ಬುಧವಾರ, ಮಾರ್ಚ್ 26, 2014

ಈ ರೋಗಕ್ಕೆ ಮದ್ದು ಏನು ?



        ಏನು ಮಾಡಿದರೂ ಅದು ನಿನಗೆ ಸಿಗುವುದಿಲ್ಲ ಎಂದು ಊರ ಜನ, ಅವನಿಗೆ ಬುದ್ಧಿವಾದ ಹೇಳುತ್ತಲೇ ಇದ್ದರು .ಆತನಿಗೂ ಆ ಸತ್ಯ ಗೊತ್ತಿತ್ತು . ಆದರೆ ಅವನು ಮಾತ್ರ ಹುಚ್ಚನಂತೆ ಅದರ ಹಿಂದೆ ಅಲೆದ .ಅಲ್ಲೆಯುತ್ತಲೇ ಇದ್ದ .ದಿನದಿಂದ ದಿನ , ಅ ವಸ್ತು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಬೆಳೆಯತೊಡಗಿತು . ಆ ಅಸೆ ಅದೆಷ್ಟು ಅಗಾಧವಾಗಿ ಬೆಳೆಯತೊಡಗಿತೆಂದರೆ ಅದು ಅವನ ಹೊರಗೆ ಹುತ್ತದಂತೆ ಬೆಳೆದು ಅವನನ್ನು ಮುಚ್ಚಲು ಶುರುವಾಯಿತು .ಮನಸು ಮಾಡಿದ್ದರೆ ಆತ ಅದನ್ನು ತಡೆಯಬಹುದಿತ್ತು .ಆ ವಸ್ತುವಿನ ಹಿಂದೆ ಹೋಗುವುದನ್ನು ನಿಲ್ಲಿಸಿದ್ದರೆ ಅದು ಆಗುತಿತ್ತು. ಆದರೆ ಆತ ಮುಂದುವರೆದ . ಕೊನೆಗೆ ಅತೃಪ್ತಿಯ ಹಾವಿಗೆ ಆಶ್ರಯ ಕೊಡುವ ಹುತ್ತವಾಗಿಬಿಟ್ಟ .
                ಕೆಲವೊಮ್ಮೆ ಜೀವನದಲ್ಲಿ ನಾವು ತೀರಾ ಇಷ್ಟ ಪಡುವ ವಸ್ತುಗಳು ,ಎಷ್ಟು ಇಷ್ಟ ಅಂದರೆ ಅದೊಂದು ಇದ್ದರೆ ನಮ್ಮ ಜೀವನದಲ್ಲಿ ಬೇರೆ ಏನು ಬೇಡ ಅನ್ನುವಷ್ಟು ಇಷ್ಟ ಪಡುವ ವಸ್ತುಗಳು ,ಏನೂ ಮಾಡಿದರೂ ಸಿಗುವುದಿಲ್ಲ ಅಂತ ನಮಗೆ ಅದಾಗಲೇ ಮನಸ್ಸಿನ ಮೂಲೆಯಲ್ಲಿ ಮೆಲ್ಲಗೆ ಹೊಗೆಯಾಡಲು ಶುರುವಾಗಿರುತ್ತದೆ .(ಅದು ಒಂದು ವಸ್ತುವೇ ಆಗ್ಬೇಕು ಎಂದೇನೂ ಇಲ್ಲ , ಒಂದು ವ್ಯಕ್ತಿ ಆಗಿರಬಹುದು,ಒಂದು ಹುಚ್ಚು ಕನಸು ಆಗಿರಬಹದು )ಆ ಕಟು ಸತ್ಯ ಕಾಡ್ಗಿಚ್ಚಿನಂತೆ ಉರಿದು ನಮ್ಮನ್ನು ಒಳಗೊಳಗೇ ಸುಡುತ್ತಿರುತ್ತದೆ. ಆದರೂ ನಾವು ಆ ವಸ್ತುಗಳು ಬೆನ್ನು ಹತ್ತಿ ಹೋಗುವುದನ್ನು ಬಿಡುವುದಿಲ್ಲ .
             ಅ ಮರೀಚಿಕೆಯ ಹಿಂದೆಯೇ ಹೋಗುತ್ತೇವೆ .ಅದನ್ನು ಪಡೆಯಲು ಇಲ್ಲದ ಲಾಭಿ ನಡೆಸುತ್ತಿರುತ್ತೇವೆ.ಹಗಲಿರಳೂ ಅದರದೇ ಲೆಕ್ಕಚಾರ . ಆ ವಸ್ತುವಿನ ವ್ಯಾಮೋಹ ನಮ್ಮನ್ನು ನಿಧಾನವಾಗಿ ಆವರಿಸಿಕೊಂಡು ,ನಮ್ಮನ್ನು ಒಳಗೊಳಗೇ ಬಡಿಬಡಿದು ಇಡುತ್ತದೆ .ನಮ್ಮ ಸುತ್ತ ಮುತ್ತ ಇರುವ ಜನರಿಗೆಲ್ಲಾ ನಾವು ಪಡುತ್ತಿರುವ ಪಾಡು ನೋಡಲಾಗದೇ ಆ ವಸ್ತುವಿನ ವ್ಯಾಮೋಹ ಬಿಟ್ಟು ಬಿಡುವಂತೆ ಸಲಹೆ ಕೊಡಲು ಶುರುಮಾಡುತ್ತಾರೆ .