ಇಂದು ಬೀದಿಬೀದಿಗಳಲ್ಲಿ ,ಗಲ್ಲಿಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಗಣೇಶನ ಮೂರ್ತಿ ಇರುವ ಪೆಂಡಾಲುಗಳು ಕಾಣುತ್ತಿದ್ದೆ.ಮೂಷಿಕವಾಹನದ ಮೇಲೆ ಕೂರುವ ಗಣಪತಿಯಿಂದ ಹಿಡಿದು ಮೈಕಲ್ ಜಾಕ್ಸನ್ ಗಣಪತಿಯ ತನಕ ಸಾವಿರಾರು ರೂಪದಲ್ಲಿ ಗಣಪತಿಯನ್ನು ಕಾಣಬಹುದು.ಹೇಳಬೇಕಂದರೆ,ದೇವರಲ್ಲಿ ನಮ್ಮ ಗಣಪತಿಯು ಕ್ರಿಕೆಟ್ ಆಟದಲ್ಲಿ ಬರುವ ಗ್ಯಾಲರಿ ಪ್ಲೇಯರ್ ಇದ್ದ ಹಾಗೆ. ಕ್ರಿಕೆಟ್ನಲ್ಲಿ ಗ್ಯಾಲರಿ ಪ್ಲೇಯರ್ ಅನ್ನಿಸಿಕೊಂಡ ಆಟಗಾರ ಆಟದ ಮೈದಾನದಲ್ಲಿ ಇರುವವರೆಗೂ ಹೇಗೆ ಬೌಂಡರಿಗಳ ಸುರಿಮಳೆ ಸುರಿದು ವೀಕ್ಷಕರ ಮನದಣಿಸುತ್ತಾನೋ,ಹಾಗೆಯೇ ನಮ್ಮ ಗಣಪನೂ ಇದ್ದಷ್ಟೂ ದಿನ ನಮಲ್ಲಿ ಉತ್ಸಾಹ ತುಂಬಿ ತುಳುಕುವಂತೆ ನೋಡಿಕೊಳ್ಲುತ್ತಾನೆ. ಒಟ್ಟಿನಲ್ಲಿ ಹೇಳ್ಬೇಕೆಂದರೆ ನಮ್ಮ ಗಣೇಶ ಮಾಸ್ ಹೀರೊ.
ಸಾರ್ವಜನಿಕ ವಲಯದಲ್ಲಿ ಗಣೇಶ ಚತುರ್ಥಿ ಆಚರಣೆ ಈ ಮಟ್ಟಿಗೆ ಆಚರಣೆಗೊಳ್ಳಲು ಕಾರಣ ನಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕರು. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶ ಹಬ್ಬ ಮನೆಮನೆಗಳಿಗೆ ಸೀಮಿತ ವಾಗಿತ್ತು. ಗಣೇಶನ ಜನಪ್ರಿಯತೆಯನ್ನು ಕಂಡ ತಿಲಕರು ಅದನ್ನು ದೇಶದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಬ್ರಿಟಿಷರ ವಿರುದ್ಧ ಎತ್ತಿ ಕಟ್ಟಲು ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ದೊಡ್ದ ದೊಡ್ಡ ಗಣೇಶ ಮೂರ್ತಿಗಳನ್ನು ಇಡುವುದು,ಕೆರೆಗಳಲ್ಲಿ ಮುಳುಗಿಸುವ ಪದ್ಧತಿಗಳನ್ನು ಶುರು ಮಾಡಿದ್ದು ಲೋಕಮಾನ್ಯ ತಿಲಕರು.
