ಭಾನುವಾರ, ಸೆಪ್ಟೆಂಬರ್ 22, 2013

ಕೋಸಂಬರಿ ಪಾನಕಕ್ಕೆ ಒಂದು ವರ್ಷ

ನಮ್ಮ ಕೋಸಂಬರಿ ಪಾನಕಕ್ಕೆ ಇದೀಗ ಒಂದು ವರ್ಷ.ಈ ಒಂದು ವರ್ಷದಲ್ಲಿ ನನ್ನ ಬರಹಗಳನ್ನು ನೀವು ಓದಿದ್ದೀರಿ,ಪ್ರೋತ್ಸಾಹಿಸಿದ್ದೀರಿ ,ತಪ್ಪಾದಾಗ ಕಿವಿ ಹಿಂಡಿದ್ದೀರಿ. ನಿಜ ಹೇಳಬೇಕೆಂದರೆ ನನಗೆ ಸಾಹಿತ್ಯದ ಗಂಧ ಗಾಳಿಯೂ ತಿಳಿದಿಲ್ಲ.ನನ್ನ ಬರವಣಿಗಯಲ್ಲಿ ಭಾರತದ ಜನಸಂಖ್ಯೆಗಿಂತಲೂ ಜಾಸ್ತಿ ಲೋಪ ದೋಷಗಳನ್ನು ಹುಡುಕಬಹುದು.ಒಂದು ಒಳ್ಳೆಯ ಬರವಣಿಗೆಗೆ ಇರಬೇಕಾದ ಯಾವುದೇ ಲಕ್ಷಣಗಳು ನನ್ನದರಲ್ಲಿ ಕಾಣುವುದಿಲ್ಲಾ. ಆದರೂ ಅದನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ,ಇಲ್ಲಿ ಚೆನ್ನಾಗಿರುವ ಅಂಶಗಳನ್ನು ಮಾತ್ರ ಗುರುತಿಸಿದ ನಿಮ್ಮ ದೊಡ್ಡ ಗುಣಕ್ಕೆ ನಾನು  ಚಿರ ಋಣಿ.
                      ಚಿಕ್ಕವನಿದ್ದಾಗಿನಿಂದಲೂ ನನಗೆ "center of attraction " ಆಗುವ ಗೀಳು ಹಿಡಿದು ಕೊಂಡುಬಿಟ್ಟಿದೆ. ಅದಕ್ಕೇ ಏನೋ ನನ್ನ ಹವ್ಯಾಸಗಳು ,ನನ್ನ ಕನಸುಗಳು ,ನನ್ನ ಬದುಕಿನ ಶೈಲಿ ಎಲ್ಲಾದರ ಮೇಲೂ   ಈ "center of attraction " ಆಗೋ ಹುಚ್ಚು ಪ್ರಭಾವ ಬೀರಿದೆ. ಅದಕ್ಕೇ ಎನೋ ಚಿಕ್ಕಂದಿನಿಂದಲೂ ಕವನ ,ಕಥೆ ಬರೆಯುವುದನ್ನು ಮೈಗೂಡಿಸಿಕೊಂಡೆ. ಮೊದಮೊದಲು ಬೇರೆಯವರ ಮೆಚ್ಚಿಸಲು ಬರೆಯುತ್ತಿದ್ದವನು ,ನಂತರ ನನ್ನ ಮನಸ್ಸಿನ ಸಮಧಾನಕ್ಕೆ ಬರೆಯತೊಡಗಿದೆ. ಈ ನನ್ನ ಬರೆಯುವ ಹುಚ್ಚು ಜಾಸ್ತಿ ಆಗಿ , ನಿಮಗೆ ಹುಚ್ಚು ಹಿಡಿಸುವ ಯೋಚನೆಯೊಂದು ಬಂದಾಗ ಹುಟ್ಟಿದ್ದೇ "ಕೋಸಂಬರಿ ಪಾನಕ". ಬ್ಲಾಗ್ ಬರೆದರೆ ತುಂಬಾ ಜನ ಓದುತ್ತಾರೆ, ಆಗ ಜನ ನನ್ನನ್ನು ಗುರುತ್ತಿಸುತ್ತಾರೆ ಅನ್ನೋದು ನನ್ನ ಅನಿಸಿಕೆ.
