ಮಂಗಳವಾರ, ಡಿಸೆಂಬರ್ 9, 2014

ಕನಸುಗಳ ಬೆನ್ನುಹತ್ತಿ : ಮನಸಿನ ಪ್ರತಿಬಿಂಬ ತೋರಿಸಿದ ಮನೀಷೆ ಎಂಬ ಕನ್ನಡಿ



ಗಾಬರಿಯಿಂದ ಮುಖ ತೊಳೆಯುತ್ತಿರುವ ನಾಯಕನಿಗೆ ಏನೋ ಅರಿವಾದಂತಾಗಿ , ಮೆಲ್ಲಗೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ .ಈ ಸಲ ಅವನಿಗೆ ತನ್ನ ಪ್ರತಿಬಿಂಬ ಕಾಣುತ್ತದೆ . ಆಗ ನಾಯಕನಿಗೆ ತಾನು ಏನು ಕಳೆದುಕೊಂಡಿದ್ದೇನೆ ಎಂಬುದು ಅರಿವಾಗುತ್ತದೆ .ತನ್ನ ಹೆಂಡತಿಗೆ “ಸಿಕ್ತು ಬಿಡೆ “ ಎಂದು ಹೇಳಿ ಕನ್ನಡಿಯನ್ನೇ ನೋಡುತ್ತಾ ನಿಲ್ಲುತ್ತಾನೆ .ಮೆಲ್ಲಗೆ ಅವನ ಮುಖದಲ್ಲಿ ಮಂದಹಾಸ ಮೂಡುತ್ತದೆ .

         ಮನೀಷೆ ಕಿರುಚಿತ್ರ ನೋಡಿದ್ದರೆ ನಿಮಗೆ ಈ ದೃಶ್ಯ ಗೊತ್ತಿರುತ್ತದೆ . ನೋಡಿದವರಿಗೆಲ್ಲಾ ಈ ದೃಶ್ಯ ಅರ್ಥ ಆಗಿಲ್ಲ ಅನ್ನುವುದು ನಿಜ ಹಾಗೆಯೇ ಅವರಿಗೆ ಮನೀಷೆ ಚಿತ್ರವೂ ಇಷ್ಟ ಆಗಿಲ್ಲ . ನನಗೆ ಮನೀಷೆ ಚಿತ್ರಕ್ಕಿಂತ ,ಅನಿರೀಕ್ಷಿತ ಸಕತ್ ಆಗಿದೆ ಅಂತ ಹೇಳಿದವರಲ್ಲಿ ಶೇಕಡಾ ೭೦ ರಷ್ಟು ಜನ ಈ ವರ್ಗಕ್ಕೆ ಸೇರಿದವರು . ಇನ್ನುಳಿದವರು art ಸಿನಿಮಾ ಇಷ್ಟ ಪಡದೇ ಇರುವವರು .For them movie is just for entertainment. ನಾನು ಅವರುಗಳ ವಿರುಧ್ಧ ಅಲ್ಲ ಬಿಡಿ. ನನಗೆ ಕೇಳಿದರೆ,, ನನ್ನ ಮನಸಿಗೆ ಮನೀಷೆ ಕಿರುಚಿತ್ರ ತುಂಬಾ ಹತ್ತಿರ .ಕಾರಣಗಳು ಬಹಳಷ್ಟಿವೆ . ಮೊದಲನೆಯದಾಗಿ ನಾನು ಅಭಿನಯಿಸಿದ ಮೊದಲ ಅರ್ಥಪೂರ್ಣ ಚಿತ್ರ. ಅದರ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ . ಅದರ ಕಥೆ ಸ್ವಾರಸ್ಯಕರ . ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ .

       ಹೀಗೆ ಒಂದು ದಿನ office mail box ಗೆ .mail ಬಂತು . ನಾವು ಒಂದು ಕಿರುಚಿತ್ರ ಮಾಡುತ್ತಿದ್ದೇವೆ .ಎರಡು ಪಾತ್ರಕ್ಕೆ ನಟರು ಬೇಕಾಗಿದ್ದಾರೆ . ಶನಿವಾರ auditions ಇದೆ ಎಂದು . ನಾನು ಅದಕ್ಕೆ ಅಷ್ಟೊಂದು ಗಮನ ಕೊಡದೇ deleteಮಾಡಿದೆ.ಯಾಕಂದ್ರೆ ಅದಕ್ಕಿಂತ ಮುಂಚೆ ಹೋಗಿದ್ದಲೆಲ್ಲಾ ನನ್ನನ್ನು reject ಮಾಡಿದ್ದರು . ಕಾರಣ ನನ್ನ height ಹಾಗು ಮುಖ . ಆದರೆ ನನ್ನ ಇನ್ಫೋಸಿಸ್ ಸೀನಿಯರ್ ದರ್ಶನ್ ಒತ್ತಾಯದ ಮೇರೆಗೆ ಮನಸಿಲ್ಲದ ಮನಸಲ್ಲಿ ಹೋದೆ.

