ಸೋಮವಾರ, ಮೇ 20, 2013

ತಲೆಕೆಟ್ಟು ಬರೆದ ಕವನಗಳು






ಸಾಮಾನ್ಯ ಪ್ರಜೆ 

ಚುನಾವಣೆಯಲ್ಲಿ 
ಗೆಲ್ಲುವ ಮೊದಲು 
ರಾಜಕಾರಣಿಗೆಲ್ಲಾ 
ದೇವರು ಇವನೇ ,
ಗೆದ್ದ ಮೇಲೆ 
ಕೇಳುವವರಿಲ್ಲ
ಇವನ ಬವಣೆ 


ರೋಗ 

ವೈದ್ಯರು ಹೇಳಿದ್ದಾರೆ
ನನಗೆ ಅದ್ಯಾವುದೋ
ವಿಚಿತ್ರ ರೋಗ ಅಂತೆ .
ಅದಕೆ ಅವರು ಬರೆದು
ಕೊಟ್ಟ ಮದ್ದು ,
ನಿನ್ನ ಬಳಿ
ಮಾತ್ರ ಸಿಗುವುದಂತೆ . 

ಆಸೆ

ನಲ್ಲೆ ಸಂದೇಶ ಕಳಿಸಿದಳು 
" ಕರೆ ಮಾಡುವೆಯಾ ?
ನನಗೆ ನಿನ್ನ ಜೊತೆ
ಮಾತನಾಡುವ ಆಸೆ "
ತಕ್ಷಣ ನಲ್ಲ
ಸಂದೇಶ ಕಳುಹಿಸಿದನು
" ನನಗೂ ಅಷ್ಟೇ ,
ಅದರೇನು ಮಾಡಲಿ 
ಮೊಬೈಲಿನಲ್ಲಿ ಕರೆನ್ಸಿ
ಇಲ್ಲ ಒಂದೇ ಒಂದು ಪೈಸೆ ".

ಮಾಯೆ 

ಗೂಗಲ್ ಹುಡುಕಾಟದಲ್ಲಿ
ಹೆಸರು ಕೊಟ್ಟು
ನೋಡಿದರೆ ನನ್ನದು ,
ಏನಾಶ್ಚರ್ಯ ?
ಫಲಿತಾಂಶಗಳಲ್ಲಿ
ಬರಬೇಕೇ ಹೆಸರು
ಬರೀ ನಿನ್ನದು .


ನೀನು 

ನನ್ನೆದೆಯ
ಕಪ್ಪೆಚಿಪ್ಪಿನೊಳಗೆ ,
ಪ್ರೀತಿಯೆಂಬ
ಸ್ವಾತಿಮುತ್ತಿನ
ಮಳೆ ಹನಿ
ಸೇರಿ ರೂಪು
ತಾಳಿದ ಮುತ್ತು . 
  
ಸಕ್ಕರೆ 

ಕಾಫೀಗೆ ಅದೇಕೆ 
ಬೇಕು ಸಕ್ಕರೆ ,
ಸಾಕು ನಿನ್ನ ಬೆರಳು 
ಅದರೊಳಗೆ ಅದ್ದು ಕೊಟ್ಟರೆ . 


ಜಂಪಿಂಗ್ ಸ್ಟಾರ್

ನಟಿಯೊಬ್ಬರಿಗೆ 
ಯಾರೋ ಕೇಳಿದರು 
"ನೀವು ಪಕ್ಷದಿಂದ 
ಪಕ್ಷಕ್ಕೆ ಹಾರಲು
 ಏನು ಕಾರಣ? ". 
ಅದಕ್ಕೆ ಆಕೆ 
ಉತ್ತರಿಸಿದಳು
 "ಪಕ್ಷದ ಚಿಹ್ನೆಯ 
ಬಣ್ಣ ನನ್ನ ಬಟ್ಟೆಗೆ
 ಮ್ಯಾಚ್ ಆಗದಿದ್ದರೆ 
ಇನ್ನೇನು ಮಾಡೋಣ ?"




ಮಾದಕ ಸೌಂದರ್ಯ

ತಾಪಮಾನ ಹೆಚ್ಚಲು 
ಅದೇಕೆ ಬೇಕು ಸೂರ್ಯ ,
ಹಿಮದ ಚಳಿಯಲ್ಲೂ
ನಿನ್ನ ನೋಡಿದವರ 
ತಾಪಮಾನ ಹೆಚ್ಚಿಸುವುದು
 ನಿನ್ನ ಈ ಮಾದಕ ಸೌಂದರ್ಯ . .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...