ಸೂಚನೆ :ಇಲ್ಲಿ ಬರುವ ಸನ್ನಿವೇಶಗಳಲ್ಲಿ ಕೆಲವೊಂದು ಕಾಲ್ಪನಿಕ , ಕೆಲವೊಂದು ನಿಜ . ಅದನ್ನು ತಿಳಿಯುವ ಗೋಜಿಗೆ ಹೋಗದೇ ಇದ್ದವರು ಮಾತ್ರ ಓದಿ
ಸಣ್ಣವನಿದ್ದಾಗ ನನಗೆ ಳ , ಲ ,ಸ ,ಷ ,ಶ , ರ ಕಾರ ಉಚ್ಚರಿಸಲು ಬರುತ್ತಾ ಇರಲಿಲ್ಲ . ಎಲ್ಲರೂ ನನ್ನ ಕರೆದು ,ಮಾತಾಡಲು ಹೇಳಿ ಮಜಾ ತೆಗೆದುಕೊಳ್ಳುವುದೇ ಜಾಸ್ತಿ . ಅಮ್ಮ ತಿದ್ದಲು ಪ್ರಯತ್ನ ಪಟ್ಟಿದ್ದರೂ , ನಾನು ಕಲಿಯದೇ ಇದ್ದಾಗ ಇನ್ನು ಚಿಕ್ಕವನು ಎಂದು ಸುಮ್ಮನ್ನಿದ್ದಳು .ನನಗಿನ್ನು ನೆನಪಿದೆ, ಒಮ್ಮೆ ಬೆಂಗಳೂರಿನಲ್ಲಿ ಯಾವುದೋ ಕೆಲಸದ ಮೇಲೆ ಹೋದಾಗ , ನೆಂಟರೊಬ್ಬರ ಕಾರ್ ಹತ್ತಿದ್ದೆವು . ಕಾರ್ ಉದ್ದಕ್ಕೂ ನನ್ನ ಮಾವಂದಿರು ನನ್ನ ಮಾತಾಡಿಸಿ , ನಾನು ತಪ್ಪು ಉಚ್ಛರಿಸಿದಾಗ ನಕ್ಕು ನಕ್ಕು ಇಟ್ಟಿದ್ದರು . ಅಮ್ಮನಿಗೆ ಇದನ್ನು ಸಹಿಸಲು ಆಗಲಿಲ್ಲ .
ಊರಿಗೆ ಹಿಂದುರಿಗಿದ ನಂತರ ಅಮ್ಮ , ಛಲ ಹಿಡಿದ ಕಾಳಿಯಂತೆ ನನ್ನ ಬಾಯಲ್ಲಿ ಸರಿಯಾದ ಉಚ್ಚಾರಣೆ ತರಿಸುವ ಪಣ ತೊಟ್ಟಳು . ಅದೆಷ್ಟು ಕೋಲು , ಸ್ಕೇಲ್ ಮುರಿದಿದೆಯೋ ನಾ ಕಾಣೆ .ಅವಳೇ ದಿನಾ ರಾತ್ರಿ ಕಣ್ಣೀರಿಡುತ್ತಾ ಮದ್ದು ಹಚ್ಚುತ್ತಾ ಇದ್ದಳು . ಅವಳ ಈ ಸ್ವಭಾವ ಕಂಡು ನನಗೆ ಸಿಟ್ಟು ಬರುತ್ತಾ ಇತ್ತು ..
ಕಾಲೇಜ್ನಲ್ಲಿ ಯಾವುದೋ ಸಮಾರಂಭ . "ಶ್ರವಣ್ ಮತ್ತು ತಂಡದವರಿಂದ ಇದೀಗ ನಾಟಕ " ಎಂದು ಕೂಗಿದರು . ನಾನು ವೇದಿಕೆ ಏರಿದೆ . ಹುಡುಗರು ಜೋರಾಗಿ ಕಿರುಚಿದರು . ನನ್ನ ಜಂಘಾಬಲವೇ ಕುಸಿದಂತಾಗಿ , ಒಮ್ಮಲೇ ಉಸಿರು ತೆಗದು ಕೊಂಡು ಜೋರಾಗಿ ಒಂದು ಪ್ಯಾರಾಗ್ರಾಫ್ ಅಷ್ಟು dialog ಹೊಡೆದೆ . ರ ,ಳ , ಲ ,ಷ ,ಸ ,ಶ ಎಲ್ಲವು ಪರ್ಫೆಕ್ಟ್ . ಮುಂದೆ ೧೫ ನಿಮಿಷ ಹುಡುಗರು ನಮ್ಮ ಕಿರುನಾಟಕವನ್ನು ಸಕತ್ enjoy ಮಾಡಿದರು . ನಾ ಆವತ್ತು ನಿರರ್ಗಳವಾಗಿ dialog ಹೊಡೆದು , ಹುಡುಗರನ್ನು ಮೆಚ್ಚಿಸದೇ ಇದ್ದರೆ, ಕಥೆಯೇ ಬೇರೆಯದಾಗಿ ಇರುತ್ತಿತ್ತು . ನಾಟಕ ಮುಗಿಸಿ ಬಂದವನಿಗೆ ನಾಲ್ಕೈದು ಜನ ಬಂದು "ಏನ್ ಡೈಲಾಗ್ ಹೊಡಿತ್ಯಾ ಗುರು " ಎಂದು ಹೇಳಿದಾಗ ಅಮ್ಮ ನೆನಪಾದಳು ...
