ಮಂಗಳವಾರ, ನವೆಂಬರ್ 5, 2013

ಕನ್ನಡ



ಕನ್ನಡ




ಭುವನೇಶ್ವರಿಯ ತಾಯಿಯ

ಮೈನವಿರಿಲೇಳಿಸುವ

ಗೆಜ್ಜೆನಾದ ಕನ್ನಡ,

ಕೋಲಾರದ ಕಣ್ಣು ಕೋರೈಸುವ

ಹೊನ್ನು ಕನ್ನಡ,

ಕಾನನದ ಗಂಧದ ಮರದ

ಘಮ ಘಮ ಕನ್ನಡ,

ಧುಮುಕುವ ಜೋಗದ

ಬೆಡಗು ಕನ್ನಡ,

ಕಬ್ಬಿನ ಹಾಲಿನ ಸಿಹಿ

ಸವಿ ಕನ್ನಡ,

ಕರುನಾಡಿನ ಅಣು ಅಣುವು

ಕನ್ನಡ.




ಇಂದು

ಅರಳಲು ಹಿಂದೇಟು

ಹಾಕುತಿದೆ ಮೈಸೂರು ಮಲ್ಲಿಗೆ,

ಚಾಮುಂಡಿ ಶಿಖರವು

ನಡುಗುತಿದೆ ಶೀತಲ ಗಾಳಿಗೆ,

ಪವಿತ್ರ ಕಾವೇರಿಯೂ ಮೆಲ್ಲಗೆ

ಆಗುತಿದೆ ಮೈಲಿಗೆ,

ಸೂರ್ಯನ ಕಿರಣಗಳು

ಸವಾಲು ಹಾಕುವಂತಾಗಿದೆ

ಕನ್ನಡ ತಾಯಿಯ

ತ್ರಿಶೂಲದ ಹೊಳಪಿಗೆ,

ಏಕಂದರೆ ಕನ್ನಡಿಗರೇ

ಬಯಸುತ್ತಿಲ್ಲ ಕನ್ನಡದ ಏಳಿಗೆ,

ಜೊತೆಗೆ ಕನ್ನಡವನ್ನು

ಮರೆಯುತ್ತಿದೆ

ಕನ್ನಡಿಗರ ನಾಲಿಗೆ.




ಮನವಿ




ಹೊರನಾಡಿನಿಂದ

ಕರುನಾಡಿಗೆ ಬಂದ

ಕನ್ನಡೇತರರೇ,

ಸಲ್ಲದು ಕನ್ನಡ ಭಾಷೆಗೆ

ನಿಮ್ಮ ಅಸಡ್ಡೆ, ಅಸಹ್ಯ,

ನಿಂದನೆ,

ಕನ್ನಡ ಭಾಷೆಗೆ ಅಪಮಾನ ,

ಕನ್ನಡ ತಾಯಿಯಿಗೆ ಅವಮಾನ,

ಇವೆರಡೂ ಒಂದೇನೆ.

ನಿಮ್ಮನ್ನು ಒಡಹುಟ್ಟಿದ

ಮಕ್ಕಳಂತೆ ಕಂಡ

ಕನ್ನಡ ತಾಯಿಗೆ

ಸಲ್ಲಬೇಕು ಅಭಿನಂದನೆ,

ಕನ್ನಡದಲ್ಲಿ ಮಾತನಾಡುವುದೇ

ನೀವು ಆಕೆಗೆ

ಸಲ್ಲಿಸುವ ಅಭಿನಂದನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...