ಭಾನುವಾರ, ಡಿಸೆಂಬರ್ 30, 2012

ಸ್ವಲ್ಪ ನಗಿ


ಅಂಗಿ 
ನಿನ್ನ ನಗುವಿಗೆ 
ನಾನಷ್ಟೇ ಕರಗಿಲ್ಲ 
ಕೋಮಲಾಂಗಿ,
ಜೊತೆಗೆ ಕರಗಿದೆ 
ಸಂಬಳ ಭಾರದಿಂದ 
ತೂಗುತ್ತಿದ ಜೇಬು 
ಇದ್ದ  ಅಂಗಿ . 


ಚಿತ್ರಾನ್ನ 
ನನ್ನ ಪ್ರಿಯೆ 
ಕಣ್ಣಿನಲ್ಲಿ ಬಡಿಸುತ್ತಾ 
 ಪ್ರೀತಿಯ ಪರಮಾನ್ನ ,
ತಟ್ಟೆಗೆ ಬಡಿಸಿದಳು 
ತಂಗಳು ಚಿತ್ರಾನ್ನ .

ನಿನ್ನ ನಗು 
ನಲ್ಲೆ 
ನಗು ಕಾಣದ 
ನಿನ್ನ ಕೆಂದುಟಿ ,
ಸಕ್ಕರೆ ಯಿಲ್ಲದ 
ಕಾಫಿ -ಟೀ 

ಮಾಡ್ರನ್ ಲವ್ 
ಈಗಿನ ಹುಡುಗ 
ಹುಡುಗಿಯರದು 
ಹುಸಿ ಪ್ರೇಮ ,
ಒಳಗಿನ ಗುಟ್ಟು 
ಏನಿದ್ದರೂ ಕಾಮ ,
ಅದಕ್ಕೆ ಮದುವೆ 
ಮುನ್ನ ,
ಸಂಸಾರದ list ಅಲ್ಲಿ 
ಸೇರುವುದು "coma "

ಸರ್ಕಾರಿ ಕೆಲಸ 
ಸರ್ಕಾರಿ ಕೆಲಸ 
ಸಿಗಲು ಎರಡು ಬೇಕು ,
ಒಂದು ಹೆಸರು ಹಾಗು 
ಜಾತಿ ತುಂಬುವ  ಅರ್ಜಿ ,
ಇನ್ನೊಂದು ಲಂಚ 
ಕೊಡುವಾಗ ಮುತುವರ್ಜಿ .

ಗುರುವಾರ, ಡಿಸೆಂಬರ್ 13, 2012

ಅವಳು




ನಿನ್ನ ನಗು 

 ಅದೇನೆಲ್ಲಾ  ಇದೆ 
ನಿನ್ನ ನಗುವಲ್ಲಿ ,
ಬಾಳುದ್ದಕ್ಕೂ ಕಾಡುವ 
ಬೆಚ್ಚನೆಯ ಬಿಸಿಯಿದೆ .
ತಿಂಗಳ ಬೆಳದಿಂಗಳ 
ತಂಪಿದೆ .
ನನ್ನ ಸೋಲಿಗೆ 
ಮುಂದೆ ಗೆಲುವಿದೆ 
ಎಂದು ಹೇಳುವ 
ಸ್ಫೂರ್ತಿಯಿದೆ.
ನನ್ನ ಪ್ರತಿ ಗೆಲುವಿಗೆ 
ಪ್ರೋತ್ಸಾಹ ನೀಡುವ 
ಬಹುಮಾನವಿದೆ .
ಈ ಬದುಕೆಂಬ 
ಸಂತೆಯಲ್ಲೂ ನನ್ನನ್ನು 
ಏಕಾಂಗಿಯನ್ನಾಗಿ ಮಾಡಬಲ್ಲ 
ಶಕ್ತಿಯಿದೆ .
ಏಕಾಂತದಲ್ಲೂ  ನನ್ನನ್ನು 
ಬಿಡದೆ ಕಾಡುವ 
ಮಾಯೆಯಿದೆ .
ನಿನ್ನೇ  ತುಂಬಿಕೊಂಡಿರುವ 
ಈ ಹೃದಯದ ಉಸಿರಿದೆ .

ದೂರವಾಗದಿರು 

ನೀ ಮುಡಿದ  ಮಲ್ಲಿಗೆ 
ಇನ್ನೇನು ಬಾಡುವೆ ಎಂದು 
ಮರಗುತಿಹುದು .
ನೀ ಸ್ನಾನ ಮಾಡುವಾಗ 
ತೆಗೆದಿಡುವ 
ಕೈ ಬಲೆ ,
ಕಿವಿಯ ಓಲೆ ,
ಕಾಲ್ಗೆಜ್ಜೆ 
ಆ ಸಮಯ 
ಬರದಿರಲೆಂದು 
ದೇವರ ಬೇಡುತಿಹುವು .
ಗಾಳಿ ಬಂದಾಗ 
ಕ್ಷಣಮಾತ್ರ 
ನಿನ್ನಿಂದ ದೂರವಾಗುವ,
ನಿನ್ನ ಕೆನ್ನೆ ಚುಂಬಿಸುವ 
ಮುಂಗುರುಳು ,
ನಿನ್ನೇ ಬಳಸಿರುವ  
ಸೀರೆಯ ಸೆರಗು ,
ಗಾಳಿಯನ್ನು 
ಶಪಿಸುತಿಹುವು .
ಜೀವವಿಲ್ಲದ ಈ ಜಡ ವಸ್ತುಗಳ
 ಕಥೆಯೇ ಹೀಗಿರುವಾಗ ,
ಜೀವವೇ ನೀನಾಗಿರುವ 
ಈ ಜೀವಿಯ ಜೀವವು 
ಕನಸಿನಲ್ಲೂ ನೀ ದೂರವಾಗದಂತೆ 
ಬಯಸುತಿಹುದು .

ನಿಶೆಯ ನಶೆ 

ನಿಶೆಯ ನಶೆಯು ಎಲ್ಲೆಲೂ 
ಹರಡಿರುವಾಗ ,
ಮಸಿ ಆಕಾಶದ ನಡುವೆಯೂ 
ಶಶಿ  ಮಧುವಿನಂತೆ ಬೆಳಕು 
ಚೆಲ್ಲುತ್ತಿರುವಾಗ ,
ಪ್ರೇಮಾನುಭವದ ಪರಕಾಷ್ಟೆಗೆಂದು 
ಏರು ಬಾ ಪ್ರಿಯೆ ಪಲ್ಲಂಗ.
ರಂಗುರಂಗಿನ ಪ್ರೇಮದ ಗುಂಗಿನಲ್ಲಿ 
ರತಿ ಮನ್ಮಥರನ್ನು ನಾಚಿಸುವಂತೆ 
ತಲುಪೋಣ ಪ್ರೇಮದ ಉತ್ತುಂಗ .

 Some kavanas (short poems in kannada) about my dream girl.

ಬುಧವಾರ, ಡಿಸೆಂಬರ್ 5, 2012

ಪ್ರಳಯ,ಪ್ರಳಯ and ಪ್ರಳಯ


NOTE :ನೋಡ್ರಪ್ಪ ನಂಗು ಮಾಡೋಕೆ ಬೇರೆ ಕೆಲಸ ಇಲ್ಲದೆ, ಸುಮ್ನೆ ಕೂರಕ್ಕೆ ಆಗದೆ ಬರೆದಿದೀನಿ.ನೀವು ಯಾವುದೇ logic ಹುಡುಕದೆ ಸುಮ್ನೆ side ಅಲ್ಲಿ ಕೂತು ಒಮ್ಮೆ ಓದಿ .ಚೆನ್ನಾಗಿದ್ರೆ ಹೇಳ್ರಿ .ಚೆನ್ನಾಗಿಲ್ಲ ಅಂದ್ರೆ ಕ್ಯಾಕರ್ಸಿ ಉಗೀರಿ BUT ಎಲ್ಲರ ಮುಂದೆ ಮಾತ್ರ ಬೇಡ ,ಕರೆದು side ಅಲ್ಲಿ ಉಗೀರಿ .