---------------------------------------------------------------------------------------------------------------------------------
Second Puc ಓದುತ್ತಾ ಇದ್ದ ಸಮಯ . ಇಂಗ್ಲಿಷ್ ಪಿರಿಯಡ್ .ಅದೇನೋ ಮಾತಿನ ಮಧ್ಯೆ ಮೇಡಂ "ನೆನ್ನೆ ೧೮ ಜನ ಮುಂಬೈ ಅಲ್ಲಿ ಸತ್ತ ವಿಷಯ ಯಾರಾದರು ಓದಿದ್ರಾ ?" ಅಂತ ಕೇಳಿದರು . ನಾನು ತಕ್ಷಣ ಜಾಗೃತನಾಗಿ "ಹೌದು mam , ಅದ್ರಲ್ಲಿ 8 ಜನ ಕನ್ನಡಿಗರು ಪಾಪ " ಎಂದೆ . ಮೇಡಂ "ಸ್ಟುಪಿಡ್ ,ಆ ೧೮ ಜನ ಮನುಷ್ಯರು ". ಹುಟ್ಟುವ ಮೊದಲು ಇರುವ , ಸತ್ತ ಮೇಲೆ ಹೋಗುವ ಲೋಕದಲ್ಲಿ ನಾವೆಲ್ಲಾ ಒಂದೇ ಅನ್ನುವ ಪಾಠ ಕಲಿತೆ , ಆ ಒಂದು ಸಾಲಿನಿಂದ .
---------------------------------------------------------------------------------------------------------------------------
ಅವಳ ಮದುವೆಯಾದ ಮೇಲೆ , ಇದೇ ಮೊದಲ ಬಾರಿ ಸಿಕ್ಕಿದ್ದಳು. ಯಾಕೋ ನಗು ಇರಲಿಲ್ಲ ,ಅವಳ ಮುಖದಲ್ಲಿ . ಏನಾಯಿತು ಅಂತ ವಿಚಾರಿಸಿದಾಗ , ತನ್ನ ಕಥೆ ಹೇಳಲು ಶುರು ಮಾಡಿದಳು .ಅವಳ ಮಾವನ ಮನೆಯಲ್ಲಿ , ಈಕೆ ಗಂಡನಿಗೆ ಹೆಸರಿಟ್ಟು ,ಏಕವಚನದಿಂದ ಕರೆಯುವುದು ದೊಡ್ಡ ಸಮಸ್ಯೆ ಆಗಿತ್ತು . ಅದಕ್ಕೆ ಈಕೆಯ ಅಮ್ಮ , ಅಪ್ಪ ಕೊನೆಗೆ ಮಾವನ ಮನೆಯವರ ಮುಂದೆ ಆದರೂ ರೀ ಅಂತ ಗಂಡನಿಗೆ ಕರಿ, ಒಬ್ಬರೇ ಇದ್ದಾಗ ಏನು ಬೇಕಾದರೂ ಹೇಳ್ಕೋ ಅಂತ ಸಲಹೆ ಕೊಟ್ಟಿದ್ದರು . ಇವಳದು ಒಂದೇ ಹಠ ,ಹಿಂದೊಂದು ಮುಂದೊಂದು ಮಾಡೋಕೆ ನನಗೆ ಇಷ್ಟ ಇಲ್ಲ . ನಾನು ಹೀಗೆ ಇರುತ್ತೇನೆ ಅಂತ . ಒಬ್ಬರನ್ನು ಮೆಚ್ಚಿಸಲು ಕೆಲವೊಮ್ಮೆ ನಾವು ಏನೆಲ್ಲಾ ನಾಟಕ ಮಾಡುತ್ತೇವೆ . ಅವಳು ಹಾಗಿರಲಿಲ್ಲ . ಹಾಗಾಗಲೂ ಒಪ್ಪಲಿಲ್ಲ ..
----------------------------------------------------------------------------------------------------------------------------
ಅವಳು ನಮ್ಮ ಕಾಲೇಜ್ ನ ಸುಂದರಿ . ಸ್ವಲ್ಪ ಜಂಭ ಇತ್ತು ಅನ್ನಿ . ನಾವು ಏನು ಕಮ್ಮಿ ಇರ್ಲಿಲ್ಲ . ನಮ್ಮಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿ . ಒಂದು ದಿನ ಹೀಗೆ ಕೋಪ ನೆತ್ತಿಗೇರಿ ಕ್ಲಾಸ್ ನಲ್ಲಿ ಎಲ್ಲರ ಮುಂದೆ ಅವಳನ್ನು ಹಿಗ್ಗಾ ಮುಗ್ಗಾ ಬಯ್ದಿದ್ದೆ . ಅಂತಹ ಬಾಯಿ ಬಡಕಿಯನ್ನು ಸುಮ್ಮನಾಗಿಸಿದೆ ಅಂತ ಬೇರೆಯವರ ಮುಂದೆ ಹೇಳಿ ಕೊಚ್ಚಿ ಕೊಂಡಿದ್ದು ಇದೆ . ಅದಾದ ಮೇಲೆ ನಾವು ಕಾಲೇಜ್ ಮುಗಿಯುವ ತನಕ ಮಾತಾಡಲೇ ಇಲ್ಲ . ಕಾಲೇಜ್ ಮುಗಿದ ಮೇಲೂ ನಾವು ಸಿಗಲಿಲ್ಲ , ಅದರ ಗೋಜಿಗೂ ಹೋಗಲಿಲ್ಲ .
