ಆಗಂತುಕ ಚಿತ್ರದ ಕಥೆಯನ್ನು ನನ್ನ ಗೆಳಯನೊಬ್ಬನಿಗೆ ಹೇಳಿ, ಇದನ್ನು ದೀಪಾವಳಿಗೆ ರಿಲೀಸ್ ಮಾಡಬೇಕು ಅಂದಾಗ “ಲೋ ,ಈ ತರದ್ದ ಕಥೆ ಆಗಲೇ ಸಾಕಷ್ಟು ಬಂದಿದೆ ?” . ಆಗ ನಾನು “ ನನಗೆ ಗೊತ್ತಿರೋ ಹಾಗೆ ಕನ್ನಡದಲ್ಲಿ ಬಂದಿಲ್ಲವಲ್ಲಾ ?ಅದರಲ್ಲೂ ದೀಪಾವಳಿ theme ಹಾಗು ಈ themeಇಟ್ಟಕೊಂಡು ಮಾಡಿದ್ರೆ ಜನ ಇಷ್ಟ ಪಡ್ತಾರೆ .” ಹಬ್ಬಗಳ background ಇಟ್ಟುಕೊಂಡು ಬೇರೆ ಭಾಷೆಯಲ್ಲಿ video ಮಾಡುವುದು ತುಂಬಾ ಹಳೆಯ ವಿಷಯ . ಹಾಗೆ ಕನ್ನಡದಲ್ಲಿ ಒಂದು ಮಾಡಿದರೆ ಜನರ ಮನಸ್ಸು ಗೆಲ್ಲಬಹುದು ನನ್ನ ಲೆಕ್ಕಾಚಾರ ( ಆದರೆ ಈ ಲೆಕ್ಕಾಚಾರ ಗಳೆಲ್ಲಾ ಉಲ್ಟಾ ಆಗಿ video flopಆಗಿದ್ದು ಬೇರೆ ವಿಚಾರ ). ಗೆಳಯ ಬೇಡ ಅಂದರೂ , ನನಗೆ ಒಂದು ಹಠ ಇತ್ತು . ಮಾಡಿಯೇ ತೀರಬೇಕೆಂದು, ಶುರು ಮಾಡಿದೆ .
ಯಾವುದೇ ಕೆಲಸ ಅಂದುಕೊಂಡದ್ದು ಸುಲಭವಾಗಿ ಆಗಿದ್ದು , ಅದರಲ್ಲಿ ನಾನು ಅಂದುಕೊಂಡಿದ್ದು ಆಗಿಯೇ ಇಲ್ಲ . ಅದೇ ಮಜಾ ಅನ್ನಿ . ಆಗಲೇ ತುಂಬಾ ಕಲಿಯುವುದಕ್ಕೆ ಸಿಗುವುದು . ಅದು ಬೇರೆ ವಿಷಯ .ಒಟ್ಟಿನಲ್ಲಿ ಒಂದರ ಮೇಲೆ ಒಂದು ಸಮಸ್ಯೆಗಳು ಎದುರಾದವು . ಹಾಸನದಲ್ಲಿ ಶೂಟ್ ಮಾಡಬೇಕು ಅಂದುಕೊಂಡಿದ್ದು , ಕೊನೆಗೆ ಹೇಗೋ ಬೆಂಗಳೂರು ಶೂಟ್ ಮಾಡಿದ್ದು .ನನ್ನ height ಗೆ, acting ಗೊತ್ತಿರುವ ಸರಿಯಾದ ನಾಯಕಿ ಹುಡುಕುವುದು. ಇಡೀ ವಾರ softwareಕೆಲಸದಲ್ಲಿ , weekend ನಲ್ಲಿ ಮಾತ್ರ ಆಗ ಈಗ ಸಿಗುವ actors ಹಾಗು team ಅನ್ನು ಒಂದೇ ಕಡೆ ಕೂಡಿಸುವುದು . ಹೀಗೆ ಒಂದಾ ಎರಡಾ . ಕೊನೆಗೆ ಹೇಗೋ ಎಲ್ಲವನ್ನು ಮೀರಿ ಶೂಟಿಂಗ್ ಮುಗಿಸಿ ,ಚಿತ್ರ ಹೊರಗಡೆ ತಂದಿದ್ದಾಯಿತು .