          ಅಲ್ಲಿ ಹೋದಾಗ ನನಗಿಂತ ಉದ್ದ ಇರುವವರು ,ಚೆನ್ನಾಗಿ ಇರುವವರು ಬಂದಿದ್ದರು . ನಾನು ಮನಸ್ಸೊಳಗೆ ನಾನು ಆದ ಹಾಗೆ ಸುಮ್ಮನೆ time ವೇಸ್ಟ್ ಅಂದುಕೊಂಡು ಅಲ್ಲಿ ಕೊಟ್ಟಿರುವ form ತುಂಬಿಸುತ್ತಾ ಅವರು practise ಮಾಡಲು ಹೇಳಿದ್ದ scene ಗಳನ್ನು ಹಾಗೆ ಯೋಚಿಸುತ್ತಿದ್ದೆ . ಸ್ವಲ್ಪ ಸಮಯದ ನಂತರ ನನ್ನ ಸರದಿ ಬಂತು . Audition mail ನಲ್ಲಿ ಮೂರೂ ಸನ್ನಿವೇಶಕ್ಕೆ ತಯಾರಾಗಲು ಹೇಳಿದ್ದರು .ಒಂದು ಏನೋ ಕಳೆದುಹೋಗಿರುತ್ತದೆ ,ಏನೆಂದು ನಮಗೆ ಗೊತ್ತಿರುವುದಿಲ್ಲ . ಎರಡನೆಯದು ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ಕಾಣಿಸುವುದಿಲ್ಲ .ಮೂರನೆಯದು ಒಂದು ಕಥೆ ಹೇಳುವುದು . ಅದೆನ್ನೆಲ್ಲ ಲೀಲಾಜಾಲವಾಗಿ ಮಾಡಿದೆ . ( ನಂಗೆ confidence ಅಂತ ಇರುವುದು ಅಭಿನಯದಲ್ಲಿ ಮಾತ್ರ ). ಅಲ್ಲಿದ್ದವರೆಲ್ಲರೂ ಚೆನ್ನಾಗಿದೆ , ಆಮೇಲೆ ಹೇಳ್ತೀವಿ ಅಂತ ಹೇಳಿ ಕಳುಹಿಸಿದರು . ನಾನು ನೀವು ಹೇಳಿದ ಹಾಗೆ ಬಿಡಿ, ಚೆನ್ನಾಗಿರೋರನ್ನು select ಮಾಡ್ತೀರ ಅಂತ ಮನಸಲ್ಲೇ ಅಂದುಕೊಂಡು ಹೊರಟೆ .

              ಎರಡು ದಿನದ ನಂತರ ಚಿತ್ರದ ನಿರ್ದೇಶಕರು ಮನೀಷ್ call ಮಾಡಿ ನಾನು select ಆಗಿದ್ದೀನಿ ,meet ಮಾಡಬೇಕು ಅಂದಾಗ ನನಗೆ ನಂಬಲೇ ಆಗಲಿಲ್ಲ. meet ಮಾಡಿದಾಗ ನಂಗೆ ಮನೀಷ್ ಕಥೆ ಹೇಳಿ, ನಂತರ ನಿನಗೆ car ಓಡಿಸಲು ಬರುತ್ತಾ? .ದೇವರು ದೊಡ್ಡವನು ಅನ್ನುವದು ಇದಕ್ಕೆ .ಆಗ ತಾನೇ classಗೆ ಸೇರಿಕೊಂಡಿದ್ದೆ . ಕಲಿತಾ ಇದೀನಿ ಅಂದೆ . ಮನೀಷ್ ಉಫ್ ಎಂದು ನಿಟ್ಟುಸಿರುಬಿಟ್ಟರು. ಹೀಗೆ ಮನೀಷ್ ಜೊತೆ ಮನೀಷೆ ಪ್ರಯಾಣ ಶುರುವಾಯಿತು . ವಸುಧೇಂದ್ರ ಅವರ ಕಥೆಗೆ ಜೀವ ಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದೆವು .ಚಿತ್ರ ಹೇಗೆ ಮೂಡಿ ಬರುತ್ತದೆ ಎಂಬುದು ನಮಗೂ ಗೊತ್ತಿರಲಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂಬ ನಂಬಿಕೆ ಯಿತ್ತು .