ಅಂದಿನಿಂದ ಶುರುವಾದ ಈ ಪದ್ಧತಿ ಸ್ವಾತಂತ್ರ್ಯದ ನಂತರವೂ ಮುಂದುವರೆದುಕೊಂಡು ಬಂದಿದೆ.ಆದರೆ ಈಗಿನ ಆಚರಣೆಗಳು ಎಲ್ಲೋ ಅರ್ಥಕೊಳ್ಳುತ್ತಿದೆ ಅನ್ನಿಸುತ್ತಿದೆ.ಮೊದಲನೆಯದಾಗಿ ಗಣೇಶ ಹಬ್ಬದ ಆಚರಣೆ ಇಂದು ಪ್ರತಿಷ್ಠೆಯ ಪ್ರತೀಕವಾಗಿಬಿಟ್ಟಿದೆ.ಅದಕ್ಕೆ ಎನೋ ಈ ಸಲ ಈ ಬೀದಿಯಲ್ಲಿ ಗಣೇಶ ಇಟ್ಟರು ಅಂತ ಮುಂದಿನ ವರ್ಷ ಇನ್ನೊಂದು ಬೀದಿಯಲ್ಲಿ ಗಣೇಶ,ಈ ಸಂಘದವರು ಇಟ್ಟರು ಆಂತ ಇನ್ನೊಂದು ಸಂಘ ಹೀಗೆ ವರ್ಷದಿಂದ ವರ್ಷ ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ.ಕಾಲ ಬದಲಾದಂತೆ ನಾವು ಇದರಿಂದಾಗುವ ಸಮಸ್ಯೆಗಳನ್ನು ನೋಡಬೇಕಾಗಿದೆ.
ಈಗಂತೂ ಎಲ್ಲೆಂದರಲ್ಲಿ ರೋಡನ್ನು ಬ್ಲಾಕ್ ಮಾಡಿ ಗಣೇಶನನ್ನು ನಿಲ್ಲಿಸಲಾಗುತ್ತದೆ .ಹಬ್ಬದ ಆಸುಪಾಸು ದಿನಗಳು ಇದರಿಂದಾಗಿ ಟ್ರಾಫಿಕ್ ಸಮಸ್ಯೆ ದೊಡ್ಡ ದೊಡ್ಡ ಊರುಗಳಲ್ಲಿ ಸರ್ವೇ ಸಾಮನ್ಯ.ಇದರಿಂದಾಗಿ ಅಷ್ಟು ದಿನಗಳೂ ಜನರಿಗೆ ಹಬ್ಬ ಯಾಕಾದರೂ ಬಂದಿದೆ ಆನ್ನಿಸಿಬಿಡುತ್ತದೆ.ಇನ್ನೂ ಕೆಲವು ಕಡೆಯಂತೂ ಕಿವಿ ಹರಿದು ಹೋಗುವ ಹಾಗೆ ಮೈಕ್ ಸೆಟ್ ನಲ್ಲಿ ಹಾಡು ಅಥವಾ ಕಾರ್ಯಕ್ರಮ ನಡೆಸುತ್ತಿರುತ್ತಾರೆ. ಗಣೇಶ ವಿನೋದ ಪ್ರಿಯ. ಹಾಗೆ ಅವನ ಹೆಸರಲ್ಲಿ ಒಂದಿಷ್ಟು ಕಾರ್ಯಕ್ರಮ ಮಾಡಿ ನಾಲ್ಕೈದು ಜನ ಸೇರಿದರೆ ಏನು ತಪ್ಪು ಆಂತ ಪ್ರಶ್ನೆ ನೀವು ಕೇಳಬಹುದು.ನಿಜ ಹೇಳಬೇಕೆಂದರೆ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಏನು ತಪ್ಪಿಲ್ಲ. ಹೊರಗೆ ಒಂದಿಷ್ಟು ಜನ ಸೇರಲು ಸಹಾಯವಾಗುತ್ತದೆ.ಇದರಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ.ಆಷ್ಟೇ ಅಲ್ಲಾ ಇಲ್ಲಿನ ವೇದಿಕೆಗಳು ಕೆಲವೊಮ್ಮೆ ಅದೆಷ್ಟೋ ಟಾಲೆಂಟ್ಸ್ ಗಳನ್ನು ಬೆಳಕಿಗೆ ತರುತ್ತದೆ.
