ಬುಧವಾರ, ಆಗಸ್ಟ್ 21, 2013

ನಾವು software engineers : ATM Machineಗಳಲ್ಲ



            ಅಂದು ಬಸ್ ಸ್ಟ್ರೈಕ್ ಇತ್ತು . ಆದ್ದರಿಂದ ಸ್ವಂತ ಗಾಡಿಯಿಲ್ಲದವರು ಆಫೀಸ್ ನಿಂದ ಮನೆಗೆ ,ಮನೆಯಿಂದ ಆಫೀಸಿಗೆ ಹೋಗಲು ಆಟೋ ವನ್ನೇ ಅವಲಂಭಿಸಿದ ಬೇಕಾದ ಪರಿಸ್ಥಿತಿ . ಅಂದು ಆಟೋ ಚಾಲಕರು ದುಪ್ಪಟ್ಟು ಹಣವನ್ನು ಕೇಳಿ ಒಂದು ತರಹದ ಹಗಲು ದರೋಡೆ ಮಾಡುತ್ತಿದರು.ಇದನ್ನು ಸಹಿಸಲಾಗದ ನನಂಗೆ ಒಬ್ಬ ಅಟೋ ಚಾಲಕನಿಗೆ ಕೇಳಿಯೇ ಬಿಟ್ಟೆ "ಏನ್ ಸರ್ ಇದ್ಯಾವ ನ್ಯಾಯ ?ಒಂದಕ್ಕೆ ಎರಡರಷ್ಟು ಕೇಳೋದಾ?". ಆಗ ಅವನಿಂದ ಬಂದ ಉತ್ತರ " software engineers. ನಿಮ್ಗೇನ್ ಕಮ್ಮಿ ಸಾರ್?ಇವತ್ತೊಂದಿನ ನಮ್ಗೆ ಚಾನ್ಸ್ ಸ್ವಲ್ಪ ದುಡ್ದು ಮಾಡುವುದಕ್ಕೆ".
.............................................................................................................................................................
              ನಾನು ಜಿಮ್ ಗೆ ಹೋಗುತ್ತಿದ್ದ ಕಡೆ ಹುಡುಗನೊಬ್ಬ ಪರಿಚಯ ಆಗಿದ್ದ.ಕಷ್ಟ ಸುಖ ಆಗಾಗ ಇಬ್ಬರು ಹಂಚಿಕೊಳ್ಳುತ್ತಿದ್ದರಿಂದ ಸ್ವಲ್ಪ ಹತ್ತಿರವೂ ಆಗಿದ್ದ.ಒಂದು ದಿನ ಅದೇನೋ ಸಮಸ್ಯೆ ಹೇಳಿ ಐದು ಸಾವಿರ ನನ್ನ ಹತ್ತಿರ ಸಾಲ ತೆಗದುಕೊಂಡ.ಒಂದು ತಿಂಗಳಲ್ಲಿ ಕೊಡುತ್ತೀನಿ ಆಂತ ಹೇಳಿದ ಅಸ್ಸಾಮಿ ಆಮೇಲೆ ಆದರ ವಿಷಯದ ಬಗ್ಗೆ ಮಾತೇ ಇಲ್ಲಾ.ಕೊನೆಗೆ ದುಡ್ದು ಬೇಕೇ ಬೇಕು ಆಂತ ತುಂಬಾ ಹೇಳಿದ ನಂತರ ಹಾಗು ಹೀಗು ಮಾಡಿ ನಾಲ್ಕು ಸಾವಿರ ಕೊಟ್ಟು ಇನ್ನುಳಿದದ್ದು ಒಂದು ವಾರದ ನಂತರ ಕೊಡುವುದಾಗಿ ಹೇಳಿದ.ಒಂದು ವಾರದ ನಂತರ ಅವನ ಹತ್ತಿರ ದುಡ್ಡು ಕೇಳಿದಾಗ ಬಂದ ಉತ್ತರ "ಸಾರ್ ಅಷ್ಟೊಂದು ದುಡಿಯುತ್ತೀರಾ.ಒಂದು ಸಾವಿರ ಅಲ್ವಾ ಬಿಟ್ಟುಬಿಡಿ ಸಾರ್."
.............................................................................................................................................................
                              ಅದು ಹೇಗೋ ಕಷ್ಟ ಪಟ್ಟು ಚೆನ್ನೈನಿಂದ ನಾನು ಅಂದದ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡೆ.ಇದೀಗ ಉಳಿದುಕೊಳ್ಳಲು ಮನೆ ಹುಡುಕಬೇಕಾಗಿತ್ತು.ನಾಲ್ಕೈದು ಕಡೆ ಬಾಡಿಗೆ ಇದೆ ಆಂತ ಮನೆ ಮುಂದೆ ಬೋರ್ಡ್ ನೇತು ಹಾಕಿಕೊಂಡವರ ವಿಚಾರಿಸಲು ಹೋದೆ . ಅವರು ಮೊದಲು ಕೇಳುತ್ತಿದ್ದುದೇ"ಎನ್ ಕೆಲ್ಸಾ ಮಾಡ್ತೀರಾ?"."ನಾನು software engineer' ಅಂದ ಕೂಡಲೇ ಅಭೂತಪೂರ್ವ ಸ್ವಾಗತ ದೊರಕುತಿತ್ತು.(ಇಲ್ಲದಿದ್ದರೆ ಕೊಡೋಲ್ಲಾ ಅಂತ ಹೇಳಿ ಹಾಗೆಯೇ ಗೇಟ್ ಪಾಸ್ ಕೊಡುತ್ತಿದ್ದರು) ಮನಸ್ಸಿನೊಳಗೆ ಬೀಗುತ್ತಾ ನಾನು ಒಳಗೆ ಹೋಗಿ ಬಾಡಿಗೆ,ಮುಂಗಡ ಹಣ ಕೇಳಿದಾಗ ತಲೆತಿರುಗಿ ಬೀಳುವಂತಾಗುತ್ತಿತ್ತು.ಕುರಿ ಕಡಿಯುವ ಮುಂಚೆ ಹಾರ ಹಾಕಿ ಅಲಂಕಾರ ಮಾಡುವ ಆನುಭವ ಗೊತ್ತಾದುದ್ದೇ ಆಗ.ಒಂದು ದಿನ  ತಲೆಕೆಟ್ಟು ಒಂದು  ಟೀ ಕುಡಿಯೋಣ ಅಂತ ಒಂದು ಟೀ ಸ್ಟಾಲ್ಗೆ ಹೋಗಿ ಕೂತೆ.ಊರಿಗೆ ಹೊಸಬರಂತೆ ಕಂಡ ನನ್ನ ಟೀ ಮಾರುವವನು ಸಹಜವಾಗಿಯೇ ವಿಚಾರಿಸಿದ.ನಾನು ನನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು,ಯಾಕೆ ಇಷ್ಟು ದುಬಾರಿ ಆಂತ ಕೇಳಿದಾಗ ಅವನ ಉತ್ತರೆ ನನ್ನ ಮುಖಕ್ಕೆ ಹೊಡೆದ ಹಾಗಿತ್ತು. "ಅಯ್ಯೋ ಮೊದಲೆಲ್ಲಾ ಇಲ್ಲಿ ಕೇಳೋರು ಇರಲಿಲ್ಲಾ .ನೀವು software engineers ಬಂದ ಮೇಲೆ ಒಂದಕ್ಕೆ ಏರಡು ಕೊಟ್ಟು ಇಷ್ತು ಜಾಸ್ತಿ ಆಗಿರೋದು ನಿಮ್ಮಿಂದ ಬದುಕೋದೆ ಇಲ್ಲಿ ಕಷ್ಟ " ಅಂತ ಹೇಳಿ ನಾನು ಕೊಟ್ಟ ಹತ್ತು ರೂಪಾಯಿಗೆ ಚಿಲ್ಲರೆ ಇಲ್ಲಾ ಆಂತ ಹೇಳಿ ಸಾಗು ಹಾಕಿದ.

