ಬುಧವಾರ, ಅಕ್ಟೋಬರ್ 23, 2013

ನೆನಪುಗಳು ಅಮರ,ನೆನಪುಗಳು ಮಧುರ

ನಮ್ಮ ಬದುಕು ಜಟಕಾಬಂಡಿ ನಿತ್ಯವೂ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಸಾಗುವ ದಾರಿಯಲ್ಲಿ ದಿನವೂ ಅನೇಕ ಘಟನೆಗಳನ್ನು ಎದುರಿಸುತ್ತಲೇ ಇರುತ್ತೇವೆ.ಆದರೆ ಅವುಗಳಲ್ಲಿ ಕೆಲವು  ಮಾತ್ರ  ರಿಜಿಸ್ಟರ್ ಆಗುತ್ತವೆ.ಆ ತರಹ ರಿಜಿಸ್ಟರ್ ಆದ  ಘಟನೆಗಳು ,ನೆನೆಪುಗಳಾಗಿ ಉಳಿದುಬಿಡುತ್ತವೆ. ಸುಮ್ಮನೇ ಉಳಿದರೆ ಓಕೆ.ಕೆಲವೊಂದು ಅಲೆಗಳಂತೆ ಅಗಾಗ ಅಪ್ಪಳಿಸುತ್ತದೆ. ಅದರಲ್ಲಿ ಕೆಲವೊಂದು ಮನದ ತೀರವನ್ನು ಬರೀ ಒದ್ದೆ ಮಾಡಿ ಹೋದರೇ,ಕೆಲವೊಂದು  ಮನದ ತೀರದಲ್ಲಿ ಇದ್ದ ಸಂತೋಷವನ್ನು ತಮ್ಮೊಂದಿಗೆ ತೆಗದುಕೊಂಡು ಹೋಗುತ್ತವೆ.ಕೆಲವೊಂದು ಅಲೆಗಳು ತಮ್ಮೊಂದಿಗೆ ಎನಾದರೂ ತಂದು ಹಾಗೆಯೇ ಬಿಟ್ಟು ಹೋಗುತ್ತವೆ.ಕೆಲವೊಮ್ಮೆ ಸುನಾಮಿಗಳಂತೆ ಅಪ್ಪಳಿಸುತ್ತಲೇ ಇರುತ್ತಾ, ಹಾರ್ಟ್ ಅಟ್ಯಾಕ್ ತರಿಸುತ್ತವೆ.
                    ನನಗೆ ಕೆಲವೊಮ್ಮೆ ನಾವು ಈ ಜಗತ್ತಿನಲ್ಲಿ ಎಲ್ಲಾದನ್ನೂ ಬಿಟ್ಟು ಬದುಕಬಹುದು . ನೆಂಟರು, ಸ್ನೇಹಿತರು , ಆಪ್ತರು,ಸಾಯುವಾಗ ತೆಗದುಕೊಂಡು ಹೋಗದೇ ಇರುವ ಐಶ್ವರ್ಯಗಳು ಇವೆಲ್ಲವನ್ನೂ ಬಿಟ್ಟು ಬದುಕಬಹುದು ,ಹಾಗೆ ಬದುಕಿದವರು ಇದ್ದಾರೆ. ಆದರೇ ನೆನಪುಗಳನ್ನು ಬಿಟ್ಟು ಬದುಕುವುದು ಅಸಾಧ್ಯ? ನಾವು ಅವುಗಳನ್ನು ಬಿಟ್ಟು ಬದುಕುತ್ತೇವೆ ಆಂದರೂ ,ಅವುಗಳು ನಮ್ಮನ್ನು ಬಿಡುವುದಿಲ್ಲ. ಆಗಾಗ ಒಂದಲ್ಲಾ ಒಂದು ರೀತಿ ನಮ್ಮೊಂದಿಗೆ  ತಗಲು ಹಾಕಿಕೊಳ್ಳುತ್ತಲೇ ಇರುತ್ತವೆ. ಬಹುಶಃ  ಶನಿಯೂ ಕೂಡ ನಮ್ಮನ್ನು ಕಾಡುವುದು ಬಿಡಬಹುದು ,ಆದರೆ ಈ ನೆನಪುಗಳು ಮಾತ್ರ ನಮ್ಮನ್ನು  ಬಿಡುವುದಿಲ್ಲ. ಅವುಗಳು ನಮ್ಮಿಂದ ದೂರ ಆಗುವುದು ಒಮ್ಮೆ ಮಾತ್ರ ಅನ್ನಿಸುತ್ತದೆ. ಅದೇ ನಾವು ಸತ್ತಾಗ.
                                                                ಆದರೆ ನಾವು ಇಲ್ಲಿ ಗಮನಿಸಬೇಕಾದ ಒಂದು ವಿಷಯ ಇದೆ. ಸತ್ತ ಮೇಲೆ ನಾವೇನೋ ನೆನೆಪುಗಳಿಂದ ಮುಕ್ತವಾಗಿ ಬಿಡುತ್ತೇವೆ. ಆದರೆ ಆ ಘಳಿಗೆಯಿಂದ,  ನಾವು ನೆನೆಪುಗಳಾಗಿ ಬದುಕುಳಿದವರಲ್ಲಿ ಉಳಿಯುತ್ತೇವೆ. ನಾವುಗಳು ಸತ್ತ ಮೇಲೆ ಜನರ ಮನದಲ್ಲಿ ಒಳ್ಳೆಯ ನೆನೆಪಗಳಾಗಿ ಉಳಿಯುತ್ತೇವೆಯೋ,ಕೆಟ್ಟ ನೆನಪುಗಳಾಗಿ ಉಳಿಯುತ್ತೇವೆಯೋ ಅದು ನಮ್ಮ ಬದುಕಿನ ಶೈಲಿ ಮೇಲೆ ಅವಲಂಭಿತವಾಗಿರುತ್ತದೆ.ನಾವು ಬದುಕುವ  ನಾಲ್ಕು ದಿನದಲ್ಲಿ ಬೇರೆಯವರ ಬದುಕಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತೇವೆಯೋ,ಆ ರೀತಿಯ ನೆನಪುಗಳಾಗಿ ಅವರ ಮನದಲ್ಲಿ ಉಳಿಯುತ್ತೇವೆ.ನಿಜ ಹೇಳಬೇಕೆಂದರೆ  ಒಬ್ಬ   ಮನುಷ್ಯ  ಎಷ್ಟರಮಟ್ಟಿಗೆ ಸಾರ್ಥಕ   ಬದುಕು ಬದುಕಿದ್ದಾನೆ ಎಂಬುದನ್ನು ,ಅವನು ಬಿಟ್ಟು ಹೋದ ನೆನಪುಗಳಿಂದ ಕಣ್ಣುಹಿಡಿಯಬಹುದು.
           ಕೆಲವೊಂದು ವ್ಯಕ್ತಿಗಳು ಇದಕ್ಕೆ  ಉದಾಹರಣೆಯಾಗಿ ನಿಲ್ಲುತ್ತಾರೆ.ಸತ್ತ ಹಲವು ವರ್ಷಗಳ ನಂತರವೂ ಅವರ ನೆನಪುಗಳು ಜನರ ಮನಸಿನಲ್ಲಿ ಹಸಿರಾಗಿಯೇ ಉಳಿದಿರುತ್ತದೆ. ಆದರೆ ಅದರಲ್ಲೂ ಇದರಲ್ಲೂ ಇಬ್ಬರು ತರಹದ  ವ್ಯಕ್ತಿಗಳು ಇರುತ್ತಾರೆ. ಒಬ್ಬರ ನೆನಪಾದಾಗ ನಮ್ಮ ಮನಸ್ಸಿಗೆ ಖುಷಿಯಾಗುತ್ತದೆ.ಸ್ಪೂರ್ತಿ ತುಂಬಿ ಬರುತ್ತದೆ . ಅವರ ನೆನಪುಗಳು ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದೇ ಇನ್ನೊಂದು ತರಹದ ವ್ಯಕ್ತಿಗಳು ಇದ್ದಾರೆ ಅವರ ನೆನಪು ಆದರೆ ಮನಸ್ಸಿಗೆ ಕಸಿವಿಸಿ.ಯಾಕಾದರೂ   ನೆನಪಿಸಿಕೊಂಡೆವೋ ಅನ್ನಿಸಿಬಿಡುತ್ತದೆ. ನಾವು ಪ್ರತಿಯೊಂದು ಹೆಜ್ಜೆ ಇಡುವ ಹೊತ್ತಿಗೆ ಈ ವಿಷಯ ಗಮನದಲ್ಲಿ ಇಟ್ಟು ಕೊಂಡರೆ ಒಳ್ಳೆಯದು.  ಸತ್ತ ಮೇಲೆ ಜನರ ಮನಸಿನಲ್ಲಿ ಒಳ್ಳೆಯ ನೆನಪುಗಳಾಗಿ ಉಳಿಯುವಂತೆ ಬದುಕೋಣ    .ಏನಂತೀರಾ?
  ಅದೇನೋ ಗೊತ್ತಿಲ್ಲಾ ,ನಾನೇನೋ ಬರೆಯಲು ಹೋಗಿದ್ದೆ. ಆದರೆ ಈ ನೆನಪುಗಳು ಒಂದಾದರ ಮೇಲೊಂದು ನನ್ನ ಕಣ್ಣ ಮುಂದೆ ಬರಲು ಶುರು ಆಗಿ ಇವುಗಳ ಬಗ್ಗೆ ಬರೆದೆ.ನೆನಪುಗಳ ಶಕ್ತಿಯೇ ಹಾಗೆ. ಅಲ್ಲವೇ?
English Summary:So many incidents occur in our daily life.But only some of them get registered in our mind and we call them memories.These memories are like waves.They keep on kissing the shore.Some of the waves just make the shore wet,some take away with them things which were on shore.Some waves bring some new things to shore .Some of them keep on hitting like tsunami waves which cause heart attack.One can live his life leaving relationships,property etc etc but not these memories.Actually we may try to forget these memories but they will not leave us.They leave us only once and that is when we die.But after our death we remain as memories in other people's heart.But its our life which decides whether we remain as good or bad memories. So,we have to lead a good life in order to remain as good memories after we die.