ಇದಾಗಿ ಹಲವು ವರ್ಷ ಕಳೆದಿರಬೇಕು . ನನಗೆ ಅಂದು ಆ ಸನ್ನಿವೇಶದಲ್ಲಿ ನಾನು ನಡೆದುಕೊಂದದ್ದು ತಪ್ಪು ಅನ್ನುವಷ್ಟು mature ಆಗಿದ್ದೆ . ಅವಳೇನಾದ್ರೂ ಮುಂದೆ ಬಂದರೆ ತಲೆ ತಗ್ಗುವಷ್ಟು ಪಶ್ಚಾತಾಪ ಇತ್ತು . ಒಂದು ದಿನ ಹೀಗೆ ಅಚಾನಕ್ಕಾಗಿ ನಾನು ಅಂಡಮಾನ್ ಟೂರ್ ಗೆ ಹೋದಾಗ ಸಿಕ್ಕಿ ಬಿಟ್ಟಳು . ನನ್ನ ನೋಡಿ ಹಿಗ್ಗಿದಂತಾಗಿ , ತನ್ನ ಮನೆಯವರಿಗೆಲ್ಲಾ ಪರಿಚಯ ಮಾಡಿಸಿದಳು . ತನ್ನ ಮನೆಗೂ ಬರಲೇಬೇಕು ಅಂತ ಒತ್ತಾಯ ಬೇರೆ . ಅವಳಿಂದ ಇಂತಹ ಪ್ರತಿಕ್ರಿಯೆ ನಾನು ನಿರೀಕ್ಷಿಸಿಯೇ ಇರಲಿಲ್ಲ . ನನ್ನ ಪ್ರಕಾರ ಮುಂದೊಂದು ದಿನ ನಾವೇನಾದ್ರೂ ಭೇಟಿಯಾದರೆ ಮನಸಿನಲ್ಲಿ ಅಸಡ್ಡೆ ,ಹಳೆಯ ಕಹಿ ನೆನಪುಗಳನ್ನು ತುಂಬಿಕೊಂಡು ಒಂದು ಹುಸಿ ಮಂದಹಾಸ ಬೀರಿ ಮುಂದೆ ಹೋಗುತ್ತೇವೆ ಅಂದುಕೊಂಡಿದ್ದೆ . ಅವಳು ಹಾಗೆ ಮಾಡಲಿಲ್ಲ .ಅದನ್ನು ಮರೆತಿದ್ದಳು ಅನ್ನಿಸುತ್ತದೆ ಅಥವಾ ಕ್ಷಮಿಸಿರಬೇಕು .
---------------------------------------------------------------------------------------------------------------------------
ಇಂಜಿನಿಯರಿಂಗ್ ಓದುತ್ತಿರುವಾಗ ನಾವಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ . ಆದರು ಒಮ್ಮೆ ಯಾವುದೋ ವಿಷಯದಲ್ಲಿ ನನಗೆ ಅವಳು support ಮಾಡಲಿಲ್ಲ . ಒಳ್ಳೆ ನಾಗರಹಾವು ಸೇಡು ತೀರಿಸಿಕೊಳ್ಳುವಂತೆ ಅವಳನ್ನು ಕಾಡಿ , ಅವಳಿಗೆ ಬೇಸರ ತರಿಸಿದ್ದೆ . ನಾವಿಬ್ಬರು ಒಂದೇ ಪ್ರಾಜೆಕ್ಟ್ team ಅಲ್ಲಿ ಇದ್ದ ಕಾರಣ ,ಒಟ್ಟಿಗೆ ಕೆಲಸ ಮಾಡಲೇಬೇಕಿತ್ತು . ನನಗಿನ್ನು ಅವಳ ಮೇಲಿನ ಕೋಪ ಕಡಿಮೆ ಆಗಿರಲಿಲ್ಲ . ಅದೊಂದು ಪ್ರಾಜೆಕ್ಟ್ ಕೆಲಸ ಮಾಡುತ್ತಾ ಮಾಡುತ್ತಾ ನಾನು ಹಾಸ್ಟೆಲ್ ಗೆ ,ಊಟಕ್ಕೆ ಹೋಗಲಾಗಲಿಲ್ಲ .