ಗೆಳಯ :hello ..ಮಚ್ಚಾ ಹೇಗಿದ್ಯಾ ?
ನಾನು:ಏನೋ ಇನ್ನು ಬದುಕಿದ್ಯಾ ? ಇಷ್ಟು ದಿನ ಆಯಿತು ಒಂದು message ಇಲ್ಲ,call ಇಲ್ಲ ..ಸತ್ತು ಹೋಗಿದ್ಯಾ ಅನ್ಕೊಂಡಿದ್ದೆ .(ನಾನು call ಮಾಡಿಲ್ಲ ,ಅದುಬೇರೆ ವಿಸ್ಯ ..ಆದ್ರೆ ಇದು ನಮ್ಮ common dialogue )
ಗೆಳಯ:ಅಯ್ಯೋ ಹಾಗೇನಿಲ್ಲ ಮಚ್ಚ ..ಒಂದು important ವಿಷ್ಯ,dec 2 ಕ್ಕೆ ನನ್ನ ಮದುವೆ ,ತಪ್ಪದೇ ಬಾರಪ್ಪ .
ನಾನು:ಲೋ ..ಏನೋ ಮೊನ್ನೆ ತಾನೇ ದೊಡ್ಡವನಾಗಿ ,ನೆನ್ನೆ ತಾನೇ ಗಡ್ಡ ಬಂದು,ಇವತ್ತು ದುಡಿಯೋಕೆ ಶುರುಮಾಡಿದ್ಯಾ ,ಆಗ್ಲೇ ಮದುವೆನಾ?
ಗೆಳಯ:ಮಚ್ಚ, dec 21 ಗೆ ಪ್ರಳಯ.ಅಷ್ಟರಲ್ಲಿ ಎಲ್ಲಾ ಮುಗಿಸ್ಕೋಬೇಕು.ನೀನು ಆಗೋ .
**********************************************************
ಯಾವುದೋ tvಅಲ್ಲಿ , ಮೊದಲೇ ವಿಚಿತ್ರ ವಾಗಿ ಇದ್ದ ನಿರೂಪಕ ,ಇನ್ನಷ್ಟು ಭಯ ಹುಟ್ಟಿಸುವಂತೆ dress ಹಾಕಿಕೊಂಡು ,ಕರ್ಕಷ ದನಿಯಲ್ಲಿ ಮಾತನಾಡುತ್ತಿದ್ದ ...
"ಅಫ್ರಿಕಾದ ಒಂದುಪುಟ್ಟ ಹಳ್ಳಿ ..ಅಲ್ಲಿ ಹೆಚ್ಚುಅಂದ್ರೆ 500 ಜನ ಇರಬಹುದು ..ಅಂತಹ ಹೇಳಿಕೊಳ್ಳುವಂತಹ ಊರು ಅಲ್ಲದ ಈ ಊರಿನಲ್ಲಿ, ಇಡೀ ಜಗತ್ತೇ ಅಚ್ಚರಿಪಡುವಂತಹ ಒಂದು ಘಟನೆ ನೆಡದಿದೆ .ಅದೇ ಇಲ್ಲಿನ ಒಂದು ನಾಯಿ ಜಗತ್ತಿನಲ್ಲಿ ಮುಂದಾಗಬಹುದಾದ ಒಂದು ಘಟನೆಗೆ ಸಾಕ್ಷಿ ಆಗಿದೆ..ಅದೇ ಸಾಮಾನ್ಯವಾಗಿ ಒಂದೇ ಕಾಲು ಎತ್ತಿ ಕಂಬಕ್ಕೆ ಮೂತ್ರಮಾಡಬೇಕಿದ್ದ ಈ ನಾಯಿ ,ತನ್ನ ಎರಡು ಕಾಲು ಎತ್ತಿ ಇಲ್ಲಿನ ಒಂದು ಮರದ ಮುಂದೆ ಮೂತ್ರ ಮಾಡಿದೆ...ನಾಯಿಯ ಈ ವಿಚಿತ್ರ ಪರಿ ಪ್ರಳಯದ ಮುನ್ಸೂಚನೆಯಾ ?dec 21 ಕ್ಕೆಪ್ರಳಯ fix ಹಾಗಾದ್ರೆ "(ಹಾಗೆಯೇ ಕೆಳಗಡೆ, ಅದೇ channelನಲ್ಲಿ "dec 21 ರಿಂದ ಹೊಸ ಕಾರ್ಯಕ್ರಮ ನಿರೀಕ್ಷಿಸಿ ನಮ್ಮ ವಾಹಿನಿಯಲ್ಲಿ " )
*********************************************************************************
paper ಓದುತ್ತಿದ್ದ ಅಜ್ಜ ,ಅಮೇರಿಕಾದ ಸ್ಯಾಂಡಿ ಚಂಡ ಮಾರುತದ ಅನಾಹುತ ಓದುತ್ತ ..."ಮಗ ಇದೇ ಪ್ರಳಯ..ಕಲಿಗಾಲ ಮುಗೀತಾ ಬಂತು..ಪಾಪಿಗಳ ಲೆಕ್ಕ ಎಲ್ಲ ಚುಕ್ತ ಆಗುತ್ತೆ...ಕಲಿ ಅವತಾರ ಎತ್ತಿ ವಿಷ್ಣು ಬರ್ತಾನೆ ....ಅಷ್ಟರೊಳಗೆ ಕಾಶಿಗೆ ಹೋಗ್ಬೇಕು ಮಗ ......ಮೊನ್ನೆ tv ಅಲ್ಲ ನೋಡಿಲ್ವಾ ಕುದುರೆಗೆ ಕೋಡು ಬಂದಿತ್ತಂತೆ ....ಈಗ ಕೃಷ್ಣ ರುಕ್ಮಿಣಿ ಧಾರವಾಹಿ time ಆಯ್ತಲ್ವಾ ...ಪ್ರಳಯಕ್ಕೆ ಮುಂಚೆ ಮುಗಿಸಬಹುದು .. tv ಹಾಕು ".
*********************************************************************************
Parkನಲ್ಲಿ   ಕಡಲೇಕಾಯಿ ತಿನ್ನುತ್ತಾ ,ಹುಡುಗಿಯರಿಗೆ ಗಾಳು ಹಾಕಿಕೊಂಡು ,ಅಲ್ಲೇ ಸುತ್ತಮುತ್ತ ತಬ್ಬಿಕೊಂಡು ಕೂತುಕೊಂಡಿರೋ ಪ್ರೇಮಿಗಳಿಗೆ ಮಾನಮರ್ಯಾದೆ ಇಲ್ಲ ಅಂತ ಬಯುತ್ತ (ನಿಜವಾಗಿ ಹೇಳಬೇಕಂದರೆ ನಮಗೆ ಯಾರು ಇಲ್ಲವಲ್ಲ ಅನ್ನೋ ಹೊಟ್ಟೆ ಉರಿ ) ಕೂತುಕೊಳ್ಳುವುದು ನನ್ನ ಹವ್ಯಾಸ ..ಆಗ ಒಂದಿಷ್ಟು laughing club ಗೆ ಅಂತಸೇರಿಕೊಂಡಿರೋ auntyಗಳ ಮಾತು ಕಿವಿಗೆ ಬಿತ್ತು ....
"ರೀ ನೆನ್ನೆ  program  ನೋಡಿದ್ರ ,ಜ್ಯೋತಿಷಿಗಳು ಏನು ಹೇಳಿದ್ರು ಅಂತ ..ಪ್ರಳಯ ಅಂತೆ ರೀ! "
"ಹೌದ ! ಏನ್ ರೀ ಗ್ರಹಚಾರ .."
"ಚೀನಾದಲ್ಲಿ ಪ್ರಳಯ ಆದಾಗ ಬಚಾವು ಆಗೋಕ್ಕೆ ಅಂತ ಒಂದು ಹಡಗು ಕಟ್ಟ್ತಾ ಇದಾರೆ ಅಂತೆ .. ಸಕತ್ ದೊಡ್ಡದು ಅಂತೆ..ಏನು ಆಗೋಲ್ಲ ಅಂತೆ "
"ಅಯ್ಯೋ ಅದೆಲ್ಲಾ ಬಿಡಿ ..ನೆನ್ನೆ ನಮ್ಮ ಸ್ವಾಮೀಜಿಗಳು ಹೇಳಿದ್ರು ಕುಂಡಲಿ ಮುಂಡಲಿ ಯಾಗ ಮಾಡಿಸಿದರೆ ಏನು ಆಗೋಲ್ಲ ಅಂತೆ..ಆ ಸಂಸಾರ ದೇವ್ರು ಕೃಪೆ ಇಂದ ಉಳ್ಕೋಳುತ್ತೆಅಂತೆ . ನಾವು 1 ಲಕ್ಷ ಖರ್ಚು ಮಾಡಿಸಿ , ಹೋಮ ಮಾಡಿಸ್ತಾ ಇದೀವಿ .ಯಾರಿಗೂ ಹೇಳ್ಬೇಡಿ "(ಹೆಣ್ಣ ಮಕ್ಕಳ common dialogue )
*********************************************************************************
ಕೊನೆದಾಗಿ, ಸಾಧನೆ ಮೊದಲು ಆಮೇಲೆ ಮದುವೆ ,ಲವ್ ,ಮಕ್ಕಳು ,ಹೆಂಡತಿ ಅಂತ ಇದ್ದ ನಾನು, ನನ್ನ friends ,ಪರಿಚಯ ಇರೋರು ಎಲ್ಲರು ಎದ್ದು ಬಿದ್ದು ಮದುವೆ ಆಗ್ತಾ ಇರೋದುನೋಡಿ , ನನ್ನ ನಿರ್ಧಾರ ಬದಲಾಯಿಸಿದೆ .ದೊಡ್ಡ ಧೈರ್ಯ ಮಾಡಿ ಅಪ್ಪನಿಗೆ application ಹಾಕಿದೆ.
ನಾನು :ಅಪ್ಪ friends ಎಲ್ಲ ಮದುವೆ ಆದರು..
ಅಪ್ಪ:(ಅರ್ಥ ಮಾಡಿಕೊಂಡರು ನಮ್ಮ ಅಪ್ಪ ಅಷ್ಟಕ್ಕೇ )ಅವರೆಲ್ಲ ಒಳ್ಳೇ marks ತೆಗದು ಒಳ್ಳೆ company ಅಲ್ಲಿ ನಿನಗಿಂತ ಜಾಸ್ತಿ ದುಡೀತಾ ಇದಾರೆ..ನೀನು just pass ಆಗಿದ್ಯಾ..ನಿನ್ನ ಅದೃಷ್ಟಕ್ಕೆ ಒಂದು companyಅಲ್ಲಿ ಕೆಲಸ ಸಿಕ್ಕಿ,ಏನೋ ಈಗ ಚೂರು ಪಾರು ಸಂಬಳ ಸಿಕ್ತ ಇದೆ...ಇಷ್ಟು ಬೇಗಲೇ ಮದುವೆನಾ ..ನೋಡೋಣ ..dec 21 ಕ್ಕೆ ಪ್ರಳಯ ಅಂತೆ..ಆಗೋದೇ ಆದ್ರೆ ಸುಮ್ನೆ ಅತುರ ಆತುರ ವಾಗಿ ಒಂದು ಹೆಣ್ಣು ಮಗು ಜೀವನ ಹಾಳು ಮಾಡಿದ್ದ ಪಾಪ ನನಗ್ಯಾಕೆ ..
(ತಗೋಳಪ್ಪ ..ಈ last ಸಂಭಾಷಣೆ ಇದಿಯಲ್ಲಾ ..ಅದು ನನಗೆ ಬಾರಿ ತಲೆ ಕೆಡಿಸಿದ್ದು ...ಅಲ್ಲಾ ಯಾವ ನನ್ನ ಮಗ ಈ ಪ್ರಳಯ, ಮಣ್ಣು ಮಸಿ ಅಂತ ಸುಧ್ಡಿ ಹಬ್ಬಿಸಿದ್ದು.ಸಿಗಬೇಕು ಗುರುನನ್ನ ಕೈಗೆ ,ಅಟ್ಟಾಡಿಸಿಕೊಂಡು ಹೊಡಿಬೇಕು ಅಂತ ಇದೀನಿ )

                        sms , facebook ಅಲ್ಲಿ ಓದಿದ್ದು ನೆನಪು.ನಾಳೆ ಬೆಳೆಗ್ಗೆ ಅಡುಗೆಗೆ ಅಂತ ಉದ್ದಿನ ಬೇಳೆ ಹಿಂದಿನ ರಾತ್ರಿ ನೆನೆ ಇಡುತ್ತೇವೆ .ನಾಳೆ ಎದ್ದರೆ ಇಡ್ಲಿ ,ಇಲ್ಲದೆ ಹೋದರೆ ತಿಥಿ ವಡೆ ಅನ್ನೋ ಅಷ್ಟುಅನಿಶ್ಚಿತತೆಯಿಂದ ಕೂಡಿದೆ ನಮ್ಮೆಲ್ಲರ SO CALLED MODERN LIFE .ಯಾವಾಗ ಏನು ಆಗುತ್ತೋ ಅಂತ ಹೇಳೋಕೆ ಆಗದೆ ಇರೋ ಇಂತಹ life ಅಲ್ಲಿ, ಮನುಷ್ಯ ಅಶಾವಾದಿಯಾಗಬೇಕೋ ಅಥವಾ ನಿರಾಶಾವಾದಿಯಾಗಾಬೇಕೋ .ಯೋಚಿಸಿ ನೋಡಿ .ಆಶಾವಾದಿಯಾಗಿರಬೇಕು ಕಾಣ್ರಿ . ಒಂಬತ್ತು ತಿಂಗಳು ತನ್ನ ಒಡಲಲ್ಲಿ ಮಗುನ ಕಾಪಾಡೋ ತಾಯಿ, ಅಷ್ಟು ಕಷ್ಟ ಅನುಭವಿಸೋದು,ನಾಳೆ ಹುಟ್ಟೋ ಮಗು ಒಬ್ಬ ದೊಡ್ಡ ಹೆಸರುವಾಸಿ ವ್ಯಕ್ತಿ ಆಗೋ ಆಗುತ್ತಾನೆ ಅನ್ನೋ ಬಯಕೆ ಇಂದ . ಒಬ್ಬ ಮನುಷ್ಯ ಹೆಂಡತಿ ,ಮಕ್ಕಳು ಅಂತಸಂಸಾರ ದೋಣಿ ನಡೆಸೋಕೆ ಕಷ್ಟ ಪಡೋದು ,ನೆಮ್ಮದಿಯ ನಾಳೆ ಒಂದು ಸಿಗುತ್ತೆ ಅಂತ .ಅಷ್ಟೇ ಯಾಕೆ ಮನೆ ಅಂತ ಮಾಡಿಕೊಳ್ಳೋದು ಇರಬಹುದು ಅಥವಾ LIC ಕಟ್ಟೋದುಇರಬಹುದು,ಎಲ್ಲದರಲ್ಲೂ ನಾವು ಇನ್ನು ಬದುಕ್ಕುತ್ತೇವೆ ,ನೆಮ್ಮದಿಯ ನಾಳೆ ನೋಡುತ್ತೇವೆ ಅನ್ನುವ ಹಂಬಲ ,ಆಶಾ ಮನೋಭಾವದಿಂದ .ಭದ್ರವಾದ ತಳವಿರುವ ನಾಳೆಕಟ್ಟಿಕೊಳ್ಳುತ್ತಿದ್ದೇನೆ ಅನ್ನೋ ಒಂದು ಭಾವನೆಯಲ್ಲೇ ,ಮನುಷ್ಯ ಇಂದಿನ ನೆಮ್ಮದಿ ಕಾಣುತ್ತಾನೆ .
               ಅದು ಬಿಟ್ಟು ಪ್ರಳಯ ,ಮಣ್ಣು ಮಸಿ ,ಜಗತ್ತೇ ಮುಗಿದು ಹೋಗುತ್ತೆ ,ಹೀಗೆ ನಾಳೆ ಶೂನ್ಯ ಅನ್ನೋ ಭಯ ಆವರಿಸಿಬಿಟ್ಟರೆ ಏನಾಗಬಹುದು ?ಬದುಕಲ್ಲಿ ನಾವೇನೆ ಮಾಡಿದ್ದರು ಅರ್ಥ ಸಿಗೋಲ್ಲ ."ಏನ್ ಮಾಡಿದರೇನು? ನಾಳೆ ಪ್ರಳಯ ಅಂತೆ , ಎಲ್ಲರು, ಎಲ್ಲಾನು ಹೊಗೆಹಾಕಿಸಿಕೊಳ್ಳುತ್ತೆ ಅಂತೆ " ಅಂತ ಜನ ಬದುಕಿನಲ್ಲಿ ನಿರಾಶಾವಾದಿ ಆಗಿ ಬಿಡುತ್ತಾನೆ . ಆಗ ಏನು ಮಜಾ ಇರುತ್ತೆ ಹೇಳಿ ?ಚೆನ್ನಾಗಿರೋ ನಾಳೆ ಕಟ್ಟಿಕೊಳ್ಳುತ್ತಿದ್ದೇನೆ ಎಂಬ ನಂಬಿಕೆಯಲ್ಲಿಇರುವುದು ನಿಜವಾದ ಇಂದಿನ ಸುಖ.
                   ಎಲ್ಲಿಯ ತನಕ currency ಹಾಕಿಸುತ್ತಿರೋ ,ಅಲ್ಲಿಯವರೆಗೂ ಹುಡಿಗೀರು mobileಅಲ್ಲಿ  ನಿಮ್ಮ  ಜೊತೆ ಮಾತಾಡುತ್ತಾರೆ (ಎಲ್ಲಿಯವರಗೆ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೋ,ಅಲ್ಲಿಯವರೆಗೂ ಟೋಪಿ ಹಾಕುವವರು ಇರುತ್ತಾರೆ )ಅನ್ನೋ ಹಾಗೆ ,ಜನರ ಭಯ ,ಅಜ್ಞಾನ ಗಳನ್ನೂ ನಮ್ಮ ಪತ್ರಿಕಾ ಹಾಗು ದೃಶ್ಯ ಮಾಧ್ಯಮ ,ಜ್ಯೋತಿಷಿಗಳು ಅನ್ನೋಪ್ರಳಯಾಂತಕರು,ಕೆಲವೊಂದು ಹುಚ್ಚರು ENCASH ಮಾಡಿಕೊಳ್ಳುತ್ತಾ ಇದ್ದಾರೆ ಅಷ್ಟೇ .ಒಂದು ಚಾನೆಲ್ ನಲ್ಲಿ ಪ್ರಳಯದ ಬಗ್ಗೆ ಕಾರ್ಯಕ್ರಮಕ್ಕೆ ಹೆಚ್ಚು TRP ಬಂದ ಕೂಡಲೇ ,ಅದೇ ರೀತಿಯ ಇನ್ನಷ್ಟು ಭಯ ಹುಟ್ಟಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಇದ್ದಾರೆ .ಪತ್ರಿಕಾ ಮಾಧ್ಯಮಗಳು ಅಷ್ಟೇ .ವಿಪರ್ಯಾಸವೆಂದರೆ ಇವುಗಳು ಆಕಾರ್ಯಕ್ರಮಗಳಲ್ಲಿ ತೋರಿಸುವುದು ತಲೆಹಿಡುಕ ಜ್ಯೋತಿಷಿಗಳನ್ನು ಹಾಗು ಹಲವು english ಚಲನ ಚಿತ್ರಗಳ ತುಣುಕುಗಳನ್ನು ,ಇಲ್ಲದೆ ಹೋದಲ್ಲಿ ಯಾವುದೋ english channelನ ಹಳೇ ಕಾರ್ಯಕ್ರಮಗಳನ್ನು ಅಥವಾ ತಲೆಕೆಟ್ಟ ಅಸ್ಸಾಮಿಗಳು ಸೃಷ್ಟಿಸಿರೋ web ಸೈಟ್ ಗಳ ಮಾಹಿತಿಯನ್ನು .ಕೆಲವರಂತೂ ಇದನ್ನು ಹೇಳಿ ಮುಗ್ದ ಜನರಲ್ಲಿ ಭಯ ಹೂಡಿಸಿ ,ದೇವರು ದಿಂಡರು ಹೆಸರಲ್ಲಿ ದರೋಡೆ ಮಾಡುತ್ತಾ ಇದ್ದಾರೆ .ಅದ್ದರಿಂದ ದಯವಿಟ್ಟು ಪ್ರಳಯ ಅನ್ನೋ ಸುದ್ಧಿ ಹುಟ್ಟು ಹಾಕುತ್ತಿರೋ ಪ್ರಳಯಾಂತಕರ ಮಾತಿಗೆ ಕಿವಿಯೊಡ್ಡಬೇಡಿ.ಇಷ್ಟೆಲ್ಲಾ ಮುಂದುವರೆದಿರುವ ವಿಜ್ಞಾನ ,ಪ್ರಳಯದ ಮುನ್ಸೂಚನೆ ಕೊಡೋದಿಲ್ಲವೇ ?ಅಯ್ಯೋ ಅವೆಲ್ಲೇ ಅದೆಲ್ಲಾ ಬಿಡಿ, ನಾವು ನೀವು ನಂಬಿರೋ ದೇವರು , ನಮ್ಮನು ಹಾಗೆ ಕೈ ಬಿಡ್ತಾನಾ?
                      ಕೊನೆಯದಾಗಿ ನಾನು ಹೇಳೋದು ಅಂದ್ರೆ (ನೀವು ಕೇಳಲೇಬೇಕು ಅಂತ ಏನಿಲ್ಲ )ಇಂತಹ ವಿಷಯ ಗಳಿಗೆ ಕಿವಿಗೊಡದೆ ,ಅಕಸ್ಮಾತ್ ಆಗಿ ಕೊಟ್ಟರೂ ಸೊಪ್ಪು ಹಾಕದೆ ,ನಮ್ಮ ಭಟ್ಟರು ಡ್ರಾಮಾ film ಅಲ್ಲಿ ಹೇಳಿದ ಹಾಗೆ "ಪ್ರಳಯ ಆದ್ರೆ ನೀರು ,ಇಲ್ಲದೆ ಹೋದ್ರೆ BEER ಉ " ಅಂತ ತಲೆಕೆಡಸಿಕೊಳ್ಳದೆ ಆರಾಮಾಗಿ ಇದ್ದು ಬಿಡೋಣ.ನೆನ್ನಗಳ ನೆನಪಲ್ಲಿ ,ಇಂದಿನ ಸವಿಅನುಭವಿಸುತಾ, ನಾಳಿನ ಕನಸುಗಳನ್ನು ಕಾಣುತಾ ನಮ್ಮಷ್ಟಕ್ಕೆ ನಾವೇ ಶಿವ ಅಂತ ಇದ್ದರೆ ,ಆಗ ಇಂತಹ ಪ್ರಳಯಾಂತಕರ ಸುಳ್ಳು ಪುಂಗಿ sound ಮಾಡುವುದಿಲ್ಲ .ಏನಂತೀರ ?