           ಸ್ವಲ್ಪ ದಿನ ರಿಹರ್ಸಲ್ಗಳು ನಡೆದವು . ಶೂಟಿಂಗ್ locations ಗಳಲ್ಲಿ ಮತ್ತೊಮ್ಮೆ ರಿಹೆರ್ಸಲ್ ನೆಡಯಿತು . ಅಂತೂ ಆ ದಿನ ಬಂದೇಬಿಟ್ಟಿತು . ಅದೇ ಶೂಟಿಂಗ್ ನ ಮೊದಲ ದಿನ . ಕ್ಯಾಮೆರಾ ಎದುರಿಸುವ ಮೊದಲ ದಿನ .ಹೇಗೆ ಮಾಡುತ್ತೇನೆ ,ನಿರ್ದೇಶಕರ expectations ಮುಟ್ಟುತ್ತೇನೆ ಇಲ್ಲವೋ ಎಂಬ ಭಯ ಇತ್ತು. ಆದರೆ ಇದೆಲ್ಲಕಿಂತ ದೊಡ್ಡ ವಿಘ್ನ ವೊಂದು ಕಾದಿತ್ತು. ನನ್ನ ಪತ್ನಿ ಮಾಡುವ ಪಾತ್ರದವಳು ಸಿಕ್ಕಿರಲಿಲ್ಲ . ಒಪ್ಪಿಕೊಂಡವಳು ಬಂದಿರಲಿಲ್ಲ. ಆಮೇಲೆ ಇನ್ನ್ಯಾರನ್ನೋ ಒಪ್ಪಿಸಿ ನಿರ್ದೇಶಕರು ಕರೆದುಕೊಂಡು ಬಂದರು . ಅವಳಿಗೆ ನಿರ್ದೇಶಕರು ನನ್ನ ಪರಿಚಯ ಮಾಡಿಸಿಕೊಟ್ಟ ೫ ನಿಮಿಷದಲ್ಲಿ ಮಾಯವಾದಳು . ಕಾರಣ ನನ್ನ ಮುಖ ಇರ್ಬೇಕು .ಪಾಪ ಅವರು ಜಾನ್ ಅಬ್ರಹಾಂ ತರಹ ನಾಯಕ ಇರುತ್ತಾನೆ ಅಂದುಕೊಂಡಿದ್ದ ರೇನೋ. ನಾನು ಒಳ್ಳೆ ಜಾಲಿ ಮುಳ್ಳು ಕೊಯ್ಯುವ್ವವನ ಹಾಗೆ ಇದ್ದೆ. ಕೊನೆಗೆ ಪ್ರೀತಿ ನಾಯಕಿಯಾಗಳು ಒಪ್ಪಿಕೊಂಡಳು .(ದೊಡ್ಡ ಮನಸ್ಸು ಅವಳದು ).ಶೂಟಿಂಗ್ ಶುರು ಆಯಿತು .

               ಮನೀಷೆ ಶೂಟಿಂಗ್ ವೇಳೆಯಲ್ಲಿ ನನಗೇ car ಹ್ಯಾಂಡಲ್ ಮಾಡುವುದೇ ಕಷ್ಟವಾಗಿತ್ತು . .car ಓಡಿಸಿವುದನ್ನು ಕಲಿತ್ತಿದ್ದೆ ಅದರೂ ಮನೀಷೆ ಅಲ್ಲಿ ಉಪಯೋಗಿಸಿದ್ದ car ಬೇರೆ , ಅಲ್ಲಿ ಕಲಿತಿದ್ದ car ಬೇರೆ. ಆದ್ದರಿಂದ car ಸನ್ನಿವೇಶಗಳಲ್ಲಿ ಸಣ್ಣ ಭಯ ಕಾಣಬಹುದು ನನ್ನ ಮುಖದಲ್ಲಿ . ಇನ್ನು ನಂಗೆ ಮನೀಷೆ ಶೂಟಿಂಗ್ ಸಮಯದಲ್ಲಿ ತುಂಬಾ ಕಾಡುವ ದಿನವೆಂದರೆ , ಕ್ಲೈಮಾಕ್ಸ್ ಶೂಟಿಂಗ್ ಮಾಡಿದ ದಿನ. ನಾನು ಅದೆಷ್ಟು ಬಾರಿ ಮುಖ ತೊಳೆದುಕೊಂದಿದ್ದೇನೋ ನನಗೆ ಗೊತ್ತಿಲ್ಲ . ಕ್ಯಾಮೆರಾ ಸ್ವಲ್ಪ ಅಲ್ಲಾಡಿದರೂ ನಾನು ಫ್ರೇಮ್ ನಿಂದ ಹೋಗುವ ಸಾಧ್ಯತೆ ಗಳಿತ್ತು .ಅದಕ್ಕೆ ಸಂತೋಷ್ ಅವರು ಕ್ಯಾಮೆರಾ ಕಣ್ಣಿಗೆ ಅವರು ಬೀಳದ ಹಾಗೆ, ನಾನು frameನ ಆಚೆ ಹೋಗದ ಹಾಗೆ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದರು .ನೆನಸಿಕೊಂಡರೆ ನಗು ಬರುತ್ತದೆ . ಈಗಲೂ ನೀವು ನಿರ್ದೇಶಕ ಮನೀಷ್ ಗೆ ಕೇಳಿದರೆ ಅವರು ಕ್ಲೈಮಾಕ್ಸ್ ನನ್ನ ಅಭಿನಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ . ಹೀಗೆ ,ಹೇಗೋ ಎಲ್ಲ ಶೂಟಿಂಗ್  ಮುಗಿದು ,  ಆಮೇಲೆ ಏನೇನೋ ಸಮಸ್ಯೆಗಳನ್ನೆಲ್ಲಾ ದಾಟಿ ,ಕಿರುಚಿತ್ರ ಬರುವ ಹೊತ್ತಿಗೆ ಸರಿಯಾಗಿ ಒಂದು ವರ್ಷ ಬೇಕಾಯಿತು .