ಆದರೆ ಇತ್ತೀಚೆಗೆ ಈ ಕಾರ್ಯಕ್ರಮಗಳನ್ನು ನೋಡಿದಾಗ ನಿಜವಾಗಲೂ ಮೇಲಿನ ಸದುದ್ದೇಶಗಳು ಕಾಣ ಸಿಗುವುದೇ ಇಲ್ಲಾ. ಗಣೇಶನ ಪೆಂಡಾಲ್ಗಳಲ್ಲಿ ಹಾಡುವ ಹಾಡುಗಳು ನಿಜವಾಗಲೂ ಗಣೇಶ ಕೇಳಿಸಿಕೊಂಡರೆ ಕಿವಿಮುಚ್ಚುಕೊಳುತ್ತಾನೆ. ರವಿಚಂದ್ರನ್ ಚಿತ್ರದ ಯಮ್ಮೊ ಯಮ್ಮೋ, ಭಟ್ಟರ ಹಳೇ ಪಾತ್ರೆ ಯಂತಹ ಪೋಲಿ ಹಾಡುಗಳು,ಹಿಂದಿ ಚಿತ್ರದ ಹೆಣ್ನನ್ನು ಕಾಮ ದೃಷ್ಟಿಯಲ್ಲಿ ನೋಡುವ ಮುನ್ನಿ,ಶೀಲಾ ಹಾಡುಗಳು.ಇನ್ನೂ ವೇದಿಕೆಗಳಲ್ಲಿ ಕೆಲವೊಮ್ಮೆ ನಡೆಯುವ ಕಾರ್ಯಕ್ರಮಗಳು ಅಂತೂ ಕೇಳಬೇಡಿ.ದ್ವಂದಾರ್ಥಗಲು ಇರುವ ಹಾಸ್ಯಗಳು,ಅರಬರೆ ಬಟ್ಟೆಯ ಫ಼್ಯಾಷನ್ ಶೋಗಳು,ಕ್ಯಾಬರೆ ಹಾಡುಗಳ ಅರ್ಥ ತಿಳಿಯದೆ ಕುಣಿಯುವ ಚಿಕ್ಕ ಮಕ್ಕಳು,ಪುಟ್ಟ ಹುಡುಗಿಯರು. ಇವೆಲ್ಲಾ ಬಿಟ್ಟು ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ಮತ್ತು ಮನೋರಂಜನೆಯ ಎಲ್ಲೆ ಮೀರದ ಕಾರ್ಯಕ್ರಮಗಳು ನಡೆಯಬೇಕು ಎಂಬುದು ನನ್ನ ವಾದ.
ಇನ್ನೂ ಗಣೇಶನನ್ನು ಮುಳುಗಿಸುವ ನೆಪದಲ್ಲಿ ನಡೆಯುವ ಧಾಂದಲೆಗಳು ,ಕೊಳ,ನದಿಗಳ ಮಾಲಿನ್ಯ .ಇವುಗಳ ಬಗ್ಗೆ ಸ್ವಲ್ಪ ನಿಗಾ ವಹಿಸಲಾಗಿದೆ ಆದರೂ ನೀರಿಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲಾ ಅನ್ನುವುದು ಬೇಜರ.ಕೆಲವೊಮ್ಮೆ ಈ ಗಣೇಶ ಪೆಂಡಾಲ್ಗಳು ಕುಡುಕರ ಅಡ್ಡೆಯಾಗಿ ಬಿಡುತ್ತದೆ. ಹೆಣ್ಣುಮಕ್ಕಳು ಒಡಾಡುವುದು ಯೋಗ್ಯವಲ್ಲದ ಪೋಲಿಗಳ ಅಡ್ಡೆಯಾಗಿಬಿಡುತ್ತದೆ.ದೇವರ ಹೆಸರಲ್ಲಿ ಇವೆಲ್ಲಾ ಯಾಕೆ?