ಕೋಸಂಬರಿ ಪಂಚ್ : ನಮ್ಮ aunty ಮನೆಗೆ ಹೋದಾಗ ,ಅವರ ಮನೆಯಲ್ಲಿ ಇರುವ ಎಲ್ಲ ಮಂದಿ ಕೈಯಲ್ಲಿ ತಾಯ್ತ ಕತ್ತಿಕೊಂಡಿರುವುದು ಗಮನಿಸಿದೆ .ಕುತೂಹಲದಿಂದ ದರ ಬಗ್ಗೆ ವಿಚಾರಿಸಿದಾಗ aunty ಹೀಗೆ ಉತ್ತರಿಸಿದರು " ಪ್ರಳಯ ,ಎಲ್ಲ ಜಲಸಮಾಧಿ ಆಗುತ್ತೆ ಹಾಗೆ ಹೀಗೆ ಅಂತೆ ಎಲ್ಲ ಕಡೆ ನೋಡ್ತಾ ಇದ್ದೆ .ಇದರ ಬಗ್ಗೆ ನಮ್ಮ ಸ್ವಾಮೀಜಿ ವಿಚರಿಸಿದಾಗ ಅವರು ಈ ತಾಯ್ತ ಕಟ್ಟಿ ಕೊಂಡರೆ ಏನು ಆಗಲ್ಲ ಅಂತ ಹೇಳಿದ್ರು.ಅದಕ್ಕೆ ತಕ್ಷಣ ನಮ್ಮ ಮನೆಯಲ್ಲಿ ಎಲ್ಲರಿಗು ಮಾಡಿಸಿದೆ .ನಿನಗೂ ಬೇಕಾ .ಅರ್ಧ ಡಜನ್ ತಗೊಂಡ್ರೆ ಒಂದು FREE ಅಂತಹೇಳಿದ್ದರು .ಅದಕ್ಕೆ ಯಾವುದಕ್ಕೂ ಇರಲಿ ಅಂತ ತಗೊಂಡಿದ್ದೆ .ಎರಡು ಮೂರು ಉಳಿದಿದೆ.ಕೊಡ್ಲಾ ". ನಾನು "ನನಗ್ಯಾಕೆ ಬಿಡಿ aunty ..ನನಗೇನು ಆಗೋಲ್ಲ ..ನಾನು ಗಟ್ಟಿ ಪಿಂಡ "ಅಂತ ಹೇಳಿದೆ .ಮೂರನೇ ತರಗತಿಯಲ್ಲಿ ಓದುತಿದ್ದ aunty ಮಗ ,ಆ ಕಡೆ ಕೋಣೆಯಲ್ಲಿ ಕನ್ನಡದ ಗಾದೆಗಳನ್ನೂ ಜೋರಾಗಿ ಓದುತ್ತಿದ್ದ .ನಾನು ಹೀಗೆ ಹೇಳುವುದಕ್ಕೂ ಅವನು ಆಕಡೆಜೋರಾಗಿ "ಪಾಪಿ ಸಮುದ್ರಕ್ಕೂ ಹೋದರು ,ಮೊಣ ಕಾಲುದ್ದ ನೀರು " ಎಂದು ಓದುವುದಕ್ಕೂ ಸರಿಯಾಯಿತು .aunty ಗೊಳ್ಳನೆ ನಕ್ಕರು .
English Summary: Nowadays people are getting obsessed with the false rumour "DOOMS DAY".School kids,old people,neighbor aunties and even in news ,everyone keeps talking about this .But according to me there is nothing to worry about.The life is short .In this life instead of enjoying ,why we have to worry about such things .Funny and yet interesting fact is that we are not even sure whether its going to happen or not.All are information based upon some fake websites or news from news channels.The news channels are just telecasting these type of news just to increase their TRP ratings. Finally one thing ,stop worrying  about the DOOMS DAY,enjoy your present day


ಸೋಮವಾರ, ನವೆಂಬರ್ 26, 2012

ಕವನಗಳ ಗೊಂಚಲು



ಮುತ್ತು 
ನೀ ಮೆಲ್ಲಗೆ ಗಲ್ಲಕ್ಕೆ 
ಮುದ್ದಿಸಿಟ್ಟ ಮುತ್ತು ,
ನನ್ನ 
ಮತಿಯೇ ಮರೆಸುವಂತೆ 
ಮಿತಿ ಮೀರಿಸಿದೆ  ಮತ್ತು .



ಗೆಳತಿ 
ಮಾತಿಗೂ ,ಮೌನಕ್ಕೂ 
 ವ್ಯತ್ಯಾಸವೇನು ಗೊತ್ತೇ ?
ನನ್ನ ಮಾತು ಎಲ್ಲರಿಗು
 ಅರ್ಥ ಆಗುತ್ತೆ ?
ಆದರೆ ನನ್ನ ಮೌನ 
ನಿನ್ನೊಬ್ಬಳಿಗೆ ಆರ್ಥವಾಗುತ್ತೆ ?


ಶಿಕ್ಷೆ 
ಕದ್ದವರಿಗೆಲ್ಲ ಶಿಕ್ಷೆ  ಆಗಲೇ  
ಬೇಕಂತಿದ್ದರೆ  ಚೆಲುವೆ ,
ನನ್ನ ಹೃದಯ ಕದ್ದ  ನಿನಗೂ 
ಶಿಕ್ಷೆ  ಆಗಲೇಬೇಕಲ್ಲವೆ .
ಅಂತದ್ದೇನಿಲ್ಲ ,
ಆಗು ನೀ ನನ್ನ ಮದುವೆ .

 ನಿನ್ನ ನಗು 
ಎಳೆಯ ತುದಿ 
ಮಂಜಿನ ಹನಿ 
ಬೀಗುತಿಹುದು ,
ಜಗತ್ತಿನ ಸೌಂದರ್ಯವೆಲ್ಲ 
ನನ್ನದೇ ಎಂದು ,
ನಕ್ಕು ನೀ ಒಮ್ಮೆ 
ತೋರಿಸು ಏಳು 
ಅಧ್ಬುತಗಳ ಸೌಂದರ್ಯವೂ 
ಮೀರಿದ್ದು ನಿನ್ನ ನಗುವೆಂದು .

ಕಪ್ಪು , ಬಿಳಿಪು 
ಕಪ್ಪು ಅನಿಷ್ಟ ,
ಬಿಳಿ ಶ್ರೇಷ್ಠ 
ಎಂಬ ಭಾವ 
ಪ್ರೀತಿಗಿದ್ದ ಮೇಲೆ ,
ಚಂದ್ರನಿಗೆ  ಕಪ್ಪು
 ಆಕಾಶದ ಮೇಲೆ,
 ಪ್ರೀತಿ ಮೂಡಿತು ಹೇಗೆ ?
ಚಪ್ಪರಿಸುವ ಸಿಹಿಗೆ 
ಕರಿ ನೇರಳೆಯಲ್ಲಿ ,
ಪ್ರೀತಿ ಮೂಡಿತು ಹೇಗೆ ?
ಸುಮಧುರ ಕಂಠಕ್ಕೆ 
ಕಪ್ಪು ಕೋಗಿಲೆಯಲ್ಲಿ 
 ಪ್ರೀತಿ ಮೂಡಿತು ಹೇಗೆ ?
ನನ್ನ ನಿನ್ನ ಪ್ರೇಮ 
ಕರಿಗುಡ್ಡೆ ಇರುವ ಕಣ್ಣಿನ ,
ಮೊದಲ ನೋಟದಲ್ಲಿ 
ಶುರುವಾಯಿತು ಹೇಗೆ ?





ಶನಿವಾರ, ನವೆಂಬರ್ 3, 2012

ಕಾದಿಹಳು


ಕಾದಿಹಳು ಕದಲದೆ ಕನವರಿಸುತಾ 
ಬಾಗಿಲ ಬಳಿಯಲಿ ,
ಗಡಿಯಲಿ ಗುಂಡಿಗೆ  ಗುಂಡಿಗೆಯೊಡ್ಡಿ 
ನಿಂತವನಿಗೆ ಇವಳಿಲ್ಲಿ .

ಸೆರಗಿನ ತುದಿಯನು 
ಬೆರಳಲ್ಲಿ ಆಡಿಸುತಾ ,
ಶಶಿಗೂ ,ಸೂರ್ಯನಿಗೂ 
ವಿರಹವ ವಿವರಿಸುತಾ.

ಚಿತೆಯಾಗದ ಚಿಂತೆಯ 
ಅಬ್ಬರಕ್ಕೆ ಅದರುತಾ,
ಕಣ್ಣಮುಂದೆ ಕ್ರಮಿಸಿದಂತೆ 
ಆಗುವ ಕಾಲನಿಗೆ ಹೆದರುತಾ .

ಕಹಿಸುಧ್ಧಿ ಕೇಳದ 
ನೆನ್ನಗಳ ನೆಮ್ಮದಿಯಲ್ಲಿ ನೂಕುತ ,
ನಲ್ಲನಿಲ್ಲದ್ದ ನಾಳೆಯು 
ಬೇಡವೆಂದು ಭಗವಂತನಲ್ಲಿ ಬೇಡುತಾ .

ಕಳೆದಿಹಳು ಇಂದು 
ಇನಿಯನ ಆಗಮನದ ನಿರೀಕ್ಷೆಯಲಿ ,
ಮಿಂಚಿನ ಬದಲು 
ನಿರೀಕ್ಷೆಗಳೇ ತುಂಬಿದೆ ನಯನಗಳಲಿ .
English summary: The poem is about the wife of soldier  who is waiting for him to return home fro the war . She is waiting for him in front of her door without moving a little bit.She has been expressing her pain to her two companions i.e sun and moon. Lady is happy about past days as she didn't hear any bad news from battle .She is praying to god ,so that in coming days she would meet her husband.She is spending all time waiting for her husband.Even the sparkles that used to lighten her eyes has been replaced by desire to meet her husband alive.

ಗುರುವಾರ, ಸೆಪ್ಟೆಂಬರ್ 27, 2012

ಕೊಲೆಗಾರ್ತಿ



ಕತ್ತಿಯಿಂದ ಕೊರಳು ಕೊಯ್ಯದೆ,

ಚಾಕುವಿನಿಂದ ಎದೆಗೆ ಚುಚ್ಚದೆ,

ಜೀವ ತೆಗೆಯದೆಯೇ ,

ನನ್ನ ಕೊಂದವಳು ನೀನು .



ನಂಬಿ ನನ್ನ ಹೃದಯವ

ಕೊಟ್ಟಾಗ ,ಆಟಿಕೆಯಂತೆ

ಅದರ ಜೊತೆ

ಹುಡುಗಾಟಿಕೆ ಆಡಿದವಳು ನೀನು.



ಕನಸ್ಸುಗಳೆಂದು ಕಣ್ಣಿಗೆ ತುಂಬಿ ,

ಅದು ಕಸವೆಂದು ನಾ

ಅರಿಯುವ ಹೊತ್ತಿಗೆ

ಗಾಳಿ ಊದದೇ ಹೋದವಳು ನೀನು .



ನನ್ನ ದನಿಯ ಜೊತೆಗೂಡಿ

ಪಲ್ಲವಿಯಲ್ಲಿ ಅನುರಾಗ

ಹಾಡಿ ,ಚರಣದಲಿ

ಚರಮ ಗೀತೆ ಹಾಡಿದವಳು ನೀನು .



ಹೃದಯಕ್ಕೆ  ಘಾಸಿಯಾದರೇನಂತೆ ,

ಕನಸುಗಳು ಬತ್ತಿ

ಹೋದರೇನಂತೆ ,

ನನ್ನೊಳಗಿನ ಪ್ರೀತಿ ಸತ್ತಿಲ್ಲ ಇನ್ನು.



ಬದುಕಲು ಬಿಡದೆ ,

ಸಾಯಲು ಕೊಡದೆ,

ಬಡಿಬಡಿದು ದಿನವೂ

ಬಡಕಲು ಮಾಡಿದೆ ನನ್ನನು .