ಹೊರಗಡೆ ತಿನ್ನಲು ದುಡ್ಡು ಇರಲಿಲ್ಲ . ನನಗೆ ಹಸಿವು ಜಾಸ್ತಿ ಅಂತ ಅವಳಿಗೆ ಗೊತ್ತು . ತನ್ನ ಹಾಸ್ಟೆಲ್ ಇಂದ ನನಗೂ ಒಂದು ಬಾಕ್ಸ್ ಊಟ ತಂದಿದ್ದಳು . ನನ್ನ ಮುಂದೆ ಇಟ್ಟು ತಿನ್ನು ಅಂದಳು . ನಾನು ಕೋಪದಿಂದ ಬೇಡ ಅಂದೆ. ಆಕೆ "ನಿನ್ನ ಕೋಪ ಎಲ್ಲ ಊಟದ್ದ ಮೇಲೆ ಹಾಕಬೇಡ , ಜಾಡ್ಸಿ ಓದಿತೀನಿ ,ಮುಚ್ಕೊಂಡು ತಿನ್ನು ". ಆ ದಿನ ಊಟ ಗಬಗಬನೆ ತಿನ್ನುವಾಗ, ನನ್ನ ಕಣ್ಣಂಚಲ್ಲಿ ನೀರು .
---------------------------------------------------------------------------------------------------------------------------
ಅಮ್ಮನ ಹೆರಿಗೆ ಸಮಯ.ಆಕೆ ತವರಿಗೆ ಹೋಗಿದ್ದಳು . ಅಜ್ಜಿ ನನ್ನ ನೋಡಿಕೊಳ್ಳಲು ಬಂದಿದ್ದಳು . ಒಂದು ದಿನ ಬುತ್ತಿ ಮರೆತು ಶಾಲೆಗೆ ಹೋಗಿದ್ದೆ . ಯಾವುದೋ ಪಿರಿಯಡ್ ಮಧ್ಯೆ ನನ್ನಜ್ಜಿಯ ಸದ್ದು ಕೇಳಿತು . ಬಾಗಿಲ ಹತ್ತಿರ ತಿರುಗಿ ನೋಡಿದರೆ ,ನನ್ನಜ್ಜಿ ಬುತ್ತಿ ಹಿಡಿದು ನಿಂತಿದ್ದಾಳೆ . "ಶ್ರವಣ್ ಬೇಕಿತ್ತು " ಅಂದಳು . ಮಿಸ್ ಗೆ ಪರಿಸ್ಥಿತಿ ಅರಿವಾಗಿ ನನಗೆ ಎದ್ದು ಹೋಗಿ ಬುತ್ತಿ ತೆಗದು ಕೊಂಡು ಬರಲು ಹೇಳಿದರು . ಸಕ್ಕರೆ ಕಾಯಿಲೆ ಬಂದು ಸರಿಯಾಗಿ ಕಣ್ಣು ಕಾಣದ ಅಜ್ಜಿ , ಅದೂ ಸ್ಟೇಟ್ ಹೈವೇ ಪಕ್ಕದಲ್ಲಿರುವ ನನ್ನ ಶಾಲೆಗೆ ಹೇಗೆ ಬಂದಳು ಅಂತ ಆಶ್ಚರ್ಯ ಪಡುತ್ತಲೇ ನಾನು ಅಜ್ಜಿ ಹತ್ತಿರ ಹೋದೆ . ಅಜ್ಜಿ ನನಗೆ ಬುತ್ತಿ ಕೊಟ್ಟು , ನನ್ನ ಗಟ್ಟಿ ತಬ್ಬಿ ಹಿಡಿದು ಹಣೆಗೆ ಮುತ್ತು ಕೊಟ್ಟಳು . ಕ್ಲಾಸ್ನಲ್ಲಿ ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದರು ,ನನಗೆ ನಾಚಿಕೆ ಆಗಲಿಲ್ಲ . ಅಂದು ನನ್ನಜ್ಜಿಯ ಬೆಚ್ಚನೆಯ ಅಪ್ಪುಗೆ, ಪ್ರೀತಿಯ ಪಾಠ ಹೇಳಿಕೊಟ್ಟಿತ್ತು .
--ಶ್ರವಣ್
Above author writes incidents where he has learnt lessons from women.The incident revolves around his mother, granny and some of his college friends.Happy international women's day .
ಸಣ್ಣವನಿದ್ದಾಗ ನನಗೆ ಳ , ಲ ,ಸ ,ಷ ,ಶ , ರ ಕಾರ ಉಚ್ಚರಿಸಲು ಬರುತ್ತಾ ಇರಲಿಲ್ಲ . ಎಲ್ಲರೂ ನನ್ನ ಕರೆದು ,ಮಾತಾಡಲು ಹೇಳಿ ಮಜಾ ತೆಗೆದುಕೊಳ್ಳುವುದೇ ಜಾಸ್ತಿ . ಅಮ್ಮ ತಿದ್ದಲು ಪ್ರಯತ್ನ ಪಟ್ಟಿದ್ದರೂ , ನಾನು ಕಲಿಯದೇ ಇದ್ದಾಗ ಇನ್ನು ಚಿಕ್ಕವನು ಎಂದು ಸುಮ್ಮನ್ನಿದ್ದಳು .ನನಗಿನ್ನು ನೆನಪಿದೆ, ಒಮ್ಮೆ ಬೆಂಗಳೂರಿನಲ್ಲಿ ಯಾವುದೋ ಕೆಲಸದ ಮೇಲೆ ಹೋದಾಗ , ನೆಂಟರೊಬ್ಬರ ಕಾರ್ ಹತ್ತಿದ್ದೆವು . ಕಾರ್ ಉದ್ದಕ್ಕೂ ನನ್ನ ಮಾವಂದಿರು ನನ್ನ ಮಾತಾಡಿಸಿ , ನಾನು ತಪ್ಪು ಉಚ್ಛರಿಸಿದಾಗ ನಕ್ಕು ನಕ್ಕು ಇಟ್ಟಿದ್ದರು . ಅಮ್ಮನಿಗೆ ಇದನ್ನು ಸಹಿಸಲು ಆಗಲಿಲ್ಲ .