ಗುರುವಾರ, ಅಕ್ಟೋಬರ್ 17, 2013

ಗಂಡು ಜೀವಿಗಳು ಮಾಡುವ ಕಾಮನ್ ತಪ್ಪು

        ನಾವು ಹುಡುಗರೇ ಹಾಗಾ ? ಅಥವಾ ಈ ಹುಡುಗಿಯರೇ ಹಾಗಾ? ದೇವರು ನಮಗೆ ಅವರ ಮನಸು ಅರ್ಥ ಮಾಡಿಕೊಳ್ಳಲು ಶಕ್ತಿ ಕೊಡ್ಲಿಲ್ಲವೋ?ಅಥವಾ ಅವರ ಮನಸ್ಸನ್ನೇ ಅಷ್ಟೊಂದು ನಿಗೂಢ ವಾಗಿ ತಯಾರಿಸಿದನೋ ? ನಾವು ಹುಡುಗರು ದಡ್ಡರೋ ಅಥವಾ ಈ ಹುಡುಗಿಯರು ಜಾಣರೋ?ನಮಗೇ ಸಿಕ್ಕಾಪಟ್ಟೆ testosterone ತಯಾರಿಸೋ ಯಂತ್ರ ಇಟ್ಟುಬಿಟ್ಟು,ಅವರಿಗೆ ಅವ್ರ ಹಾರ್ಮೋನ್ ಗಳು ಮಾತ್ರ ಇತಿಮಿತಿಯಲ್ಲಿ ತಯಾರು ಆಗುವ ಹಾಗೆ ಮಾಡಿಬಿಟ್ಟ್ನೋ ? ನಮಗೆ ಆಕಾರಗಳ ಬಗ್ಗೆ ವ್ಯಾಮೋಹ ಇಟ್ಟ,ಅವರಿಗೆ ಮಾತ್ರ ಬಣ್ಣಗಳ ಮೇಲೆ ಇಟ್ಟ?ಏನೇ ಹೇಳಿ ಈ ಮೇಲಿರೋನು ಸಾಮನ್ಯ ಅಲ್ಲಾ. ಪಕ್ಕಾ ಖಿಲಾಡಿ. ಯಾಕೆ ಅಂದರೆ ನಮಗೆ ಈ ಹೃದಯಗಳ ಲೆಕ್ಕಾಚಾರ ಗೊತ್ತೇ ಆಗೋಲ್ಲಾ. ಆದರೆ ಆ ಹೃದಯಗಳ ಜೊತೆ ಆಟ ಆಡಿ ಸಮಯ ಕಳೆಯೋ ಮಹಾ ಆಟಗಾರ ಅವನು.

              ಇವೆಲ್ಲಾ ಯಾಕೆ ಹೇಳ್ತಾ ಇದೀನಿ ಅಂತ ಕೇಳ್ತಾ ಇದೀರಾ? ಕಾರಣ ಇದೆ. ಈ ಹುಡುಗರ ಮನಸಿಗೆ ಸ್ನೇಹ ಯಾವುದು ,ಪ್ರೀತಿ ಯಾವುದು ಅನ್ನೋ ಸೂಕ್ಷ್ಮ ಕಣ್ಣು ಹಿಡಿಯೋ ಮೆದುಳಿನ ಭಾಗ ಕೊಡೋದೂ ಮರೆತು ಬಿಟ್ಟ. ನಮಗೆ ಪ್ರೀತಿ ಅನ್ನಿಸಿದ್ದು ,ಈ ಹುಡುಗಿಯರಿಗೆ ಸ್ನೇಹ ಆಗಿರುತ್ತೆ. ಅವಳು ನಮ್ಮ ಜೊತೆ ಸಿನೆಮಾ ಬರೋ ಹಾಗಿಲ್ಲಾ ,ನಾವುಗಳು ಹೀರೋ ತರ ಕುಣಿಯೋಕೆ ಶುರು ಮಾಡ್ತೀವಿ.ನಮ್ಮ ಪ್ಲೇಟ್ ಅಲ್ಲಿ ಕೈ ಹಾಕಿ ತಿನ್ನೋಕೆ ಶುರು ಮಾಡಿದ ಕೂಡಲೇ ,ಓ ಇದು ಅದೇ ಅಂತ ಮನಸ್ಸೊಳಗೇ ಐಸ್ ಕ್ಯಾಂಡಿ ತಿನ್ನೋಕೆ ಶುರು ಮಾಡ್ತೀವಿ. ಅವಳು ಹಾಗೆ ಒಂದೇಟು ಮಾತಿನ ಮಧ್ಯೆ ಹೊಡೆಯೋ ಹಾಗಿಲ್ಲಾ ,ನಾವು ಅದಾಗಲೇ ನಮ್ಮ ಲೋಕದಲಿ ಲಗಾಟಿ ಹೊಡೆಯೋಕೆ ಶುರು ಮಾಡಿರ್ತೀವಿ. ಛೇ ನೀನಿಲ್ಲ ಅಂದರೆ ಸಿಕ್ಕಾಪಟ್ಟೆ ಬೋರು ಅಂತ ಅವಳು ಹೇಳಿದ್ದರೆ, ಛೇ ಜೀವನ ಪೂರ್ತಿ ನೀನು ನನ್ನ ಜೊತೆ ಇರ್ತೀಯಾ ಅಂತ ನಮ್ಮ ಕಿವಿಗೆ ಬಿದ್ದಿರುತ್ತೆ.