ತಪ್ಪು ಮಾಡಿದವಳು ನೀನು

ಆದರೆ ಪ್ರತಿದಿನವೂ

ಅದಕೆ ಶಿಕ್ಷೆ

ಬಿಡದೆ ಅನುಭವಿಸುವವನು ನಾನು .
English summary : You did not use knife or anything to kill me.Yet you managed to kill me without taking me breath.I gave my heart to you thinking that you will take care but you used it like a toy.You filled my eyes with dreams but later I realised they were dust.Your love has kept me confused.Its neither allowing me to die nor keeping me alive.But making me weak day by day.It was you who did mistake,but I am the one who is suffering here

ಬುಧವಾರ, ಸೆಪ್ಟೆಂಬರ್ 19, 2012

ಕೋಸಂಬರಿ ಪಾನಕ



    ಸತ್ಯ ಯುಗ,ತ್ರೇತಾ ಯುಗ,ದ್ವಾಪರ ಯುಗ ,ಈಗ (ಸಾರೀ ನಾಟ್ ಸುದೀಪ್ ಈಗ,ಕನ್ನಡದ ಈಗ) ಕಲಿಯುಗ ಅಲ್ಲಾ ಅಲ್ಲಾ ಇದನ್ನ NETಯುಗ ,ಅಥವಾ ELEಯುಗ ಅಲಿಯಾಸ್ MECHANICಯುಗ ಅಂತಾನು ಕರೀಬಹುದು.ಯಾಕಂದ್ರೆ ಇಂದಿನ.ನಮ್ಮ ಈ ಜೀವನವನ್ನು , ಜೀವವಿಲ್ಲದ ಈ electronic , mechanic ಸಾಧನಗಳು ಇಲ್ಲದೆ ಒಂದು ನಿಮಿಷವೂ ನೆನಸಿಕೊಳ್ಳುವುದಕ್ಕೂ ಸಾಧ್ಯ ಇಲ್ಲ . Heroin ಇಲ್ಲದೆ ಇರೋ ರವಿಚಂದ್ರನ್ ಫಿಲಂ,talktime ಇಲ್ಲದೆ ಇರೋ simಗಳ ಥರಹ ಅನಿಸಿ ಬಿಡುತ್ತದೆ .

            ಒಂದು button ಒತ್ತಿದರೆ ಮೂರ್ಖರ ಪೆಟ್ಟಿಗೆ ಟಿವಿಯಲ್ಲಿ ,ಅಂತರ್ಜಾಲದಲ್ಲಿ ಅದೂ ನೇರ ಪ್ರಸಾರದಲ್ಲಿ ಪಾರ್ಲಿಮೆಂಟ್ ಹಾಲಲ್ಲಿ ನಮ್ಮ ರಾಜಕೀಯದವರು ಏನ್ ಮಾಡ್ತಾ ಇದ್ದಾರೆ (ಏನು ನೋಡ್ತಾ ಇದ್ದಾರೆ),ಲಾರ್ಡ್ಸ್ ಮೈದಾನದಲ್ಲಿ ಏನು ಆಟ ಆಡುತ್ತ ಇದ್ದಾರೆ, ಕಾಶಿ ಅಲ್ಲಿ ವಿಶ್ವನಾಥನ ದರ್ಶನ ( ಅಷ್ಟೇ ಯಾಕೆ ರೂಂ ಅಲ್ಲಿ ನಿತ್ಯಾನಂದನ ರಾಸ ಲೀಲೆ) ನೋಡಬಹುದು.ನಮ್ಮ ಅಂತರ್ಜಾಲದಲ್ಲಿ ಜೀವ ಸೃಷ್ಟಿಸುವ ಮಾಹಿತಿಯಿಂದ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ, ಸಾರಿನಪುಡಿ ತಯಾರಿಸುವುದರಿಂದ ಸೀರೆ ನೆರಿಗೆ ಹಾಕಿಕೊಳ್ಳುವ ದರ ಬಗ್ಗೆ, ಅಷ್ಟೇ ಯಾಕೆ ಬಾಂಬ್ ತಯಾರಿಸುವ ಬಗ್ಗೆಯೂ ಮಾಹಿತಿ ಸಿಗುತ್ತದೆ .ಇನ್ನು ಮೊಬೈಲ್ ಅಲ್ಲಿ ಜಗತ್ತಿನ ಯಾವ ಮೂಲೆ ಅಲ್ಲಿ ಇರುವವರನ್ನು ಮಾತಾನಾಡಿಸಬಹುದು ,ನೋಡಬಹುದು . ಈಗಿನ ಕಾಲೇಜ್ ನ ಹುಡುಗ ಹುಡುಗಿಯರ ತರಹ ಲವ್ ಮಾಡಬಹುದು ,ಸರಸಾನು ಆಡಬಹುದು . ಹೊರಗಡೆ ಹೋಗಿ ಶಾಪಿಂಗ್ ಮಾಡೋದೇ ಬೇಡ,ಮನೆಯಲ್ಲಿ ಕೂತ್ಕೊಂಡು ತರಕಾರಿ ಇಂದ ಮನೆ ತನಕ (ಅಪ್ಪ ಅಮ್ಮ ಬಿಟ್ಟು ) ಖರೀದಿಸಬಹುದು .ಇನ್ನು ಒಂದು button ಒತ್ತಿದರೆ ಸಾಕು ac ಅಲ್ಲಿ ವಾಯು ದೇವರನ್ನು ತಂಪಾಗಿಯು ಸೃಷ್ಟಿಸಬಹುದು ,ಬಿಸಿಯಾಗಿಯು ಸೃಷ್ಟಿಸಬಹುದು . Aqua guardಅಲ್ಲಿ ಕೊಳಕಾಗಿರೋ ತುಂಗಾ ಜಲವನ್ನೇ ಮತ್ತೆ ಶುದ್ಧ ಮಾಡಿ ,ತುಂಗಾ ಪಾನಕ್ಕಾಗಿ ಉಪಯೋಗಿಸಬಹುದು . ಹೊರಗಡೆ jogging ಓಡೋ ಬದಲು ಒಳಗಡೆ ಮನೆಯಲ್ಲಿ machine ಮೇಲೆ ನಿಂತು ಕೊಂಡರೆ ಸಾಕು, ಅದೇ ನಮ್ಮನ್ನು ಓಡಿಸುತ್ತೆ . ಅಷ್ಟೇ ಯಾಕೆ ಹೆರಿಗೆ ಇಲ್ಲದೆ ಹಾಗೆ ಮಗು ಹುಟ್ಟಿಸಬಹುದು .ಹೀಗೆ ಈಗ ಎಲ್ಲದನ್ನು ತಿನ್ನೋದನ್ನು,ತೊಳ್ಕೊಳ್ಳೋದನ್ನು ,ಕೆರ್ಕೊ ಳ್ಳೋದನ್ನು , ಹುಡ್ಕೋದನ್ನು ,ಹೊಡ್ಕೊಳ್ಳೋದನ್ನು ,ಕೊನೆಗೆ ಯೋಚಿಸೋದನ್ನು ಸುಲಭ ವಾಗಿ ಮಾಡಿದೆ. ಅದರಲ್ಲೂ ಈಗಿನ ಜನಾಂಗ ಬಯಸುವಂತೆ fast food ತರ fast ಆಗಿ ಎಲ್ಲವು ನಡೆಯುತ್ತಿದೆ .