ಮನೀಷೆ ಆಗಲೇ ಹೇಳಿದ ಹಾಗೆ, ನನ್ನ ಮನಸಿಗೆ ಹತ್ತಿರವಾದ ಚಿತ್ರ (ಅನಿರೀಕ್ಷಿತ ಕ್ಕಿಂತಲೂ ).ಯಾಕೆಂದರೆ ಮುಂದಿನ ದಿನಗಳಲ್ಲಿ ನಾನು ಮಾಡಬೇಕೆಂದುಕೊಂಡಿರುವ ಚಿತ್ರಗಳ ಪೈಕಿ ಅದು . ಅಲ್ಲಿ ಕಥೆ ನಾಯಕ ,ಪಾತ್ರಗಳಲ್ಲ . ಮತ್ತೆ ನಿರ್ದೇಶಕ ಮನೀಷ್ ಯಾವುದನ್ನು ವಿವರಿಸಿ ಹೇಳುವುದಿಲ್ಲ. ಪ್ರೇಕ್ಷಕರಿಗೆ ಬಿಟ್ಟು ಬಿಡುತ್ತಾರೆ . ಅದು ತುಂಬಾ ಜನಕ್ಕೆ ಇಷ್ಟವಾಗುವುದಿಲ್ಲ . ಆದರೆ ವ್ಯಯಕ್ತಿಕವಾಗಿ ನಾನು ನಿರ್ದೇಶಕ ಮನೀಷ್ ಶೈಲಿಯನ್ನು ಇಷ್ಟಪಡುತ್ತೇನೆ .ನನ್ನ ಪ್ರಕಾರ ಒಂದು ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಬೇಕು . ಮನೀಷೆ ಆ ನಿಟ್ಟಿನಲ್ಲಿ ಗೆದ್ದಿದೆ . ಕನ್ನಡಿ ನೋಡುವ ಸನಿವೇಶದಲ್ಲಿ ಸರಿಯಾಗಿ ಅಭಿನಯಿಸದೇ ಇರಬಹದು ಆದರೆ ಅಂದು ನಾನು ನನ್ನ ಜೀವನದಲ್ಲಿ ನನ್ನ ನಿಜವಾದ ಪ್ರತಿಬಿಂಬ ಕಂಡೆ.


ಕೊನೆಯದಾಗಿ ಮನೀಷ್ ,ಸಂತೋಷ್ ,ಗಣೇಶ್ ಹಾಗೂ ಮನೀಷೆ ಕಿರುಚಿತ್ರಕ್ಕೆ ಪ್ರೋತ್ಸಾಹ ನೀಡಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು .
Movie link :

https://www.youtube.com/maneeshe


English Summary :







While splashing water to his face,hero suddenly recognise something.Next instant he lifts his head gently and sees his face in mirror.This time he sees his reflection.And then he shouts at his wife " I got it ". A smile appears in his face .

Everyone who have seen Maneeshe short movie will know this scene.But I am damn sure all of them have not understood this scene. And out of the 70 percent audience who didn't like maneeshe belong to this category .Rest of them , consider maneeshe is an art movie and they expected more of entertainment.I am not against this group.But if u ask me my favourite movie out of anireekshita and maneeshe ,it's always maneeshe .There are many reasons for it .

Maneeshe is first meaningful short movie I did .The day when I gave auditions,I never expected that I would be part of this movie.Because many six pack ,tall handsome guys had attended. In my previous auditons I was always rejected due my short stature and ugly face.But when director Maneesh called me telling I was selected I had to pinch myself in order to check whether it was reality or dream.

I still remember two girls who accepted to  do my wife role didn't turn up .May be they saw my face, I guess.They were expecting some John abraham like figure whereas I was more like hobbit .Then Preethi accepted to do role and shooting started.After one year from the day shooting wrapped up , the movie got released.

Well now  u guys  have seen it and appreciated it .For me it was exciting journey .And in the climax scene even though I have not met the expectations of my director(acting wise ) ,in real life I found my right image .Well thanks for Maneesh ,santosh and ganesh for giving this wonderful opportunity.Thanks to you guys for supporting me.

ಗುರುವಾರ, ಡಿಸೆಂಬರ್ 4, 2014

ಕನಸುಗಳ ಬೆನ್ನು ಹತ್ತಿ ...: ಅನಿರೀಕ್ಷಿತ : ೧೦ ಸಾವಿರ ...