ಈ ಸಮಯದಲ್ಲಿ ನನ್ನ ತಂಡದ ಸದಸ್ಯರ ಹೆಸರು ಹೇಳಲೇಬೇಕು . ರಜತ್ , ಭಾರದ್ವಾಜ್ , ಸಂದೀಪ್ ಈ ಸಲ ಬರೀ ನಟನೆ ಅಲ್ಲದೇ ಈ ಸಲ production managers ಆಗಿ ತುಂಬಾ ಅಚ್ಚಕಟ್ಟಾಗಿ ಕೆಲಸ ನಿಭಾಯಿಸಿದರು . ಶೂಟಿಂಗ್ ಗೆ ಬೇಕಾದ ಮನೆ ಹುಡುಕುವಲ್ಲಿ ಭಾರದ್ವಾಜ್ ಹಾಗೂ ರಜತ್ ಪ್ರಯತ್ನ ನಿಜವಾಗಲೂ ಶ್ಲಾಘನೀಯ . ಇನ್ನು ಹೊರಾಂಗಣ ಚಿತ್ರೀಕರಣ ಮಾಡಿದ , ಮೈಸೂರ್ ನಿಂದ ಬಂದು ಮನೀಷ್ ಅವರಿಗಂತೂ ನಾನು ಚಿರಋಣಿ . ಇನ್ನೂ ಈ ಸಲ ನಮ್ಮ ತಂಡಕ್ಕೆ ಹೊಸದಾಗಿ ಬಂದ ನಮ್ಮ ಸಂಕಲನ ಕಾರ ಸಂದೀಪ್ k s ,ತನ್ನ ಕೆಲಸವನ್ನು ತುಂಬಾ ಚೆನ್ನಾಗಿ ಮಾಡಿದ್ದಾನೆ . ಈ ಸಲ ಆಗಂತುಕ ಚಿತ್ರದಲ್ಲಿ ಗ್ರಾಫಿಕ್ಸ್ ವರ್ಕ್ ತುಂಬಾ ಚೆನ್ನಾಗಿ ಇತ್ತು .ಅದನ್ನು ಅಷ್ಟೇ ಸುಲಭವಾಗಿ ಹಾಗೂ ತುಂಬಾ ಚೆನ್ನಾಗಿ ನಿಭಾಯಿಸಿದ್ದಾನೆ . ಚಿತ್ರ ಬಂದಾಗ ,ಎಲ್ಲರೂ ಹೊಗಳಿದ್ದು ಹೆಚ್ಚಾಗಿ ಹಿನ್ನಲೆ ಸಂಗೀತ ,ಅದಕ್ಕೆ ಕಾರಣ ಹಿನ್ನಲೆ ಸಂಗೀತ ಮಹೇಶ್ ಜೂಡ್ . ಇನ್ನೂ ಶಬ್ದ ವಿನ್ಯಾಸ ಮಾಡಿರುವ ಗಣೇಸನ್ ಗೋಪಾಲ್ಅವರನ್ನು ಎಷ್ಟು ಹೊಗಳಿದರೂ ಸಾಧ್ಯವಿಲ್ಲ .ಇಡೀ ಚಿತ್ರಕ್ಕೆ follytrack ಕೊಟ್ಟಿರುವ ಗಣೇಸನ್ , ಎಲ್ಲಾ ಶಬ್ದಗಳನ್ನು ಹೊಸದಾಗಿ ರೆಕಾರ್ಡ್ ಮಾಡಿದ್ದರೆಂದು ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ .ಯಾಕೆ ಅಂದರೆ ಅವರು ನಮಗೆ ಶಬ್ದ ವಿನ್ಯಾಸ ಮಾಡಿಕೊಡಲು ಅವರು ನಯಾ ಪೈಸೆ ತೆಗದು ಕೊಂಡಿರಲಿಲ್ಲ .