ಊರಿಗೆ ಹಿಂದುರಿಗಿದ ನಂತರ ಅಮ್ಮ , ಛಲ ಹಿಡಿದ ಕಾಳಿಯಂತೆ ನನ್ನ ಬಾಯಲ್ಲಿ ಸರಿಯಾದ ಉಚ್ಚಾರಣೆ ತರಿಸುವ ಪಣ ತೊಟ್ಟಳು . ಅದೆಷ್ಟು ಕೋಲು , ಸ್ಕೇಲ್ ಮುರಿದಿದೆಯೋ ನಾ ಕಾಣೆ .ಅವಳೇ ದಿನಾ ರಾತ್ರಿ ಕಣ್ಣೀರಿಡುತ್ತಾ ಮದ್ದು ಹಚ್ಚುತ್ತಾ ಇದ್ದಳು . ಅವಳ ಈ ಸ್ವಭಾವ ಕಂಡು ನನಗೆ ಸಿಟ್ಟು ಬರುತ್ತಾ ಇತ್ತು ..
ಕಾಲೇಜ್ನಲ್ಲಿ ಯಾವುದೋ ಸಮಾರಂಭ . "ಶ್ರವಣ್ ಮತ್ತು ತಂಡದವರಿಂದ ಇದೀಗ ನಾಟಕ " ಎಂದು ಕೂಗಿದರು . ನಾನು ವೇದಿಕೆ ಏರಿದೆ . ಹುಡುಗರು ಜೋರಾಗಿ ಕಿರುಚಿದರು . ನನ್ನ ಜಂಘಾಬಲವೇ ಕುಸಿದಂತಾಗಿ , ಒಮ್ಮಲೇ ಉಸಿರು ತೆಗದು ಕೊಂಡು ಜೋರಾಗಿ ಒಂದು ಪ್ಯಾರಾಗ್ರಾಫ್ ಅಷ್ಟು dialog ಹೊಡೆದೆ . ರ ,ಳ , ಲ ,ಷ ,ಸ ,ಶ ಎಲ್ಲವು ಪರ್ಫೆಕ್ಟ್ . ಮುಂದೆ ೧೫ ನಿಮಿಷ ಹುಡುಗರು ನಮ್ಮ ಕಿರುನಾಟಕವನ್ನು ಸಕತ್ enjoy ಮಾಡಿದರು . ನಾ ಆವತ್ತು ನಿರರ್ಗಳವಾಗಿ dialog ಹೊಡೆದು , ಹುಡುಗರನ್ನು ಮೆಚ್ಚಿಸದೇ ಇದ್ದರೆ, ಕಥೆಯೇ ಬೇರೆಯದಾಗಿ ಇರುತ್ತಿತ್ತು . ನಾಟಕ ಮುಗಿಸಿ ಬಂದವನಿಗೆ ನಾಲ್ಕೈದು ಜನ ಬಂದು "ಏನ್ ಡೈಲಾಗ್ ಹೊಡಿತ್ಯಾ ಗುರು " ಎಂದು ಹೇಳಿದಾಗ ಅಮ್ಮ ನೆನಪಾದಳು ...
---------------------------------------------------------------------------------------------------------------------------------
Second Puc ಓದುತ್ತಾ ಇದ್ದ ಸಮಯ . ಇಂಗ್ಲಿಷ್ ಪಿರಿಯಡ್ .ಅದೇನೋ ಮಾತಿನ ಮಧ್ಯೆ ಮೇಡಂ "ನೆನ್ನೆ ೧೮ ಜನ ಮುಂಬೈ ಅಲ್ಲಿ ಸತ್ತ ವಿಷಯ ಯಾರಾದರು ಓದಿದ್ರಾ ?" ಅಂತ ಕೇಳಿದರು . ನಾನು ತಕ್ಷಣ ಜಾಗೃತನಾಗಿ "ಹೌದು mam , ಅದ್ರಲ್ಲಿ 8 ಜನ ಕನ್ನಡಿಗರು ಪಾಪ " ಎಂದೆ . ಮೇಡಂ "ಸ್ಟುಪಿಡ್ ,ಆ ೧೮ ಜನ ಮನುಷ್ಯರು ". ಹುಟ್ಟುವ ಮೊದಲು ಇರುವ , ಸತ್ತ ಮೇಲೆ ಹೋಗುವ ಲೋಕದಲ್ಲಿ ನಾವೆಲ್ಲಾ ಒಂದೇ ಅನ್ನುವ ಪಾಠ ಕಲಿತೆ , ಆ ಒಂದು ಸಾಲಿನಿಂದ .