                ಹಾಗೂ ಹೀಗೂ ಓಂದು ಒಳ್ಳೆಯ ಮುಹೂರ್ತ ನೋಡಿ, ಬ್ಲಾಗ್ ಶುರು ಮಾಡಿ,  ಬ್ಲಾಗ್ ನಲ್ಲಿ ಒಂದು  ಪೋಸ್ಟ್  ಬರೆದು  ಮೇಲೆ ಪ್ರತಿಕ್ರಿಯೆಗಳಿಗೆ ಕಾಯುತ್ತಾ ಇದ್ದೆ. ಮನದಲ್ಲಿ ಎನೋ ಕುತೂಹಲ.ಜನ ಏನು ಬರೆಯಬಹುದು ,ಯಾರಾದರೂ ಓದುತ್ತಾರೋ ಇಲ್ಲವೋ,ಹೀಗೆ.ಒಂದು ದಿನದ ನಂತರ ಮೊದಲ ಪ್ರತಿಕ್ರಿಯೆ ಬಂದೇ ಬಿಟ್ಟಿತು."ಲೋ ಯಾಕಾದ್ರೂ ನಿಮ್ಮಂತವರು ಬರೀತಿರಾ?ಕುವೆಂಪು,ಕಾರಂತರು ದೊಡ್ಡವರು ಬರೆದಿರೋ ಈ ಕನ್ನಡ ಭಾಷೆನಾ ಹಾಳು ಮಾಡ್ಬೇಡ.ಒಟ್ಟಿನಲ್ಲಿ ನೀ ಬರೆದಿರೋ ಲೇಖನ ಎಲ್ಲಿಂದಾನೋ ಎಲ್ಲಿಗೆ ಹೋಗಿ ಸಖತ್ ಬೋರ್ ಹೊಡೆಸುತ್ತೆ.ದಯವಿಟ್ಟು ಸ್ಟಾಪ್ ಮಾಡಿ". ಕುವೆಂಪು ಮಟ್ಟಿಗೆ ಯಾರಾದರೂ ಹೊಗಳುತ್ತಾರೆ ಆಂತ ಕಾಯುತ್ತಾ ಕುಳಿತವನಿಗೆ , ಇದನ್ನು ಓದಿದಾಗ ಸಗಣಿಯುಂಡೆ ಮಾಡಿ ಹೊಡೆದಂತಾಯಿತು.ಇಂತಹ ಅನುಭವ ಆದ ಮೇಲೂ ಇನ್ನು ಬದುಕಿರಬಾರದು ಏಂದು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದೆ.
                              ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಸ್ಥಳ ಹಾಗು ಸೂಕ್ತ ಮಾರ್ಗದ ಬಗ್ಗೆ ಯೋಚಿಸಲು ಕುಳಿತೆ .ತಲೆ ಓಡಲಿಲ್ಲ.ಕೊನೆಗೆ ಮನೆ ಎದುರುಗಡೆ ಇರುವ ಟೀ ಆಂಗಡಿಗೆ ಹೋಗಿ ಟೀ ಕುಡಿಯುತ್ತಾ ಕುಳಿತೆ. ಆಗ ಟೀ ಮಾರುವವನು ತನ್ನ ಕೆಲಸದವನಿಗೆ ಬಯ್ಯುವುದು ಕಿವಿಗೆ ಬಿತ್ತು "ಹಲ್ಕ ನನ್ನ್ ಮಗನೇ, ಕೆಲ್ಸ ಮಾಡೋಕೆ ಬರೊಲ್ಲಾ ,ಯಾಕೆ ಬದುಕಿದ್ಯಾ?ಚಾಮುಂಡಿ ಬೆಟ್ಟದಿಂದ ಬಿದ್ದು ಸಾಯಿ". ಆಹ್ಹ! ಮುಳುಗದೇ ಸಾಯುತ್ತಿದ್ದ ನನಗೇ   ಒಂದು ಟೀ ಮಾರುವ ಆಂಗಡಿಯಲ್ಲಿ ಮುಳುಗುವ ದಾರಿ ಗೊತ್ತಾಯಿತು.ಖುಷಿಯಲ್ಲಿ   ಅವನಿಗೆ ಎರಡು ರೂಪಾಯಿ ಟೀ ಗೆ ಹತ್ತು ರೂಪಾಯಿ ಕೊಟ್ಟು ಹೊರಟು ಹೋದೆ.ಸಾಯುವ ಮೊದಲು ಎಲ್ಲರಿಗೂ ವಿದಾಯ ಹೇಳಿಬಿಡೋಣ ಎಂದುಕೊಂಡು ಫ಼ೀಸ್ಬುಕ್ ನಲ್ಲಿ "ಎಲ್ಲರಿಗೂ ಟಾಟ" ಎಂದು ಸ್ಟೇಟಸ್ ಅಪ್ಡೇಟ್ ಮಾಡಿದೆ.