ಈಗ ಆ ವಿಷಯಗಳನ್ನು ಬಿಟ್ಟು ,ಈ ಚಿತ್ರವನ್ನು ನಾನು ನಿರ್ದೇಶಕನಾಗಿ ಯಾಕೆ ಮಾಡಿದ್ದು ಅನ್ನೋದನ್ನು ಬರೆಯಲೇಬೇಕು ( ಅದನ್ನು ಓದುವುದು ನಿಮ್ಮ ಕರ್ಮ ಅಂದುಕೊಳ್ಳಿ). ಅದೇನೋ ಇತ್ತೀಚಿಗೆ ಧರ್ಮ ಅಸಹಿಷ್ಣುತೆ ಜಾಸ್ತಿ ಆಗ್ತಾ ಅಂತ ತುಂಬಾ ಕಡೆ ಕೇಳಿ ಬರುತ್ತಿದೆ .ಅದೇನೋ ಗೊತ್ತಿಲ್ಲ ನಾನಂತೂ ಚಡ್ಡಿ ಹಾಕೊಳೋಕೆ ಹಠ ಮಾಡ್ತಾ ಇದ್ದ ಟೈಮ್ ನಿಂದ ಹಿಡಿದು , ಮೀಸೆ ಗಡ್ಡ ತೆಗೆಯೋ ಟೈಮ್ ತನಕ ಧರ್ಮದಲ್ಲಿ ಹೆಸರಲ್ಲಿ ಹೊಡೆದಾಡುತ್ತಿರುವುದನ್ನು ನೋಡುತ್ತಲೇ ಇದ್ದೇನೆ .ಅದ್ದರಿಂದ ನಮ್ಮವರು ಎಲ್ಲಿಯ ತನಕ ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಾ ಇರುತ್ತಾರೋ , ಅಲ್ಲಿಯ ತನಕ ಆಗಂತುಕ ತರಹದ ಚಿತ್ರಗಳು, ಜನಗಳ ಮನಸಿನಲ್ಲಿ ಜಾಗೃತಿ ಮೂಡಿಸುವ ಬರಹಗಳು ಹೀಗೆ ಹತ್ತು ಹಲವು ಬರುತ್ತಲೇ ಇರಬೇಕು. ಜನ ಧರ್ಮ ದ ಹೆಸರಲ್ಲಿ ಕಿತ್ತಾಡುತ್ತಾ ಇರೋ ತನಕ ಅದು ಹಳೆಯ ವಿಷಯ ಅನ್ನಿಸದೇ ,ಪ್ರಸ್ತುತ ಅನ್ನಿಸುತ್ತದೆ .
ಇನ್ನು ಇತ್ತೀಚಿನ ದಿನಗಳಲ್ಲಿ ಜನ ಒಂದು ವಿಷಯವನ್ನು ಕೇಳಿದ ಕೂಡಲೇ ,ಆ ವಿಷಯದಲ್ಲಿ ಎಷ್ಟು ಸತ್ಯ ಅಡಗಿದೆ ಅನ್ನುವ ಪರಿಗೆ ಹೋಗದೇ ತಮ್ಮ ನಿರ್ಧಾರಕ್ಕೆ ಬಂದು ಬಿಡುತ್ತಾರೆ .ಅದರಲ್ಲೂ ಈ face book,twitter,watsapp ಯುಗದಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪೋಸ್ಟ್ ಗಳೇ ನಿಜ ಅಂದುಕೊಳ್ಳುತ್ತಾರೆ . ಅಷ್ಟೇ ಅಲ್ಲಾ ತಮ್ಮ ಅಭಿಪ್ರಾಯವನ್ನು ತುಂಬಾ ಸಲೀಸಾಗಿ ಹೇಳಬಹುದಾಗಿ ಬಂದಿರುವದರಿಂದ , ಅದರಲ್ಲೂ ಪೋಸ್ಟ್ ಮಾಡಿದರೆ ಪ್ರಸ್ತುತ ಅನ್ನಿಸಿಕೊಳ್ಳುತ್ತೇವೆ ಅನ್ನುವ ಕಾರಣಕ್ಕೆ ಜನ ಯೋಚನೆ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಮೊದಲಿಂದಲೂ ಮಾನವನಲ್ಲಿ ಬಂದಿದೆ . ಮೇಲಿನದು ಪ್ರಸ್ತುತ ಉದಾಹರಣೆ ಅಷ್ಟೇ . ಇದರ ಹಳೆಯ ಅವತರಣಿಕೆ ಒಬ್ಬ ಮನುಷ್ಯನ ರೂಪ ನೋಡಿ ಅವನ ಗುಣ ಅಳಿಯುವುದು. ಉದಾಹರಣೆಗೆ ಒಬ್ಬ ಕಪ್ಪಿಗಿದ್ದರೆ ಕಳ್ಳ , ಕುಳ್ಳಗಿದ್ದರೆ ಅಪಹಾಸ್ಯದ ವಸ್ತುವಿನ ಹಾಗೆ .ಜನ ಒಬ್ಬ ಮನುಷ್ಯನ ವ್ಯಕ್ತಿತ್ವದ ಮಾನದಂಡವನ್ನು ಬರಿಯ ರೂಪಕ್ಕೆ ಸೀಮಿತಗೊಳಿಸದೇ ಮನದೊಳಗೆ ಇಳಿಯಬೇಕು. ಆಗಲೇ ಅದಕ್ಕೆ ಒಂದು ಅರ್ಥ ಬರುವುದು. ಇದೇನಮ್ಮ ಆಗಂತುಕ ಚಿತ್ರದ ಸಂದೇಶ .
ಇಲ್ಲಿ ಮುಸ್ಲಿಂ ಗಡ್ಡ ದಾರಿ ನೋಡಿ ,ತನ್ನದೇ ಲೆಕ್ಕ ಚಾರಗಳಲ್ಲಿ ನಾಯಕ ಮುಳುಗಿ ಹೋಗಿರುತ್ತಾನೆ . ಸುತ್ತ ಮುತ್ತ ನಡೆಯುತ್ತಿರುವ ಸನ್ನಿವೇಶಗಳ ಆಧಾರದ ಮೇಲೆ ಗಡ್ಡ ಧಾರಿಯನ್ನು ಕೆಟ್ಟವನಂತೇ ನೋಡುತ್ತಿರುತ್ತಾನೆ . ಅದಕ್ಕೆ ಪೂರಕವೆಂಬಂತೆ tv ಯಲ್ಲಿ ಬರುವ ಕಾರ್ಯಕ್ರಮಗಳು ಅವನ ಸಂದೇಹದ ಹೋಳಿಗೆಗೆ ಹೂರಣ ತುಂಬಿಸುವ ಕಾಯಕ ಮಾಡುತ್ತಿರುತ್ತದೆ .ಇತ್ತೀಚಿನ tv ಕಾರ್ಯಕ್ರಮಗಳು ಬರಿ ಮನರಂಜನೆ , ಸುದ್ದಿ ಬಿತ್ತರಿಸದೆ ಭಯ ಬಿತ್ತರಿಸುತ್ತಿವೆ . ಅದಕ್ಕೆ tv ನ್ಯೂಸ್ ಆಗಂತುಕದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಒಟ್ಟಿನಲ್ಲಿ ಇನ್ನು ನಿರ್ದೇಶಕನಾಗಿ ನನಗೆ ಆಗಂತುಕ ಚಿತ್ರ ೫೦ ಪರ್ಸೆಂಟ್ ಅಷ್ಟೇ ಸಮಾಧಾನ ಕೊಟ್ಟಿದೆ .ಕಾರಣಾಂತರ ಗಳಿಂದಾಗಿ ನಾನು ಅಂದುಕೊಂಡ ಕೆಲವು ಅಂಶಗಳು ಅಳವಡಿಸಿಕೊಳ್ಳಲು ಆಗಲಿಲ್ಲ. ಇರಲಿ ಒಳ್ಳೆಯ ಕಿರುಚಿತ್ರ ಕೊಡಲು ನಾನು ಪ್ರಯತ್ನಿಸುತ್ತೇ ಇರುತ್ತೇನೆ ನಿಮ್ಮಸಹಕಾರ ಬೇಕು ಅಷ್ಟೇ.