ನಾನು ಒಬ್ಬ ಹಿಂದುವಾಗಿ ಗಣೇಶ ಹಬ್ಬದ ಆಚರಣೆಯನ್ನು ವಿರೋಧಿಸುತ್ತಿದ್ದೇನೆಂದು ನನ್ನನ್ನು ಹಿಂದು ವಿರೋಧಿ ಗುಂಪಿಗೆ ಸೇರಿಸಿಕೊಳ್ಳಬೇಡಿ.ಸ್ವಾತಂತ್ರ್ಯ ತಂದುಕೊಡಲು ಸಹಕರಿಯಾದ ಗಣೇಶನ ಹುಟ್ಟು ಹಬ್ಬಕ್ಕೆ ನಮ್ಮ ಸಮಾಜದಲ್ಲಿ ಒಂದು ವಿಶೇಷ ಸ್ಥಾನಮಾನವಿದೆ.ಅದಕ್ಕೆ ವಿದೇಶದಲ್ಲಿಯೂ ಈ ಹಬ್ಬವನ್ನೂ ಆಚರಿಸಲಾಗುತ್ತದೆ.ಇಂತಹ ಒಂದು ಹಬ್ಬ ದಿನದಿಂದ ದಿನೇ ಅರ್ಥ ಕಳೆದುಕೊಳ್ಳದೇ ನಮ್ಮ ಸಂಸ್ಕೃತಿ ಬೆಳಸುವ, ಸೌಹಾರ್ದತೆ ಮೆರೆಯುವ ಅರ್ಥಪೂರ್ಣ ಹಬ್ಬವಾಗಿರಲಿ ಎಂಬುದು ನನ್ನ ಆಶಯ.
English summary: When its comes to popularity in Indian gods,Ganesh is the mass entertainer. Before Independence Ganesh festival used to get celebrated only in homes.Later lokamaanya tilak started to celebrate the ganesh festival In public places.He is used address the social gatherings and bring awareness in people about the bad consequences of Britishrule. Post Independence Ganesh festivals changed a lot.Nowadays they are loosing its importance and erecting ganesh pendals have been matter of prestige.Water pollution is getting increased during the immersion of ganesh. So ,Ganesh chaturthi celebration
which have historical importance should be celebrated in a such way so that they don't loose importance.
ಸಾರ್ವಜನಿಕ ವಲಯದಲ್ಲಿ ಗಣೇಶ ಚತುರ್ಥಿ ಆಚರಣೆ ಈ ಮಟ್ಟಿಗೆ ಆಚರಣೆಗೊಳ್ಳಲು ಕಾರಣ ನಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕರು. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶ ಹಬ್ಬ ಮನೆಮನೆಗಳಿಗೆ ಸೀಮಿತ ವಾಗಿತ್ತು. ಗಣೇಶನ ಜನಪ್ರಿಯತೆಯನ್ನು ಕಂಡ ತಿಲಕರು ಅದನ್ನು ದೇಶದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಬ್ರಿಟಿಷರ ವಿರುದ್ಧ ಎತ್ತಿ ಕಟ್ಟಲು ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ದೊಡ್ದ ದೊಡ್ಡ ಗಣೇಶ ಮೂರ್ತಿಗಳನ್ನು ಇಡುವುದು,ಕೆರೆಗಳಲ್ಲಿ ಮುಳುಗಿಸುವ ಪದ್ಧತಿಗಳನ್ನು ಶುರು ಮಾಡಿದ್ದು ಲೋಕಮಾನ್ಯ ತಿಲಕರು.
