ಶುಕ್ರವಾರ, ಆಗಸ್ಟ್ 9, 2013

ನಾ ಮೆಚ್ಚಿದ ಕಾದಂಬರಿ:The fourth estate



         " The fourth estate ".. ಜೆಫ್ರಿ ಆರ್ಚರ್ ಬರೆದಿರುವ ಈ ಇಂಗ್ಲಿಷ್ ಕಾದಂಬರಿ ನಾನು ಇತ್ತೀಚಿನ ದಿನಗಳಲ್ಲಿ ಓದಿರುವ ಅದ್ಭುತ ಕಾದಂಬರಿಗಳಲ್ಲಿ ಒಂದು.ಆದೇನೋ ಈ ಕಾದಂಬರಿ ಓದಿದಾಗಿನಿಂದಲೂ ನನಗೆ ಇದರ ಬಗ್ಗೆ ಬರೆಯಬೇಕು ಅನ್ನಿಸಿತ್ತು .ಈಗ ಕಾಲ ಕೂಡಿ ಬಂದಿದೆ. ಪುಸ್ತಕದ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ ಅಷ್ಟೇ.

          ಮೊದಲಿಗೆ The fourth estate ಅಂದರೇನು ಎಂದು ಗೊತ್ತಿಲ್ಲದವರಿಗೆ ಅದರ ಬಗ್ಗೆ ಕಿರು ಪರಿಚಯ . ಯುರೋಪ್ ನ ಮಧ್ಯ ಕಾಲೀನ ಹಾಗು ಪೂರ್ವ ಆಧುನಿಕ ಯುಗದಲ್ಲಿ ಸಮಾಜವನ್ನು ಸಾಮನ್ಯ ವಾಗಿ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗುತಿತ್ತು . ಚರ್ಚ್ ನ ಧಾರ್ಮಿಕ ಗುರುಗಳು,ಸಮಾಜದಲ್ಲಿ ಹೆಚ್ಚು ಸುಖ ಅನುಭವಿಸುವ ಶ್ರೀಮಂತರರು ಹಾಗು ಸಾಮಾನ್ಯ ಜನರನ್ನು ಮೂರು ಎಸ್ಟೇಟ್ ಗಳನ್ನಾಗಿ ಪರಿಗಣಿಸಲಾಗುತಿತ್ತು. ಈ ಮೂರು ಸರಿಯಾದ ದಾರಿಯಲ್ಲಿ ಹೋಗುವ ಹಾಗೆ ನೋಡಿಕೊಳ್ಳುವ ಜವಬ್ದಾರಿ ಅದೇ ನಾಲ್ಕನೇ ಎಸ್ಟೇಟ್ ನದು. ಅದುವೇ ಪತ್ರಿಕೋದ್ಯಮ.

                    ಈ ಕಾದಂಬರಿ ಅದೇ ಪ್ರಭಾವಿ ಪತ್ರಿಕೋದ್ಯಮದ ಬಗ್ಗೆ, ಪಿಸ್ತೂಲು ಹಿಡಿದ ಸೈನಿಕರಷ್ಟೇ ಶಕ್ತಿ ಇರುವ ಪೆನ್ನು ಹಿಡಿಯುವ ಪತ್ರಕರ್ತರ ಆ ಸಾಮ್ರಾಜ್ಯವನ್ನು ಗೆಲ್ಲಲು ಹೊರಟ ಇಬ್ಬರು ವ್ಯಕ್ತಿಗಳ ಬಗ್ಗೆ.

            ಈ ಇಬ್ಬರು ವ್ಯಕ್ತಿಗಳು ಅಂದರೆ ರಿಚರ್ಡ್ ಆರ್ಮ್ ಸ್ಟ್ರಾಂಗ್ ಹಾಗು ಕೇತ್ ಟ್Yನ್ಸ್ಂಡ್ ರವರದು ಒಂದೇ ಆಸೆ . ಪತ್ರಿಕಾ ಸಾಮ್ರಾಜ್ಯದ ಗಾದಿ ಏರುವುದು .ಗಾದಿ ಏರುವುದು ಆಂದ ಮೇಲೆ ಸುಲಭ ಅಲ್ಲಾ . ಆಷ್ಟೇ ಅಲ್ಲಾ ಸಿಂಹಾಸನ ಒಬ್ಬರಿಗೆ ಮಾತ್ರ ಸೀಮಿತ . ಹೇಗೆ ಈ ಇಬ್ಬರು ಅಧಿಪತಿಯಾಗಲು ಎನೆಲ್ಲಾ ಹರಸಾಹಸ ಪಡುತ್ತಾರೆ , ಒಬ್ಬರು ಇನ್ನೊಬ್ಬರ ಕಾಲು ಹೇಗೆ ಎಳೆಯುತ್ತಾರೆ,ಕೊನೆಗೆ ಯಾರು ಗೆಲ್ಲುತ್ತಾರೆ ಏಂಬುದನ್ನು ಲೇಖಕ ಇಲ್ಲಿ ಬಹು ರೋಚಕವಾಗಿ ಕಥೆ ಕಟ್ಟಿದ್ದಾನೆ. ಜೆಫ್ರಿ ಆರ್ಚರ್ ಶಕ್ತಿಯೇ ಅಂಥದ್ದು .