...................................................................................................................................................................


   ಈ ಮೇಲಿನ ಉದಾಹರಣೆಗಳು ಯಾಕೆ ಕೊಡುತ್ತಿದ್ದೀನಿ ಅಂತ ನಮ್ಮ software engineers ಅದಾಗಲೇ ಗೊತ್ತಾಗಿರುತ್ತದೆ.ಉಳಿದವರಿಗೆ ಏನಿದು ಆನ್ನಿಸಬಹುದು. ಹೆಚ್ಚಿನ ಜನರಲ್ಲಿ software engineers ಅಂದರೆ ಹಣವೆಂಬ ಹೂವು ಬಿಡುವ ಗಿಡಗಳು ಎಂಬ ಭಾವ ಇದೆ. ಮೇಲೆ ನೋಡಿದ ಹಾಗೆ ಇನ್ನೂ ಕೆಲವರಿಗೆ ಹಣದುಬ್ಬರ ವಾಗಲೂ ಕಾರಣ ನಾವೇ ಎಂಬ ಅಭಿಪ್ರಾಯವೂ ಇದೆ. ಬೆಳಗ್ಗೆ ನಮ್ಮ ಹತ್ತಿರ ಆದಷ್ಟೂ ಹಣ ಕಸಿದುಕೊಳ್ಳುವ ಹೊಂಚು ಹಾಕಿವ ಜನ ,ರಾತ್ರಿ ಎಲ್ಲಾದಕ್ಕೂ ನಾವೇ ಕಾರಣ ಅಂತ ಹೇಳಿಕೊಂಡು ಮಲಗುತ್ತಾರೆ.

            ನಮಗೆ ಕೈ ತುಂಬಾ ಸಂಬಳ ಬರುವುದೇನೋ ನಿಜ. ಸಂಬಳ ಅಂತ ಬಂದ ಮೇಲೆ ಮನೆ ಮಠ, ಖರ್ಚು ವೆಚ್ಚ ಗಳು ನಮಗೂ ಇದ್ದೇ ಇರುತ್ತದೆ. ಆರು ಸಾವಿರ ತರುವವನು ಅವನ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡರೆ,ಅರವತ್ತು ಸಾವಿರ ಬರುವವನು ಒಂದಿಷ್ಟು ಗೇಣು ಹೊರಲಾಡಿಕೊಳ್ಳಲು ಜಾಗ ಇರುವ ಹಾಗೆ ದೊಡ್ಡ ,ಸ್ವಲ್ಪ ಐಷರಾಮಿ, ಒಳ್ಳೆಯ ಮೆತ್ತನೆ ದುಬಾರಿ ಹಾಸಿಗೆ ತಂದು ಕೊಳ್ಳುತ್ತಾನೆ. ಆದಾಯ ಜಾಸ್ತಿ ಆದ ಹಾಗೆ ಒಬ್ಬ ಮನುಷ್ಯನು ತನ್ನ ಆಸೆಗಳ ಸೀಮೆಯನ್ನು ಸ್ವಲ್ಪ ಸ್ವಲ್ಪವಾಗಿಯೇ ವಿಸ್ತರಿಸಿ ಕೊಳ್ಳುತ್ತಾ ಹೋಗುತ್ತಾನೆ. ಈ ಮನುಷ್ಯನ ಸಹಜಗುಣವನ್ನು ನಾನು ಯಾಕೆ ಹೇಳುತ್ತಿದ್ದೇನೆ ಆಂದರೆ ನೀವು ಆಂದುಕೊಂಡಿರುವ ಕೈ ತುಂಬಿ ತುಳುಕುವ ಷ್ಟು ಸಂಬಳ ಬರುವ software engineer ಗೆ ಕೂಡ ಅವರದ್ದೇ ಖರ್ಚು ವೆಚ್ಚ ಇರುತ್ತದೆ,ಅವರದ್ದೇ ಜೀವನ ಇರುತ್ತದೆ ಎಂದು ಹೇಳಲು.

                         ಕೈ ತುಂಬಾ ಸಂಬಳ ಬರುತ್ತದೆ ,ಅರಾಮಾಗಿ ಬದುಕುತ್ತಿದ್ದಾರೆ , ನಮಗೂ ಒಂದಿಷ್ಟು ಇರಲಿ ಅಂತ ನಮ್ಮ ಹತ್ತಿರ ಅನಾವಶ್ಯಕವಾಗಿ ಕಿತ್ತುಕೊಳ್ಳುವ ಜನಗಳು ನೋಡಿದಾಗ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಹತ್ತು ರುಪಾಯಿ ಕೇಳುವ ಕಡೆ ಇಪ್ಪತ್ತು ರುಪಾಯಿ ಕೇಳುವ ಆಟೋದವರು, ಒಂದು ಎರಡೂ ರೂಪಾಯಿ ಇವರಿಗ್ಯಾವ ಲೆಕ್ಕ ಅಂತ ಚಿಲ್ಲರೆ ಕೊಡದೇ ಹೋಗುವ ಬಸ್ ಕಂಡಕ್ಟರ್ ಗಳು, ಲಕ್ಷ ಲಕ್ಷ ಮುಂಗಡ ಹಣ ತೆಗದುಕೊಳ್ಳುವ ಬಾಡಿಗೆ ದಾರರು ಹೀಗೆ ನಾವು software engineer ಅಂದ ಕೂಡಲೇ ಹಣ ಕೀಳುವ ಜನರಾಗಿ ಬಿಡುವವರನ್ನು ನೋಡಿದಾಗ ನಿಜಕ್ಕೂ ಮನಸ್ಸಿಗೆ ಬೇಜಾರಾಗುತ್ತದೆ.