ಆದರೆ ನಮಗೇ ಅವರು ಬಿಟ್ಟಿ ಸಲಹೆ ಕೊಡುವ ಬಾದಷಾಗಳಂತೆ ಕಾಣುತ್ತಾರೆ.ನಿಜ ಹೇಳಬೇಕೆಂದರೆ ಆ ಕಟು ಸತ್ಯ ನಮಗೇ ಗೊತ್ತಿರುತ್ತದೆ .ಆ ಸತ್ಯ ನಮ್ಮೊಳಗೆ ಹೆಮ್ಮರವಾಗಿ ಬೆಳೆದಿರುತ್ತದೆ . ಆದರೆ ಅದನ್ನು ಕಡಿದು ಮುಂದೆ ಸಾಗುವ ಬದಲು ,ಆ ಮರದ ಸುಳ್ಳು ನೆರಳಲ್ಲಿ ಬದುಕುವುದನ್ನೇ ಚಟ ಮಾಡಿಕೊಂಡು ಬಿಡುತ್ತೇವೆ .
                    ಆ ವಸ್ತುವಿನ ವ್ಯಾಮೋಹ ಬಿಟ್ಟು , ಅದರ ಸುತ್ತ ಗಿರಕಿ ಹೊಡೆಯುವ ಸಮಯವನ್ನು ನಾವು ಅದೇ ಬೇರೆ ಕಡೆ ಉಪಯೋಗಿಸಿದರೆ ಬಾಳ ದಾರಿಯಲ್ಲಿ ಅದೆಷ್ಟೋ ಮುಂದೆ ಹೋಗುತ್ತೇವೆ .ಅದೆಷ್ಟೋ ಸಾಧಿಸುತ್ತೇವೆ .ಆದರೆ ಅದನ್ನು ಬಿಡುವುದು ಮಾತ್ರ ನಮ್ಮಿಂದ ಸಾಧ್ಯವಾಗುವುದಿಲ್ಲ .ಅದಕೆ ಕಾರಣ ನಮ್ಮ ಮನದಲ್ಲಿರುವ ಕೆಟ್ಟ ಆಶಯ. ಎಂದಾದರೂ ಒಂದು ದಿನ ಅ ವಸ್ತು ನಮ್ಮದಾಗಬಹುದೇನೋ ಎಂಬ ಕೆಟ್ಟ ಆಶಯ . ಅದು ಕೊನೆ ಕೊನೆಗೆ ,ಇನ್ನೂ ಸ್ವಲ್ಪ ಪ್ರಯತ್ನಿಸಿದರೆ ನಮ್ಮದಾಗಿಯೇ ಆಗುತ್ತದೆ ,ಬಿಡಬೇಡ ಅನ್ನುವ ಕೆಟ್ಟ ಹಠವಾಗಿ ಪರಿಣಮಿಸುತ್ತದೆ . ಆ ಹಠ ನಮ್ಮೊಳಗಿರುವ ಸತ್ಯವನ್ನು ಮುಳುಗಿಸುಬಿಡುತ್ತದೆ.ಆ ವ್ಯಾಮೋಹ ಜೇಡರ ಬಲೆಯಂತೆ ನಮ್ಮ ಸುತ್ತ ಬೆಳದು ,ಅದರೊಳಗಿಂದ ಹೊರ ಬರಲಾಗದೇ,ಒಳಗೇ ನೆಮ್ಮದಿಯಿಂದ ಇರಲಾಗದೆ ದಿನ ನಿತ್ಯವೂ ನರಳಾಡುತ್ತೇವೆ.
                  ಇದಕೆಲ್ಲಾ ಪರಿಹಾರವೆಂದರೆ ಒಂದೇ .ಅದೇ ತುಂಬಾ ಸುಲಭವಾದದ್ದು .ಆ ವ್ಯಾಮೋಹ ಬಿಟ್ಟು ,ಸತ್ಯವ ಅರಿತು ಇತರ ಕಡೆ ಗಮನ ಹರಿಸುವುದು. ಆದರೆ ಈ ಸುಲಭದ ಕಡಲೆ ನಮಗೆ ಕಬ್ಬಿಣ ಕಡಲೆಯಂತೆ ಕಾಣುತ್ತದೆ .ನಿಜ ಹೇಳಬೇಕೆಂದರೆ ಈ ವ್ಯಾಧಿಯ ಪರಿಹಾರದ ಬಗ್ಗೆ ನಾನು ಬರೆಯಲು ಇಷ್ಟ ಪಡುವುದಿಲ್ಲ .ಯಾಕೆಂದರೆ ಈ ರೋಗದಿಂದ ನರಳುತ್ತಿರುವ ರೋಗಿಗಳಲ್ಲಿ ನಾನು ಒಬ್ಬ ಎಂದು ಹೇಳುತ್ತಾ ಈ ಲೇಖನವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದೇನೆ.ನಿಮಗೆ ಈ ರೋಗದ ಮದ್ದು ಗೊತ್ತಾದಲ್ಲಿ ಉತ್ತರ ಕಳುಹಿಸಿ ,Please.