ನಿಜ ಹೇಳ್ಬೇಕು ಆಂದರೆ  ಯಾರಾದರೂ ಏನಾಯಿತು ಅಂತ ಕೇಳಿ ,ಸಮಧಾನ ಮಾಡುತ್ತಾರೆ ಏಂಬ ಆಸೆಯಿಂದ ಮಾಡಿದೆ.ಸ್ಟೇಟಸ್ ಅಪ್ಡೇಟ್ ಮಾಡಿ ಅರ್ಧ ದಿನ ಆದರೂ ಒಬ್ಬರು ಏನೂ ಪ್ರತಿಕ್ರಯಿಸಲಿಲ್ಲ. ಅದೇ ಸುಮ್ಮನೆ ಬೇಸರದ ಮುಖದ ಸ್ಮೈಲಿ ಹಾಕಿಕೊಂಡಿದ್ದ ಹುಡುಗಿಗೆ ಅರ್ಧ ಘಂಟೆಯಲ್ಲಿ ಒಂದು ಸಾವಿರಕ್ಕೂ ಜಾಸ್ತಿ  ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ನೂರು ಜನ ಏನಾಯಿತು ಅಂತ ತಲೆಕೆಡಿಸಿಕೊಂಡವರು ಇದ್ದರೆ,ಇನ್ನೊಂದಿಷ್ಟು ಜನ "ಎಲ್ಲಿದ್ದಿಯಾ ಬರಲಾ".ಹೀಗೆ ಇದು  ದೇಶದ ಅತೀ ದೊಡ್ಡ ಸಮಸ್ಯೆಯೆಂಬಂತೆ ಪ್ರತಿಕ್ರಯಿಸುತ್ತಿದ್ದರು.ಅದೇ ನನಗೇ  ನನ್ನ ಮೂರು ಜನ ಗೆಳಯರು ಮಾತ್ರ ಪ್ರತಿಕ್ರಯಿಸಿದ್ದರು.ಒಬ್ಬ "ಟಾಟ" ಅಂತ,ಇನ್ನೊಬ್ಬ "ಪಾರ್ಟಿ" " ಅಂತ ,ಇನ್ನೊಬ್ಬ "ಮಗ ಒಳ್ಳೆಯದಾಗಲಿ" ಆಂತ ಪ್ರತಿಕ್ರಯಿಸಿದ್ದರು.ನಮ್ಮ ಭಾರತದಲ್ಲಿ ಬದುಕಲು ದಾರಿ ಹೇಳಿಕೊಡುವ ಮಂದಿ ಸಿಗದೇ ಇರಬಹುದು,ಸಾಯಲು ಉತ್ತೇಜಿಸುವ ಜನ ಬಹಳ ಇದ್ದಾರೆ.ಛೇ! ಗಂಡುಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ ಅಂದುಕೊಂಡು ,ಸಾಯುಲೇಬೇಕು ಆಂತ ತೀರ್ಮಾನ ಮಾಡಿದೆ.
       ಚಾಮುಂಡಿ ಬೆಟ್ಟ ಹತ್ತಿ ಇನ್ನೇನು ಸಾಯಬೇಕು ಅಂತ ನಿಂತಾಗ ,ಕಾಲಿಗೆ ಎನೋ ಚುಚ್ಚಿದಂತಾಗಿ ಆಕಡೆ  ಒಂದು ಗಿಡದ ಮುಳ್ಳು. ನಾನು ಒಂದು ಗಿಡವನ್ನು ತುಳಿದಿದ್ದೆ. ಆ ಗಿಡದ ಮೈ ತುಂಬಾ ಮುಳ್ಳು. ಆದ್ರೂ ಆ ಗಿಡ ಒಂದು ಸುಂದರವಾದ  ಹೂ ಬಿಟ್ಟಿತ್ತು.ತಕ್ಷಣ ಅಲ್ಲಿಂದ ಹಾದಿ ಹೋಗುತ್ತಿದ್ದ ಯಾರೋ ಅದೇ ಗಿಡದ ಹೂವನ್ನು ನೋಡುತ್ತಾ "ನೋಡಿ ,ಆ ಗಿಡದ ಹೂವನ್ನು . ಗಿಡದ ತುಂಬಾ ಮುಳ್ಳು ತುಂಬಿಕೊಂಡಿದ್ದರೂ ಎಂತಹ ಸುಂದರವಾದ ಹೂವು ಬಿಟ್ಟಿದೆ ಆಂತ". ಈ ಮಾತುಗಳನ್ನು  ಕೇಳಿದ ನಂತರ ನಂಗೇನೋ ಹೊಳೆದಂತಾಯಿತು. ಆ ಹೂವು ಚೆನ್ನಾಗಿದ್ದಿರಬಹುದು ಆದರೆ ಅದರೆ ಜೊತೆಗಿನ ಮುಳ್ಳು ಎಷ್ಟು ಕೆಟ್ಟದಾಗಿತ್ತೆಂದರೆ ,ನೋಡಿದವರಿಗೆ ಹೂವು ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಿತ್ತು.