Youtube link ..
https://www.youtube.com/watch?v=0zPakyqLRpA
English Summary ;
ಯಾವುದೇ ಕೆಲಸ ಅಂದುಕೊಂಡದ್ದು ಸುಲಭವಾಗಿ ಆಗಿದ್ದು , ಅದರಲ್ಲಿ ನಾನು ಅಂದುಕೊಂಡಿದ್ದು ಆಗಿಯೇ ಇಲ್ಲ . ಅದೇ ಮಜಾ ಅನ್ನಿ . ಆಗಲೇ ತುಂಬಾ ಕಲಿಯುವುದಕ್ಕೆ ಸಿಗುವುದು . ಅದು ಬೇರೆ ವಿಷಯ .ಒಟ್ಟಿನಲ್ಲಿ ಒಂದರ ಮೇಲೆ ಒಂದು ಸಮಸ್ಯೆಗಳು ಎದುರಾದವು . ಹಾಸನದಲ್ಲಿ ಶೂಟ್ ಮಾಡಬೇಕು ಅಂದುಕೊಂಡಿದ್ದು , ಕೊನೆಗೆ ಹೇಗೋ ಬೆಂಗಳೂರು ಶೂಟ್ ಮಾಡಿದ್ದು .ನನ್ನ height ಗೆ, acting ಗೊತ್ತಿರುವ ಸರಿಯಾದ ನಾಯಕಿ ಹುಡುಕುವುದು. ಇಡೀ ವಾರ softwareಕೆಲಸದಲ್ಲಿ , weekend ನಲ್ಲಿ ಮಾತ್ರ ಆಗ ಈಗ ಸಿಗುವ actors ಹಾಗು team ಅನ್ನು ಒಂದೇ ಕಡೆ ಕೂಡಿಸುವುದು . ಹೀಗೆ ಒಂದಾ ಎರಡಾ . ಕೊನೆಗೆ ಹೇಗೋ ಎಲ್ಲವನ್ನು ಮೀರಿ ಶೂಟಿಂಗ್ ಮುಗಿಸಿ ,ಚಿತ್ರ ಹೊರಗಡೆ ತಂದಿದ್ದಾಯಿತು .
ಈ ಸಮಯದಲ್ಲಿ ನನ್ನ ತಂಡದ ಸದಸ್ಯರ ಹೆಸರು ಹೇಳಲೇಬೇಕು . ರಜತ್ , ಭಾರದ್ವಾಜ್ , ಸಂದೀಪ್ ಈ ಸಲ ಬರೀ ನಟನೆ ಅಲ್ಲದೇ ಈ ಸಲ production managers ಆಗಿ ತುಂಬಾ ಅಚ್ಚಕಟ್ಟಾಗಿ ಕೆಲಸ ನಿಭಾಯಿಸಿದರು . ಶೂಟಿಂಗ್ ಗೆ ಬೇಕಾದ ಮನೆ ಹುಡುಕುವಲ್ಲಿ ಭಾರದ್ವಾಜ್ ಹಾಗೂ ರಜತ್ ಪ್ರಯತ್ನ ನಿಜವಾಗಲೂ ಶ್ಲಾಘನೀಯ . ಇನ್ನು ಹೊರಾಂಗಣ ಚಿತ್ರೀಕರಣ ಮಾಡಿದ , ಮೈಸೂರ್ ನಿಂದ ಬಂದು ಮನೀಷ್ ಅವರಿಗಂತೂ ನಾನು ಚಿರಋಣಿ . ಇನ್ನೂ ಈ ಸಲ ನಮ್ಮ ತಂಡಕ್ಕೆ ಹೊಸದಾಗಿ ಬಂದ ನಮ್ಮ ಸಂಕಲನ ಕಾರ ಸಂದೀಪ್ k s ,ತನ್ನ ಕೆಲಸವನ್ನು ತುಂಬಾ ಚೆನ್ನಾಗಿ ಮಾಡಿದ್ದಾನೆ . ಈ ಸಲ ಆಗಂತುಕ ಚಿತ್ರದಲ್ಲಿ ಗ್ರಾಫಿಕ್ಸ್ ವರ್ಕ್ ತುಂಬಾ ಚೆನ್ನಾಗಿ ಇತ್ತು .