           ಆದರೆ ಎಲ್ಲ ಸುಲಭ ,ತುಂಬಾ ಬೇಗ ಹಾಗು ವೇಗವಾಗಿ ಓಡುವ ಈ ಕಾಲದಲ್ಲಿ,ಮನುಷ್ಯನ ಬದುಕಿನಲ್ಲಿ ನೆಮ್ಮದಿ ಜಾಸ್ತಿ ಆಗಬೇಕಾದ ಬದಲು ಒತ್ತಡ ಅಷ್ಟೇ ವೇಗವಾಗಿ ಜಾಸ್ತಿ ಆಗ್ತಾ ಇದೆ . ಕೆಲಸ ಇಲ್ಲದವರಿಗೆ ಕೆಲಸ ಹುಡ್ಕೋ ಒತ್ತಡ ,ಕೆಲಸ ಇರೋರಿಗೆ ಕೆಲಸ ಉಳಿಸ್ಕೊಳ್ಳೋ ಒತ್ತಡ,ಮದುವೆ ಆಗಿರೋರಿಗೆ ಸಂಸಾರದ ದೋಣಿ ಕಾಪಾಡೋ ಒತ್ತಡ ,girl friend ಇರೋರಿಗೆ ದುಡ್ಡು ಖರ್ಚು ಮಾಡೋ ಒತ್ತಡ,ಇನ್ನು ಇಲ್ಲದೆ ಇರೋರಿಗೆ ಅವರದ್ದೇ ಆದ ಒತ್ತಡ(ಒತ್ತು daa ) .ಮೊದಲೆಲ್ಲ ವಿಧ್ಯಾರ್ಥಿ ಜೀವನ ದಲ್ಲಿ ಅಂದ್ರೆ ಬಾಲ್ಯದಲ್ಲಿ ಒತ್ತಡ ಕಮ್ಮಿ ಅಂತ ಹೇಳ್ತಾ ಇದ್ದರು ,ಆದ್ರೆ ಈಗ tonne ಗಟ್ಟಲೆ ಬ್ಯಾಗ್ ಹೊರೋದ್ರಿಂದ ದೇಹಕ್ಕೆ ಒತ್ತಡ.ಅಷ್ಟೇ ಅಲ್ಲ ಪಕ್ಕದ್ಮನೆ ,ಎದುರುಮನೆ ಹುಡುಗರನ್ನು ಸ್ಪರ್ಧೆ ಅಲ್ಲಿ ಸೋಲಿಸ ಬೇಕು ಅನ್ನುವ ಮಾನಸಿಕ ಒತ್ತಡ."ನೋಡು ಅವನ/ಅವಳು ನೋಡಿ ಸ್ವಲ್ಪ ಕಲಿ " (ಆ ವಯಸ್ಸಿನಲ್ಲಿ ಏನು ನೋಡ್ ಬೇಕು ಅಂತಾನು ಗೊತ್ತಿರಲ್ಲ )ಅಂತಾ ಬಯ್ತಾನೆ ಇರ್ತಾರೆ.ಹೀಗೆ ಸಿಕ್ಕಾಪಟ್ಟೆ ಒತ್ತಡ ,stress ಜಾಸ್ತಿ ಆಗಿ ಮನುಷ್ಯ ಈಗ ಎಲ್ಲೆಲ್ಲೋ ಕೆರ್ಕೊಳ್ಳೋಕ್ಕೆ ಶುರು ಮಾಡಿ,ಕೊನೆಗೆ ದಿಕ್ಕೇ ತೋಚದೆ ಆತ್ಮಹತ್ಯೆಗೆ ಶರಣು ಆಗುತ್ತಾ ಇದ್ದಾರೆ .ಆಗಾಗ ಮರ ,ಟ್ಯಾಂಕ್ ,ಸಿಕ್ಕಸಿಕ್ಕಿದ್ದ ಹತ್ತಿ ಆತ್ಮಹತ್ಯೆ ಮಾಡ್ಕೊತೀನಿ ಅನ್ನೋ ದೃಶ್ಯಗಳನ್ನು , ನೇರ ಪ್ರಸಾರದಲ್ಲಿ ನಮ್ಮ tv9 ಅಲ್ಲಿ ಆಗಾಗ (ನಿಜವಾಗಿ ಅಂದ್ರೆ ಯಾವಾಗಲೂ ) ನೋಡಬಹುದು.
               ಈ ಸ್ಪರ್ಧಾತ್ಮಕ ಜಗತ್ತಿನ್ನಲ್ಲಿ, ನಮ್ಮನ್ನು ಉಳಿಸಿಕೊಳ್ಳುವ ಜಂಜಾಟದಲ್ಲಿ ,ನಿಮಗೆ ಎಲ್ಲೋ ನಮ್ಮ ಮನಸ್ಸಿಗೆ ಬೇಕಾದ ನೆಮ್ಮದಿ ಕಡಿಮೆ ಆಗ್ತಾ ಇದೆ ಅನ್ನಿಸುತ್ತಾ ಇಲ್ವಾ?ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಹೌದು. ಆದರೆ ಅದೇ ತುತ್ತು ಅನ್ನ ತಿನ್ನುವಾಗ , ಬಟ್ಟೆ ಹಾಕಿಕೊಳ್ಳುವಾಗ ಅಥವಾ ನಂತರ ಎಷ್ಟು ಖುಷಿಯಿಂದ,ನೆಮ್ಮದಿಯಿಂದ ಇರುತ್ತೇವೆ ,ಯೋಚಿಸಿದ್ದೀರಾ? ಅಂದ್ರೆ ನನ್ನ ಮಾತಿನ ಅರ್ಥ ,ಆ ಸಮಯದಲ್ಲೂ ನಮಗೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಉಳಿಸಿಕೊಳ್ಳುವ ಚಿಂತೆ ಆವರಿಸುರತ್ತದೆ .ಅದು ಒಂದು ಮಾಯೆಯಂತೆ ನಮ್ಮ ಹೆಗಲೇರಿ ಕೂತುಕೊಂಡಿರುತ್ತದೆ . ಒಮ್ಮೊಮ್ಮೆ ಈ ಜಂಜಾಟಗಳನ್ನು ಬಿಟ್ಟು ಎಲ್ಲಾದರು ಓಡಿಹೋಗೋಣ ಅನ್ನಿಸಿಬಿಡುವುದಿಲ್ಲವೆ?(ಆದರೆ ಓಡಿಹೋಗೋಕೆ ಸಾಧ್ಯ ಇಲ್ಲ )
               "ಅಲ್ಲಾ.. ಈ ನನ್ನ ಮಗ ಕೋಸಂಬರಿ ಪಾನಕ ಅಂತಾ ಬ್ಲಾಗ್ ಹೆಸರು ಇಟ್ಟುಕೊಂಡು,ಒತ್ತಡದ ಜೀವನದ ಮಧ್ಯೆ ಕೋಸಂಬರಿ ಪಾನಕ ಅಂತ ಇಟ್ಟಕೊಂಡು ,ಇಲ್ಲಿ ನೋಡಿದರೆ ಒತ್ತಡ ,ಒತ್ತು Daa ಅಂತ ಕೊರೀತಾ ಇದಾನೆ"ಅಂತ ಬಯ್ಕೋಬೇಡಿ .ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಗರಣಗಳಿಗೂ ,ಕರ್ಮಕಾಂಡಗಳಿಗೂ ,ಪ್ರತಿಪಕ್ಷಗಳು ಪ್ರತಿಸಾರಿಯೂ ಇದಕ್ಕೆಲ್ಲ ಕಾರಣಕರ್ತಾರಾದ ಪ್ರಧಾನಿ ರಾಜೀನಾಮೆ ಕೊಡಲಿ ಅಂತ ಕೂಗಿಕೊಳ್ಳೋದಕ್ಕೂ(ಅದರಲ್ಲೂ ಈಗಿನ rubber stamp ಮನಮೋಹನ್ ಸಿಂಗ್ ಜಸ್ಟ್ ಗೊಂಬೆ ಅಷ್ಟೇ )ಎತ್ತಣಿಂದ ಎತ್ತ ಸಂಭಂದವಯ್ಯ ಅನ್ನೋ ಹಾಗೆ ,ಕೋಸಂಬರಿ ಪಾನಕಕ್ಕೂ ,ಒತ್ತಡಕ್ಕೂ ಏನ್ರೀ ಸಂಭಂದ ಅಂತ ನೀವು ಒತ್ತಡಕ್ಕೆ ಒಳಗಾಗಬೇಡಿ .ನಾನು ಇಷ್ಟೋ ತನಕ ಬರೆದಿದ್ದಕ್ಕೂ ,ಕೋಸಂಬರಿ ಪಾನಕಕ್ಕೂ ಸಂಭಂದ ಇದೆ .
              ಒಮ್ಮೆ ನಮ್ಮ ರಾಮನವಮಿ ನೆನಪಿಸಿಕೊಳ್ಳಿ .ತಕ್ಷಣ ನೆನಪಿಗೆ ಬರುವುದು ರಾಮ,ಆಮೇಲೆ ಆವತ್ತು ಪ್ರಸಾದ ಎಂದು ಕೊಡುವ ಕೋಸಂಬರಿ ಪಾನಕ(ನಂಗೆ ಮೊದಲು ನೆನಪಿಗೆ ಬರುವುದು ಕೋಸಂಬರಿ ಪಾನಕ ಆಮೇಲೆ ರಾಮ).ಪ್ರಸಾದ ಕೊಡ್ತಾರೆ ಅಂತ ಗೊತ್ತಾದ ಕ್ಷಣಾರ್ಧದಲ್ಲೇ ಅಲ್ಲಿ ಉದ್ದವಾದ ಸಾಲು ಕಾಣುವಿರಿ .ಚಡ್ಡಿ ಹಾಕಿಕೊಂಡಿರುವ ಹುಡುಗರದೇ ಮೇಲುಗೈ ಆದರೂ, ಹಾಗಂತ ಅವರೇ ಇರುವುದಿಲ್ಲ .ಅಲ್ಲಿ ಎಲ್ಲಾ ವಯೋಮಾನದವರು ಇರುತ್ತಾರೆ.ಆ ಸಾಲಿನಲ್ಲಿ, ಆ ನೂಕು ನುಗ್ಗಲಿನಲ್ಲಿ ,ಹಿಂದೆ ನಮ್ಮನ್ನು ದಬ್ಬುತ್ತಿರುವವರ ಸೇಡಿಗೆ ಮುಂದೆ ಇರುವವರನ್ನು ದಬ್ಬುತ್ತಾ ,ಚೈತ್ರ ಮಾಸದ ಬಿಸಿಲಿನಲ್ಲಿ ,ಸ್ವಲ್ಪಅವಕಾಶ ಸಿಕ್ಕಿದರೆ ಸಾಕು ಮುಂದೆ ಹೋಗುವ ಸಂಚು ಮಾಡುತ್ತಾ ನಿಂತಿರುತ್ತೇವೆ . ನಮ್ಮೆಲ್ಲರ ದೃಷ್ಟಿ ,ಯೋಚನೆ ಆಗಂತೂ ಕೋಸಂಬರಿ ಪಾನಕದ ಮೇಲೆ ಇರುತ್ತದೆ .ಪ್ರತಿ ಹೆಜ್ಜೆಗೂ ನಾವು ಎಷ್ಟು ದೂರ ಇದ್ದೀವಿ ,ನಮ್ಮ ಮುಂದೆ ಎಷ್ಟು ಜನ ಇದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ,ನಮ್ಮ ಸರದಿ ಬಂದಾಗ ಕೋಸಂಬರಿ ಪಾನಕ ಖಾಲಿ ಆಗಿಬಿಟ್ಟರೆ ಅನ್ನುವ ಭಯದಲ್ಲೇ ಮುನ್ನುಗ್ಗುತಿರುತ್ತೇವೆ.ಒಮ್ಮೆ ಕೋಸಂಬರಿ ಪಾನಕ ಸಿಕ್ಕರೆ ಸಾಕು ಅನಿಸುತ್ತಾ ಇರುತ್ತದೆ.ಸಣ್ಣ ಮಕ್ಕಳು ಇವನ್ನೆಲ್ಲಾ ತೋರಿಸಿಕೊಳ್ಳುತ್ತಾರೆ ,ದೊಡ್ಡವರು ಒಳಗೆ ಎಲ್ಲಾ ಮಾಡುತ್ತಿರುತ್ತಾರೆ .(ಇಲ್ಲ ಎಂದವರಿಗೆ ಒಮ್ಮೆ ಹೊರಗಡೆ ಬಂದು ಬೇರೆಯವರಿಗೆ ಜಾಗ ಕೊಡಲು ಹೇಳಿ,ಗೊತ್ತಾಗುತ್ತದೆ ).