                           ಇನ್ನೂ ನಮ್ಮಿಂದ ಬಾಡಿಗೆ, ಎಲ್ಲದರ ರೇಟ್ ಜಾಸ್ತಿ ಆಯಿತು ಅಂತ ಹೇಳುವವರಿಗೆ ಸಣ್ಣ ಉದಾಹರಣೆ ಕೊಡ ಬಯಸುತ್ತೇನೆ.ಒಂದು ಊರು ಇತ್ತು . ಊರ ಹೊರಗೆ ಒಂದೊಂದೇ ಕಂಪನಿಗಳು ತಲೆ ಎತ್ತಲು ಶುರುವಾಯಿತು .ಅದರ ಮೊದಲು ಊರ ಹೊರಗೆ ಮನೆಗಳೇ ಇರಲಿಲ್ಲ.ಇದ್ದರೂ ಬಾಡಿಗೆ ತುಂಬಾ ಕಡಿಮೆ. ಸಾಮನ್ಯವಾಗಿ ಕೆಲಸ ಮಾಡುವವರು ಕೆಲಸ ಜಾಗ ಮಾಡುವ ಹತ್ತಿರ ಮನೆ ಮಾಡುವುದರಿಂದ ಇಲ್ಲಿ ಮನೆಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಬೇಡಿಕೆ ಜಾಸ್ತಿ ಆದಂತೆ ಮನೆಗಳು ಕಟ್ಟಿ ಬಾಡಿಗೆಗೆ ಬಿಡುವವರು ಜಾಸ್ತಿ ಆಗಿದ್ದಾರೆ.ಹೊಸದಾಗಿ ಮನೆ ಮಾಡಬೇಕು ಎಂಬುವವರ ಪೈಕಿ ಜಾಸ್ತಿ ಊರ ಹೊರಗಿನವರು .ಭಾಷೆ ಗೊತ್ತಿಲ್ಲದ ಬೇರೆ ನಾಡಿನವರು ಬಂದಿದ್ದಾರೆ.ಎಲ್ಲಿಂದಲೋ ಬಂದವರಿಗೆ ಊರಿನ ಲೆಕ್ಕಾಚಾರಗಳ ಪರಿಚಯ ಕಮ್ಮಿ.ತಲೆ ಮೇಲೊಂದು ಸೂರು ಸಿಕ್ಕರೆ ಸಾಕು ಎಂದುಕೊಂಡು ಕೇಳಿದಷ್ಟು ಹಣ ಕೊಡುತ್ತಾ ಹೋಗಿದ್ದಾರೆ. ಕುರು ತಾನಾಗಿಯೇ ಕೊಬ್ಬಿ ,ತಾನಾಗಿಯೆ ಕುತ್ತಿಗೆ ನೀಡುತ್ತಿರುವುದನ್ನು ಜನ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ . ಅಷ್ಟೇ ನಡೆದದ್ದು ಇದೀಗ ಇಲ್ಲಿ ಕಬ್ಬಿಣಕ್ಕೂ ಚಿನ್ನದ ಬೆಲೆ .
                              ನಮ್ಮಿಂದಲೇ ಎಲ್ಲಾ ದುಬಾರಿ ಯಾಯಿತು ಎಂದು ಹೇಳುವ ಜನ ಇಲ್ಲಿ ಸರಿಯಾಗಿ ಕಣ್ಣು ತೆರದು ನೋಡಬೇಕಾಗಿದೆ.ಹೊಸದಾಗಿ ಮನೆ ಮಾಡಬೇಕು ಎಂಬುವವರ ಪೈಕಿ ಜಾಸ್ತಿ ಊರ ಹೊರಗಿನವರು .ಭಾಷೆ ಗೊತ್ತಿಲ್ಲದವರು. ಅದೇ ಊರಿನವರು ಊರಿನ ಒಂದು ಭಾಗ ವಾಗಿ ಹೋಗಿರುವುದರಿಂದ ಹೊಸ ಮನೆ ಮಾಡುವ ಗೋಜಿಗೆ ಕೈ ಹಾಕುವುದು ಕಮ್ಮಿ. ಅವರಿಗೆ ಅದು ಸಮಸ್ಯೆ ಅಲ್ಲಾ.ಉದಾಹರಣೆಗೆ ಆಟೋದವನಿಗೆ ಎಲ್ಲಿಗೋ ಹೋಗಬೇಕು ಏಷ್ಟಾಗುತ್ತದೆ ಆಂತ ಕೇಳಿದಾಗ ಅವನು ಮೊದಲು ಇದೇ ಊರಿನವರಾ ಅಥವ ಬೇರೆ  ಊರಿನವರಾ ಅಂತ ನೋಡುತ್ತಾನೆ. ಹೊಸಬರಾದರೆ ಆತ ಹೇಳಿದ್ದೇ ರೇಟ್‌.. .ಗೊತ್ತಿಲ್ಲದ ಜನ ಸುಮ್ಮನೆ ಕೊಟ್ಟು ಹೋಗುತ್ತಾರೆ.ಆದರೆ ಅದೇ ಊರಿನವರಾದರೆ "ನಾವು ಇದೇ ಊರಿನವರು.ನಮಗೆ ನಾಮ ಹಾಕಬೇಡ" ಅಂತ ಹೇಳಿ ಚ್Yಕಾಶಿ ಮಡಲು ನಿಲ್ಲುತ್ತಾರೆ.ಇಲ್ಲೂ ಅದೇ ಆಗಿದ್ದು .ಎಲ್ಲಿಂದಲೋ ಬಂದ ಹೊಸಬರು ಮೊದಮೊದಲು ಒಂಥರಾ uncomfort zone ನಲ್ಲಿಯೇ ಇರುತ್ತಾರೆ. ಆದಷ್ಟು ಬೇಗ ಮನೆ ಮಾಡಿಕೊಳ್ಳುವ ಆತುರದಲ್ಲಿರುತ್ತಾರೆ.ಏಷ್ಟಾದರೂ ಸರಿ ಸಿಕ್ಕರೆ ಸಾಕು ಅನ್ನುವವರನ್ನು ಕೆಲವರು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಐ ಟಿ ಕಂಪನಿಗಳು ಎದ್ದಿರುವ ಎಲ್ಲಾ ಕಡೆಯಲ್ಲೂ   ಇದನ್ನು  ಗಮನಿಸಬಹುದು.