                  ಕಥೆಯಲ್ಲಿ ಇನ್ನೊಂದು ವಿಶಿಷ್ಟ ಏನಂದರೆ ಸಿಂಹಾಸನದ ಮೇಲೆ ಕಣ್ಣು ಇಟ್ತಿರುವ ಈ ಇಬ್ಬರ ವಯಕ್ತಿತ್ವ ಸಂಪೂರ್ಣ ಬೇರೆ ಬೇರೆಯದ್ದು. ರಿಚರ್ಡ್ ಒಬ್ಬ ಸೈನಿಕ ರಾಜನಾಗಲು ಬಯಸುವ ವ್ಯಕ್ತಿ ಆದರೆ, ಕೇಥ್ ತನ್ನ ತಂದೆ ಕಟ್ಟಿರುವ ಸಾಮ್ರಾಜ್ಯವನ್ನು ವಿಸ್ತರಿಸಲು ಹೊರಟ ಯುವರಾಜ.ರಿಚರ್ಡ್ ಒಬ್ಬ ಓದು ಬರಹ ಬರದ ಬಡತನ ಕಿತ್ತು ತಿನ್ನುತ್ತಿರುವ ರೈತನ ಮಗ.ಇನ್ನೊಂದೆಡೆ ಕೇಥ್ ಹುಟ್ತುತ್ತಲೇ ಚಿನ್ನದ ಬಟ್ಟಲಲ್ಲಿ ಹಾಲು ಕುಡಿದು ಬೆಳದಂತವನು . ರಿಚರ್ಡ್ಗೆ ಜ್ಞಾನವನ್ನು ಬದುಕೇ ಹೇಳಿ ಕೊಟ್ಟರೆ , ಕೇಥ್ ಅದನ್ನು ಲಂಡನ್ ನ ಪ್ರತಿಷ್ಟಿತ ಕಾಲೇಜುವೊಂದರಲ್ಲಿ ಕಲಿಯುತ್ತಾನೆ.

                                     ಕಥೆಯು ಶುರುವಾಗುವುದು ಈ ಇಬ್ಬರ ಹುಟ್ಟಿನಿಂದ . ಮನೆ ತುಂಬಾ ಮಕ್ಕಳಿರುವ ನಾಲ್ಕು ಗೋಡೆ ಇರುವ ಯುರೋಪ್ ನ ಪುಟ್ಟ ಮನೆಯಲ್ಲಿ ಬೆಟ್ಟದಷ್ಟು ಕನಸ್ಸು ಹೊತ್ತಿರುವ ರಿಚರ್ಡ್ ಹುಟ್ಟುತ್ತಾನೆ. ತಾನು ತಲೆಯತ್ತಿ ಬಾಳುವಂತಾಗಬೇಕು ಎಂಬ ಕನಸ್ಸು ಹೊತ್ತ ಆತ ,ಗಾಳಿ ಬಂದಾಗ ಎಣ್ಣೆ ತೂರಿಕೋ ಎಂಬಂತೆ ಅವಕಾಶ ಸಿಕ್ಕಲೆಲ್ಲಾ ವ್ಯಾಪಾರ ಜ್ಞಾನ ಕಲಿಯುತ್ತಾ ಹೋಗುತ್ತಾನೆ. ಎರಡನೇ ಮಹಾಯುದ್ಧದ ಸಂಧರ್ಭದಲ್ಲ್ರಂತೂ ಕ್ರೂರಿ ಹಿಟ್ಲರ್ ಯಹೂದಿಗಳ ಮಾರಣಹೋಮ ನೆಡೆಸಿದಾಗ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡು,ಜೀವ ಉಳಿಸಿಕೊಳ್ಳಲು ದೇಶದಿಂದ ದೇಶ ತನ್ನ ಹೆಸರು ಬದಲಾಯಿಸಿಕೊಂಡು ಕೊನೆಗೆ ಇಂಗ್ಲೆಂಡ್ ಗೆ ಬರುತ್ತಾನೆ.ಆಲ್ಲಿ ಹೇಗೊ ಇಂಗ್ಲಿಷ್ ಕಲಿತು ,ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಹಿಟ್ಲೆರ್ ವಿರುಧ್ದ ಹೋರಾಡಲು ಸೈನ್ಯ ಸೇರುತ್ತಾನೆ.ರಣರಂಗದಲ್ಲಿ ತನ್ನ ಶೌರ್ಯ ಮೆರದು ಆಂಗ್ಲರ ಮೆಚ್ಚುಗೆಗೆ ಪಾತ್ರವಾಗುತ್ತಾನೆ . ಯುಧ್ದ ಮುಗಿದ ನಂತರ ಅಲ್ಲಿಯ ಪತ್ರಿಕಾ ಸಂಸ್ಥೆಯೊಂದನ್ನು ನೋಡಿಕೊಳ್ಳುವ ಜವಬ್ದಾರಿ ಸಿಗುತ್ತದೆ .ಆಲ್ಲಿಂದ ಶುರು ಅವನ ಕಾರುಬಾರು .

