ಶುಕ್ರವಾರ, ಜನವರಿ 10, 2014

ಭಯ



ಭಯ..ನಿಮ್ಮ ಮೇಲೆ ಸರಕ್ಕನೇ ಆಕ್ರಮಣ ಮಾಡುತ್ತಿದ್ದ ಹಾಗೆ ,ನಡುಕ ಮೆಲ್ಲನೇ ನಿಮ್ಮನ್ನು ಆವರಿಸಲು ಶುರುವಾಗುತ್ತದೆ. ಒಂದಿಷ್ಟು ಬೆವರಿನ ಹನಿಗಳು ಹಣೆಯ ಮೇಲೆ ಮೂಡಲು ಶುರುವಾಗುತ್ತದೆ. ಹುಬ್ಬುಗಳು ತಮ್ಮ ಇಷ್ಟದಂತೇ ವರ್ತಿಸಲು ಶುರುಮಾಡುತ್ತವೆ. ಬಾಯಲ್ಲಿ ತೊದಲು ಮಾತುಗಳು ನಲಿದಾಡುತ್ತವೆ .ಹುಡುಗರ ಭಾಷೆಯಲ್ಲಿ ಹೇಳಬೇಕಂದರೆ meter off .

          ಭಯ ಇಂತದ್ದಕ್ಕೇ ಅಂತ ಹೇಳಲು ಆಗುವುದಿಲ್ಲ.ಕೆಲವರಿಗೆ ದೆವ್ವ,ಭೂತ ಆಂದರೆ ಗಡ ಗಡ ನಡಗುತ್ತಾರೆ .ಕೆಲವರು ಗುಡಗು ಸಿಡಿಲು ಬಂದರೆ ಸಾಕು ಮುದುರಿಕೊಳ್ಳುತ್ತಾರೆ. ಕೆಲವರಿಗೆ ಕತ್ತಲೆಂದರೆ ಭಯ.ಕೆಲವರಿಗ ಎತ್ತರ ಅಂದರೆ ಭಯ.ಇನ್ನೂ ಕೆಲವರಿಗೆ ಜನರ ಗುಂಪು ನೋಡಿದರೆ ಭಯ.ಇನ್ನೂ ಕೆಲವರು ಜಿರಲೆ ಆಂತ ಕ್ರಿಮಿ ಕೀಟಗಳು ಕಂಡರೆ ಸಾಕು ಚಂಗನೇ ಎಗರಿ ಬಿಡುತ್ತಾರೆ.ಹೀಗೆ ಒಬ್ಬ ಒಬ್ಬರಿಗೆ ಒಂಥರಾ ಭಯ.

 ಇಂಥವರಿಗೇ ಇಂತದ್ದೇ ಭಯ ಅಂತ ಹೇಳಲು ಆಗುವುದಿಲ್ಲ. ಸಿಕ್ಷ್ ಪ್ಯಾಕ್ ಇರೋ ಹುಡುಗ ಸಣ್ಣ ಹಲ್ಲಿಗೆ ಹೆದರಬಹುದು.ಬಾಯಿಬಡಕಿ ಹುಡುಗಿ ವೇದಿಕೆ ಹತ್ತಿ ಮಾತನಾಡು ಅಂದರೆ ಹೆದರಿ ಮುರುಟಿಕೊಳ್ಳಬಹುದು.ಹೀಗೆ.ಆದರೆ ಇಂತಹ ಭಯಗಳು ನನ್ನ ಪ್ರಕಾರ ಅಂತಹ ದೊಡ್ಡ ಸಮಸ್ಯೆಗಳೇನೆಲ್ಲಾ.ಇವೆಲ್ಲಾದಕ್ಕಿಂತ ಒಂದು ಭಯ ಇದೆ .ನಮ್ಮಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಆ ಭಯ ಖಂಡಿತ ಇದ್ದೇ ಇರುತ್ತದೆ.ಯಾವುದು ಅಂತೀರಾ?