                                 Demand ಜಾಸ್ತಿ ಆದ ಹಾಗೆ supply ಮಾಡುವವರು ಜಾಸ್ತಿ ಆಗಿದ್ದಾರೆ . Demand ಮಾಡುವವರು ಜಾಸ್ತಿಯೇ ಇರುವದರಿಂದ supply ಮಾಡುವವರು ಲಾಭ ಮಾಡಿಕೊಂಡಿದ್ದಾರೆ ಅಂತ ಹೇಳಿ ನಾನು ಇಲ್ಲಿಯವರೆಗೂ ಹೇಳಿದನ್ನು ಸಾರ ಸಗಟವಗಿ ಕೆಲವರು ತಿರಸ್ಕರಿಸಬಹುದು. ಆದರೆ ನನ್ನ ಉದ್ದೇಶ buyers ಪಡುತ್ತಿರುವ ಪಾಡನ್ನು    ಇಲ್ಲಿ ತೋರಿಸುವುದು.ಐ ಟಿ ನವರು ಬರುತ್ತಾರೆ ,ಕೇಳಿದಷ್ಟು ಹಣ ಕೊಡುತ್ತಾರೆ ಅಂತ ಆಂದುಕೊಂಡು ಕೋಟಿಗಟ್ಟಲೇ ಸಾಲ ಮಾಡಿ ,ಬ್ಯಾಂಕ್ ಸಾಲದ ಕಂತು ತೀರಿಸಲು ನಮಗೇ ಕತ್ತರಿ ಹಾಕುವುದು ಏಷ್ಟು ಸರಿ.
                   ಕೆಲವೊಮ್ಮೆ ನಮ್ಮನ್ನು ಹಣದ ಮೊಟ್ಟೆ ಇಡುವ ಕೋಳಿ ಅಂತ ತಿಳಿದುಕೊಳ್ಳುವ ಜನರ ತಪ್ಪು ಅಭಿಪ್ರಾಯಗಳಿಂದ ನಾವುಗಳು ತುಂಬಾ ಸಮಸ್ಯೆ ಎದುರಿಸಬೇಕಾಗಿದೆ . ಐ ಟಿ ಕಂಪನಿಗಳಿರುವ ಕಡೆ software engineer ಗಳ ದರೋಡೆ ದಿನದಿಂದ ದಿನೇ ಹೆಚ್ಚುತಿದೆ. ಸುಮ್ಮಸುಮ್ಮನೇ software engineer ಗಳ ಗಾಡಿಗೆ ಡಿಕ್ಕಿ ಹೊಡೆದು ಅವರನ್ನು ಹೆದರಿಸಿ ,ಬೆದರಿಸಿ ದುಡ್ಡು ಕಿತ್ತುಕೊಳ್ಳುವುದು,ಅಲ್ಲಿ ಸಂಚರಿಸುವ ಬಸ್ ಗಳಲ್ಲಿ ಅವರ ಜೇಬಿಗೆ ಕನ್ನ ಹಾಕುವುದು ,ಡ್ರಾಪ್ ಕೊಡುವ ನೆಪದಲ್ಲಿ ಅವರನ್ನು ಕಿಡ್ನ್ಯಾಪ್ ಮಾಡುವ ಉದಾಹರಣೆಗಳು ಜಾಸ್ತಿ ಆಗುತ್ತಿದೆ.ಕೆಲವೊಮ್ಮೆ ನಮಗೆ ನ್ಯಾಯ ಕೊಡಿಸಬೇಕಾದ ಪೋಲಿಸ್ ಗಳು ನಮ್ಮನು ಎ ಟಿ ಎಮ್ ಅಂತೆ ನೋಡುತ್ತಾರೆ. ಒಮ್ಮೆ ನನ್ನ ಗೆಳೆಯನೊಬ್ಬ ಗಾಡಿಗೆ ಡಿಕ್ಕಿ ಹೊಡೆದು ಜನ ದುಡ್ಡು ಕೇಳಲು ಶುರು ಮಾಡಿದರು.ಕೊನೆಗೆ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದಾಗ ಪೋಲಿಸ್ ಹೇಳಿದ್ದನ್ನು ಗೊತ್ತೇ " ಪಾಪ, ಬಿಡಿ ಸಾರ್ ಅವರು ನೀವೇ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕೊಟ್ಟುಬಿಡಿ.ಎನಂತೀರಾ ಇದಕ್ಕೆ ?
    ನಮ್ಮ ಬಗ್ಗೆ ಜನರಲ್ಲಿರುವ ತಪ್ಪು ಅಭಿಪ್ರಾಯಗಳಿಂದ ನಮಗೆ ಅಗುತ್ತಿರುವ ತೊಂದರೆಗಳನ್ನು ಹೇಳುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ ಅಷ್ಟೆ.ನಮ್ಮನ್ನು ನಾವು ಎತ್ತಿ ಕಟ್ಟಿಕೊಳ್ಳುವ  ಅಥವಾ ಯಾರನ್ನೂ ಕೀಳಾಗಿ ನೋಡುವ ಉದ್ದೇಶ ನನ್ನದಲ್ಲ.ನಿಮ್ಮ ಜೊತೆ ಹಂಚಿಕೊಳ್ಳುವುದು ಇನ್ನು ಇದೆ. ಮತ್ತೇ ಬರುತ್ತೇನೆ.

ಮಂಗಳವಾರ, ಆಗಸ್ಟ್ 13, 2013

ನಾವು software engineers....aliens ಗಳಲ್ಲ.....

                 


                       ಇದರ ಬಗ್ಗೆ ಬರೆಯಬೇಕು ಅಂತಾ ತುಂಬಾ ದಿನದಿಂದ ಕಾಯುತ್ತಾ ಇದ್ದೆ .ಆದ್ರೆ ಈಗ ಕಾಲ ಕೂಡಿ ಬಂದಿದೆ .ಇದು ಹಾಸ್ಯ ಲೇಖನ ಅಂತೂ ಅಲ್ಲವೇ ಅಲ್ಲಾ. ಆದ್ದರಿಂದ ಇದನ್ನು ಓದಿ ನಗುವ ಪ್ಲಾನ್ ಹಾಕಿಕೊಂಡಿದ್ದರೆ ದಯವಿಟ್ಟು ಒದೋಕೆ ಹೋಗಬೇಡಿ. ಈ ಲೇಖನವನ್ನು ನನ್ನ ಸುತ್ತಮುತ್ತ ಜನರಲ್ಲಿ software engineers ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ದಿನವೂ ನೋಡಿ ಸಹಿಸಲಾಗದೇ ಬರೆಯುತ್ತಿರುವ ಲೇಖನ ಇದು . ಆದ್ದರಿಂದ software ಅಲ್ಲದೇ ಇರೋರು , ಅದರಲ್ಲ್ಲೂ ಅವರನ್ನು ಅಣಿಕಿಸುವವರು ಓದಲೇಬೇಕಾದ ಲೇಖನ.ನಿಮಗೆ ಸ್ವಲ್ಪ ನಿಮ್ಮ ಮುಖಕ್ಕೆ ಉಗಿದ ಹಾಗೆ ಆಗಬಹುದು ಆದರು ಸ್ವಲ್ಪ ಸುಧಾರಿಸಿಕೊಂಡು ಓದಿ.ಇಲ್ಲಿ ಯಾರನ್ನು ಎತ್ತಿ ಕಟ್ಟುತ್ತಿಲ್ಲಾ ,ಯಾರನ್ನು ಹೀನಾಯವಾಗಿ ನೋಡುತ್ತಾ ಇಲ್ಲ.ವಾಸ್ತವಕ್ಕೆ ಕನ್ನಡಿ ಹಿಡಿಯುವ ಸಣ್ಣ ಪ್ರಯತ್ನ ಅಷ್ಟೇ .