              ನಮ್ಮ ಹಾಳದ ಮನಸ್ಸಿಗೆ ಅವಳು ನಮ್ಮನ್ನು ಒಬ್ಬ ಸ್ನೇಹಿತನ ತರ ನೋಡ್ತಾ ಇದಾಳೆ ಅನ್ನಿಸೋದೆ ಇಲ್ಲಾ. ಅವಳಿಗೂ ನನ್ನ ಕಂಡ್ರೆ ಇಷ್ಟ ಇರಬಹುದು,ಹೇಳೋಕೆ ನಾಚಿಕೆ. ಒಮ್ಮೆ ಕೇಳಿ, ಒಂದು ಕೈ ನೋಡಿಬಿಡೋಣ ಆಂತ ಕೇಳಿಯೇ ಬಿಡುತ್ತೇವೆ.ನಾವುಗಳು ಬೈಕ್,ಕಾರ್ ಮಾಡೆಲ್ ಗಳು ಸುಲಭವಾಗಿ ಗುರುತಿಸುತ್ತೇವೆಯೋ ಹೊರತು, ಈ ಸ್ನೇಹ,ಪ್ರೀತಿ ನಡುವೆ ವ್ಯತ್ಯಾಸ ಗೊತ್ತೇ ಆಗೋಲ್ಲಾ.

               ಹೇಳಾದ ಮೇಲೆ ,ಅವಳು ಕಣ್ಣೀರು ಹಾಕಿದ ಮೇಲೆ , ಒಂದಿಷ್ಟು ರಾದ್ಧಾಂತ ಆದ ಮೇಲೆ, ನಮಗೆ ಗೊತ್ತಾಗುವುದು "ಛೇ ತಪ್ಪು ಮಾಡಿಬಿಟ್ಟ್ವಿ" ಅಂತ. ಆದರೆ ಏನು ಮಾಡೋದು ಮೊದಲಿನಂತೆ ಮತ್ತೇ ಯಾವುದು ಆಗೋಲ್ಲಾ. ನಾವು "worth a shot " ಅಂದು ಕೊಂಡು ಮಾಡಿದ್ದು ,ಅವರಿಗೆ ನಂಬಿಕೆ ದ್ರೋಹ ಆಗಿರುತ್ತೆ. ತಪ್ಪು ಒಂಥರಾ ನಮ್ಮದೇ ಅಂತ ಅನ್ನಿಸೋಕೆ ಶುರು ಆಗೋದೆ ಆಗ. ಆದರೆ ಕೆಲವು ಹುಡುಗರಿಗೆ ಅದು ಅನ್ನಿಸೋದೆ ಇಲ್ಲಾ.(ಆಗಲೇ ಹುಡುಗಿಯರ ಫೋನ್ ನಂಬರ ಗಳು ಬಾತ್ರೂಮ್ಗಳಲ್ಲಿ ಕಾಣಿಸುವುದು.)

        ಉಪ್ಪು ಖಾರ ತಿನ್ನೋ ಎಲ್ಲಾ ಹುಡುಗರಿಗೆ ಒಂದಲ್ಲಾ ಒಂದು ಸಲ ಈ ತರಹದ ಅನುಭವಗಳು ಆಗಿಯೇ  ಆಗಿರುತ್ತೆ.ಕೆಲವೊಮ್ಮೆ ತಪ್ಪೂ ಮಾಡಿರ್ತೀವಿ.ಏನು ಮಾಡೋಕೆ ಆಗೋಲ್ಲಾ? ನಮ್ಮ ಲೆಕ್ಕಾಚಾರ ಅವರ ಕಣ್ಣಿನಲ್ಲಿ ನೀರು ತರಿಸುತ್ತೆ ಅನ್ನೋ ಲೆಕ್ಕಾಚಾರ ನಮಗೆ ತಿಳಿಯೋದು ಸ್ವಲ್ಪ ತಡ. ಜೀವನದಲ್ಲಿ ಏನು ಮಾಡದೇ ಇರೋ ಬದಲು ,ತಪ್ಪುಗಳು ಮಾಡೋದು ಒಂಥರಾ ಒಳ್ಳೆಯದು. ಸ್ವಲ್ಪ ಬುದ್ಧಿ ಆದ್ರೂ ಬರುತ್ತೆ.

             ಏನೋ ಸ್ವಲ್ಪ ಅನುಭವ ,ಸ್ವಲ್ಪ ನೋಡಿ ತಿಳಿದುಕೊಂಡಿದ್ದು. ಏನೋ  ಹಂಚಿಕೊಳ್ಳಬೇಕು ಅನ್ನಿಸಿತು.ಗಂಡು ಅಭಿಮಾನಿಗಳು ಸ್ವಲ್ಪ ಸಿಟ್ಟಾಗಿದೀರಾ ಅಂತ ಗೊತ್ತು. ಇವ್ನು ಸರಿಯಿಲ್ಲಾ ಅನಿಸುತ್ತೆ ,ನಾವೂ ಹುಡುಗರು, ನಮಗೆ ಇದ್ಯಾವ್ದೂ ಅನ್ನಿಸಿಯೇ ಇಲ್ಲ ಅಂತ ಬಯ್ಕೋತಿರಬಹುದು. ಇರಲಿ ಬಿಡಿ, ಗುಂಪಿನಲ್ಲಿ ಹೂಸು ಬಿಟ್ಟಾಗ ,ಮೊದಲು ಬಯ್ಯುವುದೇ ......ಮುಂದೆ ಬೇಕಾ?
English summary: I don't know whether the boys are wrong or whether the gals are right?I don't know whether we don't understand gals or the gals themselves are the weird creatures.Sometimes I think its all fault of god. Because he gave boys, sharp eyes which could identify the model of the bike,car or any vehicle.But when it comes to identify whether the gal with whom he is hanging out ,is a friend or lover, he always fails.We boys ,often misunderstand the friendship of girl to love .We think even she might be in love with us ,but she may be shy to express.And then we end up in proposing.Then everything goes wrong.Even after  we understand the truth and then ask sorry,things never gonna be normal.According to me, this has happened with most of us .We make mistakes.Its ok .Its better doing mistakes in life than spending a life doing nothing.But we should learn from our mistakes.

ಸೋಮವಾರ, ಅಕ್ಟೋಬರ್ 14, 2013

ಗರ್ಲ್ ಫ್ರೆಂಡ್ ಅಂತ ಒಬ್ಬಳೇ ಇರಲೇಬೇಕಾ?