          ಅದೇ ನಮ್ಮೆಲ್ಲರ ಕನಸ್ಸಿನ ಹಿಂದೆ ಓಡಿಹೋಗದಂತೆ ತಡೆಹಿಡಿಯುವ ಭಯ. ಅರ್ಥ ಆಗುತ್ತಿಲ್ಲವಾ? ಹೇಳ್ತೀನಿ ಕೇಳಿ .ನಮ್ಮಲ್ಲಿ ತುಂಬಾ ಜನಕ್ಕೆ ಕನಸುಗಳು ಇರುತ್ತೆ. ಅದರಲ್ಲ್ಲಿ ತುಂಬಾ ಜನ ಕನಸುಗಳನ್ನು ಬಿಟ್ಟು ಹೊಟ್ಟೆ ಪಾಡಿನ ನೆಪ ಹೊತ್ತು ಬೇರೆಯದೇ ಮಾಡುತ್ತಿರುತ್ತೇವೆ. ಮಾಡುತ್ತಿರುವ ಕೆಲಸದಲ್ಲಿ ಮನಸ್ಸು ಇಲ್ಲ. ಆದರೆ ಕನಸುಗಳು ಬೆನ್ನು ಹತ್ತಿ ಹೋಗುವುದಕ್ಕೆ ಹೆದರಿಕೆ.ಎಲ್ಲಿ ಅಲ್ಲಿ ಸೋತು ಹೋಗುತ್ತೀವೋ ಅನ್ನುವುದು.ಸೋತು ಹೋದರೆ ಎಲ್ಲಿ ಹಾಸ್ಯಾಸ್ಪದವಾಗುತ್ತೀವೋ ಅನ್ನುವುದು. ಅದೇ ಭಯ.ಇದೊಂದು ಭಯ ನನ್ನಿಂದ ಹಿಡಿದು ತುಂಬಾ ಜನರಲ್ಲಿ ಇದೆ. ಈ ಭಯದಿಂದ ನಮ್ಮ ಕನಸಗಳನ್ನು ನೆನಸು ಮಾಡಿಕೊಳ್ಳಲಾಗದೆ,ದಿನವೂ ನರಳಾಡುತ್ತಿದ್ದೀವಿ. ನಮಗೇ ಕಂಫ಼ರ್ಟ್ ಜೋನ್ ನಲ್ಲಿ ಇರಬೇಕೆಂಬ ಆಸೆ. ಅದು ಬಿಟ್ತು  ಕನಸ್ಸನ್ನು ಚೇಸ್ ಮಾಡುವ ರಿಸ್ಕ್ ತೆಗದುಕೊಳ್ಳುವ ತನಕ ನಾವುಗಳು ನೆಮ್ಮದಿ ಕಾಣುವುದಿಲ್ಲ.

        ನೀವು ಸರಿಯಾಗಿ ಗಮನಿಸಿದರೆ ,ನಮ್ಮ ಸುತ್ತ ಮುತ್ತ ಲಿರುವ ಮಹಾನ್ ವ್ಯಕ್ತಿಗಳು, ಇಂತಹದ್ದು ಒಂದು ರಿಸ್ಕ್ ತೆಗದುಕೊಂಡಿದಕ್ಕೆ ತಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದ್ದು.ನಮ್ಮ ಕನಸುಗಳನ್ನು ಬೆನ್ನು ಹತ್ತಿ ಹೋಗಿ ಸೋತು ಹೋಗಬಹುದು ಎಂಬ ಭಯ ನಿಮ್ಮನ್ನು ಕಾಡುತ್ತಿರಬಹದು. ಹಾಗೆಂದುಕೊಂಡು ನೀವು ಕನಸುಗಳನ್ನು ಹಿಡಿಯಲು ಹೋಗದೇ ಇದ್ದರೆ ಬಾಳಿನಲ್ಲಿ ಒಂದ ಒಂದು ದಿನ ಪಶ್ಚಾತ್ತಾಪ ಪಟ್ಟೇಪಡುತ್ತೀರಿ.

           ಭಯವನ್ನು ನೀವು ಸೋಲಿಸಬೇಕೆಂದರೆ ,ಒಂದೇ ಮಾರ್ಗ. ಅದು ಭಯವನ್ನು ಎದುರಿಸುವುದು.ಭಯವನ್ನು ಎದುರಿಸುವುದೇ ಭಯವನ್ನು ಸೋಲಿಸುವ ಪರಿ.ಇದಕ್ಕೆ ಪೂರಕವಾಗಿ ಒಂದು ವಿವೇಕಾನಂದರ ಕಥೆ ಇದೆ.ಒಮ್ಮೆ ವಿವೇಕಾನಂದರು ಕಾಶಿಯಲ್ಲಿ ಹೋಗುವಾಗ ಒಂದಿಷ್ಟೂ ಕೋತಿಗಳು ಅಟ್ಟಿಸಿಕೊಂಡು ಬಂದವು. ಹೆದರಿದ ವಿವೇಕಾನಂದರು ಓಡಿ ಹೋಗಲು ಶುರು ಮಾಡಿದರು. ಅಮೇಲೆ ಏನನ್ನಿಸಿತೋ ಏನೋ ಹಿಂದುರಿಗಿ,ಕಲ್ಲನ್ನು ಎತ್ತಿ ಕೋತಿಗಳನ್ನು ಹೆದರಿಸಿದರು.ಅಗ ಕೋತಿಗಳು ಪರಾರಿ. ಹೀಗೆ ಭಯವನ್ನು ನೀವು ಗೆಲ್ಲಬೇಕಂದರೆ ಒಂದೇ ದಾರಿ,ಅದನ್ನು ಎದುರಿಸಿವುದು.