                                     ಇನ್ನೊಂದೆಡೆ ಮಹಾಯುದ್ಧ ಎಂಬುದು ಬರಿಯ ಸುದ್ಧಿ ಮಾತ್ರ ವಾಗಿರುವ ಆಸ್ಟ್ರೇಲಿಯಾದಲ್ಲಿ ಕೇಥ್ ನದ್ದು ಐಷರಾಮಿ ಬದುಕು .ಪತ್ರಿಕಾ ಲೋಕಕ್ಕೂ ಆತನಿಗೂ ಹುಟ್ಟುತ್ತಲೇ ನಂಟು.ಏಕೆಂದರೆ ಆತ ತಂದೆ ಹಲವು ಪತ್ರಿಕೆಯ ಒಡೆಯನಾಗಿರುತ್ತಾರೆ. ತಂದೆ ಸಮಯ ಸಿಕ್ಕಗಲೆಲ್ಲಾ ತನ್ನ ಜ್ಞಾನವನ್ನು ಮಗನಿಗೆ ಧಾರೆ ಎರೆಯುತ್ತಿರುತ್ತಾನೆ.ಕೇಥ್ ತನ್ನ ಕಾಲೇಜು ದಿನಗಳಲ್ಲಿ ತನ್ನ ಕಾಲೇಜಿನ ಮ್ಯ್ಯಾಗ ಜಿನ್ ಗೆ ಸಂಪಾದಕನಾಗಲು ಒಂದಿಷ್ಟು ಕಸರತ್ತು ನಡೆಸಬೇಕಾಗುತ್ತದೆ. ಆಷ್ಟೇ ಅಲ್ಲಾ oxford ಕಾಲೇಜಿನಲ್ಲಿ ಸೀಟು ಪಡೆಯಲು ತನಗಿಷ್ಟವಾಗದ ಪ್ರಾಂಶುಪಾಲರ ಹತ್ತಿರ ವ್ಯವಹಾರ ನಡೆಸಬೇಕಾಗಿ
ಬರುತ್ತದೆ.ಇದರ್ ಮಧ್ಯೆ ಪ್ರಾಂಶುಪಾಲರ ಮಗಳ ಜೊತೆ ಕ್ರಿಕೆಟ್ ಪೆವಲಿಯನ್ನಲ್ಲಿ ಕಾಮ ಕೇಳಿಯಾಟ,ಇನ್ನೊಂದು ಹುಡುಗಿಯ ಜೊತೆ ಸರಸ ,ಕುದುರೆ ಆಟದ ಹುಚ್ಚು ಹಾಗು ಕೊನೆಗೆ ಅದೇ ಪ್ರಾಂಶುಪಾಲರ ಮಗಳು ಬಸುರಿಯಾದಾಗ ಕಾಲೇಜಿನಲ್ಲಿ ನಡೆಯುವ ವಿಚಾರಣೆ ಬಂದು ಹೋಗುತ್ತದೆ. ನಂತರ oxford ಕಾಲೇಜಿನಲ್ಲಿ ಓದುವಾಗ ಆತನ ಗಮನ ಸ್ವಲ್ಪ ರಾಜಕೀಯದ ಕಡೆ ಗಮನ ಹೋದರೂ ಅದರಲ್ಲಿ ಯಶಸ್ಸು ಕಾಣದ ನಂತರ ಅದರ ಆಸೆ ಅಲ್ಲಿಯೆ ಬಿಡುತ್ತಾನೆ. ಆತ ಮರಳಿ ಮನೆಗೆ ಬರುವ ಹೊತ್ತಿಗೆ ತಂದೆ ತೀರಿ ಹೋಗಿರುತ್ತಾರೆ.ತನ್ನ ತಂದೆಯ ಆಸೆಯಂತೆ ,ತಾಯಿಯ ವಿರುದ್ಧವಾಗಿ ಪತ್ರಿಕಾ ಲೋಕಕ್ಕೆ ಕಾಲಿಡುತ್ತಾನೆ.
         ಈ ಇಬ್ಬರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವಾಗ ಒಬ್ಬರೊನ್ನಬ್ಬರು ಮುಖಾಮುಖಿಯಾಗುತ್ತಾರೆ. ಆಗ ಕಥೆ ಇನ್ನಷ್ಟೂ ರೋಚಕತೆ ಪಡೆಯುತ್ತದೆ."everything is fair under love and war " ಎಂಬ ಸಿಧ್ಧಾಂತಕ್ಕೆ ಬಧ್ಧರಾದಂತೆ ಕಾಣುವ ಇಬ್ಬರಿಗೆ ಗೆಲುವು ಮಾತ್ರ ಮುಖ್ಯವಾಗುತ್ತಾ ಹೋಗುತ್ತದೆ. ಏದುರಾಳಿಯನ್ನು ಸೋಲಿಸಲು ಏಂತಹ ಅಪಾಯಕಾರಿ ಕೆಲಸಕ್ಕೂ ಕೈ ಹಾಕಲು ಸಿಧ್ಧರಿರುತ್ತಾರೆ.ಹೀಗೆ ಸಾಗುವಾಗ ಒಬ್ಬರು ಒಮ್ಮೆ ಗೆದ್ದರೆ ಇನ್ನೊಬರು ಇನ್ನೊಮ್ಮೆ ಗೆಲ್ಲುತ್ತಾರೆ. ಒಬ್ಬನು ಇನ್ನೊಬ್ಬನಿಗೆ ಒಂದು ಸಲ ಮಣ್ಣು ಮುಕ್ಕಿಸಿದರೆ ಇನ್ನೊಬ್ಬ ಇನ್ನೊಂದು ಸಲ ಅದರ ದುಪ್ಪಟ್ಟು ಮಣ್ಣುಮುಕ್ಕಿಸುತ್ತಾನೆ.ಓದುವವನಂತೂ ಮುಂದೆ ಎನಾಗುತ್ತದೆ ಎಂಬ ಕುತೂಹದಲ್ಲಿ ಸಿಲುಕಿಕೊಂಡಿರುತ್ತಾನೆ.ಕೊನೆಗೆ ಎನಾಗುತ್ತದೆ ಎಂದು ಇಲ್ಲಿ ಹೇಳುವುದಕ್ಕಿಂತ ನೀವು ಓದಿದರೆ ಚೆನ್ನ.