---------------------------------------------------------------------------------------------------------------------------
ಅವಳ ಮದುವೆಯಾದ ಮೇಲೆ , ಇದೇ ಮೊದಲ ಬಾರಿ ಸಿಕ್ಕಿದ್ದಳು. ಯಾಕೋ ನಗು ಇರಲಿಲ್ಲ ,ಅವಳ ಮುಖದಲ್ಲಿ . ಏನಾಯಿತು ಅಂತ ವಿಚಾರಿಸಿದಾಗ , ತನ್ನ ಕಥೆ ಹೇಳಲು ಶುರು ಮಾಡಿದಳು .ಅವಳ ಮಾವನ ಮನೆಯಲ್ಲಿ , ಈಕೆ ಗಂಡನಿಗೆ ಹೆಸರಿಟ್ಟು ,ಏಕವಚನದಿಂದ ಕರೆಯುವುದು ದೊಡ್ಡ ಸಮಸ್ಯೆ ಆಗಿತ್ತು . ಅದಕ್ಕೆ ಈಕೆಯ ಅಮ್ಮ , ಅಪ್ಪ ಕೊನೆಗೆ ಮಾವನ ಮನೆಯವರ ಮುಂದೆ ಆದರೂ ರೀ ಅಂತ ಗಂಡನಿಗೆ ಕರಿ, ಒಬ್ಬರೇ ಇದ್ದಾಗ ಏನು ಬೇಕಾದರೂ ಹೇಳ್ಕೋ ಅಂತ ಸಲಹೆ ಕೊಟ್ಟಿದ್ದರು . ಇವಳದು ಒಂದೇ ಹಠ ,ಹಿಂದೊಂದು ಮುಂದೊಂದು ಮಾಡೋಕೆ ನನಗೆ ಇಷ್ಟ ಇಲ್ಲ . ನಾನು ಹೀಗೆ ಇರುತ್ತೇನೆ ಅಂತ . ಒಬ್ಬರನ್ನು ಮೆಚ್ಚಿಸಲು ಕೆಲವೊಮ್ಮೆ ನಾವು ಏನೆಲ್ಲಾ ನಾಟಕ ಮಾಡುತ್ತೇವೆ . ಅವಳು ಹಾಗಿರಲಿಲ್ಲ . ಹಾಗಾಗಲೂ ಒಪ್ಪಲಿಲ್ಲ ..
----------------------------------------------------------------------------------------------------------------------------
ಅವಳು ನಮ್ಮ ಕಾಲೇಜ್ ನ ಸುಂದರಿ . ಸ್ವಲ್ಪ ಜಂಭ ಇತ್ತು ಅನ್ನಿ . ನಾವು ಏನು ಕಮ್ಮಿ ಇರ್ಲಿಲ್ಲ . ನಮ್ಮಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿ . ಒಂದು ದಿನ ಹೀಗೆ ಕೋಪ ನೆತ್ತಿಗೇರಿ ಕ್ಲಾಸ್ ನಲ್ಲಿ ಎಲ್ಲರ ಮುಂದೆ ಅವಳನ್ನು ಹಿಗ್ಗಾ ಮುಗ್ಗಾ ಬಯ್ದಿದ್ದೆ . ಅಂತಹ ಬಾಯಿ ಬಡಕಿಯನ್ನು ಸುಮ್ಮನಾಗಿಸಿದೆ ಅಂತ ಬೇರೆಯವರ ಮುಂದೆ ಹೇಳಿ ಕೊಚ್ಚಿ ಕೊಂಡಿದ್ದು ಇದೆ . ಅದಾದ ಮೇಲೆ ನಾವು ಕಾಲೇಜ್ ಮುಗಿಯುವ ತನಕ ಮಾತಾಡಲೇ ಇಲ್ಲ . ಕಾಲೇಜ್ ಮುಗಿದ ಮೇಲೂ ನಾವು ಸಿಗಲಿಲ್ಲ , ಅದರ ಗೋಜಿಗೂ ಹೋಗಲಿಲ್ಲ .