" ಇಲ್ಲಿ ನಾವು ಅಂದುಕೊಂಡ ಹಾಗೆಎಲ್ಲಾ ನಡೆಯುತ್ತೆ ಅಂತ ಅಂದುಕೊಂಡರೆ ಅದು ನಮ್ಮ ಮುಟ್ಟಾಳತನ ,ಯಾಕಂದ್ರೆ ಇಲ್ಲಿ ಎಲ್ಲವೂ ಅನಿರೀಕ್ಷಿತ "

ಹೌದಲ್ಲವಾ? ಇಲ್ಲಿ ಎಲ್ಲವೂ ಅನಿರೀಕ್ಷಿತ . ಮುಂದೆ ಏನು ಆಗುತ್ತದೆ ಅನ್ನುವುದು ನಮಗೆ ಗೊತ್ತಿಲ್ಲ . ಆದರೆ  ಮುಂದೆ ಒಳ್ಳೆಯದೇ ಆಗುತ್ತದೆ ಅಂದುಕೊಂಡು ಬದುಕಬೇಕಾಗಿರುವುದು ನಮ್ಮ ಧರ್ಮ . ಕ್ಷಮಿಸಿ ಈ ಲೇಖನ ಜೀವನದ ಬಗ್ಗೆ ಅಲ್ಲ .ನಮ್ಮ ಅನಿರೀಕ್ಷಿತ ೧೦ ಸಾವಿರ views ಮುಟ್ಟಿರುವ ಸಂಭ್ರಮದ ಹೊತ್ತಿನಲ್ಲಿ ಅದರ ಬಗ್ಗೆ ಒಂದಿಷ್ಟು ಬರೆಯಬೇಕು ಅನ್ನಿಸಿತು .

ಅನಿರೀಕ್ಷಿತ ಕಿರುಚಿತ್ರ ಶುರುವಾಗುವುದಕ್ಕೆ ಆಗ ನನ್ನ ಜೀವನದಲ್ಲಿ ನಡೆದ ಅನೇಕ ಕಹಿ ಘಟನೆಗಳೇ ಸ್ಫೂರ್ತಿ . ಹೌದು ಆ ಎಲ್ಲಾ negative ಗಳನ್ನೂಗುಣಿಸಿ positive ಮಾಡಿಕೊಂಡ ಹೆಮ್ಮೆ ನನಗಿದೆ . ಅನಿರೀಕ್ಷಿತ ಮಾಡುವ ಮುಂಚೆ ನನ್ನ ಮನೀಷೆ ಕಿರುಚಿತ್ರ ಚಿತ್ರೀಕರಣ ಅದಾಗಲೇ ಮುಗಿದುಹೋಗಿತ್ತು . ಆದರೆ ಅದು ಯಾಕೋ ಬಿಡುಗಡೆ ಆಗುವ ಲಕ್ಷಣಗಳು ತುಂಬಾ ಕಡಿಮೆ ಯಿತ್ತು . ಆಗ ನನಗೆ 'ಮೂರು ತಿಂಗಳು ಶೂಟ್ ಕಷ್ಟ ಪಟ್ಟು ಮಾಡಿರುವ ಚಿತ್ರ ಇಷ್ಟು ತಡ ಆಗುತ್ತ ಇದೆಯಲ್ಲಾ , ಅದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ' ಎಂದು ತುಂಬಾ ನೊಂದು ಕೊಳ್ಳುತ್ತಿದೆ . ಅದಕ್ಕೆ ತುಪ್ಪ ಹಾಕುವಂತೆ ಯಾವನೋ ಜ್ಯೋತಿಷಿನಿನ್ನ ಮುಖ ಇಟ್ಟುಕೊಂಡು ನೀನು ಫಿಲ್ಮ ಗೆ ಹೋದ್ರೆ ,ಉಧ್ಧಾರನೇ ಆಗೋಲ್ಲಾ, ನೀನು ನಟನಾಗಲೂ ಸಾಧ್ಯವೂ ಇಲ್ಲ ಅಂತ ಬೇರೆ ಹೇಳಿದ್ದ . ಅಯ್ಯೋ ಅದು ನಿಜ ಆಗುತ್ತಿದೆಯೆಲ್ಲಾ , ಅದು ಹಾಗಾಗಬಾರದು ನಾನು ಆ ಜ್ಯೋತಿಷಿ ಮಾತುಗಳನ್ನು ಸುಳ್ಳು ಮಾಡಲು ಏನಾದರು ಮಾಡಬೇಕೆಂದು ಪಣ ತೊಟ್ಟೆ .