                              Software engineers ಅಂದಕೂಡಲೇ ಮೆದುಳ ಸಹಾಯವು ಇಲ್ಲದೆ ಎಲ್ಲರ ನಾಲಿಗೆಯಲ್ಲಿ ಮೊದಲು ಬರುವುದು "ನಿಮ್ದೇನ್ ಬಿಡಿ ಸಾರ್,ಐಷರಾಮಿ ಜೀವನ , ಕೈ ತುಂಬಾ ಸಂಬಳ ಬರುತ್ತೆ.ಎಷ್ಟು ಬೇಕಾದ್ರೂ ಖರ್ಚು ಮಾಡ್ತೀರಾ?".ಇದು ಓಕೆ ಆದರೆ ಮುಂದೆ ಹೇಳುವ ಮಾತಿದೆಯಲ್ಲಾ ಅದು ನಮ್ಮ ಜೇಬಿಗೆ ಕತ್ತರಿ ಅದೇ"ನಿಮ್ಗೇನ್ ಕಮ್ಮಿ ,ಜಾಸ್ತೀನೇ ಕೊಡಿ ಸಾರ್?". ಇಲ್ಲಿ ಹೇಳಬೇಕಾಗಿರುವುದು ಮತ್ತೆ ಗಮನಿಸಬೇಕಾಗಿರುವುದು ತುಂಬಾ ಇದೆ.

      ಸಾಮನ್ಯವಾಗಿ ಈ ವೃತ್ತಿಯಲ್ಲಿ ಸಂಬಳ ಜಾಸ್ತಿಯೇ(ತೀರಾ ಜಾಸ್ತಿಯೆನಲ್ಲಾ ,ಈಗ ಇದಕ್ಕಿಂತ ಜಾಸ್ತಿ ದುಡಿಯುವವರು ಬೇರೆ ಕೆಲಸದಲ್ಲಿ ಎಲ್ಲೆಂದರಲ್ಲಿ ಸಿಗುತ್ತಾರೆ). ಆದರೂ ಜನ ಪ್ರಕಾರ software engineersಗೆ ಜಾಸ್ತಿ .ಇರಲಿ ಒಬ್ಬ ಚೆನ್ನಾಗಿ ದುಡೀತಾ ಇದ್ದಾನೆ ಅಂದ ಮೇಲೆ ಆತ ಒಳ್ಳೆಯ ಜೀವನ ನಡೆಸಿದರೆ ತಪ್ಪೇ?ಅಥವಾ ಹೇಳುವವರ ಕಣ್ಣು ಕುಕ್ಕಿದಾಗ ಬಂದ ಮಾತುಗಳಾ ಇವು?ಸ್ವಲ್ಪ ಶ್ರಮ ವಹಿಸಿದರೆ ಎಂಜಿನೀಯರ್ ಗಳು ಸಾಮನ್ಯವಾಗಿ ಬೇಗನೆ ಒಳ್ಳೆಯ ಸಂಪಾದನೆ ಮಾಡಬಹುದಾದ್ದರಿಂದ ಇದೀಗ ಗಲ್ಲಿಗೆ ನೂರರಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಅದರಲ್ಲಿ ಸ್ವಲ್ಪ ನನ್ನಂತ ಆಕಾಶದಷ್ಟು ಆಸೆ ಹೊತ್ತ ಮಧ್ಯ್ಮಮ ವರ್ಗದ ಜನ ಜಾಸ್ತಿ.ಎನೋ ಸ್ವಲ್ಪ ಕೈಗೆ ಕಾಸು ಬಂದಾಗ ಮಜಾ ಮಾಡಿದ್ರೆ ತಪ್ಪೇ?...ಸಾರ್ ನಾವು ಕಷ್ಟಪಟ್ಟು ದುಡಿದ ದುಡ್ದೇ ಇದು.
               ಕಷ್ಟಪಟ್ಟು ದುಡಿದ ದುಡ್ಡು ಅಂದಾಗ ನೆನಪಾಯಿತು.ನಮ್ಮ ಸುತ್ತಮುತ್ತಲಿನಲ್ಲಿರುವ ಜನ ನಮಗೆ ಹೇಳುವ ಇನ್ನೊಂದು ಮಾತು"ನೀವು ಬಿಡಿ , ಏ ಸಿ ರೂಮ್ನಲ್ಲಿ ಕೂತುಕೊಂಡು ಕೆಲಸ ಮಾಡ್ತೀರಾ,ಆರಾಮ ಜೀವನ".ಹೋಗಲಿ ಬಿಡಿ ಅಂತ ಸುಮ್ಮನೆ ಇದ್ದರೆ ಆಗಲೇ ಇನ್ನೊಂದಿಷ್ಟು ಜನ "ತುಂಬಾ stress ಅಲ್ಲಾ ,ನಿಮ್ಮ ಕೆಲ್ಸದಲ್ಲಿ. ನೋಡ್ತಾ ಇರ್ತೀವಲ್ಲಾ ನ್ಯೂಸ್ ಅಲ್ಲಿ . ನಿಮ್ಮೋರು ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳತ್ತಾರೆ ಅಂತ.ನಮಗೆ ಈ ಜೀವನ ಬೇಡಪ್ಪಾ".

                              ನಿಜ ಹೇಳಬೇಕಂದರೆ ಅಂದು ಕೊಂಡಷ್ಟು ಸುಲಭದ ಕೆಲಸ ಅಲ್ಲಾ.ನಾವು ನಾಲ್ಕು ಗೋಡೆಯ ಮೇಲೆ ಕೂತುಕೊಂಡು ,ಸಾವಿರಾರು ಲೈನ್ ಕೋಡ್ ಬರೆಯಬೇಕು.ಕೂತಲ್ಲೇ ಕೂತು ದೇಹ ಜಡಗಟ್ಟಿದಂತಾದರೂ ನಮ್ಮ ಮೆದುಳು ಅದರ ನೂರು ಪಟ್ಟು ಕೆಲಸ ಮಾಡುತ್ತಲಿರುತ್ತದೆ.ಕೆಲವೊಮ್ಮೆ ಶನಿವಾರ ಭಾನುವಾರ, ಹಗಲು ರಾತ್ರಿ ,ಮದುವೆ ಮುಂಜಿ,ಹಬ್ಬ ಹರಿದಿನ ಅಂತ ನಾವು ಕೆಲಸ ಮಾಡುತ್ತೇವೆ.ಇನ್ನೂ ನಮ್ಮ ಕೆಲಸದಲ್ಲಿ ಜಾಸ್ತಿ ಒತ್ತಡ ಇದೆ ಅನ್ನುವವರಿಗೆ ಒಂದು ಪ್ರಶ್ನೆ.ಯಾರದೇ ತಲೆ ಹೊಡೆಯದೇ ,ಕೈ ತುಂಬಾ ಸಂಬಳ ಬರುವ ಕೆಲಸ ತೋರಿಸಿ ನೋಡೋಣ.ಕೈ ತುಂಬಾ ಸಂಪಾದನೆ ಮಾಡುವವನಿರಲಿ,ಕೂಲಿ ಮಾಡುವವನಿರಲಿ ಎಲ್ಲರಿಗೂ ಅವರವರ ಕೆಲಸದಲ್ಲಿ ಅವರದೇ ಆದ ಸಮಸ್ಯೆಗಳು.ಒತ್ತಡಗಳು ಇರುತ್ತದೆ.ಇನ್ನೂ ಅತ್ಮಹತ್ಯೆ ವಿಷಯಕ್ಕೆ ಬಂದರೆ ರೈತನೂ ಆತ್ಮಹತ್ಯೆ ಮಾಡಿಕೊಳುತ್ತಾನೆ,ಕೂಲಿಕಾರನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ವೈದ್ಯ ,ಸರ್ಕಾರಿ ನೌಕರನೂ ಮಾಡಿಕೊಳ್ಳುತ್ತಾನೆ. ಆದರೆ ಇದು software ಯುಗ ನೋಡಿ ಅದಕ್ಕೆ ನಮ್ಮ ಪ್ರಾಣಕ್ಕೆ ಬೆಲೆ ಜಾಸ್ತಿ.ಅಂದ ಹಾಗೆ Software engineer ವಿಷಯಕ್ಕೆ ಬಂದಾಗ ಅತ್ಮಹತ್ಯೆ ,ಒತ್ತಡ ಜೀವನವನ್ನು ಸಂಪೂರ್ಣವಾಗಿ ನಾನು ಅಲ್ಲಗೆಳೆಯುವುದಿಲ್ಲಾ.
                                     ಅದನ್ನೇ ಎತ್ತಿಕಟ್ಟಿ ಬೇರೆ ಎಲ್ಲೂ ಆಗುತ್ತಿಲ್ಲಾ ಎಂಬಂತೆ ಒಂದು ವೃತ್ತಿಗೆ ಕಳಂಕ ತರುವುದು ಎಷ್ಟು ಸರಿ ಎಂಬುವುದು ನನ್ನ ವಾದ. ಇನ್ನೊಂದು ವಿಷಯ .ಈ ಥರಹ ಹೇಳುವವರಲ್ಲಿ ಸಾಕಷ್ಟು ಜನರ ಹತ್ತಿರದವರು ಎಷ್ಟೇ ಪ್ರಯತ್ನ ಪಟ್ಟರೂ software engineer ಆಗಿರುವುದಿಲ್ಲಾ . ಒಂಥರಾ ಸಿಗದ ದ್ರಾಕ್ಷಿ ಹುಳಿಯೆಂಬಂತೆ ಇರುತ್ತದೆ ಅವರ ಮಾತು .ಅದೇ ಅವರ ಮನೆಯಲ್ಲೀ ಯಾರದರೂ software engineer ಆಗಿ ಕೈ ತುಂಬಾ ಸಂಬಳ ತಂದುಕೊಡಲಿ ಆಗ ಇವರ ವರಸೆಯೇ ಬದಲಾಗುತ್ತದೆ.