English Summary:Fear, When it attacks you a chill just pass through your spine. Forehead starts sweating. Hands and legs shivering and you start stammering. You lose control of yourself as fear takes the control. Each one will be having their own fear. A six pack guy may jump in fear when he sees a cockroach. A gal who never stops talking may shatter when you ask her to speak on stage. Some are afraid of dark, some are afraid of heights like this it goes on. But out of all these fears one fear is very dangerous. Yes, that one fear which stops you achieving from your dream. You have your own dream but you are not following it. Instead you are doing something in order to earn a bread. You are afraid to follow ur dreams as u are afraid of uncertainty. Because now u are in comfort zone. If u leave this and go behind ur dreams ,u are not sure whether u will succeed it. So, that fear keeps stopping u from achieving ur dreams. If u just check the great persons around u, u see one thing in common. All these people took risks. They came out of their comfort zone. According to me to outcome ur fear ,u have to just face it. I remember a small story of Swami Vivekananda. Once when he was in Kashi, a group of monkeys attacked him. He started to run. But after running a while he stopped and took a stone and started throwing at them.They ran away. Same way, stop running face ur fear.

ಶನಿವಾರ, ಜನವರಿ 4, 2014

ಹೊಸ ವರ್ಷದ ಶುಭಾಷಯಗಳು



ಹಳೇ ವರ್ಷ ಮುಗಿದು ,ಹೊಸ ವರ್ಷ ಬರುವ ಸಂಭ್ರಮ.ಎಲ್ಲರೂ ಸಂಭ್ರಮದಲ್ಲಿ ಮುಳುಗಿ, ಹಳೇದನ್ನು ನೆನಪಿನ ಬುತ್ತಿಯಲ್ಲಿ ಗಟ್ತಿಕೊಂಡು ,ಹೊಸದನ್ನು ಕೈ ಬೀಸಿ ಕರೆಯುತ್ತಿದ್ದಾರೆ. ಕೆಲವರು ಅವರ ಹತ್ತಿರದವರ ಜೊತೆಗೂಡಿ ಕುಣಿದು ಕುಪ್ಪಳಿಸಿದರೆ,ಕೆಲವರು ಹತ್ತಿರದವರನ್ನು ಶುಭ ಹಾರೈಸುವಲ್ಲಿ ಕಳೆಯುತ್ತಿದ್ದಾರೆ. ಕೆಲವರು ಅವರ ಸಂಗಾತಿಯನ್ನು ಗಟ್ಟಿ ತಬ್ಬಿ ಕೊಂಡು ಕಳೆದರೆ,ಕೆಲವರು ಉಡುಗೊರೆ ಹಂಚಿಕೊಂಡು ಸಂಭ್ರಮಿಸುತ್ತಿರುತ್ತಾರೆ. ಆದರೆ ಪ್ರತೀ ವರ್ಷ, ಆ ಹೊತ್ತಿಗೆ ಒಂಟಿ ಪಿಶಾಚಿ ತರಹ ಒಂದೆರಡು ಘಂಟೆಗಳ ಕಾಲ ಒಬ್ಬನೇ ಎಲ್ಲರಿಂದ ದೂರ ಹೋಗಿ ಯೋಚಿಸುತ್ತಾ ಕೂರುತ್ತೇನೆ.ಯಾಕೆ ಎಲ್ಲರೂ ಇಷ್ಟೊಂದು ಸಂತೋಷದಿಂದ ಕುಣಿಯುತ್ತಿದ್ದಾರೆ? ಎಂದು.