       ಇಂತಹ ಘಟನೆಗಳು ಬರೀ ನನ್ನ ಜೀವನದಲ್ಲಿ ನಡೆಯುತ್ತದೋ ಅಥವಾ ಎಲ್ಲರ ಜೀವನದಲ್ಲಿ ನಡೆಯುತ್ತದೋ ಗೊತ್ತಿಲ್ಲಾ.ನಾನು ಒಂಟಿ ಗೂಬೆ ,ಬೇರೆಯವರೆಲ್ಲಾ ಜೋಡಿ ಹಕ್ಕಿಗಳು ಎಂಬ ಭಾವನೆ ನನಗೊಬ್ಬನಿಗೆ ಮಾತ್ರ ಅನಿಸುತ್ತದೆಯೋ ಅಥವಾ ಎಲ್ಲರಿಗೂ ಅನಿಸುತ್ತದೆಯೋ ಗೊತ್ತಿಲ್ಲಾ.ಇದು ವಯಸ್ಸಿನ ಪ್ರಭಾವವೋ ಅಥವಾ ನನಗೆ ಸಿಗುವ ಜನರ ಮಾತುಗಳ ಪ್ರಭಾವವೋ ,ಅದೂ ನಾ ಕಾಣೆ?ಇದು ಸರಿಯೋ ,ತಪ್ಪೋ ಅದೂ ನಾ ಕಾಣೆ?ಒಂದಂತೂ ನಿಜ .ಇಂತಹ ಘಟನೆಗಳು ಬೇರೆಯವರ ಜೀವನದಲ್ಲಿ ನಡೆದೇ ಇಲ್ಲಾ ಎಂದು ಹೇಳಲು ಆಗುವುದಿಲ್ಲಾ. ಆದರೆ ಅವರು ಯಾರು ಬಾಯಿ ಬಿಟ್ಟಿಲ್ಲಾ ಅನ್ನುವುದಂತೂ ನಿಜ.ನಾವು ಊರಿಗೆ ದೊಡ್ಡವರು ನೋಡಿ(ಅಂದರೆ ಮೂರು ಬಿಟ್ಟವರು ಅಂತ ) . ಅದಕೆ ಎಲ್ಲಾ ಇಲ್ಲಿ ಹೇಳಿಕೊಂಡಿರುವೆ .ಇದನ್ನು ಓದಿ ,ಕೊನೆಗೆ ನಿಮಗೂ ಇವೆಲ್ಲಾ ನಿಜ ಅನಿಸಿದರೆ ಓಳ್ಳೆಯದು ,ಇಲ್ಲ ಅಂದರೆ ಸುಮ್ಮನೆ ಮನಸಿನಲ್ಲಿಯೇ ಬೈದುಕೊಂಡು ಸುಮ್ಮನಾಗಿಬಿಡಿ.