ಅಂದಿನಿಂದ ಶುರುವಾದ ಈ ಪದ್ಧತಿ ಸ್ವಾತಂತ್ರ್ಯದ ನಂತರವೂ ಮುಂದುವರೆದುಕೊಂಡು ಬಂದಿದೆ.ಆದರೆ ಈಗಿನ ಆಚರಣೆಗಳು ಎಲ್ಲೋ ಅರ್ಥಕೊಳ್ಳುತ್ತಿದೆ ಅನ್ನಿಸುತ್ತಿದೆ.ಮೊದಲನೆಯದಾಗಿ ಗಣೇಶ ಹಬ್ಬದ ಆಚರಣೆ ಇಂದು ಪ್ರತಿಷ್ಠೆಯ ಪ್ರತೀಕವಾಗಿಬಿಟ್ಟಿದೆ.ಅದಕ್ಕೆ ಎನೋ ಈ ಸಲ ಈ ಬೀದಿಯಲ್ಲಿ ಗಣೇಶ ಇಟ್ಟರು ಅಂತ ಮುಂದಿನ ವರ್ಷ ಇನ್ನೊಂದು ಬೀದಿಯಲ್ಲಿ ಗಣೇಶ,ಈ ಸಂಘದವರು ಇಟ್ಟರು ಆಂತ ಇನ್ನೊಂದು ಸಂಘ ಹೀಗೆ ವರ್ಷದಿಂದ ವರ್ಷ ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ.ಕಾಲ ಬದಲಾದಂತೆ ನಾವು ಇದರಿಂದಾಗುವ ಸಮಸ್ಯೆಗಳನ್ನು ನೋಡಬೇಕಾಗಿದೆ.
ಈಗಂತೂ ಎಲ್ಲೆಂದರಲ್ಲಿ ರೋಡನ್ನು ಬ್ಲಾಕ್ ಮಾಡಿ ಗಣೇಶನನ್ನು ನಿಲ್ಲಿಸಲಾಗುತ್ತದೆ .ಹಬ್ಬದ ಆಸುಪಾಸು ದಿನಗಳು ಇದರಿಂದಾಗಿ ಟ್ರಾಫಿಕ್ ಸಮಸ್ಯೆ ದೊಡ್ಡ ದೊಡ್ಡ ಊರುಗಳಲ್ಲಿ ಸರ್ವೇ ಸಾಮನ್ಯ.ಇದರಿಂದಾಗಿ ಅಷ್ಟು ದಿನಗಳೂ ಜನರಿಗೆ ಹಬ್ಬ ಯಾಕಾದರೂ ಬಂದಿದೆ ಆನ್ನಿಸಿಬಿಡುತ್ತದೆ.ಇನ್ನೂ ಕೆಲವು ಕಡೆಯಂತೂ ಕಿವಿ ಹರಿದು ಹೋಗುವ ಹಾಗೆ ಮೈಕ್ ಸೆಟ್ ನಲ್ಲಿ ಹಾಡು ಅಥವಾ ಕಾರ್ಯಕ್ರಮ ನಡೆಸುತ್ತಿರುತ್ತಾರೆ. ಗಣೇಶ ವಿನೋದ ಪ್ರಿಯ. ಹಾಗೆ ಅವನ ಹೆಸರಲ್ಲಿ ಒಂದಿಷ್ಟು ಕಾರ್ಯಕ್ರಮ ಮಾಡಿ ನಾಲ್ಕೈದು ಜನ ಸೇರಿದರೆ ಏನು ತಪ್ಪು ಆಂತ ಪ್ರಶ್ನೆ ನೀವು ಕೇಳಬಹುದು.ನಿಜ ಹೇಳಬೇಕೆಂದರೆ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಏನು ತಪ್ಪಿಲ್ಲ. ಹೊರಗೆ ಒಂದಿಷ್ಟು ಜನ ಸೇರಲು ಸಹಾಯವಾಗುತ್ತದೆ.ಇದರಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ.ಆಷ್ಟೇ ಅಲ್ಲಾ ಇಲ್ಲಿನ ವೇದಿಕೆಗಳು ಕೆಲವೊಮ್ಮೆ ಅದೆಷ್ಟೋ ಟಾಲೆಂಟ್ಸ್ ಗಳನ್ನು ಬೆಳಕಿಗೆ ತರುತ್ತದೆ.