ಯಾಕೆ ? ನಿಮಗೆ ತಲೆ ಇಲ್ಲವೇ ,ಇದ್ದರೂ ಅದರಲ್ಲಿ ಬುಧ್ಧಿ ಇಲ್ಲವೇ? ಅಲ್ಲಾ ಹೊಸ ವರ್ಷ ಬರೋ ಹೊತ್ತಿಗೆ ಯಾಕೆ ಎಲ್ಲರೂ ಸಂತೋಷದಿಂದ ಇದ್ದಾರೆ ಅಂತ ಕೇಳುತ್ತೀರಲ್ಲಾ ? ಅಂತ ನೀವು ನನಗೆ ಕೇಳಬಹುದು.ನನ್ನ ವಾದ ಕೇಳಿ. ದಿನಗಳು ಕಳೆಯುತ್ತಿದೆ. ಆಯುಷ್ಯ ಕಡಿಮೆಯಾಗುತ್ತಿದೆ.ನಿಜ ಅದಲ್ಲವಾ? ಅದಕ್ಕೆ ಯಾಕೆ ಈ ತರಹ ಕುಣಿಯಬೇಕು?ಬೇರೆಯವರದು ಗೊತ್ತಿಲ್ಲಾ.ನನ್ನದು ಅಂತೂ ಮೂರು ಇಂಚು ಮುಂದು ಹೋಗಿಲ್ಲದ, ಆರಕ್ಕೆ ಏರದ ಮೂರಕ್ಕೆ ಇಳಿಯದ ಕೆಲಸ.ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ನನ್ನ ನಿರಾಕರಿಸುವ ಹುಡುಗಿಯರ ಸಂಖ್ಯೆ. ಅದರ ದುಪ್ಪಟ್ಟು ವೇಗದಲ್ಲಿ ಉದುರುತ್ತಿರುವ ಕೂದಲುಗಳು.ಸತ್ತರೂ ಎರಡು ಇಂಚು ಉದ್ದ ಆಗದ ದೇಹ.ಕರಗದ ಹೊಟ್ಟೆ. ಆಕಾಶದೆತ್ತರದ ಕನಸುಗಳು ,ಅದನ್ನು ಏರಲಾಗದಂತೆ ಹಿಡಿದಿಟ್ಟಿರುವ ಭಯ. ಬೆನ್ನಿಗೇ ಅಂಟಿಕೊಂಡಿರುವ ದುರಾದೃಷ್ಟ. (ನಿಮಗೆ ಎಲ್ಲರಿಗೂ ಇವೆಲ್ಲಾ ಇರದಿದ್ದರೂ ,ಈ ತರಹದ ಎಂದೂ ಬದಲಾಗದ ಒಂದಲಾ ಒಂದು ಸಮಸ್ಯೆ ಇರಬಹುದು.) ಇಷ್ಟೆಲ್ಲಾ ಸಮಸ್ಯೆ ಇದ್ದರೂ,ಇತ್ತ ಸಮಯ ನಮಗೇ ಕಾಯದೇ ಮುನ್ನುಗುತ್ತಿದೆ.ದಿನದಿಂದ ದಿನೇ ನಾವು ಚಿಕ್ಕವರಾಗದೇ ದೊಡ್ಡವರಾಗಿತ್ತಿದ್ದೇವೆ. ಹೀಗಿರುವಾಗ ಈ ಹೊಸ ವರ್ಷ ಬಂದಾಗ ಖುಷಿಯಿಂದ ಯಾಕೆ ಆಚರಿಸಬೇಕು?ಹೀಗೆ ಯೋಚನೆ ಮಾಡುವ ನನಗೇ ಈ ಹೊಸ ವರ್ಷ ಆಚರಿಸುವ ಈ ಜನರ ಮನಸ್ಸೇ ಅರ್ಥ ಆಗುವುದಿಲ್ಲಾ.

ನಾನು ಒಬ್ಬನೇ ಯಾಕೆ ಹೀಗೆ ಯೋಚನೆ ಮಾಡುತ್ತಿದ್ದೇನೆ. ಬಹುಶಃ ನನಗೇ ಅರ್ಥ ಆಗದ,ನನಗೇ ತಿಳಿಯದ ಮರ್ಮ ಅವರಿಗೆಲ್ಲಾ ತಿಳಿದಿರಬೇಕು.ಏನದು ? ಹೀಗೆ ಹೊಸ ವರ್ಷದ ಸಂಭ್ರಾಮಚರಣೆಯಲ್ಲಿ ಹುಚ್ಚನಂತೆ ಕುಣಿಯುತ್ತಿದ್ದ ಗೆಳಯನೊಬ್ಬನ ಕೇಳಿದೆ "ಏನೋ ಈ ಪಾಟಿ ಖುಷಿಯಾಗಿದಿಯಾ?" .ಯಾಕಂದರೆ ಎರಡು ದಿನದ ಹಿಂದೆ ಅವನ ಹುಡುಗಿ ಕೈ ಕೊಟ್ಟಳು ಅಂತ ಅಳುತಿದ್ದ ಅವನು.ಅವನ ಕೆಲಸವೂ ಆಗಲೂ ಈಗಲೂ ಹೋಗುವಂತಿತ್ತು. ಜೀವನವೇ ಮುಗಿದು ಹೋಯಿತು ಅನ್ನುತ್ತಿದ್ದ ಅವನು ಇಂದು ಕುಣಿಯುತ್ತಿದ್ದ್ದ. ಅವನಿಗೆ ಕೇಳಿದೆ" ಏನಾಗಿದೆ ,ಏನು ಒಳ್ಳೆಯದು ಆಗಿದೆ ಅಂತ ಈ ತರಹ ಕುಣಿಯುತ್ತಾ ಇದಿಯಾ? ". ಅದಕ್ಕೆ ಆತ " ಲೋ , ಆಗಿ ಹೋಗಿದ್ದು ಬಿಟ್ಟು ಹಾಕೋ.ಈ ವರ್ಷ ಎಲ್ಲಾ ಒಳ್ಳೆಯದಾಗುತ್ತೆ,ನೋಡುತ್ತಾ ಇರು" ಅಂದ.