ಘಟನೆ 1
ಈಗಂತೂ ಮೀಸೆ ಚಿಗುರದ ಹುಡುಗರೆಲ್ಲಾ ಬೈಕ್, ಕಾರ್ ಓಡಿಸುತ್ತಾರೆ.ಹೀಗಿರುವಾಗ ಎರಡು ಕತ್ತೆಗೆ ಆಗುವ ವಯಸ್ಸು ಆದರೂ ನನಗೆ ಕಾರ್ ಓಡಿಸಲು ಬರುತ್ತಿರಲಿಲ್ಲ ಅಥವಾ ಲೈಸೆನ್ಸ್ ಇರಲಿಲ್ಲ. ಅದಕ್ಕೆ ಕಾರ್ ಡ್ರೈವಿಂಗ್ ಕಲಿತು ,ಲೈಸೆನ್ಸ್ ಮಾಡಿಸಿಕೊಂಡು ,ನನ್ನ ವಯಸ್ಸಿನ ಗಂಡಸರೆಲ್ಲಾ ಮಾಡುವ ಕೆಲಸ ಮಾಡೋಣ ಅಂದುಕೊಂಡು ಡ್ರೈವಿಂಗ್ ಕ್ಲಾಸ್ ಸೇರಿಕೊಂಡೆ. ಅಲ್ಲಿ ಕಾರ್ ಹೇಳಿಕೊಡುವವನು ಸ್ವಲ್ಪ ಬೇಗನೆ ಪರಿಚಯ ಆದ. ಕಾರ್ ಹೇಳಿಕೊಡುವಾಗ ,ಕ್ಲಾಸ್ ಮಧ್ಯೆ ಚಹಾ ಕುಡಿಯುವಾಗ ಒಬ್ಬರೊಬ್ಬರ ಜೀವನದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದೆವು. ಹೀಗೆ ಒಂದು ದಿನ ಐದನೇ ಗೇರಿನಲ್ಲಿ ಒಮ್ಮೆ ಓಡಿಸುವುದು ಕಲಿಯುತ್ತಿದ್ದಾಗ ಟೀಚರ್ ಕೇಳಿದ " ಸರ್,ನಿಮಗೆ ಗರ್ಲ್ ಫ್ರೆಂಡ್ ಇದಾರ?". ತಕ್ಷಣ ಐದನೇ ಗೇರಿನಲ್ಲಿ ಓಡುತ್ತಿದ್ದವನು ನಾಲ್ಕನೇ ಗೇರಿಗೆ ಬಂದೆ."ಇಲ್ಲಾ" ಅಂದೆ. ಅವನು "ಏನ್ ಸಾರ್? ಚೆನ್ನಾಗಿ ಓದಿಕೊಂಡಿದೀರಾ, ಓಳ್ಳೆ ಕೆಲ್ಸ ಬೇರೆ,ಕೆಂಪುಕೆಂಪಾಗಿದೀರಾ.ನೋಡೋಕು ಸ್ವಲ್ಪ ಚೈನೀಸ್ ತರಹ ಇದ್ರೂ ಒಂದು ರೇಂಜಿಗೆ ಪರವಾಗಿಲ್ಲಾ. ಅಷ್ಟೇ ಅಲ್ಲದೇ, ನಿಮ್ಮ ಕಂಪೆನಿಯಲ್ಲೂ ಒಳ್ಳೆ ಓಳ್ಳೇ ಹುಡುಗಿಯರಿದಾರೆ. ಇಷ್ಟು ಎಲ್ಲಾ ಆದ್ರೂ ನಿಮಗೆ ಗರ್ಲ್ ಫ್ರೆಂಡ್ ಇಲ್ವ್ವಾ.ಸುಳ್ಳು ಹೇಳ್ಬೇಡಿ". ಅದು ಹೇಗಿತ್ತೆಂದರೆ ಸ್ಟೇಜ್ ಹತ್ತಿಸಿ ಶಾಲು ಹಾಕಿಸಿ ,ಸನ್ಮಾನ ಮಾಡಿಸಿ ಆಮೇಲೆ ಸಭಿಕರ ಕೈಯಿಂದ ಮೊಟ್ಟೆ ಹೊಡೆಸಿದ ಹಾಗೆ ಆಯಿತು.ನಾನು ಮತ್ತೆ ಮೂರನೆ ಗೇರಿಗೆ ಬಂದು" ಇಲ್ಲಾ ಸಾರ್,ನಿಮಗೆ ಇದಾರ ?" ಅಂದೆ. ಅದಕೆ ಅವನು "ಇದ್ದಳು ಸಾರ್. ಆಮೇಲೆ ಬೇರೆಯವರು ಜೊತೆ ಮದುವೆ ಆದಳು .ಈಗ ಪಕ್ಕದ್ಮನೆ ಹುಡುಗಿ ಬಿದ್ದಿದಾಳೆ" ಆಂತ ಅವನು ಅನ್ನುತ್ತಿದ್ದ ಹಾಗೆ ನನಗೇ ಶಾಕ್ ಹೊಡೆದಂತಾಗಿ ಗಾಡಿ ನಿಲ್ಲಿಸಿಯೇಬಿಟ್ಟೆ. ಇಷ್ಟೇ ಅಲ್ಲಾ ಡ್ರೈವಿಂಗ್ ಮುಗಿದು ಹೋಗುತ್ತಿದ್ದ ಕೊನೆಯ ದಿನ, ಆತ ನನಗೆ ಬೇಜಾರು ಮಾಡಿಕೊಳ್ಳಬೇಡಿ ಅಂತ ಸಮಾಧಾನ ಕೂಡ ಮಾಡಿದ. ಅಷ್ಟೇ ಅಲ್ಲಾ ಫ್ರೀ ಟಿಪ್ಸ್ ಬೇರೆ. ಚೆನ್ನಾಗಿ ಓದಿ ಪಧವೀಧರನಾಗಿ, ಕೈ ತುಂಬಾ ಸಂಬಳ ತರುವ ಕೆಲ್ಸದಲ್ಲಿ ಇದ್ದು, ಪ್ರತಿ ಸಾರಿಯೂ ಓಟು ಹಾಕಿ,ತಿಂಗಳು ತಿಂಗಳು ಕಂದಾಯ ಕಟ್ಟಿ ಒಳ್ಳೆಯ ಪ್ರಜೆ ತರಹ ಸಾರ್ಥಕ ಜೀವನ ನಡೆಸುತ್ತಾ ಇದ್ದೀನಿ ಆಂತ ನನ್ನಷ್ಟ್ಕಕೇ ನಾನು ಬೀಗುತ್ತಿದ್ದೆ. ಆದರೆ ಆವತ್ತು ಆ ಡ್ರೈವರ್ ಕಣ್ಣುಗಳ ಮುಂದೆ ನಾನು ನಿಷ್ಪ್ರಯೋಜಕನಂತೆ ಕಂಡೆ? ಯಾಕೆ?
ಘಟನೆ 2