ಆದರೆ ಇತ್ತೀಚೆಗೆ ಈ ಕಾರ್ಯಕ್ರಮಗಳನ್ನು ನೋಡಿದಾಗ ನಿಜವಾಗಲೂ ಮೇಲಿನ ಸದುದ್ದೇಶಗಳು ಕಾಣ ಸಿಗುವುದೇ ಇಲ್ಲಾ. ಗಣೇಶನ ಪೆಂಡಾಲ್ಗಳಲ್ಲಿ ಹಾಡುವ ಹಾಡುಗಳು ನಿಜವಾಗಲೂ ಗಣೇಶ ಕೇಳಿಸಿಕೊಂಡರೆ ಕಿವಿಮುಚ್ಚುಕೊಳುತ್ತಾನೆ. ರವಿಚಂದ್ರನ್ ಚಿತ್ರದ ಯಮ್ಮೊ ಯಮ್ಮೋ, ಭಟ್ಟರ ಹಳೇ ಪಾತ್ರೆ ಯಂತಹ ಪೋಲಿ ಹಾಡುಗಳು,ಹಿಂದಿ ಚಿತ್ರದ ಹೆಣ್ನನ್ನು ಕಾಮ ದೃಷ್ಟಿಯಲ್ಲಿ ನೋಡುವ ಮುನ್ನಿ,ಶೀಲಾ ಹಾಡುಗಳು.ಇನ್ನೂ ವೇದಿಕೆಗಳಲ್ಲಿ ಕೆಲವೊಮ್ಮೆ ನಡೆಯುವ ಕಾರ್ಯಕ್ರಮಗಳು ಅಂತೂ ಕೇಳಬೇಡಿ.ದ್ವಂದಾರ್ಥಗಲು ಇರುವ ಹಾಸ್ಯಗಳು,ಅರಬರೆ ಬಟ್ಟೆಯ ಫ಼್ಯಾಷನ್ ಶೋಗಳು,ಕ್ಯಾಬರೆ ಹಾಡುಗಳ ಅರ್ಥ ತಿಳಿಯದೆ ಕುಣಿಯುವ ಚಿಕ್ಕ ಮಕ್ಕಳು,ಪುಟ್ಟ ಹುಡುಗಿಯರು. ಇವೆಲ್ಲಾ ಬಿಟ್ಟು ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ಮತ್ತು ಮನೋರಂಜನೆಯ ಎಲ್ಲೆ ಮೀರದ ಕಾರ್ಯಕ್ರಮಗಳು ನಡೆಯಬೇಕು ಎಂಬುದು ನನ್ನ ವಾದ.
ಇನ್ನೂ ಗಣೇಶನನ್ನು ಮುಳುಗಿಸುವ ನೆಪದಲ್ಲಿ ನಡೆಯುವ ಧಾಂದಲೆಗಳು ,ಕೊಳ,ನದಿಗಳ ಮಾಲಿನ್ಯ .ಇವುಗಳ ಬಗ್ಗೆ ಸ್ವಲ್ಪ ನಿಗಾ ವಹಿಸಲಾಗಿದೆ ಆದರೂ ನೀರಿಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲಾ ಅನ್ನುವುದು ಬೇಜರ.ಕೆಲವೊಮ್ಮೆ ಈ ಗಣೇಶ ಪೆಂಡಾಲ್ಗಳು ಕುಡುಕರ ಅಡ್ಡೆಯಾಗಿ ಬಿಡುತ್ತದೆ. ಹೆಣ್ಣುಮಕ್ಕಳು ಒಡಾಡುವುದು ಯೋಗ್ಯವಲ್ಲದ ಪೋಲಿಗಳ ಅಡ್ಡೆಯಾಗಿಬಿಡುತ್ತದೆ.ದೇವರ ಹೆಸರಲ್ಲಿ ಇವೆಲ್ಲಾ ಯಾಕೆ?