ಅದೇ ಸಮಯಕ್ಕೆ ನಾನು ನನ್ನ ಕಂಪನಿಯಲ್ಲಿರುವ ಸಿನಿಮಾ ತಂಡ ವೊಂದಕ್ಕೆ ಕಥೆ ಹೇಳಿದ್ದೆ . ಅಷ್ಟೇ ಅಲ್ಲದೇ ಅದರಲ್ಲಿ ಬರುವ ನಾಯಕನಪಾತ್ರವನ್ನು ನನ್ನನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದೇನೆ . ಆದ್ದರಿಂದ ನಾನು ನಾಯಕನಾಗಳು ಇಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದೆ . ಆ ಕಥೆ ಕೇಳಿ ಯಾವನೋ  ಮೂಗಿನಲ್ಲಿ ಮತನಾಡುವನೊಬ್ಬ   ನಾನು ಇದನ್ನು ನಿರ್ದೇಶಿಸುತ್ತೇನೆ ಎಂದು ಮುಂದೆ ಬಂದ . ಆತನಿಗೆ ನಾನು ನಾಯಕನಾಗುವುದು ಸುತರಾಂ ಇಷ್ಟವಿರಲಿಲ್ಲ . ಕೊನೆಗೆ ನಂಗೆ ಗೊತ್ತಿಲ್ಲದ ಹಾಗೆ ,ನನಗಿಂತ ನೋಡಲು ಚೆನ್ನಾಗಿರುವವನನ್ನು ಕರೆದು ಅವನನ್ನು ನಾಯಕನನ್ನಾಗಿ ಮಾಡಿ ಚಿತ್ರೀ ಕರಿಸಿ ಬಿಟ್ಟರು . ನನಗೆ ಕಣ್ಣಲಿ ನೀರು . ನನ್ನ ಮಗು ಕಳೆದುಕೊಂಡಅನುಭವ .
      ಆಗ ನಾನು ಇನ್ನು ಕಥೆಗಳನ್ನು ಬೇರೆಯವರಿಗೆ ಕೊಟ್ಟು ನನ್ನನ್ನು ನಾಯಕನನ್ನಾಗಿ ಮಾಡಿ ಅಂದರೆ ನನ್ನ ಈ ನೇಪಾಳಿ ಮುಖ ಹಾಗು ದ್ವಾರಕೀಶ್ hieght ನೋಡಿ ಯಾರು ಕೊಡುವುದಿಲ್ಲ ಎಂಬ ಸತ್ಯ ಅರಿತುಕೊಂಡೆ . ಇನ್ನ್ಮೇಲೆ ನಾನೇ ನಿರ್ದೇಶಿಸಬೇಕು ಆದ್ರೆ ಈ ಸಲ ನನ್ನ ಕಥೆ ಬೇಡ ( ಯಾಕಂದ್ರೆ ಮತ್ತೆ ನನ್ನ ಕಥೆಕದಿ ಯುತ್ತಾರೆ ಎಂಬ ಭಯ   ಇತ್ತು ) ಇರುವ ಕಥೆಯನ್ನೇ ಮಾಡೋಣ ಅಂತ ತೀರ್ಮಾನಕ್ಕೆ ಬಂದೆ . ಆಗ ಗೆಳೆಯ ಲಿಂಗರಾಜ ತಾನು ಛಾಯಾಗ್ರಹಣ ಮಾಡಲು ಮುಂದೆ ಬಂದ .ನಾವಿಬ್ಬರು ಒಂದು horror ಮೂವಿ ಮಾಡುವ ಯೋಚನೆಯಲ್ಲಿದ್ದೆವು . ನಂತರ ಲವ್ ಸ್ಟೋರಿ ಹೀಗೆ.... ಎಷ್ಟು ಕಥೆ ಯೋಚಿಸಿದರೂ ಯಾವ ಕಥೆಯೂ ಮಾಡಲೇ ಬೇಕು ಅನ್ನಿಸುವಷ್ಟು ಹುಮ್ಮಸು ಬರಲಿಲ್ಲ . ಆಗ ನನ್ನ ಕ್ಯೂಬಿಕಲ್ ನಲ್ಲೆ ಕೆಲಸ ಮಾಡುತ್ತಿದ್ದ ಶ್ರೀ ಹರಿ ನನಗೇ ಪುಸ್ತಕವೊಂದನ್ನು ಕೊಟ್ಟರು ಅಲ್ಲಿ ಓದಿದ್ದೆ ಗಂಡಸ್ಕತ್ತ್ರಿ . ಬರೀ ಮೂರೇ ಜನ ಪಾತ್ರಧಾರಿ ಹಾಗು ಒಂದು ಮನೆಯಲ್ಲೇ ನಡೆಯುವ ನಾಟಕವನ್ನು ಸಿನಿಮಾ ಗೆ ಅಳವಡಿಸಿ ಕೊಂಡರೆ ಚೆನ್ನಾಗಿರುತ್ತದೆ , ಶೂಟಿಂಗ್ ಮಾಡಲು ಸುಲಭವೂ ಆಗುತ್ತದೆ ಅಂತ ಲಿಂಗರಾಜ್ ಗೆ ಹೇಳಿದೆ ಆತನು ಒಪ್ಪಿಕೊಂಡ . ಅಗ ಬರೆಯಲು ಶುರು ಮಾಡಿದ್ದು .