ಮೈಸೂರಿನಿಂದ ಹರಿಹರಕ್ಕೆ ಮನೆಗೆ ಬಸ್ಸಿನಲ್ಲಿ ಹೋಗುತ್ತಿದೆ.ಪಕ್ಕದಲ್ಲಿ ಹುಡುಗಿಯೊಬ್ಬಲು ಕುಳಿತಿದ್ದಳು.ಮೈಸೂರಿನಿಂದ ಫೋನಿನಲ್ಲಿ ಮಾತನಾಡುವುದು ಶುರು ಮಾಡಿದವಳು, ಎರಡು ಗಂಟೆ ಅದರಲ್ಲಿಯೇ ಮುಳುಗಿಹೋಗಿದ್ದಳು.ನಾನು ನನ್ನಷ್ಟಕ್ಕೇ ಯಾವುದೋ ಪುಸ್ತಕ ಓದುತ್ತಾ ಕುಳಿತಿದ್ದೆ. ಅದರೂ ಹಾಳಾದ ಕಿವಿಗೆ ಅವಳ ಮಾತು ಕೇಳಿಸುತ್ತಿತ್ತು. ಅವಳು ತನ್ನ ಪ್ರಿಯಕರನೊಡನೆ ಮಾತನಾಡುತ್ತಿದ್ದಳು.ಎರಡು ಗಂಟೆ ಅವಳು "ನೀನು ಊಟ ಮಾಡಿದ್ಯಾ ?ನೀನು ಮಾಡಿದರೆ ಮಾತ್ರ ನಾನು ಮಾಡುವುದು "ಇವು ಎರಡನ್ನು ನೂರು ಸಲ ರಿಪೀಟ್ ಮಾಡುವುದು ಬಿಟ್ಟು ಬೇರೆಯದೇನು ಮಾತನಾಡಲಿಲ್ಲಾ. ಆಮೇಲೆ ಸಿಗ್ನಲ್ ಹೋಯಿತು ಅನಿಸುತ್ತೆ ,ಪಕ್ಕದಲ್ಲಿ ಇದ್ದ ನನ್ನನು ಮಾತನಾಡಿಸಲು ಶುರು ಮಾಡಿದಳು. ಹೀಗೆ ಓರು,ಮನೆ,ಕುಲಗೋತ್ರ ಪರಿಚಯ ಆಗುತ್ತಿದ್ದ ಹಾಗೆ ನಾನು ಫೋನಿನಲ್ಲಿ ಯಾರು ನಿಮ್ಮ ಬಾಯ್ ಫ್ರೆಂಡ್ ಹಾ? ಅಂತ ಕೇಳಿಯೇ ಬಿಟ್ಟೆ. ಅವಳು ಅಷ್ಟಕ್ಕೇ ತನ್ನ ಲವ್ ಸ್ಟೋರಿಯನ್ನು ಮುಂಗಾರುಮಳೆ ಲೆವಲ್ಗೆ ಹೇಳಿದಳು.ಎಲ್ಲಾ ಆದ್ಮೇಲೆ ಮತ್ತದೇ ಪ್ರಶ್ನೆ "ನಿಮಗೆ ಇಲ್ವಾ?". ನಾನು ಇಲ್ಲಾ ಅಂದೆ. ಆಗ ಅವಳಿಂದ ಬಂದ ಉತ್ತರ" ಆವಾಗಿಂದ ಕೆಲ್ಸಕ್ಕೆ ಬಾರದೇ ಇರೋ ಪುಸ್ತಕ ಓದುತ್ತಿರುವಾಗಲೇ ಅಂದುಕೊಂಡೆ." ಇದನ್ನು ಹೇಳಿ ಆಕೆ ಜೋರಾಗಿ ನಗಲು ಶುರು ಮಾಡಿದಳು. ನನಗೆ ನನ್ನ ಹವ್ಯಾಸಗಳ ಬಗ್ಗೆ ಒಂದು ತರಹ ಹೆಮ್ಮೆ ಇತ್ತು. ಪುಸ್ತಕ ಓದುವುದು ,ಕವನ ಬರೆಯುವುದು ಹೀಗೆ ನಾನು ಎನೋ ದೊಡ್ಡ ದೊಡ್ದ ಸಾಧನೆ ಮಾಡುತ್ತಿದ್ದೇನೆಂದು ಆಂದುಕೊಂಡಿದ್ದೆ. ಆದರೆ ಅವಳ ನಗು ಅದನ್ನು ಎಲ್ಲಾ ಕುಟ್ಟಿ ಪುಡಿ ಮಾಡಿತು . ನಾನೊಬ್ಬ ಒಂಟಿ ಗೂಬೆ ,ಅದಕೆ ಬ್ಯಾರೆ ಕ್ಯಾಮೆ ಇಲ್ಲದೇ ಇವೆಲ್ಲಾ ಮಾಡುತ್ತಿದ್ದೇನೆಂದು ಅವಳ ನಗು ಹೇಳುತಿತ್ತು.
ಘಟನೆ 3
ಫ಼ೆಭ್ರವರಿ ಹದಿನಾಲ್ಕು ನಮಗೆ ಅಂದರೆ ನಮ್ಮಂತ ಸಿಂಗಲ್ ಹುಡುಗರಿಗೆ ಡ್ರೈ ಡೇ. ಜೋಡಿಗಳು ಹಬ್ಬವನ್ನು ಆಚರಿಸುವುದು ನೋಡಿ, ನಮ್ಮಂತವರು ಹೊಟ್ಟೆ ಉರಿದುಕ್ಕೊಳ್ಳುತ್ತಾ "ಮುಂಡೆ ನನ್ನ ಮಕ್ಕಳಿಗೆ ಬೇರೆ ಕೆಲ್ಸ ಇಲ್ಲಾ.ನಮ್ಮ ಸಂಸ್ಕೃತಿ ಹಾಳು ಮಾಡೋಕೆ ಹುಟ್ಟಿದಾರೆ ಆಂತ ಬಯ್ಯುತ್ತಾ ಕೂರುವುದೇ ನಮ್ಮ ಕೆಲಸ. ಹೀಗೆ ಒಂದು ವಾಲೆಂಟೈನ್ಸ್ ದಿನ ಸಾಯಂಕಾಲ ಗೋಲಗಪ್ಪಾ ತಿನ್ನಲು ಹೋದೆ. ತುಂಬಾ ದಿನದಿಂದ ಒಂದೇ ಕಡೆ ತಿನ್ನುತ್ತಿದ್ದರಿಂದ ಗೋಲ್ಗೊಪ್ಪಾ ಅಂಗಡಿಯವನು ಪರಿಚಯ ಆಗಿದ್ದ.ಗೋಲ್ಗೊಪ್ಪಾ ಕೊಡುತ್ತಾ "ಎನ್ ಸಾರ್ .ಏನು ಸ್ಪೆಷಲ್ ಇವತ್ತು?" ಅಂತ ಕೇಳಿದ.ನಮ್ಮ ಕಡೆಯಿಂದ ಮತ್ತದೇ ಉತ್ತರ "ಅಯ್ಯೋ .ಏನಿಲ್ಲಪ್ಪಾ,ಮಾಮೂಲು ,ನಾವು ಈ ವಾಲೆಂಟೈನ್ಸ್ ಡೇ ಎಲ್ಲಾ ಆಚರಿಸೊಲ್ಲಾ" ಆಂದೆ.ಕಾರಣ ಅದಲ್ಲಾ ,ನಿಜ ಏನು ಅಂತ ನಿಮಗೂ ಗೊತ್ತು . ಹಾಗೆಯೇ "ನಿನ್ನದೇನು ಪ್ಲಾನ್ ?" ಅಂತ ಸುಮ್ಮನೆ ಪ್ರಶ್ನೆ ಬಿಸಾಕಿದೆ.ನಂಬಿದರೆ ನಂಬಿ ,ಬಿಟ್ಟರೆ ಬಿಡಿ ಆತ ತನ್ನ ಪ್ರೇಯಸಿಗೆ ಅಂದು ದುಬಾರಿ ಗಿಫ್ಟ್ ತೆಗುದುಕೊಂಡು ಹೋಗಿ,ಹೋಟೆಲಿನಲ್ಲಿ ಊಟ ಮಾಡಿಸುವ ಪ್ಲಾನ್ ಹಾಕಿದ್ದ. ಅವನ ಕಥೆ ಕೇಳುತ್ತಾ ಇದ್ದ ಹಾಗೆ ನನಗೆ ಕೆಮ್ಮು ಬರಲು ಶುರು ಆಯಿತು. ಯಾಕೋ ಮತ್ತದೇ ನೋವು..ಉಳಿದ ಎಲ್ಲರೂ ಅವರವರ ಜೋಡಿಗಳ ಜೊತೆ ಚೆನ್ನಾಗಿದ್ದಾರೆ, ನಾನೊಬ್ಬನೇ ಒಂಟಿ ಅನ್ನುವ ಭಾವನೆ.