ಹೀಗೆ ನಮ್ಮ software engineers ನೋವುಗಳು ತುಂಬಾ ಇದೆ. ಇನ್ನೂ ಒಂದಿಷ್ಟು ವಿಷಯಗಳ ಜೊತೆ ಮತ್ತೆ ಬರುತ್ತೀನಿ. ಅಲ್ಲಿಯವರೆಗೂ ಬೈ ಬೈ

































ಶುಕ್ರವಾರ, ಆಗಸ್ಟ್ 9, 2013

ನಾ ಮೆಚ್ಚಿದ ಕಾದಂಬರಿ:The fourth estate



         " The fourth estate ".. ಜೆಫ್ರಿ ಆರ್ಚರ್ ಬರೆದಿರುವ ಈ ಇಂಗ್ಲಿಷ್ ಕಾದಂಬರಿ ನಾನು ಇತ್ತೀಚಿನ ದಿನಗಳಲ್ಲಿ ಓದಿರುವ ಅದ್ಭುತ ಕಾದಂಬರಿಗಳಲ್ಲಿ ಒಂದು.ಆದೇನೋ ಈ ಕಾದಂಬರಿ ಓದಿದಾಗಿನಿಂದಲೂ ನನಗೆ ಇದರ ಬಗ್ಗೆ ಬರೆಯಬೇಕು ಅನ್ನಿಸಿತ್ತು .ಈಗ ಕಾಲ ಕೂಡಿ ಬಂದಿದೆ. ಪುಸ್ತಕದ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ ಅಷ್ಟೇ.

          ಮೊದಲಿಗೆ The fourth estate ಅಂದರೇನು ಎಂದು ಗೊತ್ತಿಲ್ಲದವರಿಗೆ ಅದರ ಬಗ್ಗೆ ಕಿರು ಪರಿಚಯ . ಯುರೋಪ್ ನ ಮಧ್ಯ ಕಾಲೀನ ಹಾಗು ಪೂರ್ವ ಆಧುನಿಕ ಯುಗದಲ್ಲಿ ಸಮಾಜವನ್ನು ಸಾಮನ್ಯ ವಾಗಿ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗುತಿತ್ತು . ಚರ್ಚ್ ನ ಧಾರ್ಮಿಕ ಗುರುಗಳು,ಸಮಾಜದಲ್ಲಿ ಹೆಚ್ಚು ಸುಖ ಅನುಭವಿಸುವ ಶ್ರೀಮಂತರರು ಹಾಗು ಸಾಮಾನ್ಯ ಜನರನ್ನು ಮೂರು ಎಸ್ಟೇಟ್ ಗಳನ್ನಾಗಿ ಪರಿಗಣಿಸಲಾಗುತಿತ್ತು. ಈ ಮೂರು ಸರಿಯಾದ ದಾರಿಯಲ್ಲಿ ಹೋಗುವ ಹಾಗೆ ನೋಡಿಕೊಳ್ಳುವ ಜವಬ್ದಾರಿ ಅದೇ ನಾಲ್ಕನೇ ಎಸ್ಟೇಟ್ ನದು. ಅದುವೇ ಪತ್ರಿಕೋದ್ಯಮ.

                    ಈ ಕಾದಂಬರಿ ಅದೇ ಪ್ರಭಾವಿ ಪತ್ರಿಕೋದ್ಯಮದ ಬಗ್ಗೆ, ಪಿಸ್ತೂಲು ಹಿಡಿದ ಸೈನಿಕರಷ್ಟೇ ಶಕ್ತಿ ಇರುವ ಪೆನ್ನು ಹಿಡಿಯುವ ಪತ್ರಕರ್ತರ ಆ ಸಾಮ್ರಾಜ್ಯವನ್ನು ಗೆಲ್ಲಲು ಹೊರಟ ಇಬ್ಬರು ವ್ಯಕ್ತಿಗಳ ಬಗ್ಗೆ.

            ಈ ಇಬ್ಬರು ವ್ಯಕ್ತಿಗಳು ಅಂದರೆ ರಿಚರ್ಡ್ ಆರ್ಮ್ ಸ್ಟ್ರಾಂಗ್ ಹಾಗು ಕೇತ್ ಟ್Yನ್ಸ್ಂಡ್ ರವರದು ಒಂದೇ ಆಸೆ . ಪತ್ರಿಕಾ ಸಾಮ್ರಾಜ್ಯದ ಗಾದಿ ಏರುವುದು .ಗಾದಿ ಏರುವುದು ಆಂದ ಮೇಲೆ ಸುಲಭ ಅಲ್ಲಾ . ಆಷ್ಟೇ ಅಲ್ಲಾ ಸಿಂಹಾಸನ ಒಬ್ಬರಿಗೆ ಮಾತ್ರ ಸೀಮಿತ . ಹೇಗೆ ಈ ಇಬ್ಬರು ಅಧಿಪತಿಯಾಗಲು ಎನೆಲ್ಲಾ ಹರಸಾಹಸ ಪಡುತ್ತಾರೆ , ಒಬ್ಬರು ಇನ್ನೊಬ್ಬರ ಕಾಲು ಹೇಗೆ ಎಳೆಯುತ್ತಾರೆ,ಕೊನೆಗೆ ಯಾರು ಗೆಲ್ಲುತ್ತಾರೆ ಏಂಬುದನ್ನು ಲೇಖಕ ಇಲ್ಲಿ ಬಹು ರೋಚಕವಾಗಿ ಕಥೆ ಕಟ್ಟಿದ್ದಾನೆ. ಜೆಫ್ರಿ ಆರ್ಚರ್ ಶಕ್ತಿಯೇ ಅಂಥದ್ದು .