   ಮೊದಲಿನಿಂದಲೂ ಸಿನಿಮಾ ಮಾಡುವ ಹುಚ್ಚಿದ್ದರೂ  , ಮಾಡಲು ಹೋದಾಗ ಭಯ ಇತ್ತು ಏನಾದ್ರು ಅಡ್ಡ ಬರುತ್ತಿತ್ತು . ಆದರೆ ಈ ಚಿತ್ರ ಮಾಡಲೇಬೇಕು ಅನ್ನುವ ಹಠಬರಲು ಇನ್ನೊಂದು ಕಾರಣವು ಇತ್ತು . ಇವೆಲ್ಲವೂ ನಡೆಯುವ ಸ್ವಲ್ಪ ದಿನಗಳ ಹಿಂದೆ , ನಾ ಇಷ್ಟಪಟ್ಟ ಒಂದು ವಸ್ತು ನನಗೆ ಸಿಗುವುದಿಲ್ಲ ಎಂಬುದು ತಿಳಿದು ಬಂತು .ಆದರೆ ಆ ಕಟು ಸತ್ಯ ಒಪ್ಪಲು ನನಗೆ ಆಗದೆ ವಿಲವಿಲ ಒದ್ದಾಡುತ್ತಿದೆ . ಅದರಿಂದ ಹೊರಗೆ ಬರಲು ಒಂದೇ ದಾರಿ ನನಗೆ ಇಷ್ಟ ಇರುವ ಕೆಲಸ ಮಾಡುವುದು . ಇದು ನನಗೆ ಅನಿರೀಕ್ಷಿತ ಮಾಡಲು ಪ್ರೇರಿಪಿಸಿತು.

ಶೂಟಿಂಗ್ ಮಾಡಲು ವಾಸುಕಿ ಎಂಬ ಗೆಳಯನ ಮನೆಯ ಸಿಕ್ಕಿತು . ಇನ್ನು ಪಾತ್ರಧಾರಿಗಳು , ಸಂದೀಪ್ ಅಶ್ವಥ್ ಪಾತ್ರ ಮಾಡಲುಒಪ್ಪಿಕೊಂಡ . ಆದ್ರೆ ನಾಯಕಿ . ನನಗೆ ಬರಿ ಲಕ್ಷಣವಾಗಿರುವ ಹುಡುಗಿ ಬೇಕಾಗಿರಲಿಲ್ಲ . ಕಣ್ಣಲ್ಲೇ ಅಭಿನಯಿಸುವ ನಾಯಕಿ ಬೇಕಿತ್ತು . ಆಮೇಲೆ ನನ್ನ height ಗೆ ಸರಿಹೊಂದುವ ನಾಯಕಿಯೂ ಬೇಕಿತ್ತು . ಮನೀಷೆ ಯಲ್ಲಿ ಪ್ರೀತಿ ಅಭಿನಯ ನೋಡಿದ್ದೆ . ಆದರೆ ಅಷ್ಟೊಂದು ಪರಿಚಯ ವಿಲ್ಲದ ಕಾರಣ ಕೇಳುವುದುಕ್ಕೇ ಮುಜುಗರ ಪಡುತ್ತಿದ್ದೆ .ಗಟ್ಟಿ ಮನಸು ಮಾಡಿ ಕೇಳಿದಾಗ ನೆಗೆಟಿವ್ role ಅನ್ನು ಮಾಡಲು ಒಪ್ಪಿಕೊಂಡರು . ಅಲ್ಲಿಗೆ ಅನಿರೀಕ್ಷಿತ ಶುರು .