            ಕೆಲವೊಮ್ಮೆ ನಮ್ಮ ಜೀವನದಲ್ಲಿ ನಮಗೆ ತುಂಬಾ ಅಮೂಲ್ಯ ಅನಿಸಿದ್ದು ,ಬೇರೆಯವರಿಗೆ ಅನ್ನಿಸಿದೇ ಇರಬಹುದು ಅನ್ನುವುದಕ್ಕೇ ಇಂತಹ ಘಟನೆಗಳು ಕೆಲವು ಉದಾಹರಣೆಗೆಳು ಅಷ್ಟೇ. ನನ್ನ ಜೀವನ ಶೈಲಿ,ನನ್ನ ಹವ್ಯಾಸಗಳು , ನನ್ನ ಒಂಟಿತನ ಬೇರೆಯವರಿಗೆ ನಗೆ ತರಿಸಬಹುದು. ಅವರ ಬದುಕು ನನಗೇ ಹಿಡಿಸಿದೇ ಇರಬಹುದು. ಉದಾಹರಣೆಗೆ ಅನ್ನ ಸಾಂಬಾರು ತಿನ್ನುವವನಿಗೆ ,ಎದುರುಗಡೆ ಮಟನ್ ತಿನ್ನುವವನು ಕಂಡು ಕಸಿವಿಸಿ ಯಾಗಬಹುದು. ಹಾಗೆಯೇ ಮಟನ್ ತಿನ್ನುವವನಿಗೆ ಅನ್ನ ಸಾಂಬಾರು ತಿನ್ನುವವನು ನೋಡಿ ಅದರಲ್ಲೇನಿದೆ ಏಂದು ನಗಬಹುದು. ಅವರವರ ಭಾವಕ್ಕೆ ,ಅವರವರ ಭಕುತಿಗೆ. ಈ ಮೇಲಿನ ವಿಷಯಗಳು ತಿಳಿದಿದ್ದರೂ ಕೂಡ, ಮೇಲಿನ ತರಹದ ಜನರು ಎದುರಾದಾಗ ನನ್ನ ಬಾಳು ಖಾಲಿ ಖಾಲಿ ಅನ್ನಿಸುವುದಂತೂ ನಿಜ.

         ಈಗಲೂ ನನ್ನ ತುಂಬಾ ಗೆಳೆಯ ಗೆಳತಿಯರು ನನಗೆ ಎನೇನೋ ಮಾಡುತ್ತಿರುತ್ತೀಯಾ? ಗರ್ಲ್ ಫ್ರೆಂಡ್ ಇಲ್ಲಾ ಅದಕೆ.ಒಂದು ಜೋಡಿ ಹುಡುಕೋ ಅಂದಾಗ ನನಗೇ ಮನಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಹೌದಾ? ನನ್ನ ಒಂಟಿ ತನ ಕಳೆಯಲು ಇಷ್ಟೊಂದು ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದೀನಾ?ಅಥವಾ ಈಗಿನಾ ಲಿವಿಂಗ್ ಟುಗೆದರ್ ಕಾಲದಲ್ಲಿ ಗರ್ಲ್ ಫ್ರ್ಂಡ್ ಇದ್ದರೇ ಮಾತ್ರ ಒಬ್ಬ ಯಶಸ್ವೀ ಅನ್ನಿಸಿಕೊಳ್ಳುವುದಾ? ೨೫ ಆದ್ರೂ ಒಂದು ಸಂಗಾತಿ ಹುಡುಕಿಕೊಳ್ಳಲಾಗದ ನಾನು ಸಿಗದ ದ್ರಾಕ್ಷಿ ಹುಳಿಯೆಂಬಂತೆ ಸುಮ್ಮನೇ ನಾನು ಲವ್ ಬರ್ಡ್ಸ್ ಗಳ ವಿರುದ್ಧ ಹೊಟ್ಟೆ ಕಿಚ್ಚಿನ ಮಾತನಾಡುತ್ತಿದ್ದೀನಾ ? ಎನೋ ಗೊತ್ತಿಲ್ಲಾ. ಮೇಲಿನ ಘಟನೆಗಳು ನಡೆದಾಗ ಮಾತ್ರ ನನ್ನಲ್ಲಿ ಹತ್ತು ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಆಗುವಷ್ಟು ಪ್ರಶ್ನೆಗಳು ಹುಟ್ಟುವುದಂತೂ ನಿಜ.
English Summary: I don't know whether I am the only one to come across these type of  incidents or  does everybody come across these type of incidents.I don't know why do I  feel that I am the only one who is alone in this world and rest of the people in the world are love birds.May be because of the type of people I come across. These people whom I come across .keeps on asking to me "Do u have girl friend?". The answer from my side will be always "No".It is their response to that answer that always annoys me. They act such a way that my life is a waste, just because  I don't have a girl friend. They even don't forget to mention that I always keep myself busy in different hobbies, just because I am alone or just because I couldn't find one.Even though I don't care about society's response to my life style,but when I come across these above people,I get confused.They leave thousands of questions spinning around me.Why is that?