                  ಕಥೆಯಲ್ಲಿ ಇನ್ನೊಂದು ವಿಶಿಷ್ಟ ಏನಂದರೆ ಸಿಂಹಾಸನದ ಮೇಲೆ ಕಣ್ಣು ಇಟ್ತಿರುವ ಈ ಇಬ್ಬರ ವಯಕ್ತಿತ್ವ ಸಂಪೂರ್ಣ ಬೇರೆ ಬೇರೆಯದ್ದು. ರಿಚರ್ಡ್ ಒಬ್ಬ ಸೈನಿಕ ರಾಜನಾಗಲು ಬಯಸುವ ವ್ಯಕ್ತಿ ಆದರೆ, ಕೇಥ್ ತನ್ನ ತಂದೆ ಕಟ್ಟಿರುವ ಸಾಮ್ರಾಜ್ಯವನ್ನು ವಿಸ್ತರಿಸಲು ಹೊರಟ ಯುವರಾಜ.ರಿಚರ್ಡ್ ಒಬ್ಬ ಓದು ಬರಹ ಬರದ ಬಡತನ ಕಿತ್ತು ತಿನ್ನುತ್ತಿರುವ ರೈತನ ಮಗ.ಇನ್ನೊಂದೆಡೆ ಕೇಥ್ ಹುಟ್ತುತ್ತಲೇ ಚಿನ್ನದ ಬಟ್ಟಲಲ್ಲಿ ಹಾಲು ಕುಡಿದು ಬೆಳದಂತವನು . ರಿಚರ್ಡ್ಗೆ ಜ್ಞಾನವನ್ನು ಬದುಕೇ ಹೇಳಿ ಕೊಟ್ಟರೆ , ಕೇಥ್ ಅದನ್ನು ಲಂಡನ್ ನ ಪ್ರತಿಷ್ಟಿತ ಕಾಲೇಜುವೊಂದರಲ್ಲಿ ಕಲಿಯುತ್ತಾನೆ.

                                     ಕಥೆಯು ಶುರುವಾಗುವುದು ಈ ಇಬ್ಬರ ಹುಟ್ಟಿನಿಂದ . ಮನೆ ತುಂಬಾ ಮಕ್ಕಳಿರುವ ನಾಲ್ಕು ಗೋಡೆ ಇರುವ ಯುರೋಪ್ ನ ಪುಟ್ಟ ಮನೆಯಲ್ಲಿ ಬೆಟ್ಟದಷ್ಟು ಕನಸ್ಸು ಹೊತ್ತಿರುವ ರಿಚರ್ಡ್ ಹುಟ್ಟುತ್ತಾನೆ. ತಾನು ತಲೆಯತ್ತಿ ಬಾಳುವಂತಾಗಬೇಕು ಎಂಬ ಕನಸ್ಸು ಹೊತ್ತ ಆತ ,ಗಾಳಿ ಬಂದಾಗ ಎಣ್ಣೆ ತೂರಿಕೋ ಎಂಬಂತೆ ಅವಕಾಶ ಸಿಕ್ಕಲೆಲ್ಲಾ ವ್ಯಾಪಾರ ಜ್ಞಾನ ಕಲಿಯುತ್ತಾ ಹೋಗುತ್ತಾನೆ. ಎರಡನೇ ಮಹಾಯುದ್ಧದ ಸಂಧರ್ಭದಲ್ಲ್ರಂತೂ ಕ್ರೂರಿ ಹಿಟ್ಲರ್ ಯಹೂದಿಗಳ ಮಾರಣಹೋಮ ನೆಡೆಸಿದಾಗ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡು,ಜೀವ ಉಳಿಸಿಕೊಳ್ಳಲು ದೇಶದಿಂದ ದೇಶ ತನ್ನ ಹೆಸರು ಬದಲಾಯಿಸಿಕೊಂಡು ಕೊನೆಗೆ ಇಂಗ್ಲೆಂಡ್ ಗೆ ಬರುತ್ತಾನೆ.ಆಲ್ಲಿ ಹೇಗೊ ಇಂಗ್ಲಿಷ್ ಕಲಿತು ,ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಹಿಟ್ಲೆರ್ ವಿರುಧ್ದ ಹೋರಾಡಲು ಸೈನ್ಯ ಸೇರುತ್ತಾನೆ.ರಣರಂಗದಲ್ಲಿ ತನ್ನ ಶೌರ್ಯ ಮೆರದು ಆಂಗ್ಲರ ಮೆಚ್ಚುಗೆಗೆ ಪಾತ್ರವಾಗುತ್ತಾನೆ . ಯುಧ್ದ ಮುಗಿದ ನಂತರ ಅಲ್ಲಿಯ ಪತ್ರಿಕಾ ಸಂಸ್ಥೆಯೊಂದನ್ನು ನೋಡಿಕೊಳ್ಳುವ ಜವಬ್ದಾರಿ ಸಿಗುತ್ತದೆ .ಆಲ್ಲಿಂದ ಶುರು ಅವನ ಕಾರುಬಾರು .