ನಾನು ಒಬ್ಬ ಹಿಂದುವಾಗಿ ಗಣೇಶ ಹಬ್ಬದ ಆಚರಣೆಯನ್ನು ವಿರೋಧಿಸುತ್ತಿದ್ದೇನೆಂದು ನನ್ನನ್ನು ಹಿಂದು ವಿರೋಧಿ ಗುಂಪಿಗೆ ಸೇರಿಸಿಕೊಳ್ಳಬೇಡಿ.ಸ್ವಾತಂತ್ರ್ಯ ತಂದುಕೊಡಲು ಸಹಕರಿಯಾದ ಗಣೇಶನ ಹುಟ್ಟು ಹಬ್ಬಕ್ಕೆ ನಮ್ಮ ಸಮಾಜದಲ್ಲಿ ಒಂದು ವಿಶೇಷ ಸ್ಥಾನಮಾನವಿದೆ.ಅದಕ್ಕೆ ವಿದೇಶದಲ್ಲಿಯೂ ಈ ಹಬ್ಬವನ್ನೂ ಆಚರಿಸಲಾಗುತ್ತದೆ.ಇಂತಹ ಒಂದು ಹಬ್ಬ ದಿನದಿಂದ ದಿನೇ ಅರ್ಥ ಕಳೆದುಕೊಳ್ಳದೇ ನಮ್ಮ ಸಂಸ್ಕೃತಿ ಬೆಳಸುವ, ಸೌಹಾರ್ದತೆ ಮೆರೆಯುವ ಅರ್ಥಪೂರ್ಣ ಹಬ್ಬವಾಗಿರಲಿ ಎಂಬುದು ನನ್ನ ಆಶಯ.
English summary: When its comes to popularity in Indian gods,Ganesh is the mass entertainer. Before Independence Ganesh festival used to get celebrated only in homes.Later lokamaanya tilak started to celebrate the ganesh festival In public places.He is used address the social gatherings and bring awareness in people about the bad consequences of Britishrule. Post Independence Ganesh festivals changed a lot.Nowadays they are loosing its importance and erecting ganesh pendals have been matter of prestige.Water pollution is getting increased during the immersion of ganesh. So ,Ganesh chaturthi celebration
which have historical importance should be celebrated in a such way so that they don't loose importance.
These sort of essays are very apt for today's deteriorating social scene. Good one!
ಪ್ರತ್ಯುತ್ತರಅಳಿಸಿthanks mam..I am happy as u read it
ಪ್ರತ್ಯುತ್ತರಅಳಿಸಿನಿಜ, ಗಣೇಶೋತ್ಸವಗಳ ಮೂಲ ಉದ್ದೇಶಗಳೇ ಮರೆಯಾಗಿ, ಇಂದು ಮೋಜು ಮಸ್ತಿಗಾಗಿ ಬಳಕೆಯಾಗುತ್ತಿರುವುದು ಬೇಸರದ ವಿಷಯವೇ
ಪ್ರತ್ಯುತ್ತರಅಳಿಸಿwww.karnatakainfoline.com
Actually the matter which you told in this blog is true and fact but you do think about the abolishment of these activity from educated people ,now a days educated only doing these activities ,so from now only (IT,BT)try wash out though media.
ಪ್ರತ್ಯುತ್ತರಅಳಿಸಿUr artical is gud.. but shravan geneartion has been changed.. yen madodu ganesha kuda change agidane... now a days indian sampradaya, paddati .. achara vichar yellavu change agidddu nammindale... adannu naave change madbeku aste.. indian culture is gud but Indian r not.. adakke
ಪ್ರತ್ಯುತ್ತರಅಳಿಸಿ@shivakumar :thanks for reading
ಪ್ರತ್ಯುತ್ತರಅಳಿಸಿ@praveen :thanks
ಪ್ರತ್ಯುತ್ತರಅಳಿಸಿ