನ್ನು ಸರಾಗವಾಗಿ ಮಾಡುತ್ತೇನೆ,ಏಂತಹ ದಡ್ಡನಿಗೂ ಸುಲಭವಾಗಿ ಅರ್ಥವಾಗುವಂತೆ ಹೇಳಿ ಕೊಡುತ್ತೇನೆ ಅಂದರೆ ನನ್ನ ತಂದೆ ಕಾರಣ.ನಿಜ ಹೇಳಬೇಕಂದರೆ ನನ್ನ ತಂದೆ ಓದಿದ್ದೂ ಹತ್ತನೇ ತರಗತಿ,ಕನ್ನಡ ಮಾಧ್ಯಮದಲ್ಲಿ . ಆದರೆ ನನ್ನ ತಂದೆ ನನಗೆ c.b.s.e ಲೆಕ್ಕಗಳನ್ನು ಹತ್ತನೇ ತರಗತಿಯವರೆಗೆ ಹೇಳಿಕೊಡುತ್ತಿದ್ದರು.ನಿಜ ಹೇಳಬೇಕೆಂದರೆ c.b.s.e ಲೆಕ್ಕಗಳು ಸುಲಭದ ತುತ್ತಲ್ಲಾ.ಮೊದಲಿಂದಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ನನಗೇ ಇಂದು ಕೆಲವೊಂದು ಲೆಕ್ಕಗಳು ಅರ್ಥ ಆಗುವುದು ಕಷ್ಟ.ನಮ್ಮ ಅಪ್ಪನನ್ನು ನೋಡಿದಾಗ ನನಗೆ ಈಗಲೂ ಹೆಮ್ಮೆಯಾಗುತ್ತದೆ. ಹಾಗೆಯೇ ನನ್ನ ಗಣಿತದ ಅಂಕಗಳನ್ನು ನೋಡಿದಾಗಲೂ ಕೂಡ.
                ನಾನು ಪ್ರತಿ ಸಾರಿಯೂ ವೇದಿಕೆಯನ್ನು ಯಾವುದೇ ಭಯವಿಲ್ಲದೆ ಹತ್ತುವಾಗ ನನಗೆ ನೆನಪಾಗುವುದು ನನ್ನ ಸ್ಕೂಲಿನಲ್ಲಿದ್ದ ಕಲಾವತಿ ಮೇಡಂ ಹಾಗು ವಿದ್ಯಾ ಮೇಡಂ .ಕಲಾವತಿ ಮೇಡಂ ಒಂದು ಪಾಠ ಮುಗಿಯುತ್ತಿದ್ದಂತೆಯೇ ಅದನ್ನು ನಮಗೆ ನಾಟಕದ ಮೂಲಕ ಅಭಿನಯಿಸಿ ತೋರಿಸಲು ಹೇಳುತ್ತಿದ್ದರು. ಆಗ ನಾನು ನಾಟಕಗಳನ್ನು ನಿರ್ದೇಶಿಸಿ,ಆಭಿನಯಿಸುತ್ತಿದ್ದೆ.  ನನ್ನಲ್ಲಿನ ಸೃಜನ ಶೀಲತೆಯನ್ನು ಮೊದಮೊದಲು ಪೋಷಿಸಿದ ವ್ಯಕ್ತಿ ಅವರೇ ಆಂದರೆ ತಪ್ಪಾಗಲಾಗದು.ಇನ್ನು ವಿದ್ಯಾ ಮೇಡಂ ಅವರ ಪ್ರತಿ ಕ್ಲಾಸ್ನಲ್ಲಿಯೂ self expression ಎಂದು ಮಾಡಿಸುತ್ತಿದ್ದರು.ಪ್ರತಿಯೊಬ್ಬರೂ ಒಂದೊಂದು ದಿನ ಎನಾದರೂ ಅವರಗನ್ನಿಸಿದ್ದನ್ನು ಎಲ್ಲರ ಮುಂದೆ ಮಾಡಬೇಕಿತ್ತು. ನನ್ನಲ್ಲಿರುವ stage fear ತೊಡೆದುಹಾಕಲು ಅದು ಬಹಳ ಸಹಕಾರಿಯಾಗಿತ್ತು.