ಹೌದಲ್ಲವಾ. ಜಗತ್ತಿನಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರೆ, ಎಕಾತನತೆ ಇರುತಿತ್ತು. ಅಲ್ಲವಾ. ಒಂದು ಆಟದಲ್ಲಿ ಗೆಲ್ಲಬೇಕಂದರೆ ಇನ್ನೆಲ್ಲರೂ ಸೋಲಬೇಕು. ಎಲ್ಲರೂ ಗೆದ್ದರೇ ಅದು ಗೆಲುವೇ ಅಲ್ಲಾ.ಎಲ್ಲವೂ ಚೆನ್ನಾಗಿದ್ದರೆ ಹಾಗೆಯೇ ಆಗುವುದು. ಅದಕೆ ಕನ್ನಡದ ಸಾಹಿತ್ಯದಲ್ಲಿ ಕೆಟ್ಟ ಸಾಹಿತ್ಯದ ನಿದರ್ಶನವಾಗಿ ನನ್ನ ಸಾಹಿತ್ಯ ಯಾಕಿರಬಾರದು ? ಜನರ ಬಾಯಲ್ಲಿ ನಾನು ಕೊನೆ ತನಕ ಉಳಿಯಬಹುದು. ಹೇಗೆ ಅಂತೀರಾ?ಉದಾಹರಣೆಗೆ  "ಲೋ ನಿನ್ನ ಮುಖ ಎಷ್ಟು ಕೆಟ್ಟದಾಗಿದೆಯೆಂದರೆ,ಒಳ್ಳೇ ಶ್ರವಣ್ ಬರೆದಿರೋ ಲೇಖನ ಇದ್ದ ಹಾಗಿದೆ". "ಕನ್ನಡದಲ್ಲಿ ಎರಡು ಥರಹ ಸಾಹಿತ್ಯ ಇದೆ ಒಂದು ಒಳ್ಳೆಯ ಸಾಹಿತ್ಯ,ಇನ್ನೊಂದು ಶ್ರವಣನ ಸಾಹಿತ್ಯ" ಹೀಗೆ. ಜನ  ದೇವರ ಜೊತೆ ರಾಕ್ಷಸರ ನೆನಪು ಇಟ್ಟು ಕೊಂಡ ಹಾಗೆ. ಅದಕ್ಕೆ ನಾನು ಸಾಯುವುದು ಬಿಟ್ಟು ಮತ್ತೆ ಬರೆಯಲು ಶುರು ಮಾಡಿದೆ.ಛೇ ! ಅಂತ ನೀವು ಬಯ್ಯತ್ತಾ ಕುಳಿತಿರಬಹುದು. ಆದ್ರೆ ಏನು ಮಾಡುವುದು ನಾನು ಒಂದು ಸಲ ಕಮಿಟ್ ಆದ್ರೆ ನನ್ನಮಾತು ನಾನೇ ಕೇಳುವುದಿಲ್ಲಾ.
English summary: First year anniversary to my Kannada blog.I am grateful to u all for reading my blog.First of all I know I am not such a good writer.I know there are so many grammatical mistakes, spelling mistakes. In spite of all that u have embraced my writing.After starting a blog and posting my first post,I was very keen to read my first comment.But after reading my first comment in which the reader scolded me for bad writing I thought of committing suicide.I went to Chamundi hills to commit suicide.When I was about to jump I heard someone saying "see this plant,Its full of thorns.yet the flower is beautiful". Then a thought flashed across my mind.The flower is beautiful but the thorns added to it's beauty.Then I thought I  may be not the flower ,but I am thorn.May be my literature get considered as bad literature in Kannada Language. Whatever I will remain in people mind.So,I dropped the idea of committing suicide and then came back.Now I have decided that I will continue with my blog.

4 ಕಾಮೆಂಟ್‌ಗಳು:

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...