ಅದನ್ನು ಅಷ್ಟೇ ಸುಲಭವಾಗಿ ಹಾಗೂ ತುಂಬಾ ಚೆನ್ನಾಗಿ ನಿಭಾಯಿಸಿದ್ದಾನೆ . ಚಿತ್ರ ಬಂದಾಗ ,ಎಲ್ಲರೂ ಹೊಗಳಿದ್ದು ಹೆಚ್ಚಾಗಿ ಹಿನ್ನಲೆ ಸಂಗೀತ ,ಅದಕ್ಕೆ ಕಾರಣ ಹಿನ್ನಲೆ ಸಂಗೀತ ಮಹೇಶ್ ಜೂಡ್ . ಇನ್ನೂ ಶಬ್ದ ವಿನ್ಯಾಸ ಮಾಡಿರುವ ಗಣೇಸನ್ ಗೋಪಾಲ್ಅವರನ್ನು ಎಷ್ಟು ಹೊಗಳಿದರೂ ಸಾಧ್ಯವಿಲ್ಲ .ಇಡೀ ಚಿತ್ರಕ್ಕೆ follytrack ಕೊಟ್ಟಿರುವ ಗಣೇಸನ್ , ಎಲ್ಲಾ ಶಬ್ದಗಳನ್ನು ಹೊಸದಾಗಿ ರೆಕಾರ್ಡ್ ಮಾಡಿದ್ದರೆಂದು ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ .ಯಾಕೆ ಅಂದರೆ ಅವರು ನಮಗೆ ಶಬ್ದ ವಿನ್ಯಾಸ ಮಾಡಿಕೊಡಲು ಅವರು ನಯಾ ಪೈಸೆ ತೆಗದು ಕೊಂಡಿರಲಿಲ್ಲ .
ಈಗ ಆ ವಿಷಯಗಳನ್ನು ಬಿಟ್ಟು ,ಈ ಚಿತ್ರವನ್ನು ನಾನು ನಿರ್ದೇಶಕನಾಗಿ ಯಾಕೆ ಮಾಡಿದ್ದು ಅನ್ನೋದನ್ನು ಬರೆಯಲೇಬೇಕು ( ಅದನ್ನು ಓದುವುದು ನಿಮ್ಮ ಕರ್ಮ ಅಂದುಕೊಳ್ಳಿ). ಅದೇನೋ ಇತ್ತೀಚಿಗೆ ಧರ್ಮ ಅಸಹಿಷ್ಣುತೆ ಜಾಸ್ತಿ ಆಗ್ತಾ ಅಂತ ತುಂಬಾ ಕಡೆ ಕೇಳಿ ಬರುತ್ತಿದೆ .ಅದೇನೋ ಗೊತ್ತಿಲ್ಲ ನಾನಂತೂ ಚಡ್ಡಿ ಹಾಕೊಳೋಕೆ ಹಠ ಮಾಡ್ತಾ ಇದ್ದ ಟೈಮ್ ನಿಂದ ಹಿಡಿದು , ಮೀಸೆ ಗಡ್ಡ ತೆಗೆಯೋ ಟೈಮ್ ತನಕ ಧರ್ಮದಲ್ಲಿ ಹೆಸರಲ್ಲಿ ಹೊಡೆದಾಡುತ್ತಿರುವುದನ್ನು ನೋಡುತ್ತಲೇ ಇದ್ದೇನೆ .ಅದ್ದರಿಂದ ನಮ್ಮವರು ಎಲ್ಲಿಯ ತನಕ ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಾ ಇರುತ್ತಾರೋ , ಅಲ್ಲಿಯ ತನಕ ಆಗಂತುಕ ತರಹದ ಚಿತ್ರಗಳು, ಜನಗಳ ಮನಸಿನಲ್ಲಿ ಜಾಗೃತಿ ಮೂಡಿಸುವ ಬರಹಗಳು ಹೀಗೆ ಹತ್ತು ಹಲವು ಬರುತ್ತಲೇ ಇರಬೇಕು. ಜನ ಧರ್ಮ ದ ಹೆಸರಲ್ಲಿ ಕಿತ್ತಾಡುತ್ತಾ ಇರೋ ತನಕ ಅದು ಹಳೆಯ ವಿಷಯ ಅನ್ನಿಸದೇ ,ಪ್ರಸ್ತುತ ಅನ್ನಿಸುತ್ತದೆ .