ಇನ್ನೇನು ನಮ್ಮ ಮುಂದೆ ಇಬ್ಬರೇ ಇಬ್ಬರು ಇದ್ದಾರೆ ,ಒಬ್ಬನೇ ಇದ್ದಾನೆ ಅನ್ನುವಾಗಂತೂ ಮನಸಿನಲ್ಲಿ ಏನೋ ಹೇಳಿಕೊಳ್ಳಲಾಗದ ಖುಷಿ.ಆಗಲೇ ಕೈ ಒಡ್ಡಿ ಬಿಟ್ಟಿರುತ್ತೇವೆ.ಒಮ್ಮೆ ಸಿಕ್ಕರೆ ಸಾಕು,ಸ್ಪರ್ಧೆಯಲ್ಲಿ ಗೆದ್ದು ಸಿಕ್ಕ ಟ್ರೋಫಿಯಂತೆ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು,೧೦೦೦ ವಾಟ್ಸ್ ಬಿಲ್ಬ್ ಅನ್ನು ಮೀರಿಸವ ನಗೆ ಬೀರುತ್ತೇವೆ.ಹಾಗೆಯೇ ಸಾಲಲ್ಲಿ ಇನ್ನು ನಿಂತು ಕಾಯುತ್ತಿರುವ ಜನರನ್ನುನೋಡಿ ಪಾಪ ಎಂದು ಅವರ ಕಡೆ ಗೆಲುವಿನ ನಗೆ ಹಾಗೆ ಬಿಸಾಕುತ್ತೇವೆ .ಒಬ್ಬರೇ ಯಾರಿಗೂ ಒಂದು ಕಾಳೂ,ಒಂದು ಹನಿಯು ಕೊಡದಂತೆ ಕೋಸಂಬರಿ ಪಾನಕ ತಿಂದು ಪಾನಕ ಕುಡಿದರೆ ಆಹಾ ಏನ್ ಮಜಾ,ಸಂತೋಷ ,ಪರಮಾನಂದ(ನಿತ್ಯಾನಂದ ಬೇಡ).ಇನ್ನೊಮ್ಮೆ ಹೋಗಿ ,ಪ್ರಸಾದ ತಗೋಬೇಕು ಅಂತ ಮನಸ್ಸೊಳಗೆ sketch ಶುರು ಆಗಿರುತ್ತದೆ ಮನಸ್ಸಿನಲ್ಲಿ .ಇಲ್ಲಿ ನಾನು ಕೊಟ್ಟಿರುವುದು ಬರಿ ಒಂದು ಸಣ್ಣ ಉದಾಹರಣೆ .ಇಂತಹ ಅನಭವ ಸಾಮಾನ್ಯವಾಗಿ ನೀವು ಎಲ್ಲ(ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಬಂದಂತಹ ) ದೇವಸ್ಥಾನದಲ್ಲಿ ,ಬರಿ ಪ್ರಸಾದಕ್ಕಲ್ಲ ಕೆಲವೊಮ್ಮೆ ದೇವರ ದರ್ಶನದ ಸಮಯದಲ್ಲೂ ಆಗಿರುತ್ತದೆ.
                 ಈಗ ವಿಷಯಕ್ಕೆ ಬರೋಣ .ನಮ್ಮ ಜೀವನ ನಾವು ಪ್ರಸಾದಕ್ಕೆ ನಿಂತಿರುವ ಸಾಲೆಂದು ಕೊಳ್ಳೋಣ,ನಾವು ಪ್ರತಿದಿನ ಅನುಭವಿಸುವ ಒತ್ತಡಗಳು ಆ ಸಾಲಿನಲ್ಲಿ ನಿಂತಾಗ ಅನುಭವಿಸುವ ನೂಕು ನುಗ್ಗಾಲಾಟ ಇತರೆ ಕಷ್ಟಗಳು ಎಂದುಕೊಳ್ಳೋಣ.ಹಾಗಾದರೆ ಈ ಕೋಸಂಬರಿ ಪಾನಕ ಏನು ?ನಮ್ಮ ಜೀವನದಲ್ಲಿ ಒತ್ತಡಗಳ ಮಧ್ಯೆ, ಆಗಾಗ ನಮ್ಮ ಮನಸ್ಸಿಗೆ ಮುದ ನೀಡುವ ಚಿಕ್ಕಪುಟ್ಟ ಸಂತೋಷಗಳೇ ಈ ಕೋಸಂಬರಿ ಪಾನಕ .ಉದಾಹರಣೆಗೆ ಎಲ್ಲಾ ಮರೆತು ನಮ್ಮ ಸಂಗಾತಿಯೊಡನೆ ನಿಶ್ಯಬ್ದವಾದ ಸ್ಥಳದಲ್ಲಿ ಕೂತು ಕೈ ಹಿಡಿದಾಗ ಆಗುವ ರೋಮಾಂಚನ , ನಮ್ಮ ಮನಮೆಚ್ಚಿದ ಗೆಳಯರ ಜೊತೆ ಪ್ರವಾಸಕ್ಕೆ ಹೋಗಿ ಮನದಣಿಯೆ ಮಜಾ ಮಾಡಿದ್ದ ಅನುಭವ.ಅಥವಾ ನಮ್ಮ ನೆಚ್ಚಿನ ನಾಯಕ(ನಾಯಕಿ sunny leone ಆಗಿರಬಹುದು ಹಿ ಹಿ ) ಚಲನಚಿತ್ರಕ್ಕೆ ಹೋಗಿ ಸಿಕ್ಕಾಪಟ್ಟೆ ಶೀಟಿ ಹೊಡೆದು ಹೊರಗೆ ಬಂದಂತೆ ಆಗುವ ಸಂತೋಷ ಹೀಗೆ ಹತ್ತು ಹಲವು .ಕೋಸಂಬರಿ ಸಿಕ್ಕಾಗ ಸಾಲಿನಲ್ಲಿ ನಿಂತಾಗ ಪಟ್ಟ ಪಾಡುಗಳನ್ನೆಲ್ಲಾ ಮೆರೆತು ಖುಷಿಯಿಂದ ತಿಂದ ಮೇಲೆ ಒಂದು ಸಂತೃಪ್ತಿ ಭಾವ ಆವರಿಸುತ್ತದೆ ,ಹಾಗೆಯೇ ನಮಗೆ ಮುದ ನೀಡುವ ಯಾವುದೇ ಚಟುವಟಿಕೆಗಳು ಮಾಡುವಾಗ ಎಲ್ಲ ಮರೆತು , ಸಂತೋಷದಿಂದ ಭಾಗವಹಿಸಿದ ಮೇಲೆ ಒಂದು ರೀತಿಯ ನೆಮ್ಮದಿ ಆವರಿಸುತ್ತದೆ .ಆ ಘಳಿಗೆ ಮತ್ತೊಮ್ಮೆ ಯಾವಾಗ ಬರುವುದೋ ಅಂತ ಚಡಪಡಿಸುತ್ತಲೇ ಇರುತ್ತದೆ ನಮ್ಮ ಮನಸ್ಸು .ಒಂದೇ ಒಂದು ವ್ಯತ್ಯಾಸವೆಂದರೆ ಕೋಸಂಬರಿ ಪಾನಕ ಅಥವಾ ಯಾವುದೇ ಪ್ರಸಾದ ನಮಗೆ ಬೇಕು ಬೇಕು ಅಂದಾಗಲೆಲ್ಲಾ ಅಥವಾ ನಮಗೆ ಬೇಕಾದಷ್ಟು ಸಿಗುವುದಿಲ್ಲ .ಆದರೆ ನಿಜವಾದ ಜೀವನದಲ್ಲಿ ನಾವು ಮನಸ್ಸು ಮಾಡಿದರೆ ,ಸರಿಯಾಗಿ ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಆಗಾಗ್ಗೆ ಕೋಸಂಬರಿ ಪಾನಕ ಸವಿರುಚಿ ಕಾಣಬಹುದು.ಇಲ್ಲದೆ ಹೋದರೆ ಈ ಯಾಂತ್ರಿಕ ಯುಗದಲ್ಲಿ ನಮ್ಮ ಬದುಕು ಯಂತ್ರಮಯವಾಗಿ ಬಿಡುತ್ತದೆ .ನಮ್ಮ ಬದುಕಿನಲ್ಲಿ ನಮಗೆ ಅಂದರೆ ,ನಮ್ಮ ಮನಸ್ಸಿನ ನೆಮ್ಮದಿಗೆ ಸಮಯ ಇಲ್ಲದೆ ಇದ್ದರೆ ಹೊಟ್ಟೆಗೆ ,ಬಟ್ಟೆಗೆ ಎಷ್ಟೇ ಮಾಡಿಕೊಂಡರೂ ಏನು ಪ್ರಯೋಜನ? ನೀವೇ ಹೇಳಿ.ಕೋಟ್ಯಾಧಿಪತಿ ಹತ್ತಿರ ಕೈ ತುಂಬಾ ಹಣ ಇದ್ದರು ,ಮೈತುಂಬಾ ಇರುವ ರೋಗದಿಂದಾಗಿ ಬಾಯಿಗೆ ರುಚಿ ಅನ್ನಿಸುವ ಊಟಕ್ಕೆ ಬದಲು ಕಹಿ ಔಷಧಕ್ಕೆ ದುಡ್ಡು ಖರ್ಚು ಮಾಡಿದ ಹಾಗಾಗುತ್ತದೆ .
            ಬ್ಲಾಗ್ ಬರೆಯಬೇಕೆಂಬ ಆಸೆ ನನಗೆ ತುಂಬ ದಿನದಿಂದ ಇತ್ತು.ಆದರೆ ನಾನು ಬರದರೆ ಜನ ಓದುತ್ತಾರೋ ಇಲ್ಲವೋ ಎಂಬ ಪ್ರಶ್ನೆಯು ನನ್ನಲ್ಲಿರುವ ಆಸೆಗೆ ನೀರು ಏರುಚುತ್ತಿತ್ತು .ಆಮೇಲೆ ಗಾಡಿ ಕಲಿಯಬೇಕಂದು ಆಸೆ ಇರುವವನು ,traffic ನಲ್ಲಿ ಗಾಡಿ ಹೊಡೆಯುವುದು ಕಷ್ಟ ಎಂದು,ಗಾಡಿಯೇ ಹೊರಗೆ ತಂದು ಕಲಿಯದೇ ಇದ್ದರೆ ,ಗಾಡಿ ಕಲಿಯವುದಾದರು ಹೇಗೆ?ಹಾಗೆಯೇ ನಾನು ಬರೆಯದೆ ಹೋದರೆ ನನ್ನ ಬರವಣಿಗೆ ಜನ ಓದುತ್ತಾರೋ ಇಲ್ಲವೋ ಅಥವಾ ಇಷ್ಟಪಡುತ್ತಾರೋ ಇಲ್ಲವೋ ಎಂದು ತಿಳಿಯುವುದಾದರೂ ಹೇಗೆ ?ಹಾಗೆಯೇ ಗಟ್ಟಿ ಮನಸ್ಸು ಮಾಡಿ ಬರೆಯಲು ಶುರು ಮಾಡಿದ್ದೇನೆ.