.

ಬುಧವಾರ, ಅಕ್ಟೋಬರ್ 2, 2013

ಗಾಂಧಿ ಸರ್ಕಲ್



ಇಂದು ಗಾಂಧಿ ಜಯಂತಿ .ನಮ್ಮ ದೇಶದ ಪಿತಾಮಹ. ನನಗೆ ವ್ಯಯಕ್ತಿಕವಾಗಿ ಗಾಂಧೀಜಿ ಯವರನ್ನು ಕಂಡರೆ ಅಷ್ಟಕ್ಕಷ್ಟೇ . ಆದರೆ ದೇಶವೇ ಒಬ್ಬನನ್ನು ನಾಯಕನನ್ನಾಗಿ ಒಪ್ಪಿಕೊಂಡ ಮೇಲೆ ಆ ವ್ಯಕ್ತಿಯಲ್ಲಿ ಆಂತದ್ದೇನೋ ಶಕ್ತಿ ಇರುವುದು ನಿಜ.ಅದಕ್ಕೇ ನಮ್ಮ ದೇಶದ ಗಡಿಯಾಚೆಗೂ ಅವರ ಅಭಿಮಾನಿಗಳು ಇದ್ದಾರೆ. ಅವರನ್ನು ಹಾಡಿ ಹೊಗಳುವವರಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರಲ್ಲಿ ಗಾಂಧೀಜಿಯವರು ಪ್ರಮುಖ ಪಾತ್ರ ವಹಿಸಿದ್ದರು(ಅವರೇ ತಂದುಕೊಟ್ಟರು ಎಂದು ಒಪ್ಪಿಕೊಳ್ಳುವುದು ನನಗೇ ಕಷ್ಟ,ಆದರೆ ಅವರ ಹುಟ್ಟುಹಬ್ಬದ ದಿನದಂದು, ಸುಮ್ಮನೇ ಇಲ್ಲದೇ ಇರೋದನ್ನು ಯಾಕೆ ಕೆದುಕೋದು?).ಆದೊಂದೇ ಆಗಿದ್ದರೆ ನಾವು ಗಾಂಧೀಜಿಯವರನ್ನು ಮರೆತು ಹೋಗುತ್ತಿದ್ದೆವು ಅನಿಸುತ್ತದೆ.
          ಆದರೆ ಗಾಂಧೀಜಿಯವರು ಇಂದಿಗೂ ಪ್ರಸ್ತುತ ಅನ್ನಿಸುವುದಕ್ಕೆ ,ಇನ್ನೂ ಅನೇಕ ಕಾರಣಗಳಿವೆ. ಅದು ಅವರ ಖಾದಿಮಯ ಸರಳ ಜೀವನವಿರಬಹುದು. ಬಂದೂಕು ಹಿಡಿದವರ ಮುಂದೆ ಅಹಿಂಸೆಯೆಂಬ ಅಸ್ತ್ರ ಉಪಯೋಗಿಸಿದ ರೀತಿ ಇರಬಹುದು. ಅಥವಾ ಒಂದು ವರ್ಷದ ಹಿಂದೆ ದೇಶದ ಜನರನ್ನು ಬಡಿದೆಬ್ಬಿಸಿದ ಲೋಕಪಾಲ ಮಸೂದೆಗಾಗಿ ನಡೆದ ಸತ್ಯಾಗ್ರಹ ಇರಬಹುದು. ಜಾತಿ ಪದ್ಧತಿ ,ವರ್ಣ ಭೇದ ವಿರುದ್ಧ ಅವರ ನಿಲುವುಇರಬಹುದು . (ಅಂಬೇಡ್ಕರ ತರಹ ಹಿಂದು ಧರ್ಮ ಬಿಡದೇ ,ಹಿಂದು ಧರ್ಮದಲ್ಲಿ ಇದ್ದುಕೊಂಡೇ ಅದನ್ನು ತಿದ್ದಲು ಹೋದ ರೀತಿಯನ್ನು ನಾವಿಲ್ಲಿ ಗಮನಿಸಬೇಕಾಗಿದೆ)." ಹೆಣ್ಣು ಒಬ್ಬಳು ಮಧ್ಯರಾತ್ರಿ ಸ್ವತಂತ್ರವಾಗಿ ಓಡಾದಿದ ದಿನ, ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನ" ಏಂದು ಅವರು ಹೇಳಿರುವ ಮಾತು ಇಂದು ನಮ್ಮ ಕಿವಿಗೆ ಬಿದ್ದರೆ ನಮಗೇ ನಾಚಿಕೆಯಾಗುತ್ತದೆ.
       ಗಾಂಧೀಜಿಯವರು ಸರಳವಾಗಿಯೇ ಬದುಕುತ್ತಾ , ಬದುಕಿನ ಮೌಲ್ಯಗಳನ್ನು ಸರಳವಾಗಿಯೇ ನಮಗೇ ತಿಳಿಹೇಳಿದ್ದಾರೆ. ಅದರಲ್ಲಿ ಅವರು ಪಾಲಿಸುತ್ತಿದ್ದ ಮೂರು ಮಂಗಗಳ ನೀತಿ ನನಗೇ ಬಹು ಹತ್ತಿರವಾದದ್ದು. ಈ ಮೂರು ಮಂಗಗಳಲ್ಲಿ ಒಂದು ತನ್ನ ಬಾಯಿ ಮುಚ್ಚಿಕೊಂಡಿರುತ್ತದೆ,ಇನ್ನೊಂದು ಕಿವಿ ಹಾಗು ಇನ್ನೊಂದು ಕಣ್ಣು ಮುಚ್ಚಿಕೊಂಡಿರುತ್ತದೆ. ನೋಡಿದಾಗ ನಮಗೇ ಇದರಲ್ಲಿ ಅಂತದ್ದೇನಿದೆ ಅನ್ನಿಸಬಹುದು. ಆದರೆ ಕೆಟ್ಟದ್ದನ್ನು ನೋಡಬೇಡಿ,ಕೆಟ್ಟದನ್ನು ಕೇಳಬೇಡಿ,ಕೆಟ್ಟದನ್ನು ಮಾತನಾಡಬೇಡಿ ಏಂಬ ಈ ಮಂಗಗಳ ತತ್ವ,ಈಗಿನ ನಮ್ಮ ಶಿಥಿಲ ಸಮಾಜವನ್ನು ಮತ್ತೆ ಸರಿಯಾದ ಹಳಿಯಲ್ಲಿ ತರುವ ನಿಟ್ಟಿನಲ್ಲಿ ನೋಡಿದಾಗ ಬಹಳ ಮಹತ್ವದೆನಿಸುತ್ತದೆ.
       ಗಾಂಧೀಜಿ ಇಂದು ನಮ್ಮೊಂದಿಗೆ ಇಲ್ಲಾ. ಆವರ ನೆನಪು ನಮ್ಮಲ್ಲಿ ಸದಾ ಇರಲಿ ಎಂದೇನೋ ಅವರ ಮೂರ್ತಿಯನ್ನು  ಕೆತ್ತಿ ಕೆತ್ತಿ ಏಲ್ಲಿ ಬೇಕೆಂದರಲ್ಲಿ ಇಡಲಾಗಿದೆ. ಅವರ ಫೋಟೊಗಳನ್ನು ಪ್ರತಿ ಸರ್ಕಾರಿ ಕಛೇರಿಗಳಲ್ಲಿ ,ಶಾಲಾ ಕಾಲೇಜುಗಳಲ್ಲಿ ಇಡಲಾಗಿವೆ. ಗಾಂಧೀಜಿ ಹೆಸರಲ್ಲಿ ರಸ್ತೆಗಳಿವೆ,ಶಾಲ್ಗಳಿವೆ,ಆಶ್ರಮಗಳಿವೆ,ನಗರಗಳಿವೆ. ಆಷ್ಟೇ ಏಕೆ ನಮ್ಮ ನೋಟುಗಳಲ್ಲಿ ಕೂಡ ನಗುವ ಬಾಪುವನ್ನು ನೋಡುತ್ತೇವೆ. ಆದರೆ ಇಷ್ಟೆಲ್ಲಾ ಇದ್ದರೂ ಗಾಂಧೀಜಿಯವರ ಆತ್ಮಕ್ಕೆ ಇನ್ನೂ ಶಾಂತಿ ಸಿಕ್ಕಿಲ್ಲ .ಯಾಕೆ ಗೊತ್ತಾ?
      ನಾವುಗಳು ಬರಿಯ ಜೀವವಿಲ್ಲದ ಅವರ ಮೂರ್ತಿಗಳನ್ನು ಅಥವಾ ಫೋಟೋಗಳನ್ನು ಇಟ್ಟುಕೊಂಡಿದ್ದೇವೆ.ಅಥವಾ ಜೀವವಿಲ್ಲದ ಕಟ್ಟಡಗಳಿಗೆ,ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದೇವೆ . ಆದರೆ ಎಲ್ಲಿಯೂ ಅವರ ತತವಗಳನ್ನೂ ಪಾಲಿಸುವ ಗೋಜಿಗೆ ಹೋಗಿಲ್ಲ. ಮಹಾತ್ಮ ಗಾಂಧಿ ರಸ್ತೆಯಲ್ಲಿಯೇ ಹೆಣ್ಣು ಮಕ್ಕಳ ಅತ್ಯಾಚಾರ ನಡೆಯುತ್ತದೆ,ಅಲ್ಲಿಯೇ ಮಧ್ಯಪಾನ ಮಾರುವ ಅಂಗಡಿಗಳು ಇರುತ್ತವೆ,ಕೊಲೆ ಸುಲಿಗೆಗಳು ನಡೆಯುತ್ತವೆ.ಇನ್ನು ಸರ್ಕಾರಿ ಕಛೇರಿಗಳಲ್ಲಿ ಅವರ ಛಾಯಾಚಿತ್ರದ ಮುಂದೆಯೇ ಅವ್ಯವಹಾರಗಳು ನಡೆಯುತ್ತವೆ. ಹೀಗೆ ಒಂದೇ ಎರಡೇ. ಅವರ ತತ್ವಗಳನ್ನು ಪಾಲಿಸದೇ ಹೋದರೆ ಅವರ ಮೊರ್ತಿಗಳು,ಛಾಯಚಿತ್ರಗಳಿದ್ದರೆ ಏನು ಪ್ರಯೋಜನ?ನಿಜವಾಗಿಯೂ ಅವು ಬೇರೆ ಜೀವವಿಲ್ಲದ ವಸ್ತುಗಳಿಗ ಸಮ ಎನಿಸುತ್ತದೆ.
        ಒಂದರ್ಥದಲ್ಲಿ ಕೆಟ್ಟದ್ದನ್ನು ನೋಡಬೇಡಿ,ಕೆಟ್ಟದನ್ನು ಕೇಳಬೇಡಿ,ಕೆಟ್ಟದನ್ನು ಮಾತನಾಡಬೇಡಿ ಎಂದು ಹೇಳಿಕೊಟ್ಟ ಗಾಂಧೀಜಿಗೆ ನಾವು ಹೀಗೆಯೇ ನಮ್ಮ ಕರ್ಮ ಕಾಂಡಗಳನ್ನು ಮುಂದುವರೆಸುತ್ತೇವೆ. ನೀವೇ ನೋಡುವುದು ,ಕೇಳುವುದು ಅಥವಾ ಮಾತನಾಡುವುದು ಬಿಟ್ಟು ಬಿಡಿ ಎಂಬ ಅರ್ಥದಲ್ಲಿ ನಮ್ಮ ಬದುಕು ನಡೆಸುತ್ತಿದ್ದೇವೆ.
          ಇದೆಲ್ಲಾ ಯಾಕೆ ನೆನಪಾಯಿತು ಅಂದರೆ ಮೊನ್ನೆ ನಮ್ಮ ಕಂಪನಿಯಲ್ಲಿ ಗಾಂಧಿ ಸರ್ಕಲ್ ಎಂಬ mimes ಮಾಡಿದ್ದೆವು. ಅದರ ಕಥೆ ನಾನು ಇಲ್ಲಿವರೆಗೂ ಹೇಳಿದ ವಿಷಯಗಳನ್ನೇ ಅವಲಂಭಿಸಿತ್ತು. ತುಂಬಾ ದಿನಗಳ ಹಿಂದೆಯೇ ನಾನು ಈ mimes ನಿರ್ದೇಶಿಸಿ ,ಅನೇಕ ಬಾರಿ ಮಾಡಿದ್ದರೂ ಕೂಡ ಅದರ ವಿಡಿಯೋ ನನ್ನ ಹತ್ತಿರ ಇರಲಿಲ್ಲ. ಇದೀಗ ಸಿಕ್ಕಿದೆ..ಗಾಂಧಿ ಜಯಂತಿಯಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.
                       https://www.youtube.com/watch?v=wc4KeebSqd8

                     ನನ್ನ ಬೇರೆ ವೀಡಿಯೋಗಳು ಕೆಳಗೆ ಇವೆ ನೋಡಿ ಆನಂದಿಸಿ

https://www.youtube.com/watch?v=K62O-1E3rnU

English summary: Gandhi circle(mime) directed by Shravan Narayan.It focuses on the present day situation in India regarding people's view on Mahatma Gandhiji's principle.Mahatma Gandhiji,considered father of our nation preached us not to see bad ,not to speak bad and not to talk bad.Today after his death ,we have Gandhiji everwhere in india .We have Gandhiji 's statue,Gandhiji's photo almost in every organisation.We even have circles,road,schools,hospitals named after him.But what's missing in them all? gandhiji principles.We do all shameful acts in front of him . These acts are like we telling him not to see us,not to hear us and stop preaching us.

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...