                                     ಇನ್ನೊಂದೆಡೆ ಮಹಾಯುದ್ಧ ಎಂಬುದು ಬರಿಯ ಸುದ್ಧಿ ಮಾತ್ರ ವಾಗಿರುವ ಆಸ್ಟ್ರೇಲಿಯಾದಲ್ಲಿ ಕೇಥ್ ನದ್ದು ಐಷರಾಮಿ ಬದುಕು .ಪತ್ರಿಕಾ ಲೋಕಕ್ಕೂ ಆತನಿಗೂ ಹುಟ್ಟುತ್ತಲೇ ನಂಟು.ಏಕೆಂದರೆ ಆತ ತಂದೆ ಹಲವು ಪತ್ರಿಕೆಯ ಒಡೆಯನಾಗಿರುತ್ತಾರೆ. ತಂದೆ ಸಮಯ ಸಿಕ್ಕಗಲೆಲ್ಲಾ ತನ್ನ ಜ್ಞಾನವನ್ನು ಮಗನಿಗೆ ಧಾರೆ ಎರೆಯುತ್ತಿರುತ್ತಾನೆ.ಕೇಥ್ ತನ್ನ ಕಾಲೇಜು ದಿನಗಳಲ್ಲಿ ತನ್ನ ಕಾಲೇಜಿನ ಮ್ಯ್ಯಾಗ ಜಿನ್ ಗೆ ಸಂಪಾದಕನಾಗಲು ಒಂದಿಷ್ಟು ಕಸರತ್ತು ನಡೆಸಬೇಕಾಗುತ್ತದೆ. ಆಷ್ಟೇ ಅಲ್ಲಾ oxford ಕಾಲೇಜಿನಲ್ಲಿ ಸೀಟು ಪಡೆಯಲು ತನಗಿಷ್ಟವಾಗದ ಪ್ರಾಂಶುಪಾಲರ ಹತ್ತಿರ ವ್ಯವಹಾರ ನಡೆಸಬೇಕಾಗಿ
ಬರುತ್ತದೆ.ಇದರ್ ಮಧ್ಯೆ ಪ್ರಾಂಶುಪಾಲರ ಮಗಳ ಜೊತೆ ಕ್ರಿಕೆಟ್ ಪೆವಲಿಯನ್ನಲ್ಲಿ ಕಾಮ ಕೇಳಿಯಾಟ,ಇನ್ನೊಂದು ಹುಡುಗಿಯ ಜೊತೆ ಸರಸ ,ಕುದುರೆ ಆಟದ ಹುಚ್ಚು ಹಾಗು ಕೊನೆಗೆ ಅದೇ ಪ್ರಾಂಶುಪಾಲರ ಮಗಳು ಬಸುರಿಯಾದಾಗ ಕಾಲೇಜಿನಲ್ಲಿ ನಡೆಯುವ ವಿಚಾರಣೆ ಬಂದು ಹೋಗುತ್ತದೆ. ನಂತರ oxford ಕಾಲೇಜಿನಲ್ಲಿ ಓದುವಾಗ ಆತನ ಗಮನ ಸ್ವಲ್ಪ ರಾಜಕೀಯದ ಕಡೆ ಗಮನ ಹೋದರೂ ಅದರಲ್ಲಿ ಯಶಸ್ಸು ಕಾಣದ ನಂತರ ಅದರ ಆಸೆ ಅಲ್ಲಿಯೆ ಬಿಡುತ್ತಾನೆ. ಆತ ಮರಳಿ ಮನೆಗೆ ಬರುವ ಹೊತ್ತಿಗೆ ತಂದೆ ತೀರಿ ಹೋಗಿರುತ್ತಾರೆ.ತನ್ನ ತಂದೆಯ ಆಸೆಯಂತೆ ,ತಾಯಿಯ ವಿರುದ್ಧವಾಗಿ ಪತ್ರಿಕಾ ಲೋಕಕ್ಕೆ ಕಾಲಿಡುತ್ತಾನೆ.
         ಈ ಇಬ್ಬರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವಾಗ ಒಬ್ಬರೊನ್ನಬ್ಬರು ಮುಖಾಮುಖಿಯಾಗುತ್ತಾರೆ. ಆಗ ಕಥೆ ಇನ್ನಷ್ಟೂ ರೋಚಕತೆ ಪಡೆಯುತ್ತದೆ."everything is fair under love and war " ಎಂಬ ಸಿಧ್ಧಾಂತಕ್ಕೆ ಬಧ್ಧರಾದಂತೆ ಕಾಣುವ ಇಬ್ಬರಿಗೆ ಗೆಲುವು ಮಾತ್ರ ಮುಖ್ಯವಾಗುತ್ತಾ ಹೋಗುತ್ತದೆ. ಏದುರಾಳಿಯನ್ನು ಸೋಲಿಸಲು ಏಂತಹ ಅಪಾಯಕಾರಿ ಕೆಲಸಕ್ಕೂ ಕೈ ಹಾಕಲು ಸಿಧ್ಧರಿರುತ್ತಾರೆ.ಹೀಗೆ ಸಾಗುವಾಗ ಒಬ್ಬರು ಒಮ್ಮೆ ಗೆದ್ದರೆ ಇನ್ನೊಬರು ಇನ್ನೊಮ್ಮೆ ಗೆಲ್ಲುತ್ತಾರೆ. ಒಬ್ಬನು ಇನ್ನೊಬ್ಬನಿಗೆ ಒಂದು ಸಲ ಮಣ್ಣು ಮುಕ್ಕಿಸಿದರೆ ಇನ್ನೊಬ್ಬ ಇನ್ನೊಂದು ಸಲ ಅದರ ದುಪ್ಪಟ್ಟು ಮಣ್ಣುಮುಕ್ಕಿಸುತ್ತಾನೆ.ಓದುವವನಂತೂ ಮುಂದೆ ಎನಾಗುತ್ತದೆ ಎಂಬ ಕುತೂಹದಲ್ಲಿ ಸಿಲುಕಿಕೊಂಡಿರುತ್ತಾನೆ.ಕೊನೆಗೆ ಎನಾಗುತ್ತದೆ ಎಂದು ಇಲ್ಲಿ ಹೇಳುವುದಕ್ಕಿಂತ ನೀವು ಓದಿದರೆ ಚೆನ್ನ.

                      ಮೊದಮೊದಲು ಮುಖ್ಯಪಾತ್ರಗಳ ಪೂರ್ವಾಪರ ಅಂದರೆ ಬಾಲ್ಯ,ಯೌವ್ವನ ಓದುವಾಗ ಕೆಲವರಿಗೆ ಬೋರಾಗಬಹುದು ಅಥವಾ ಅನಾವಶ್ಯಕ ಅನ್ನಿಸಬಹುದು. ಆದರೆ ಅದು ಜೆಫ್ರಿಯ ಶೈಲಿ. ಈ ಕಥೆಯಲ್ಲಿ ಇಬ್ಬರು ಮುಖ್ಯ ಪಾತ್ರದ ಜೀವನ ಶೈಲಿಯ ಮೇಲೆ ಪೂರ್ವಾಪರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕಥೆ ಓದುವಾಗ ಗೊತ್ತಾಗುತ್ತದೆ. ಬಾಳಿನಲ್ಲಿ ಹಿಂದೆ ಮಾಡಿದ ಸಣ್ಣ ಸಣ್ಣ ತಪ್ಪುಗಳು ಹಾಗು ಅದರಿಂದ ಆದ ಅನುಭವ ಮುಂದೆ ವರವಾಗಿ ಪರಿಣಮಿಸುವ ರೀತಿ ಅದ್ಭ್ಹುತ. ಗೆಲ್ಲಲು ತನ್ನ ಗುರುತನ್ನೇ ಬದಲಿಸಿಕೊಳ್ಳುವ ರಿಚರ್ಡ್ ಹಾಗು ಬೇರೆಯವರ ಮಾತಿಗೆ ಬೆಲೆಕೊಡದೆ ತನಗೆ ಸರಿ ಅನ್ನಿಸಿದ್ದನ್ನು ಮಾಡೂವ ಕೇಥ್ ಇವರಿಬ್ಬರ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾನೆ.

                      ನಿಜವಾಗಿಯೂ ಒಂದು ಒಳ್ಳೆಯ ಪುಸ್ತಕಕ್ಕೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಈ ಪುಸ್ತಕವನ್ನು ಓದಿ.

























Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...