            ಆದರೆ ಆಗ ಯಕ್ಷ ಪ್ರಶ್ನೆ ಒಂದು ಹುಟ್ಟಿಕೊಂಡಿತು .ಹೆಸರು ಏನು ಇಡುವುದು ?ಸಾಮಾನ್ಯವಾಗಿ ನನ್ನ ನಾಟಕಕ್ಕೆ ಹೆಸರಿಡುವುದು ಅಥವಾ ಯಾವುದೇ ಕಥೆಗೆ ,ಕವನಕ್ಕೆ ಹೆಸರಿಡುವುದು ನನಗೆ ಕಷ್ಟಕರವಾದ ಕೆಲಸ .ಇಂತಹ ಸಮಯದಲ್ಲಿ ಸಾಹಿತ್ಯದಲ್ಲಿ ಮಾರ್ಗದರ್ಶಕ ನಾಗಿರುವ ಗಣೇಶ್ ಭಟ್ಟ ಕೊಪ್ಪಳ ತೋಟ ಸಹಾಯ ಮಾಡದೆ ಇದ್ದದರಿಂದ ,ನಾನೇ ತೀರ್ಮಾನಕ್ಕೆ ಬರಬೇಕಾಯ್ತು (ಹೆಸರು ಇದುವದರಲ್ಲಿ ನಿಸ್ಸೀಮ ರಾದ ಉಪೇಂದ್ರ ನನ್ನು ಕೇಳೋಣ ಅಂದ್ರೆ ,ಅವರೇ ತಮ್ಮ ಕೊನೆ ಚಿತ್ರಕ್ಕೆ ಬರಿ ಸನ್ನೆ ಇಟ್ಟಿದ್ದಾರೆ ) . ನಾನು ತುಂಬಾ ಓದಿ,ತಿಳಿದು ಕೊಂಡವನಲ್ಲ (ಮಾಡಿದ್ದ ಇಂಜಿನಿಯರಿಂಗ್ ಅಲ್ಲಿ 65 percent ).ಇನ್ನು  ನನ್ನ ಬರಹ ಅಷ್ಟೇನೂ  (ಸ್ವಲ್ಪಾನು )  ಚೆನ್ನಾಗಿಲ್ಲ .ಆದರೆ ನನ್ನ ೨೪ ವರ್ಷ ಬದುಕು ಹಾಗು ನನ್ನ ಸುತ್ತಮುತ್ತಲಿನವರ ಬದುಕನ್ನು ಕಣ್ಣಾರೆ ನೋಡಿ ,ಕಿವಿಯಾರೆ ಕೇಳಿ ಸ್ವಲ್ಪ ಎಲೆ ನಿಂಬೆಕಾಯಿ ಅಂತೆ ಇದ್ದವನು ಈಗ ಸ್ವಲ್ಪ ಸುಧಾರಿಸಿದ್ದೇನೆ .ಒಬ್ಬ ಸಾಮಾನ್ಯ ಮನುಷ್ಯನ ದೃಷ್ಟಿಕೋನವನ್ನೇ ನನ್ನ ಬರವಣಿಗೆಗಳು ,ಕವನಗಳು ,ಕಥೆಗಳು ಬಿಂಬಿಸುತ್ತವೆ .ಅದೇ ಕೋಸಂಬರಿ ,ಸ್ವಲ್ಪ ವಿಭಿನ್ನವಾಗಿ ತಯಾರಿಸಿ ವಿಭಿನ್ನವಾಗಿ ಬಡಿಸುವುದೇ ನನ್ನ ಗುರಿ .ನಿಮಗೆ ತಿಳಿಯದ ಕೆಲವೊಂದು ಜೀವನದ ಸ್ವಾರಸ್ಯಗಳನ್ನೂ ಹೇಳುತ್ತೇನೆ ಅಂತ ಸುಳ್ಳು ಆಶ್ವಾಸನೆ ನಾನು ಕೊಡುವುದಿಲ್ಲ .ಆದರೆ ನನ್ನ ಈ ಬ್ಲಾಗ್ ನಿಮಗೆ ಬೋರ್ ಹೊಡಿಸದೆ ನಿಮ್ಮ ಜೀವನದಲ್ಲಿ ಸಿಗುವ ಕೋಸಂಬರಿ ಪಾನಕದಂತೆ ಇರಬೇಕು ಅನ್ನುವುದು ನನ್ನ ಆಸೆ.ಅದಕ್ಕೆ ಈ ಬ್ಲಾಗ್ ನ ನಾಮಕರಣ ಕೋಸಂಬರಿ ಪಾನಕ.
         ಕೋಸಂಬರಿ ಪಾನಕ ಎಂದು ಹೆಸರಿಡಲು ಕಾರಣ ಇನ್ನು ಒಂದು ಕಾರಣ ಇದೆ.ನಮ್ಮ ಉಡುಪಿ ಎಲೆ ಊಟದಲ್ಲಿ ಪದಾರ್ಥಗಳು ಜಾಸ್ತಿ .ಅಲ್ಲಿ ಉಪ್ಪು ,ಉಪ್ಪಿನಕಾಯಿ ,ಎರಡು ಬಗೆಯ ಕೋಸಂಬರಿ ,ಎರಡು ಬಗೆಯ ಪಲ್ಯ ,ಚಟ್ನಿ ,ಮೆಣಸಿನಕಾಯಿ ,ಬಜ್ಜಿ ,ಹಪ್ಪಳ ಎಲೆಯ ಮೇಲ್ಭಾಗ ಅಲಂಕರಿಸಿರುತ್ತದೆ .ಇನ್ನು ಚಿತ್ರಾನ್ನ ಎಲೆಯ ಕೆಳಗಿನ ಎಡಭಾಗದಲ್ಲಿ ಹಾಗು ಪಾಯಸ ಎಲೆಯ ಕೆಳಗಿನ ಬಲಭಾಗದಲ್ಲಿ ಬಡಿಸಿರುತ್ತಾರೆ .ಇನ್ನು ಮುಖ್ಯ ವಾದ ಅನ್ನ ಸಾರು, ಕೊದ್ದೆಲು ಆಮೇಲೆ ಸಿಹಿ ಎಲ್ಲ ಎಲೆಯ ಕೆಳಭಾಗದ ಮಧ್ಯ ಜಾಗವನ್ನು ಆವರಿಸುತ್ತದೆ . ನಾನು ಹೇಳಲು ಹೊರಟಿರುವುದು ಏನಂದರೆ ,ನಾನು ವೃತ್ತಿಯಿಂದ ಬರಹಗಾರನಲ್ಲ ,ಇದು ಕೇವಲ ನನ್ನ ಪ್ರವೃತ್ತಿ ಅಷ್ಟೇ .ಒಂಥರಾ ಸಾಹಿತ್ಯ ಲೋಕ ಎಂಬ ಎಲೆಯ ತುದಿಯಲ್ಲಿರುವ ಪದಾರ್ಥಗಳ ಹಾಗೆ ಉದಾಹರಣೆಗೆ ಪೌಷ್ಟಿಕವಾದ ಕೋಸಂಬರಿ ಥರಹ . ಈ ಪದಾರ್ಥಗಳು ಎಲೆಯಲ್ಲಿ ಕೆಲವೊಮ್ಮೆ ಇಲ್ಲದೆ ಹೋದರು ನಡೆಯುತ್ತದೆ ,ಆದರೆ ಅವುಗಳು ಇದ್ದರೆ ಊಟ ಇನ್ನಷ್ಟು ಚೆನ್ನಾಗಿರುತ್ತದೆ .ಈ ವಿಷಯ ವೃತ್ತಿಯಿಂದ ಕವಿ ಆಗಿರುವ ಗೆಳಯನಿಗೆ ಹೇಳಿದಾಗ "ಹಾಗಾದ್ರೆ ನಾವೆಲ್ಲ ಅಣ್ಣ ಸಾಂಬಾರ್ ಅಂತ ಇಟ್ಕೋಬೇಕು ಅಂದ ಹಾಗೆ ಆಯಿತು"ಅಂತ ರೇಗಿಸಿದ್ದ .
  .
         ಕೊನೆಯದಾಗಿ ನನ್ನ ಬರವಣಿಗೆಗಳನ್ನು ಪೌಷ್ಟಿಕಾವಾಗಿ ,ರುಚಿಯಾಗಿ ನಿಮ್ಮ ಹಸಿವನ್ನು ನೀಗಿಸುವ ಕೋಸಂಬರಿ ತರಹ ಹಾಗು ತಂಪಾಗಿ,ಸಿಹಿಯಾಗಿ ನಿಮ್ಮ ದಾಹವನ್ನು ತಣಿಸುವ ಬೆಲ್ಲದ ಪಾನಕದಂತೆ ಬರೆಯಲು ಪ್ರಯತ್ನಿಸುತ್ತೇನೆ.ಇದಕ್ಕೆ ನಿಮ್ಮ ಹಾರೈಕೆ ,ಆಶೀರ್ವಾದ ಹಾಗು ಪ್ರೋತ್ಸಾಹ ಅತ್ಯಗತ್ಯ .ಎಲ್ಲಾದರು ಕೋಸಂಬರಿಯಲ್ಲಿ ಉಪ್ಪು,ಹುಳಿ ಜಾಸ್ತಿ ಆಗಿದ್ದಲ್ಲಿ ಅಥವಾ ಪಾನಕದಲ್ಲಿ ಸಿಹಿ ಕಮ್ಮಿ ಇಲ್ಲವೇ ಸಿಕ್ಕಪಟ್ಟೆ ಜಾಸ್ತಿ ಆಗಿದ್ದಲ್ಲಿ ,ದಯವಿಟ್ಟು ತಿನ್ನಲಾಗದೆ ಎಲ್ಲೋ ಉಗಿದು ಸುಮ್ಮನೆ ಹೋಗಬೇಡಿ . ನಿಮ್ಮ ಮುಕ್ತ ಅಭಿಪ್ರಾಯಗಳನ್ನು ತಿಳಿಸುವ ಹಾಗು ನಾನು ಮಾಡಿದ ತಪ್ಪುಗಳನ್ನು ತಿದ್ದುವ ಎಲ್ಲ ಅಧಿಕಾರ ನಿಮಗೆ ಇದೆ .ನೀವು ಜೊತೆಗೂಡಿದರೆ ಕೋಸಂಬರಿ ಪಾನಕದ ರುಚಿಯನ್ನು ಹೆಚ್ಚಿಸಬುಹುದು .ಕೊನೆಯದಾಗಿ ನಿಮ್ಮ ಜೀವನದ ಮಧ್ಯೆ ಮರೆಯೆದೆ ಆಗಾಗ ಕೋಸಂಬರಿ ಪಾನಕ ತಿನ್ನುತ್ತೀರಿ ಎಂದು ಹೇಳುತ್ತಾ (ಮಗ ಸಿಕ್ಕಾಪಟ್ಟೆ ಕೊರೆಯುತ್ತ ಇದ್ದಾನೆ ಅಂತ ಇನ್ನಷ್ಟು ಬಯ್ದುಕೊಳ್ಳುವ ಮೊದಲು ) ಇಲ್ಲಿಗೆ ಮಂಗಳ ಹಾಡುತ್ತೇನೆ .
                                                          ಜೈ ಕೋಸಂಬರಿ ಪಾನಕ.

English summary:I had plan of starting a blog from many days.As I am not that much good in writing ,I was afraid to start.I was even afraid whether people will read or not .But then I thought how can I come to know,unless I start blog.
       Then came the toughest decision .Naming my blog.After asking many people and thinking for many days ,at last I kept name my blog name as "KOSAMBARI PANAKA".Its a side dish in Udupi cuisine.
     There is a reason to keep this name.My literary work is just a handful of sand in the Everest called Kannada literarture. So I wish my literature work to be just like kosamabari paanaka which is  in  one among side dish(compulsory )in  the udupi cusine .
   If you get relaxed while reading this blog, then I will be the most happiest person on the earth.

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...