                      ಮೊದಮೊದಲು ಮುಖ್ಯಪಾತ್ರಗಳ ಪೂರ್ವಾಪರ ಅಂದರೆ ಬಾಲ್ಯ,ಯೌವ್ವನ ಓದುವಾಗ ಕೆಲವರಿಗೆ ಬೋರಾಗಬಹುದು ಅಥವಾ ಅನಾವಶ್ಯಕ ಅನ್ನಿಸಬಹುದು. ಆದರೆ ಅದು ಜೆಫ್ರಿಯ ಶೈಲಿ. ಈ ಕಥೆಯಲ್ಲಿ ಇಬ್ಬರು ಮುಖ್ಯ ಪಾತ್ರದ ಜೀವನ ಶೈಲಿಯ ಮೇಲೆ ಪೂರ್ವಾಪರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕಥೆ ಓದುವಾಗ ಗೊತ್ತಾಗುತ್ತದೆ. ಬಾಳಿನಲ್ಲಿ ಹಿಂದೆ ಮಾಡಿದ ಸಣ್ಣ ಸಣ್ಣ ತಪ್ಪುಗಳು ಹಾಗು ಅದರಿಂದ ಆದ ಅನುಭವ ಮುಂದೆ ವರವಾಗಿ ಪರಿಣಮಿಸುವ ರೀತಿ ಅದ್ಭ್ಹುತ. ಗೆಲ್ಲಲು ತನ್ನ ಗುರುತನ್ನೇ ಬದಲಿಸಿಕೊಳ್ಳುವ ರಿಚರ್ಡ್ ಹಾಗು ಬೇರೆಯವರ ಮಾತಿಗೆ ಬೆಲೆಕೊಡದೆ ತನಗೆ ಸರಿ ಅನ್ನಿಸಿದ್ದನ್ನು ಮಾಡೂವ ಕೇಥ್ ಇವರಿಬ್ಬರ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾನೆ.

                      ನಿಜವಾಗಿಯೂ ಒಂದು ಒಳ್ಳೆಯ ಪುಸ್ತಕಕ್ಕೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಈ ಪುಸ್ತಕವನ್ನು ಓದಿ.

























ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...