ಆಗ ನನಗೇ ಅರ್ಥ ಆಯಿತು. ಗುಟ್ಟು ತಿಳಿಯಿತು. ಎಲ್ಲರೂ ಈ ಸಲ ಒಳ್ಳೆಯಾದುಗುತ್ತೆ ಅನ್ನೋ ಆಶಾಭಾವನೆಯಿಂದ ಇಷ್ಟೊಂದು ಸಂತೋಷವಾಗಿದ್ದಾರೆ. ಅದೇ ಗುಟ್ಟು.ನಿಜ ಅಲ್ಲವಾ? ಹಳೆಯದೂ ಏನೇ ಆಗಿರಲಿ, ಈ ವರ್ಷ ಒಳ್ಳೆಯಾದುಗುತ್ತೆ ಅನ್ನೋ ಆಸೆಯಲ್ಲಿ ಬದುಕೋ ಖುಷಿಯಿದೆ.ನಾನು ಮಾರನೇ ದಿನ ಅದೇ ಆಸೆಯಲ್ಲಿ ಎದ್ದೆ.ಹಳೇ ಸ್ನೇಹಿತರು ವಿಶ್ ಮಾಡಿದರೂ,ಜಗಳ ವಾಡಿ ಕೊಂಡು ಮುನಿಸಿಕೊಂಡು ಇದ್ದ ಕೆಲವರು ಎಲ್ಲಾದನ್ನೂ ಮರೆತು ಕಾಲ್ ಮಾಡಿದ್ದರು.ನಾನು ವಿಶ್ ಮಾಡಿ ,ಅವರ ಕಡೆಯಿಂದ ಉತ್ತರ ನಿರೀಕ್ಷಿಸಿದ ಕೆಲವು ಗೆಳೆಯರು ಕೂಡ ಮಾಡಿದ್ದರು.ಕೆಲಸದಲ್ಲೂ ಏನೋ ಹೊಸ ಭರವಸೆ ಮೂಡುವ ಹಾಗೆ ಇದೆ. ಹೀಗೆ ಎನೋ ಈ ವರ್ಷ ಒಳ್ಳೆಯದಾಗುತ್ತದೆ ಅನ್ನುವ ಆಶಾಭಾವನೆಯಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇನೆ.ನಿಮಗೂ ಒಳ್ಳೆಯದಾಗಲೀ.ಈ ಹೊಸ ವರ್ಷ ಸುಖ ,ಸಂತೋಷ ತರಲಿ. ಮತ್ತೆ ಸಿಗೋಣ.
English summary: The old year is ending,the new one is arriving.Everyone  is happy about the the new year arrival and everyone celebrating in their own way.And this is the time,when everyone celebrating ,I go somewhere alone ans stat thinking " Why everyone is so happy about new year arrival?".You guys may think I am crazy to ask question like this. You may say"After  all, it's new year arrival ,chill dude".That's not my point.As days going we are getting aged.I mean getting nearer to die.I dont know about others.In my life nothing is going right whether its job,personal life or any other.The dreams are at high but can't reach them due to some personal commitment.So, when nothing is going right ,why the hell I need to be happy for the new arrival of the year.I asked the same question to one of my friend who was celebrating the new year and who was literally high.The reason i asked him was just few days ago he was broken as his girl friend ditched him.Even he had serious problems in his professional life.He told " dude this year everything will be good.see".At that time I realised why the people celebrate new year.It's because of hope ,the hope that this year everything will be good.A hope that keeps them alive and happy.After realizing this truth ,even I woke up with the hope that everything will be right.Happy new year guys.God bless u all.


Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...