ಇನ್ನು ಇತ್ತೀಚಿನ ದಿನಗಳಲ್ಲಿ ಜನ ಒಂದು ವಿಷಯವನ್ನು ಕೇಳಿದ ಕೂಡಲೇ ,ಆ ವಿಷಯದಲ್ಲಿ ಎಷ್ಟು ಸತ್ಯ ಅಡಗಿದೆ ಅನ್ನುವ ಪರಿಗೆ ಹೋಗದೇ ತಮ್ಮ ನಿರ್ಧಾರಕ್ಕೆ ಬಂದು ಬಿಡುತ್ತಾರೆ .ಅದರಲ್ಲೂ ಈ face book,twitter,watsapp ಯುಗದಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪೋಸ್ಟ್ ಗಳೇ ನಿಜ ಅಂದುಕೊಳ್ಳುತ್ತಾರೆ . ಅಷ್ಟೇ ಅಲ್ಲಾ ತಮ್ಮ ಅಭಿಪ್ರಾಯವನ್ನು ತುಂಬಾ ಸಲೀಸಾಗಿ ಹೇಳಬಹುದಾಗಿ ಬಂದಿರುವದರಿಂದ , ಅದರಲ್ಲೂ ಪೋಸ್ಟ್ ಮಾಡಿದರೆ ಪ್ರಸ್ತುತ ಅನ್ನಿಸಿಕೊಳ್ಳುತ್ತೇವೆ ಅನ್ನುವ ಕಾರಣಕ್ಕೆ ಜನ ಯೋಚನೆ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಮೊದಲಿಂದಲೂ ಮಾನವನಲ್ಲಿ ಬಂದಿದೆ . ಮೇಲಿನದು ಪ್ರಸ್ತುತ ಉದಾಹರಣೆ ಅಷ್ಟೇ . ಇದರ ಹಳೆಯ ಅವತರಣಿಕೆ ಒಬ್ಬ ಮನುಷ್ಯನ ರೂಪ ನೋಡಿ ಅವನ ಗುಣ ಅಳಿಯುವುದು. ಉದಾಹರಣೆಗೆ ಒಬ್ಬ ಕಪ್ಪಿಗಿದ್ದರೆ ಕಳ್ಳ , ಕುಳ್ಳಗಿದ್ದರೆ ಅಪಹಾಸ್ಯದ ವಸ್ತುವಿನ ಹಾಗೆ .ಜನ ಒಬ್ಬ ಮನುಷ್ಯನ ವ್ಯಕ್ತಿತ್ವದ ಮಾನದಂಡವನ್ನು ಬರಿಯ ರೂಪಕ್ಕೆ ಸೀಮಿತಗೊಳಿಸದೇ ಮನದೊಳಗೆ ಇಳಿಯಬೇಕು. ಆಗಲೇ ಅದಕ್ಕೆ ಒಂದು ಅರ್ಥ ಬರುವುದು. ಇದೇನಮ್ಮ ಆಗಂತುಕ ಚಿತ್ರದ ಸಂದೇಶ .