   ನನ್ನ ಮೊದಲ ಚಿತ್ರದ ನಿರ್ದೇಶಕರಾದ ಮನೀಷ್ ಅವರು ಶೂಟಿಂಗ್ ಶುರು ಮಾಡಿದ ಮೊದಮೊದಲು ಬಂದು ಸಹಾಯ ಮಾಡಿದರು. ಹೇಗೋ ಕಷ್ಟಪಟ್ಟು ಶೂಟಿಂಗ್ ಮುಗಿಸಿದೆವು . ನಂತರ ಸಂಕಲನ .ನನ್ನ ಗೆಳಯ ಜಗದೀಶ್ ಗೆ ಗೊತ್ತಿತ್ತಾದರೂ ಅವನು ಮೊದಮೊದಲು ಮಾಡಲು ಹಿಂಜರಿದ . ನಂತರ ಇಬ್ಬರೂ ಸೇರಿ ಬರೋಬ್ಬರಿ ಎರಡು ತಿಂಗಳು ಸಂಕಲನ ಮಾಡಿದೆವು . ನಂತರ ಮತ್ತೆರಡು ತಿಂಗಳು ಡಬ್ಬಿಂಗ್ . ಇನ್ನು ಉಳಿದದ್ದು ಹಿನ್ನಲೆ ಸಂಗೀತ . ನನ್ನ ಗೆಳೆಯನೊಬ್ಬ ಕೈಕೊಟ್ಟ ಕಾರಣ ಹೊಸ ಸಂಗೀತ ನಿರ್ದೇಶಕ ಹುಡುಕಬೇಕಾದ ಪರಸ್ಥಿತಿ ಬಂತು ಆಗ ಸಿಕ್ಕವ್ರೇ ರಾಜಾರಾಮ್ . ಅವರು ಸಂಗೀತ ಕೊಡಲು ಒಪ್ಪಿದ್ದಲ್ಲದೇ ತಮ್ಮ ಮದ್ರಾಸ್ಗೆಳೆಯನಾದ ಗಣೇಸನ್ ಗೋಪಾಲ್ ಅವರ ಕೈಯಲ್ಲಿ ಸೌಂಡ್ ಎಫೆಕ್ಟ್ಸ್ ಕೊಡಿಸಲು ಮುಂದಾದರು . ನಂತರ ಕಾವ್ಯ ಹಾಗು ಉಮಾಶಂಕರ್ ಅವರು ಚಿತ್ರದಲ್ಲಿ ಬರುವ ಕೊನೆಯ ಪೇಂಟಿಂಗ್ ಗಳಿಗೆ ಕೈ ಜೋಡಿಸಿದರು . ಅಂತೂ ಹೇಗೋ ಎಲ್ಲ ಕಷ್ಟಗಳನ್ನು ದಾಟಿ ಅನಿರೀಕ್ಷಿತ ನಿಮ್ಮ ಕಣ್ಣು ಮುಂದೆ ಬಂತು .

ಈ ಚಿತ್ರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು . ಇದೇ ಹುಮ್ಮಸ್ಸಿನಲ್ಲಿ ಕನ್ನಡ ದಲ್ಲಿ ಹೊಸ ಚಾನೆಲ್ ಒಂದನ್ನು ಶುರು ಮಾಡಿದ್ದೇವೆ . ಅದಕ್ಕೂ ನಿಮ್ಮ  ಸಹಕಾರ ಬೇಕು .

ಅನಿರೀಕ್ಷಿತ ಮಾಡುವಾಗ ನಾನು ಅನೇಕ ಪಾಠ ಗಳನ್ನು ಕಲಿತಿದ್ದೇನೆ .ತಾಳ್ಮೆ ಒಂದು . ಎಲ್ಲದಕ್ಕೂ ದಿಟ್ಟ ಮನಸ್ಸು ಇರಬೇಕು ಅನ್ನುವುದು ಇನ್ನೊಂದು .ಹಾಗೂ ಮನಸ್ಸಿನಿಂದ ನಾವು ಏನಾದರೂ ಇಷ್ಟ ಪಟ್ಟು ಮಾಡಿದರೆ , ಅದು ಪೂರ್ಣ ಗೊಳ್ಳಲು ಇಡೀ ಸಮಾಜವೇ ನಿಮಗೆ ಸಹಕರಿಸುತ್ತದೆ ಎಂಬ ಸತ್ಯ ಅರಿವು ಮೂಡಿಸಿದ್ದೆ  ಅನಿರೀಕ್ಷಿತ.

     Movie link:          https://www.youtube.com/watch?v=UBztWJFgs1o



English summary :



It’s our foolishness to assume that everything that happens here is certain (expectable), because all that happens is UNCERTAIN (UNEXPECTED).
     Yes it's true .In our life everything is unexpected.But it's our job to be optimistic and to believe something good is happening .This article is about the making of anireekshita as short movie has crossed 10 k views.
      Anireekhsita . How it started ? it's interesting .A series of negative events took place before the release of anireekshita and all those contributed to this movie .
My first movie maneeshe was not releasing even though shooting finished six months ago . At the same time one astrologer told me that I would be never an actor as I have don’t look .I was so frustrated and I thought I have to do something now and prove that astrologer by doing a short movie.

        At the same time , I had shared my story to one of the movie group in Infosys Mysore and also my intended to act as lead in it. One boy came forward to direct and I said yes as I was afraid that it would be difficult for me to direct. But the director didn’t like me to cast as hero as I was not good looking .Then the movie was shot without my notice and a handsome boy was casted as a hero .once again I was so sad.But then I decided not to share my story to anyone and I would direct my next movie whatever it takes. My friend Lingaraj said he would help me with camera .We were looking for a story which is good and easy to shoot.

   Then I came across t.P kailsam’s gandaskattri .We thought this story would make best thriller if it is modified little bit .

Even though I wanted to make short movie long time ago, there was no some force to push me into it .Before starting the shoot, one incident in my personal life left me shattered .I had come to know that one thing I love most doesn’t like me and I will be never getting that. I was in depression and I had to do something which I love most to come out of it .And this time I started doing short film .

We faced many problems while shooting and after shooting the movie. But the whole journey was a worth one .We learnt many things ,no wait the journey thought us many good lessons. All along the journey one thing was always getting proved again and again .If you are doing any work from heart ,the whole universe helps you in getting that work done.


















Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...