ಇದಾಗಿ ಹಲವು ವರ್ಷ ಕಳೆದಿರಬೇಕು . ನನಗೆ ಅಂದು ಆ ಸನ್ನಿವೇಶದಲ್ಲಿ ನಾನು ನಡೆದುಕೊಂದದ್ದು ತಪ್ಪು ಅನ್ನುವಷ್ಟು mature ಆಗಿದ್ದೆ . ಅವಳೇನಾದ್ರೂ ಮುಂದೆ ಬಂದರೆ ತಲೆ ತಗ್ಗುವಷ್ಟು ಪಶ್ಚಾತಾಪ ಇತ್ತು . ಒಂದು ದಿನ ಹೀಗೆ ಅಚಾನಕ್ಕಾಗಿ ನಾನು ಅಂಡಮಾನ್ ಟೂರ್ ಗೆ ಹೋದಾಗ ಸಿಕ್ಕಿ ಬಿಟ್ಟಳು . ನನ್ನ ನೋಡಿ ಹಿಗ್ಗಿದಂತಾಗಿ , ತನ್ನ ಮನೆಯವರಿಗೆಲ್ಲಾ ಪರಿಚಯ ಮಾಡಿಸಿದಳು . ತನ್ನ ಮನೆಗೂ ಬರಲೇಬೇಕು ಅಂತ ಒತ್ತಾಯ ಬೇರೆ . ಅವಳಿಂದ ಇಂತಹ ಪ್ರತಿಕ್ರಿಯೆ ನಾನು ನಿರೀಕ್ಷಿಸಿಯೇ ಇರಲಿಲ್ಲ . ನನ್ನ ಪ್ರಕಾರ ಮುಂದೊಂದು ದಿನ ನಾವೇನಾದ್ರೂ ಭೇಟಿಯಾದರೆ ಮನಸಿನಲ್ಲಿ ಅಸಡ್ಡೆ ,ಹಳೆಯ ಕಹಿ ನೆನಪುಗಳನ್ನು ತುಂಬಿಕೊಂಡು ಒಂದು ಹುಸಿ ಮಂದಹಾಸ ಬೀರಿ ಮುಂದೆ ಹೋಗುತ್ತೇವೆ ಅಂದುಕೊಂಡಿದ್ದೆ . ಅವಳು ಹಾಗೆ ಮಾಡಲಿಲ್ಲ .ಅದನ್ನು ಮರೆತಿದ್ದಳು ಅನ್ನಿಸುತ್ತದೆ ಅಥವಾ ಕ್ಷಮಿಸಿರಬೇಕು .
---------------------------------------------------------------------------------------------------------------------------
ಇಂಜಿನಿಯರಿಂಗ್ ಓದುತ್ತಿರುವಾಗ ನಾವಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ . ಆದರು ಒಮ್ಮೆ ಯಾವುದೋ ವಿಷಯದಲ್ಲಿ ನನಗೆ ಅವಳು support ಮಾಡಲಿಲ್ಲ . ಒಳ್ಳೆ ನಾಗರಹಾವು ಸೇಡು ತೀರಿಸಿಕೊಳ್ಳುವಂತೆ ಅವಳನ್ನು ಕಾಡಿ , ಅವಳಿಗೆ ಬೇಸರ ತರಿಸಿದ್ದೆ . ನಾವಿಬ್ಬರು ಒಂದೇ ಪ್ರಾಜೆಕ್ಟ್ team ಅಲ್ಲಿ ಇದ್ದ ಕಾರಣ ,ಒಟ್ಟಿಗೆ ಕೆಲಸ ಮಾಡಲೇಬೇಕಿತ್ತು . ನನಗಿನ್ನು ಅವಳ ಮೇಲಿನ ಕೋಪ ಕಡಿಮೆ ಆಗಿರಲಿಲ್ಲ . ಅದೊಂದು ಪ್ರಾಜೆಕ್ಟ್ ಕೆಲಸ ಮಾಡುತ್ತಾ ಮಾಡುತ್ತಾ ನಾನು ಹಾಸ್ಟೆಲ್ ಗೆ ,ಊಟಕ್ಕೆ ಹೋಗಲಾಗಲಿಲ್ಲ .
ಹೊರಗಡೆ ತಿನ್ನಲು ದುಡ್ಡು ಇರಲಿಲ್ಲ . ನನಗೆ ಹಸಿವು ಜಾಸ್ತಿ ಅಂತ ಅವಳಿಗೆ ಗೊತ್ತು . ತನ್ನ ಹಾಸ್ಟೆಲ್ ಇಂದ ನನಗೂ ಒಂದು ಬಾಕ್ಸ್ ಊಟ ತಂದಿದ್ದಳು . ನನ್ನ ಮುಂದೆ ಇಟ್ಟು ತಿನ್ನು ಅಂದಳು . ನಾನು ಕೋಪದಿಂದ ಬೇಡ ಅಂದೆ. ಆಕೆ "ನಿನ್ನ ಕೋಪ ಎಲ್ಲ ಊಟದ್ದ ಮೇಲೆ ಹಾಕಬೇಡ , ಜಾಡ್ಸಿ ಓದಿತೀನಿ ,ಮುಚ್ಕೊಂಡು ತಿನ್ನು ". ಆ ದಿನ ಊಟ ಗಬಗಬನೆ ತಿನ್ನುವಾಗ, ನನ್ನ ಕಣ್ಣಂಚಲ್ಲಿ ನೀರು .