English summary: The people around him suggested him to stop running behind that thing which he would never get .Even he knew the truth . But still day by day ,he got more obsessed . The obsession grew like a anthill around him.He could have stopped it .But he continued .At last he turned into a unsatisfied snake residing anthill .
                       In our life we run behind some things even though we know the truth that we are not getting that any cost.This thing even can be a person,a dream.The funny and dangerous thing about this is we know the truth.We know the truth that we will never own the thing and if we spend the same energy somewhere else we could succeed, but still we are not ready to admit it .Instead we spend our valuable time in running behind it ,thinking about that thing and making all attempts to own that thing.
      The simplest solution to this disease is just to stop running behind that thing .That's it .But we never do it . Why ? Even I don't know the answer . Even I am finding solution to this disease .If anyone of you know the answer ,please let me now.

2 ಕಾಮೆಂಟ್‌ಗಳು:

  1. nammalli aadhyatma manobhava illadiddaga, naavu aase mattu duraasegala naduvina antaravannu kilidu kollalu viphalaragutteve. haagagi, yaaralli aadhatma jagruthi aagiruttado avaralli e tharahada samasye iruvudilla!. Sri ramakrishnaru heliruvante swami vivekananda tejassu yestu itendare maaye yembudu kilometer gattale avarinda dooraviruttitante!
    Olle article!

    ಪ್ರತ್ಯುತ್ತರಅಳಿಸಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...