ಇಲ್ಲಿ ಮುಸ್ಲಿಂ ಗಡ್ಡ ದಾರಿ ನೋಡಿ ,ತನ್ನದೇ ಲೆಕ್ಕ ಚಾರಗಳಲ್ಲಿ ನಾಯಕ ಮುಳುಗಿ ಹೋಗಿರುತ್ತಾನೆ . ಸುತ್ತ ಮುತ್ತ ನಡೆಯುತ್ತಿರುವ ಸನ್ನಿವೇಶಗಳ ಆಧಾರದ ಮೇಲೆ ಗಡ್ಡ ಧಾರಿಯನ್ನು ಕೆಟ್ಟವನಂತೇ ನೋಡುತ್ತಿರುತ್ತಾನೆ . ಅದಕ್ಕೆ ಪೂರಕವೆಂಬಂತೆ tv ಯಲ್ಲಿ ಬರುವ ಕಾರ್ಯಕ್ರಮಗಳು ಅವನ ಸಂದೇಹದ ಹೋಳಿಗೆಗೆ ಹೂರಣ ತುಂಬಿಸುವ ಕಾಯಕ ಮಾಡುತ್ತಿರುತ್ತದೆ .ಇತ್ತೀಚಿನ tv ಕಾರ್ಯಕ್ರಮಗಳು ಬರಿ ಮನರಂಜನೆ , ಸುದ್ದಿ ಬಿತ್ತರಿಸದೆ ಭಯ ಬಿತ್ತರಿಸುತ್ತಿವೆ . ಅದಕ್ಕೆ tv ನ್ಯೂಸ್ ಆಗಂತುಕದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಒಟ್ಟಿನಲ್ಲಿ ಇನ್ನು ನಿರ್ದೇಶಕನಾಗಿ ನನಗೆ ಆಗಂತುಕ ಚಿತ್ರ ೫೦ ಪರ್ಸೆಂಟ್ ಅಷ್ಟೇ ಸಮಾಧಾನ ಕೊಟ್ಟಿದೆ .ಕಾರಣಾಂತರ ಗಳಿಂದಾಗಿ ನಾನು ಅಂದುಕೊಂಡ ಕೆಲವು ಅಂಶಗಳು ಅಳವಡಿಸಿಕೊಳ್ಳಲು ಆಗಲಿಲ್ಲ. ಇರಲಿ ಒಳ್ಳೆಯ ಕಿರುಚಿತ್ರ ಕೊಡಲು ನಾನು ಪ್ರಯತ್ನಿಸುತ್ತೇ ಇರುತ್ತೇನೆ ನಿಮ್ಮಸಹಕಾರ ಬೇಕು ಅಷ್ಟೇ.
Youtube link ..
https://www.youtube.com/watch?v=0zPakyqLRpA
English Summary ;
When I first narrated the story of Agantuka to my close friend, he didn't like the story .He told that this is an old story and asked me to drop the idea. But t I had already made my decision in my heart ,that I would go with this movie .What I had in my mind was short films with festival background are very less in Kannada .So, releasing a short movie with festival background and a social message would be a great idea.And people may like it and it may create sensation.(Later ,all my calculations went wrong).
I would like to thank all my team who worked for this movie .As a director , why I chose agantuka ? There are many reasons. Movie which preaches not to fight in name of religion will be never never become cliche ,until people stop fighting in name of religion. And nowadays people are growing so impatience ,especially in social media ,they are reacting towards a matter without even checking authencity of the posts.TV channels are busy in promoting negativity .Somewhere, we are strongly becoming victims of prejudice.And sometimes this is leading to communal tensions.
I would like to thank all my team who worked for this movie .As a director , why I chose agantuka ? There are many reasons. Movie which preaches not to fight in name of religion will be never never become cliche ,until people stop fighting in name of religion. And nowadays people are growing so impatience ,especially in social media ,they are reacting towards a matter without even checking authencity of the posts.TV channels are busy in promoting negativity .Somewhere, we are strongly becoming victims of prejudice.And sometimes this is leading to communal tensions.
So, Agantuka movie tries to deliver a message by telling the lamp should be lit inside our heart and come out of prejudice fort .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