---------------------------------------------------------------------------------------------------------------------------
ಅಮ್ಮನ ಹೆರಿಗೆ ಸಮಯ.ಆಕೆ ತವರಿಗೆ ಹೋಗಿದ್ದಳು . ಅಜ್ಜಿ ನನ್ನ ನೋಡಿಕೊಳ್ಳಲು ಬಂದಿದ್ದಳು . ಒಂದು ದಿನ ಬುತ್ತಿ ಮರೆತು ಶಾಲೆಗೆ ಹೋಗಿದ್ದೆ . ಯಾವುದೋ ಪಿರಿಯಡ್ ಮಧ್ಯೆ ನನ್ನಜ್ಜಿಯ ಸದ್ದು ಕೇಳಿತು . ಬಾಗಿಲ ಹತ್ತಿರ ತಿರುಗಿ ನೋಡಿದರೆ ,ನನ್ನಜ್ಜಿ ಬುತ್ತಿ ಹಿಡಿದು ನಿಂತಿದ್ದಾಳೆ . "ಶ್ರವಣ್ ಬೇಕಿತ್ತು " ಅಂದಳು . ಮಿಸ್ ಗೆ ಪರಿಸ್ಥಿತಿ ಅರಿವಾಗಿ ನನಗೆ ಎದ್ದು ಹೋಗಿ ಬುತ್ತಿ ತೆಗದು ಕೊಂಡು ಬರಲು ಹೇಳಿದರು . ಸಕ್ಕರೆ ಕಾಯಿಲೆ ಬಂದು ಸರಿಯಾಗಿ ಕಣ್ಣು ಕಾಣದ ಅಜ್ಜಿ , ಅದೂ ಸ್ಟೇಟ್ ಹೈವೇ ಪಕ್ಕದಲ್ಲಿರುವ ನನ್ನ ಶಾಲೆಗೆ ಹೇಗೆ ಬಂದಳು ಅಂತ ಆಶ್ಚರ್ಯ ಪಡುತ್ತಲೇ ನಾನು ಅಜ್ಜಿ ಹತ್ತಿರ ಹೋದೆ . ಅಜ್ಜಿ ನನಗೆ ಬುತ್ತಿ ಕೊಟ್ಟು , ನನ್ನ ಗಟ್ಟಿ ತಬ್ಬಿ ಹಿಡಿದು ಹಣೆಗೆ ಮುತ್ತು ಕೊಟ್ಟಳು . ಕ್ಲಾಸ್ನಲ್ಲಿ ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದರು ,ನನಗೆ ನಾಚಿಕೆ ಆಗಲಿಲ್ಲ . ಅಂದು ನನ್ನಜ್ಜಿಯ ಬೆಚ್ಚನೆಯ ಅಪ್ಪುಗೆ, ಪ್ರೀತಿಯ ಪಾಠ ಹೇಳಿಕೊಟ್ಟಿತ್ತು .
--ಶ್ರವಣ್
Above author writes incidents where he has learnt lessons from women.The incident revolves around his mother, granny and some of his college friends.Happy international women's day .
ತುಂಬಾ ಚೆನ್ನಾಗಿ ಬರೆದಿದ್ದೀರಿ. ಬರವಣಿಗೆ ಮುಂದುವರೆಸಿ
ಪ್ರತ್ಯುತ್ತರಅಳಿಸಿthanks .. bidivu aadaga bere articles kood odi
ಅಳಿಸಿಸೂಪರ್ ಆಗಿದೆ ಲೆ :)
ಪ್ರತ್ಯುತ್ತರಅಳಿಸಿthanks bhattre
ಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿThis is good man.
ಪ್ರತ್ಯುತ್ತರಅಳಿಸಿthanks pallavi
ಅಳಿಸಿತುಂಬಾ ಅಚ್ಚುಕಟ್ಟಾಗಿ ಬರೆದಿದ್ದಿ ಶ್ರವಣ್. Very nice 😊
ಪ್ರತ್ಯುತ್ತರಅಳಿಸಿthanks kaarantre
ಅಳಿಸಿಚೆನ್ನಾಗಿದೆ..! ಪ್ರಯತ್ನ ಹೀಗೆ ಮುಂದುವರಿಯಲಿ..! ,😊😊🤗
ಪ್ರತ್ಯುತ್ತರಅಳಿಸಿthanks
ಅಳಿಸಿthanks arjun
ಪ್ರತ್ಯುತ್ತರಅಳಿಸಿTumba chennag bardidi Kano... Awesome :)
ಪ್ರತ್ಯುತ್ತರಅಳಿಸಿthanks kaano
ಅಳಿಸಿToo good Shravan.. ಅಮ್ಮನ ಕಥೆ ತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿaLu bantu shravan...
ಪ್ರತ್ಯುತ್ತರಅಳಿಸಿha ha
ಅಳಿಸಿWe Men, should learn always from WOMEN.
ಪ್ರತ್ಯುತ್ತರಅಳಿಸಿLoved it, superb narration
thanks boss
ಪ್ರತ್ಯುತ್ತರಅಳಿಸಿಬದುಕಿನ ಪ್ರತಿ ಹೆಜ್ಜೆಯಲ್ಲೂ ಹೆಂಗರುಳು ಮಹತ್ವ ಪಡೆವ ರೀತಿ ಮಾರ್ಮಿಕವಾಗಿದೆ, ಬರವಣಿಗೆಗೆ ಆಸಕ್ತಿದಾಯಕ ಲಯ ಒಲಿದಿದೆ.ಈ ಮೂಲಕ ಬರಹ ನಿರಂತರವಾಗಿ ಮುಂದುವರೆಯಲಿ..
ಪ್ರತ್ಯುತ್ತರಅಳಿಸಿಅಂದ ಹಾಗೆ ಕೋಸಂಬ್ರಿಪಾನಕ ಬ್ಲಾಗ್ ಹೆಸರು ಭಿನ್ನವಾಗಿರುವುದು ಕೂಡ ಇಷ್ಟವಾಗುತ್ತದೆ.
tumba thanks mam , nimma kathegala abhimaani nanu ..
ಅಳಿಸಿtumba khushi aytu ..
ಅಳಿಸಿ