    ನನ್ನನು ಅತಿಯಾಗಿ ಕಾಡುವ ಇನ್ನೊಬ್ಬ ಮೇಷ್ಟ್ರು ಅಂದರೆ ,ಸ್ವರ್ಗವಾಸಿಯಾಗಿರುವ ನನ್ನ ಪ್ರೀತಿಯ ತಿಪ್ಪೇಶ್ ಸರ್. ಸ್ಕೂಲಿನಲ್ಲಿದ್ದಾಗ ನಾನು ನಾಟಕ,ಮಿಮಿಕ್ರಿ ಮಾಡಿಕೊಂಡು ಸ್ವಲ್ಪ ಹೆಸರು ವಾಸಿಯಾಗಿದ್ದೆ.ಯಾರಾದರೂ ಚಪ್ಪಾಳೆ ತಟ್ಟುತ್ತಾರೆ ಅಂದರೆ ಸಾಕು ಬೀದಿ ಬೀದಿಯಲ್ಲಿ ನಿಂತು ಅವರು ಹೇಳಿದಂತೆ ಕುಣಿಯುತ್ತಿದ್ದೆ.ಒಂದು ದಿನ ತಿಪ್ಪೇಶ್ ಸರ್ ನನ್ನನ್ನು ಕರೆದು ಹಾಗೆ ಬೀದಿ ಬೀದಿಯಲ್ಲಿ ಯಾರೋ ಹೇಳಿದರು ಅಂತ ಮಾಡಿದರೆ ,ಜನ ನಿನ್ನನ್ನು ಬೀದಿಯಲ್ಲಿ ಪೈಸೆಗೆ ಕುಣಿಯುವ ಮಂಗನಂತೆ ನೋಡುತ್ತಾರೆ.ನಿನ್ನ ಕಲೆಗೂ ಬೆಲೆ ಇರುವುದಿಲ್ಲಾ.ವೇದಿಕೆಯಲ್ಲಿ ಮಾತ್ರ ನಿನ್ನ ಕಲೆಯನ್ನು ತೋರಿಸು ಅಂತ ಬುದ್ಧಿವಾದ ಹೇಳಿದ್ದರು.ಇನ್ನೂ ನಾನು ಸ್ಕೂಲಿನಲ್ಲಿ ನಾಟಕಗಳಲ್ಲಿ ಅಭಿನಯಿಸುವಾಗ ಚಲನಚಿತ್ರದ ನಟರನ್ನು ತುಂಬಾ ಅನುಕರಿಸುತ್ತಿದ್ದೆ. ಚಪ್ಪಾಳೆ ಗಿಟ್ಟಿಸುವುದೇ ನನ್ನ ಉದ್ದೇಶವಾಗಿತ್ತು. ಒಮ್ಮೆ ನನ್ನ ಕರೆದು ಅದೇ ಸರ್ ಬೇರೆಯವರನ್ನು ಅನುಕರಿಸಬೇಡ .ನಿನ್ನ ಅಭಿನಯದಲ್ಲಿ ಸ್ವಂತಿಕೆಯನ್ನು ರೂಡಿಸಿಕೋ ಎಂದು ಬುದ್ಧಿವಾದ ಹೇಳಿದ್ದರು. ಈಗಲೂ ನನಗೇ ಆ ಮಾತುಗಳು ಕಿವಿಯಲ್ಲಿ ಗುಂಯ್ ಗುಡುತ್ತಿರುತ್ತದೆ.
           ಮೇಲೆ ಕೆಲವರ ಉದಾಹರಣೆ ಕೊಟ್ಟಿದ್ದೇನೆ ಅಷ್ಟೆ.ನನ್ನ ಪ್ರತಿಯೊಬ್ಬ ಗುರುಗಳು ಒಂದಲ್ಲಾ ಒಂದು ರೀತಿ ನನ್ನ ಬಾಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.ನಿಮ್ಮ ಬಾಳಲ್ಲಿಯೂ ಕೂಡ ಇಂತಹ ಗುರುಗಳು ಇದ್ದರು ಅಂದುಕೊಂಡಿರುತ್ತೇನೆ. ಹಾಗಿದ್ದಲ್ಲಿ ಒಮ್ಮೆ ಅವರನ್ನು ಸ್ಮರಿಸಿಕೊಳ್ಳಿ . ಅಲ್ಲಿಂದಲ್ಲಿಯೇ ಅವರಿಗೊಂದು ಪ್ರಮಾಣ ಮಾಡಿ.
English summary : Guru is Brahma.Because he is the one who is the responsible for the birth of the sapling called knowledge in his student.Guru is vishnu because he is the one who nourishes that plant in student.Guru is Shiva because he is the one who destroys the evils in his students.So,guru is the almighty "parabrahma".
 In my life teachers have played important role .First one is my mom.Today if I get claps for my dialogue delivery on stage,its because of her.She was the one who corrected my pronunciation in my childhood days.Second is my father.Today whenever I see my marks of mathematics of my school days,I feel happy.And all these because of my dad.Eventhough he was from kannada medium and studied till 10 th he used to teach me maths of C.B.S.E.Such a genius he was.Last but not least Tippesh sir.During my childhood days ,whenever I used to act I used to imitate many kannada actors.He was the one who called me and asked to stop imitating others and cultivate style of my own.
I think even in ur life teachers played important role.If so now its time to remember them.

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...